Tuesday, November 29, 2005

ಕರ್ನಾಟಕದಲ್ಲಿ ಮೂರು ಉಪರಾಜ್ಯಗಳ ರಚನೆ

ದಕ್ಷಿಣ ಭಾರತದ ಕಾಶ್ಮೀರವಾಗಿರುವ ಬೆಳಗಾವಿ ಗಡಿಯಲ್ಲಿ ಶೀಘ್ರ ಎಲ್‌ಒಸಿ:ಸರ್ಕಾರಕ್ಕೆ ಮೀರ್‌ಸಾಧಿಕ್‌ ಪತ್ರ

ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ ನಮ್ಮ ಬೆಳಗಾವಿಯ ಪರಿಸ್ಥಿತಿ . ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಕರ್ನಾಟಕ ಹಾಗೂ ಮಹಾರಾಷ್ಟ್ರ ಥೇಟ್‌ ಭಾರತ-ಪಾಕ್‌ ಥರ ಗುದ್ದಾಟದಲ್ಲಿ ತೊಡಗಿವೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್‌ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಈಗ ಬಾಕಿ ಏನು ಗೊತ್ತಾ? ಭಾರತ-ಪಾಕ್‌ ನಡುವೆ ಇರುವಂಥ LOC !

ಪರಮ ಪೂಜ್ಯ ಮುಖ್ಯಮಂತ್ರಿಯವರೇ,
ಟಿಪುý್ಪ ಸುಲ್ತಾನರ ಆಪ್ತ ಸಲಹೆಗಾರನಾಗಿದ್ದ ಮೀರ್‌ ಸಾಧಿಕ್‌ನ ಅಭಿನಂದನೆಗಳು! ಪೂಜ್ಯ ಎಂದರೆ ಕನ್ನಡದಲ್ಲಿ ಸೊನ್ನೆ ಎಂಬ ಅರ್ಥವೂ ಇದೆ. ಆದರೆ, ನಾನು ಈ ಮೇಲೆ ಬಳಸಿರುವ ಪೂಜ್ಯ ಎಂಬುದು ಪೂಜನೀಯರು ಎಂಬ ಅರ್ಥದಲ್ಲಿ. ದಯವಿಟ್ಟು ಇದು ತಮ್ಮ ಸರ್ಕಾರದ ಕುರಿತು ಹೇಳಿದ್ದು ಎಂದು ತಪುý್ಪ ತಿಳಿಯಬೇಡಿ. ನೀವೇ ಹೇಳಿಕೊಂಡಂತೆ, ತಾಮ ಕರ್ನಾಟಕದ ಲಕ್ಕಿ ಮುಖ್ಯಮಂತ್ರಿ ಎನ್ನುಮದನ್ನು ನಾನು ಒಪ್ಪಿಕೊಂಡೇ ಈ ಪತ್ರ ಬರೆಯುತ್ತಿದ್ದೇನೆ.

ತಾಮ ಮುಖ್ಯಮಂತ್ರಿ ಆದ ಮೇಲೆ ಈ ರಾಜ್ಯದ ಎಷ್ಟೋ ಸಮಸ್ಯೆಗಳು ಪರಿಹಾರವಾಗಿರುಮದು ನಿಜ. ಮುಖ್ಯವಾಗಿ ಕರ್ನಾಟಕದ ಸಿಂಹ ಹಾಗೂ ಸಿಂಹಿಣಿ ಸ್ವಪ್ನಗಳು ಈಗಿಲ್ಲ. ಸಿಂಹಸ್ವಪ್ನವಾಗಿದ್ದ ವೀರಪ್ಪನ್‌ ಹತನಾಗಿದ್ದಾನೆ. ಕಾವೇರಿ ನೀರಿಗಾಗಿ ನಮಗೆ ಸಿಂಹಿಣಿಸ್ವಪ್ನವಾಗಿದ್ದ ಜಯಲಲಿತಾ ಕೂಡ ತೆಪ್ಪಗಾಗಿದ್ದಾರೆ. ಈ ಬಾರಿ ಆದ ಭಾರೀ ಮಳೆಯಿಂದ ತಮಿಳುನಾಡಿನ ಅರ್ಧ ಭೂಭಾಗ ಪ್ರವಾಹದಲ್ಲಿ ಮುಳುಗಿಹೋಗಿದೆ. ಆದ್ದರಿಂದ ಈಗ ನಾಮ ನೀರು ಬಿಡುತ್ತೇವೆಂದರೂ... ’ಬೇಡ ದಯವಿಟ್ಟು ಆ ಕೆಲಸ ಮಾಡಬೇಡಿ’ ಎಂದು ಅಂಗಾಲಾಚುವ ಸ್ಥಿತಿ ಜಯಲಲಿತಾ ಅವರಿಗೆ ಬಂದಿದೆ. ಯಾಕೋ ಎರಡು ವರ್ಷಗಳಿಂದ ಜಯಲಲಿತಾ ಹೋಗಿ ಜಲ-ಯಲಿತಾ ಆಗಿಬಿಟ್ಟಿದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸುನಾಮಿಯಿಂದ ಜಲಪ್ರಳಯವಾಗಿ ತಮಿಳುನಾಡಿನ ಜನ ಸಂಕಷ್ಟಕ್ಕೆ ಸಿಲುಕಿದ್ದರು. ಈ ವರ್ಷ ವಿಪರೀತ ಮಳೆ, ಚಂಡಮಾರುತದಿಂದಾಗಿ ಅಲ್ಲಿಯ ಜನ ಜಲಪ್ರಳಯದಲ್ಲಿ ಸಿಲುಕಿದ್ದಾರೆ. ಪಾಪ... ಹತ್ತಾರು ಸಾವಿರ ಜನರು ಮೃತರಾಗಿ ಹಲವಾರು ಲಕ್ಷ ಬಡವರು ನಿರಾಶ್ರಿತರಾಗಿದ್ದಾರೆ. ಹೀಗೆ, ನೀಮ ಲಕ್ಕಿ ಆದ ಕೂಡಲೇ ಜಯಾ ಅನ್‌ಲಕ್ಕಿ ಆಗಿದ್ದಾರೆ.

ಆದರೂ ಮುಖ್ಯಮಂತ್ರೀಜಿ,
ಕರ್ನಾಟಕದಲ್ಲಿನ್ನೂ ದಶಕಗಳಿಂದ ಇರುವ ಕೆಲಮ ಸಮಸ್ಯೆಗಳು ಹಾಗೇ ಮುಂದುವರೆದಿವೆ. ನಿಮ್ಮಂಥ ಲಕ್ಕಿ ಮುಖ್ಯಮಂತ್ರಿಗೂ ಅಮ ಜಗ್ಗುತ್ತಿಲ್ಲ. ಉದಾಹರಣೆಗೆ ಬೆಳಗಾವಿಯ ಗಡಿ ಸಮಸ್ಯೆ. ಉತ್ತರ ಕರ್ನಾಟಕದ ಅಭಿವೃದ್ಧಿ. ಕೊಡವರ ಕೊರಗು... ಇತ್ಯಾದಿ.

ಚಿಂತೆ ಬೇಡ. ನಿಮ್ಮ ಅದೃಷ್ಟದಿಂದಾಗಿ, ನನ್ನ ಕೆಲಮ ಸಲಹೆಯಿಂದಾಗಿ ಹಾಗೂ ಅತ್ಯಂತ ದೀರ್ಘವಾದ ತಮ್ಮ ತಾಳ್ಮೆಯಿಂದಾಗಿ ಈ ಸಮಸ್ಯೆಗಳೂ ಕೂಡ ತಂತಾನೇ ಪರಿಹಾರವಾಗುತ್ತವೆ ಎಂಬ ನಂಬಿಕೆ ನನಗಿದೆ.

ಉದಾಹರಣೆಗೆ, ಹೈದರಾಬಾದ್‌ ಕರ್ನಾಟಕದ ವಿಷಯವನ್ನೇ ನೋಡಿ. ಆ ಪ್ರದೇಶದ ಜನರು ತಮ್ಮ ಸಮಸ್ಯೆಯನ್ನು ಬಗೆಹರಿಸಲು ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಒತ್ತಾಯಿಸಿ ಬೇಸತ್ತು ಈಗ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಂಡಿದ್ದಾರೆ! ಅವರು ತಮ್ಮದು ಪ್ರತ್ಯೇಕ ರಾಜ್ಯ ಎಂದು ಘೋಷಿಸಿಕೊಂಡು ಈ ತಿಂಗಳು, ಕನ್ನಡ ರಾಜ್ಯೋತ್ಸವದ ದಿನವೇ ತಮ್ಮ ನೂತನ ಹೈ-ಕ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟಿದ್ದಾರೆ! ಅಲ್ಲಿಗೆ, ಅವರ ಬಹುದಿನಗಳ ಬೇಡಿಕೆ ಈಡೇರಿದಂತಾಯಿತು. ರಾಜ್ಯದ ಅಭಿವೃದ್ಧಿಯ ತಲೆಬಿಸಿ ನಿಮಗೆ ಕಡಿಮೆಯಾಯಿತು. ’ನಿಮಗೂ ನಿಮ್ಮ ರಾಜ್ಯಕ್ಕೂ ಶುಭವಾಗಲಿ...’ ಎಂದು ಹೈ-ಕ ರಾಜ್ಯಕ್ಕೆ ಒಂದು ಸಾಲಿನ ಶುಭ ಸಂದೇಶ ಕಳಿಸಿಬಿಟ್ಟರೆ ನಿಮ್ಮ ಜವಾಬ್ದಾರಿ ಮುಗಿದುಹೋಯಿತು. ಹೈ-ಕ ರಾಜ್ಯದ ಪ್ರಜೆಗಳೇ ತಮ್ಮ ರಾಜ್ಯವನ್ನು ಅಭಿವೃದ್ಧಿ ಮಾಡಿಕೊಳ್ಳುತ್ತಾರಂತೆ. ಅದು ಹೇಗೆ ಅವರ ಅಭಿವೃದ್ಧಿಯಾಗುತ್ತದೋ ಗೊತ್ತಿಲ್ಲ.
ಬಟ್‌...ಹೌ ಲಕ್ಕಿ ಯು ಆರ್‌!

ಆದರೆ, ಉತ್ತರ ಕರ್ನಾಟಕದ ಇನ್ನೂ ಕೆಲಮ ಜಿಲ್ಲೆಗಳು ತಮ್ಮದೇ ರಾಜ್ಯವನ್ನು ರಚಿಸಿಕೊಳ್ಳುವಲ್ಲಿ ಪೂರ್ಣ ಯಶಸ್ವಿಯಾಗಿಲ್ಲ. ಹೈ-ಕ ರಾಜ್ಯದಂತೆ ಅವರೂ ಸಹ ಆದಷ್ಟು ಬೇಗ ತಮ್ಮ ರಾಜ್ಯದ ಬಾಮಟ ಹಾರಿಸಿಸುವ ಸಾಧ್ಯತೆ ಇದೆ. ಅವರೂ ತಮ್ಮ ರಾಜ್ಯದ ಬಾಮಟ ಹಾರಿಸಿಬಿಟ್ಟರೆ, ಕರ್ನಾಟಕ ಸರ್ಕಾರದ ಅರ್ಧ ಸಮಸ್ಯೆ ಪರಿಹಾರವಾದಂತೆ ಲೆಕ್ಕ. ಉತ್ತರ ಕರ್ನಾಟಕವನ್ನು ಈಗಾಗಲೇ ಅರ್ಧ ಮರೆತ ಕರ್ನಾಟಕ ಸರ್ಕಾರ ಆಮೇಲೆ ಸಂಪೂರ್ಣ ಮರೆಯಬಹುದು. ಆಮೇಲೆ, ಬೆಂಗಳೂರಿನ ಅಭಿವೃದ್ಧಿಗೆ ಮಾತ್ರ ಗಮನ ಕೇಂದ್ರೀಕರಿಸಲು ಕರ್ನಾಟಕ ಸರ್ಕಾರಕ್ಕೆ ದಾರಿ ಸುಗಮವಾಗುತ್ತದೆ.

ಆದೇ ರೀತಿ ಕೊಡವರಿಗೂ ಉತ್ತೇಜನ ನೀಡಬೇಕು. ಪ್ರತ್ಯೇಕ ರಾಜ್ಯ ರಚನೆಯ ಅವರ ಕೂಗು ಬಹಳ ವರ್ಷಗಳಿಂದ ಇದ್ದೇ ಇದೆ. ಅವರೂ ಒಂದು ರಾಜ್ಯ ರಚಿಸಿಕೊಂಡು ತಮ್ಮ ರಾಜ್ಯದ ಧ್ವಜಾರೋಹಣ ಮಾಡಿಬಿಟ್ಟರೆ ಮುಗಿಯಿತು. ಕೊಡವರ ದಶಕಗಳ ಬೇಡಿಕೆಯೂ ಈಡೇರಿದಂತಾಗುತ್ತದೆ. ಕರ್ನಾಟಕದ ಈ ಸಮಸ್ಯೆ ಪರಿಹಾರವಾದಂತೆ ಆಗುತ್ತದೆ.

ಒಂದು ವೇಳೆ ನಿಮಗೆ ಈ ಪ್ರತ್ಯೇಕ ರಾಜ್ಯ ರಚನೆ ಇಷ್ಟವಾಗಲಿಲ್ಲ ಅಂದರೆ, ನನ್ನದೊಂದು ಸಲಹೆಯಿದೆ. ಕೋಲೂ ಮುರಿಯಬಾರದು, ಹಾವೂ ಸಾಯಬೇಕು ಎನ್ನುವ ತಂತ್ರ ಅನುಸರಿಸುಮದು. ಅಂದರೆ, ಹೊಸ ರಾಜ್ಯ ರಚನೆಯೂ ಆಗಬಾರದು. ಕರ್ನಾಟಕ ಸರ್ಕಾರದಿಂದ ಈ ಪ್ರದೇಶಗಳು ಪ್ರತ್ಯೇಕವೂ ಆಗಬೇಕು ಎನ್ನುವ ಐಡಿಯಾ. ಹೈಕೋರ್ಟ್‌ ‘ಪೀಠ’ವೇ ಬೇಕೆಂದು ಹಠ ಹಿಡಿದವರಿಗೆ ಹೈಕೋರ್ಟ್‌ ‘ಬೆಂಚು’ ಕೊಟ್ಟು ನೀಮ ಸುಮ್ಮನಿರಿಸಿದಿರಲ್ಲ... ಆ ಥರದ್ದು!


ಹೈ-ಕ, ಉತ್ತರ ಕರ್ನಾಟಕ ಹಾಗೂ ಕೊಡಗುಗಳನ್ನು ಪ್ರತ್ಯೇಕ ರಾಜ್ಯಗಳೆಂದು ಕರೆಯುವ ಬದಲು ಇಮಗಳಿಗೆ ಕರ್ನಾಟಕದ ಉಪ-ರಾಜ್ಯಗಳೆಂದು ಮಾನ್ಯತೆ ನೀಡುಮದು. ಹಳೆಯ ಕಾಲದಲ್ಲಿ ಒಬ್ಬ ರಾಜನಿಗೆ ಹಲವಾರು ಸಾಮಂತರು ಇರುತ್ತಿರಲಿಲ್ಲವೇ? ಅದೇ ರೀತಿ ಈ ಉಪ ರಾಜ್ಯಗಳು ಕರ್ನಾಟಕ ರಾಜ್ಯದ ಅಡಿಯಲ್ಲಿ ಸ್ವತಂತ್ರ ರಾಜ್ಯಗಳಾಗಿ ಕಾರ್ಯನಿರ್ವಹಿಸಬೇಕು. ವರ್ಷಕ್ಕೆ ನಿಗದಿತ ಮೊತ್ತವನ್ನು ಈ ಉಪರಾಜ್ಯಗಳು ಕರ್ನಾಟಕದ ಬೊಕ್ಕಸಕ್ಕೆ ತೆರಿಗೆ ಸಲ್ಲಿಸಬೇಕು. ಹಾಗೂ ತಮ್ಮ ಅಭಿವೃದ್ಧಿಯನ್ನು ತಾವೇ ಮಾಡಿಕೊಳ್ಳಬೇಕು.

ಈ ‘ಉಪ ರಾಜ್ಯ’ ಪದ್ಧತಿ ಭಾರತದ ಇತಿಹಾಸದಲ್ಲಿ ಯಶಸ್ವಿಯಾಗಿತ್ತು ಎಂಬುದನ್ನು ತಾಮ ಗಮನಿಸಬೇಕು. ಅಷ್ಟೇ ಅಲ್ಲ, ಇಂಥ ಪರಿಕಲ್ಪನೆ ವಾಣಿಜ್ಯ, ವ್ಯಾಪಾರದಲ್ಲೂ ಇದೆ. ಅದನ್ನು ಸಬ್‌ ಬ್ರೋಕರ್‌, ಸಬ್‌ ಲೀಸಿಂಗ್‌, ಸಬ್‌ ಕಾಂಟ್ರಾಕ್ಟ್‌ ಮುಂತಾದ ಪದಗಳಿಂದ ಬಣ್ಣಿಸುತ್ತಾರೆ. ಯೆ ಸಬ್‌... ಯಶಸ್ವಿಯಾಗಿ ನಡೆಯುತ್ತಿರುವಾಗ ’ಸಬ್‌ ಸ್ಟೇಟ್‌’ ಅಥವಾ ’ಉಪ ರಾಜ್ಯ’ ವ್ಯವಸ್ಥೆಯೂ ಯಶಸ್ವಿಯಾಗುಮದರಲ್ಲಿ ಯಾಮದೇ ಅನುಮಾನ ಬೇಡ. ಪ್ರಜಾತಂತ್ರ ಭಾರತದಲ್ಲಿ ಇಂಥ ಹೊಸ ರಾಜ್ಯಾಡಳಿತ ನೀತಿಯನ್ನು ಜಾರಿಗೊಳಿಸುವ ಮೊದಲ ಮುಖ್ಯಮಂತ್ರಿ ಎಂಬ ಹಿರಿಮೆಗೆ ಪಾತ್ರರಾಗುವ ಲಕ್‌ ನಿಮ್ಮದಾಗುತ್ತದೆ. ಸ್ವಲ್ಪ ಯೋಚಿಸಿ.

ಆದರೆ, ಬೆಳಗಾವಿಯ ವಿಷಯ ತುಸು ಕಠಿಣ. ಯಾಕೆಂದರೆ, ಅದರ ಪರಿಸ್ಥಿತಿ ಪಾಕಿಸ್ತಾನ ಮತ್ತು ಭಾರತದ ನಡುವೆ ಸಿಲುಕಿರುವ ಕಾಶ್ಮೀರದಂತಾಗಿದೆ. ಅದಕ್ಕಾಗಿ ಬೆಳಗಾವಿಯನ್ನು ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಬಹುದು. ಅಧಿಕೃತವಾಗಿ ಬೆಳಗಾವಿ ಕರ್ನಾಟಕದಲ್ಲಿದೆ. ಆದರೆ, ಇದು ತನಗೆ ಸೇರಬೇಕು ಎಂದು ಮಹಾರಾಷ್ಟ್ರ ಹೋರಾಟ ಮಾಡುತ್ತಿದೆ. ಬೆಳಗಾವಿಯಲ್ಲಿ ಕರ್ನಾಟಕ ಸರ್ಕಾರದ ಆಡಳಿತವನ್ನು ದುರ್ಬಲಗೊಳಿಸಲು ಕೆಲಮ ಉಗ್ರಗಾಮಿಗಳು ಭಯೋತ್ವಾದನೆ ಮಾಡುತ್ತಿದ್ದಾರೆ. ಆ ಉಗ್ರರಿಗೆ ಗಡಿಯಾಚೆಗಿನ ಕುಮ್ಮಕ್ಕು ಮತ್ತು ನೆರಮ ದೊರೆಯುತ್ತಿದೆ. ಉಭಯ ರಾಜ್ಯಗಳ ಸರ್ಕಾರಗಳು ಥೇಟ್‌ ಭಾರತ-ಪಾಕ್‌ ಸರ್ಕಾರಗಳ ಥರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಅಲ್ಲಿ ಕಾಶ್ಮೀರ ಗಡಿಯ ಶಾಲೆಗಳಲ್ಲಿ ಜಿಹಾದಿ ಶಿಕ್ಷಣ ನೀಡುತ್ತಿದ್ದರೆ ಬೆಳಗಾವಿಯ ಗಡಿಯ ಶಾಲೆಗಳಲ್ಲಿ ಮರಾಠಿ ಜಿಹಾದಿ ತರಬೇತಿ ನೀಡಲಾಗುತ್ತಿದೆ. ಕನ್ನಡದ ವಿರುದ್ಧ, ಕನ್ನಡಿಗರ ವಿರುದ್ಧ ಪ್ರಚೋದನೆ ನೀಡಲಾಗುತ್ತಿದೆ. ಕರ್ನಾಟಕ ರಾಜ್ಯೋತ್ಸವದ ದಿನ ಈ ಶಾಲೆಗಳಲ್ಲಿ ಕಪುý್ಪದಿನ ಆಚರಿಸಲಾಗುತ್ತದೆ. ಕಾಶ್ಮೀರ ಸಮಸ್ಯೆಗೂ ಗೋಲ್ಡನ್‌ ಜುಬಿಲಿ. ಬೆಳಗಾವಿ ಸಮಸ್ಯೆಗೂ ಸುವರ್ಣಮಹೋತ್ಸವ. ಇದನ್ನೆಲ್ಲ ನೋಡಿದರೆ, ಕಾಶ್ಮೀರವೇ ಬೆಳಗಾವಿಯಲ್ಲಿ ಅವತರಿಸಿದಂತೆ ಕಾಣುತ್ತದೆ.

ಹಾಗಾಗಿ, ಬೆಳಗಾವಿ ಸಮಸ್ಯೆಗೆ ಸದ್ಯಕ್ಕೆ ಯಾಮದೇ ಪರಿಹಾರ ಕಾಣುತ್ತಿಲ್ಲ. ಕರ್ನಾಟಕದ ಗಡಿಯಾಚೆಗಿನ ಉಗ್ರರು ಬೆಳಗಾವಿಯನ್ನು ಉಪ-ರಾಜ್ಯ ಎಂದು ಘೋಷಿಸಲೂ ಅವಕಾಶ ನೀಡುಮದಿಲ್ಲ. ಅದಕ್ಕಾಗಿ ಬೆಳಗಾವಿಯಲ್ಲಿ ಈಗಲೇ ಒಂದು ಗಡಿ ನಿಯಂತ್ರಣ ರೇಖೆ Line Of Control -LOC ಹಾಕಿಬಿಡುಮದು ಸೂಕ್ತ. ಇಲ್ಲವಾದರೆ, ಆಮೇಲೆ ಪಾಕ್‌ ಆಕ್ರಮಿತ ಕಾಶ್ಮೀರ ಇದ್ದಹಾಗೆ ಇನ್ನೊಂದು ಮಹಾರಾಷ್ಟ್ರ ಆಕ್ರಮಿತ ಬೆಳಗಾವಿ ಪ್ರದೇಶ ಸೃಷ್ಟಿಯಾಗಬಹುದು.

ಎಚ್ಚರ... ಎಚ್ಚರ!
ಇಂತು ಕರ್ನಾಟಕದ ಹಿತೈಷಿ
ಮೀರ್‌ ಸಾಧಿಕ್‌

Kannada Prabha issue dated November 28, 2005
Karnataka Divided in to Three Sub-States

-

Tuesday, November 22, 2005

ಸಾನಿಯಾ, ಖುಷ್ಬುಗೆ ಸೆಕ್ಸ್‌ ನಿಷೇಧ: ನರೇನ್‌ಗೆ ಪರವಾನಗಿ!

ಸಲ್ಮಾನ್‌, ಫರ್ದಿನ್‌ ಖಾನ್‌ ವಿರುದ್ಧ ಫತ್ವಾ ಇಲ್ಲ. ಪುರುಷರಿಗೆ ಶಿಕ್ಷೆಯಿಲ್ಲ
- ನೈತಿಕ ಕಾಂಡೋಂಗಳ ಕರಪತ್ರ


ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ? ಮದುವೆಗಿಂತ ಮೊದಲೇ ತಾಯಿಯಾದ ಕುಂತಿ, ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?



ಮಹಾಜನಗಳೇ,
ನಾಮ ಈ ಭೂಮಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಚಾರಿತ್ರಿಕ ರಕ್ಷಕರು. ನಮ್ಮನ್ನು ಬೇಕಾದರೆ ನೀಮ, ಸಮಾಜ ಸಂಸ್ಕೃತಿಯ ಕಮಾಂಡೋಗಳು ಅಥವಾ ನೈತಿಕ ಕಾಂಡೋಂಗಳು ಅಂತ ಕರೆಯಬಹುದು. ಯಾವ್ಯಾವಾಗ ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿಯಾಗುತ್ತದೋ, ಆಗೆಲ್ಲ ನಾಮ ಪ್ಯಾಕಿನಿಂದ ಹೊರಬರುತ್ತೇವೆ... ಅರ್ಥಾತ್‌ ಅವತರಿಸುತ್ತೇವೆ! ...ಸಂಭವಾಮಿ ಯುಗೇ ಯುಗೇ, ಅಂತ ಹೇಳಿದ ಆ ಕೃಷ್ಣ ಪರಮಾತ್ಮ ಎಲ್ಲಿ ಮಾಯವಾದನೋ ಗೊತ್ತಿಲ್ಲ! ನಾಮ ಮಾತ್ರ ಕರೆಕ್ಟಾಗಿ ಟೈಮಿಗೆ ಸರಿಯಾಗಿ ಅವತರಿಸುತ್ತೇವೆ.

ನಮ್ಮನ್ನು ನಾಮ ಸಂಸ್ಕೃತಿಯ ರಕ್ಷಕರು, ನೈತಿಕತೆಯ ಕಮಾಂಡೋಗಳು ಅಂತ ಕರೆದುಕೊಳ್ಳುತ್ತೇವೆ.
ನಮಗೆ ಕಾಂಡೋಂಗಳು ಅಂತ ಸೆಕ್ಸೀ ಹೆಸರೂ ಇದೆ. ಏಕೆಂದರೆ, ಮನುಷ್ಯನಿಗೆ ಏಡ್ಸ್‌ ರೋಗ ಹರಡುಮದನ್ನು ಕಾಂಡೋಂಗಳು ಹೇಗೆ ತಡೆಯುತ್ತವೋ ಅದೇ ರೀತಿ ನಾಮ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಲೈಂಗಿಕ ರೋಗ ಹರಡುಮದನ್ನು ತಡೆಯುತ್ತೇವೆ. ನೈತಿಕತೆ ಕೆಡುಮದನ್ನು ತಡೆಯುತ್ತೇವೆ. ಅದಕ್ಕಾಗಿ, ನಮಗೆ ಈ ಅನ್ವರ್ಥಕ ನಾಮ.

ಮಹಾಜನಗಳೇ,
ಎಂಥಾ ಪುಣ್ಯ ಭೂಮಿಯಾಗಿತ್ತು ನಮ್ಮದು! ಒಂದು ಕಾಲದಲ್ಲಿ ಲೈಂಗಿಕ ಕ್ರಿಯೆಯೇ ಇಲ್ಲದೇ ಸಂತಾನ ಉತ್ಪತ್ತಿಯಾಗುತ್ತಿದ್ದ ದೇಶ ನಮ್ಮದು. ದೇಶದ ಆರಾಧ್ಯ ದೈವ ಗಣಪತಿ ಸೃಷ್ಟಿಯಾದದ್ದು ಪಾರ್ವತಿ ತನ್ನ ಮೈಕೆಸರಿನಿಂದ ಮಾಡಿದ ಮೂರ್ತಿಯಿಂದ. ನಂತರ ಆತನಿಗೆ ಆನೆಯ ಮುಖ ಬಂದಿದ್ದು ಅಂಗಾಂಗ ಕಸಿಯಿಂದ. ಶ್ರೀರಾಮಚಂದ್ರ ಆಂಡ್‌ ಬ್ರದರ್ಸ್‌ ಹುಟ್ಟಿದ್ದು ದಶರಥನ ರಾಣಿಯರಿಗೆ ಯಜ್ಞದಿಂದ ಪ್ರಾಪ್ತವಾದ ಪಾಯಸದಿಂದ. ಈ ವೈದ್ಯ ವಿಜ್ಞಾನವನ್ನೇ ಈಗ ಕೃತಕ ಗರ್ಭಧಾರಣೆ ಎನ್ನಲಾಗುತ್ತದೆ. ಹಾಗೆ ನೋಡಿದರೆ, ಕೌರವರು ವಿಶ್ವದ ಮೊದಲ ಸಾಮೂಹಿಕ ಟೆಸ್ಟ್‌ಟ್ಯೂಬ್‌ ಬೇಬಿಗಳು. ವ್ಯಾಸ ಮಹಾಮುನಿಗಳು ನೀಡಿದ ತುಪ್ಪವನ್ನು ತಾಯಿ ಗಾಂಧಾರಿ ನೂರು ಕುಂಭಗಳಲ್ಲಿ ತುಂಬಿಟ್ಟಳು. ಕೆಲ ತಿಂಗಳುಗಳ ನಂತರ ಆ ಕುಂಭಗಳಿಂದ ಕೌರವರು ಜನಿಸಿದರು. ಇವರಿಗಿಂತ ಮೊದಲು ದ್ರೋಣರು ಎಲೆಯ ತಟ್ಟೆಯಲ್ಲಿ ಜನ್ಮ ಪಡೆದಿದ್ದರಿಂದ ಅವರೇ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್‌ ಬೇಬಿ ಇರಬಹುದು. ಪಾಂಡವರು ಹುಟ್ಟಿದ್ದು ಕುಂತಿಗೆ ಪ್ರಾಪ್ತವಾದ ಮಂತ್ರಶಕ್ತಿಯಿಂದ. ಇದನ್ನು ಅಲ್ಟ್ರಸೋನಿಕ್‌ ಗರ್ಭ ತಂತ್ರಜ್ಞಾನ ಎಂದು ಇನ್ನು ವಿಜ್ಞಾನಿಗಳು ಕಂಡುಹಿಡಿಯಬಹುದೇನೋ! ಈ ಎಲ್ಲ ಉದಾಹರಣೆಗಿಂತ ಹೆಚ್ಚಾಗಿ ಗಂಗಾ ನದಿಯ ತಟದ ಮೇಲೆ, ಯುವತಿಯಾಗಿದ್ದ ಕುಂತಿ ಸೂರ್ಯಮಂತ್ರವನ್ನು ಪಠಿಸಿ ಮಗ ಕರ್ಣನನ್ನು ಪಡೆದ ಕಥೆ ಜನಜನಿತ. ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಬೀಜ ಅಂಕುರವೊಡೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ’ತದ್ರೂಪಿಗಳಂತೆ’ ಪುನರುತ್ಪತ್ತಿ ಆಗುತ್ತಿದ್ದರಂತೆ. ಇದನ್ನೇ ವಿಜ್ಞಾನಿಗಳು ರಕ್ತದ ಕಣದಿಂದ ತದ್ರೂಪಿಗಳನ್ನು ಸೃಷ್ಟಿಸುವ ಕ್ಲೋನಿಂಗ್‌ ತಂತ್ರಜ್ಞಾನ ಎಂದು ಕರೆಯುತ್ತಾರೆ.

ಇಂಥ ಸೆಕ್ಸ್‌ರಹಿತ ಸಂತಾನ ಭಾಗ್ಯವಿದ್ದ ಈ ಭರತಭೂಮಿಯಲ್ಲಿ ಇಂದು ಸಂತಾನ ಭಾಗ್ಯವೇ ಬೇಡದ ಲೈಂಗಿಕತೆ ವಿಜೃಂಭಿಸುತ್ತಿದೆ! ಭಾರತ ಕಾಮದೇವನ ಆಡುಂಬೋಲವಾಗಿದೆ.

ಸಾಲದು ಎಂಬಂತೆ ದೇಶದ ಹೆಣ್ಣುಮಕ್ಕಳೆಲ್ಲಾ ಯುವಕರಿಗೆ ಸೆಕ್ಸಾಯಣ ಸೂತ್ರ ಕಲಿಸುತ್ತಿದ್ದಾರೆ. ’ತಾಮ ಕೆಟ್ಟಿದ್ದಲ್ಲದೇ ನೀವೂ ಕೆಟ್ಟುಹೋಗಿ. ಈಗಿನ ಕಾಲದಲ್ಲಿ ನೀಮ ಕೆಟ್ಟು ಹೋಗುಮದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನೀಮ ಸುರಕ್ಷಿತ ರೀತಿಯಲ್ಲಿ ಕೆಟ್ಟು ಹೋಗಿ’ ಅಂತ ಧರ್ಮಬೋಧೆ ಮಾಡುತ್ತಿದ್ದಾರೆ. ಇಂಥ ಸೂತ್ರಗಳನ್ನು ಕಲಿಸುವ ಹಕ್ಕು ಇರುಮದು ವಾತ್ಸಾಯನನಂಥ ಮಹರ್ಷಿಗಳಿಗೆ ಮಾತ್ರ. ಇಡೀ ಪುರಾಣದಲ್ಲಿ ಯಾರಾದರೂ ಸ್ತ್ರೀ ಮಹರ್ಷಿ ಇಂತಹ ಉಪದೇಶ ಮಾಡಿದ ಉದಾಹರಣೆ ತೋರಿಸಿ!
‘ಈಗಿನ ಕಾಲದಲ್ಲಿ ಕನ್ಯೆಯರು ಕನ್ಯತ್ವ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ವಿದ್ಯಾವಂತ ಹುಡುಗರು ಕನ್ಯೆಯರನ್ನೇ ಮದುವೆಯಾಗುತ್ತೇವೆ ಎಂದು ಬಯಸುಮದಿಲ್ಲ.’ ಎಂಬರ್ಥದಲ್ಲಿ ಖುಷ್ಬು ಪ್ರವಚನ ನೀಡಿದ್ದಾಳೆ.

ಇದನ್ನು ಖುಷ್ಬು ಹೇಳಿರುಮದಕ್ಕೆ ನಮ್ಮ ವಿರೋಧವಿದೆ. ಅದನ್ನೇ ಯಾರಾದರೂ ಪುರುಷ ಹೇಳಿದ್ದರೆ ನಾಮ ಒಪ್ಪಿಕೊಳ್ಳುತ್ತಿದ್ದೆಮ.
ಈಗಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಖುಷ್ಬು ಹೇಳಿರುಮದು ನಿಜ ಅಂತ ನಮಗೂ ಗೊತ್ತು. ಆದರೂ, ಆ ಸತ್ಯವನ್ನು ಹೇಳಲು ಆಕೆಗೆ ಹಕ್ಕಿಲ್ಲ ಅನ್ನುಮದೇ ನಮ್ಮ ಪ್ರಮುಖ ಆಕ್ಷೇಪ.

ಆಕೆ ಮದುವೆಗಿಂತ ಮೊದಲು ಕನ್ಯತ್ವ ಕಳೆದುಕೊಂಡಿದ್ದರೂ ನಮ್ಮ ಅಭ್ಯಂತರವಿಲ್ಲ. ಆಕೆ, ಸಿನಿಮಾಗಳಲ್ಲಿ ತನ್ನ ಬಹುತೇಕ ಅಂಗಾಂಗಗಳನ್ನು ತೋರಿಸಿರುಮದಕ್ಕೂ ನಮ್ಮ ತಕರಾರಿಲ್ಲ. ಆದರೆ, ಆ ಮಾತನ್ನು ಸಾರ್ವಜನಿಕವಾಗಿ ಆಕೆ ಹೇಳಬಾರದಿತ್ತು. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ.

ಇನ್ನು ಸಾನಿಯಾ ಕಥೆಯೂ ಅಷ್ಟೇ. ಆಕೆ, ಬುರ್ಖಾ ಹಾಕಿಕೊಂಡು ಟೆನಿಸ್‌ ಆಡುಮದು ಬಿಟ್ಟು ಚೋಟುದ್ದ ಲಂಗ ಹಾಕಿಕೊಂಡು ಟೆನಿಸ್‌ ಆಡುತ್ತಾಳೆ. ಟೈಟ್‌ ಟೀಶರ್ಟ್‌ ತೊಟ್ಟ ಆಕೆ ಶಾಟ್‌ ಹೊಡೆದರೆ, ನಮ್ಮ ಕಣ್ಣುಗಳೆಲ್ಲ ಆಟ ನೋಡುಮದು ಬಿಟ್ಟು ಆಕೆಯ ಮಾಟ ನೋಡುತ್ತವೆ.

ಟೆನಿಸ್‌ ಆಟಕ್ಕೇ ಇಷ್ಟು ಸಣ್ಣ ಬಟ್ಟೆ ತೊಟ್ಟುಕೊಳ್ಳುವ ಆಕೆ ಇನ್ನು ಈಜು ಸ್ಪರ್ಧೆಯಲ್ಲಿ ಭಾಗವಹಿಸುಮದಾದರೆ ಎಷ್ಟು ಬಟ್ಟೆ ತೊಟ್ಟುಕೊಳ್ಳುತ್ತಿದ್ದಳೋ ಅಂತ ಭಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಕೂಡ ಖುಷ್ಬು ಮಾಡಿದ ತಪ್ಪನ್ನೇ ಮಾಡಿದ್ದಾಳೆ. ಅದಕ್ಕೇ ನೈತಿಕ ಕಾಂಡೋಮ್‌ಗಳಾದ ನಾಮ ಆಕೆಯ ವಿರುದ್ಧ ಫತ್ವಾ ಹೊರಡಿಸುವ ತಯಾರಿಯನ್ನು ಮಾಡಿಕೊಂಡಿದ್ದೇವೆ.

ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ ಹೇಳಿ?
ಯಾಕೆಂದರೆ, ಆತ ಪುರುಷ. ಆತನಿಗೆ ಸೆಕ್ಸ್‌ ಬಗ್ಗೆ ಅಥವಾ ವಿವಾಹ ಪೂರ್ವ ಸೆಕ್ಸ್‌ ಬಗ್ಗೆ ಮಾತನಾಡಲು ಪರವಾನಗಿಯಿದೆ. ಅದಕ್ಕಾಗಿ ಆತನ ವಿರುದ್ಧ ನಾಮ ಸೊಲ್ಲು ಎತ್ತಲಿಲ್ಲ. ನಾವಷ್ಟೇ ಏನು, ಸಾನಿಯಾ ಪ್ರಕರಣದ ಕುರಿತು ವರದಿ ಮಾಡಿದ ಭಾರತದ ಯಾವ ಪತ್ರಿಕೆಯೂ ಈ ಕುರಿತು ಪ್ರಶ್ನೆ ಹಾಕಲಿಲ್ಲ. ಏಕೆಂದರೆ, ಪುರಷರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯ ನೀಡಿದೆ. ಮಹಿಳೆಯರಿಗೆ ನೀಡಿಲ್ಲ. ಈ ಸಂಪ್ರದಾಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲ. ಇದನ್ನು ಎಲ್ಲರೂ ಅರಿತು ನಡೆಯಬೇಕು.
ಅಷ್ಟೇ ಅಲ್ಲ. ಫರ್ದಿನ್‌ ಖಾನ್‌ ಎಂಬ ಸಿನಿಮಾ ನಟ ಕೇವಲ ಒಂದೇ ಒಂದು ಚಿಕ್ಕ ಒಳಉಡುಪು ಧರಿಸಿದ ಚಿತ್ರಗಳು ಎಷ್ಟಿಲ್ಲ. ಐಶ್ವರ್ಯ ರೈ ಜತೆ ಬೇಕಾದಷ್ಟು ಆಡಿಕೊಂಡಿದ್ದ ಸಲ್ಮಾನ್‌ ಖಾನ್‌ನ ಸಂಭಾಷಣೆ ಪ್ರಕಟವಾಗಿದ್ದು ನೆನಪಿರಬಹುದು. ಆತ ಎಷ್ಟು ಬಾರಿ ಫ... ಎಂಬ ನಿಷೇಧಿತ ಶಬ್ದವನ್ನು ಬಳಸಿಲ್ಲ. ಯಾವ್ಯಾವ ಹೀರೋಯಿನ್‌ಗಳ ಜತೆಗೆ ತಾನು ಮಲಗಿದ್ದೆ ಎಂದು ಅತ ಹೇಳಿದ್ದನಲ್ಲ. ಆದರೆ, ಅದು ತಪ್ಪಲ್ಲ. ಏಕೆಂದರೆ, ಆತ ಪುರುಷ. ಅದಕ್ಕೇ, ಸಲ್ಮಾನ್‌ ಖಾನ್‌ ವಿರುದ್ಧವಾಗಲಿ, ಫರ್ದಿನ್‌ ಖಾನ್‌ ವಿರುದ್ಧವಾಗಿ ಯಾರೂ ಪತ್ವಾ ಹೊರಡಿಸಲಿಲ್ಲ.

ಇಷ್ಟಕ್ಕೂ ನಿಮಗೆ ಗೊತ್ತಲ್ಲ? ಯಾವಾಗಲೂ ಹೇಳದೇ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವ ಮಧ್ಯಮನು. ಆಡಿಯೂ ಮಾಡದವ ಅಧಮನು ಎಂದು ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ಸಂಪ್ರದಾಯದ ಪ್ರಕಾರ ಉತ್ತಮ ಮಹಿಳೆ ಎನ್ನಿಸಿಕೊಳ್ಳಬೇಕಾದರೆ ಯಾಮದೇ ಮಹಿಳೆ ಮಾಡಬೇಕಾದದ್ದು ಇಷ್ಟೇ... ಆಕೆ ವಿವಾಹದ ಮೊದಲಾಗಲೀ, ನಂತರವಾಗಲೀ, ಪತಿಯ ಜತೆಗಾಗಲೀ, ಮಿತ್ರನ ಜತೆಗಾಗಲೀ ಲೈಂಗಿಕತೆಯಲ್ಲಿ ತೊಡಗಬುಹುದು. ಆದರೆ, ಆಕೆ ಅದನ್ನ ಗುಪ್ತವಾಗಿ ಇಟ್ಟಿರಬೇಕು. ಅರ್ಥಾತ್‌ ಆಡದೇ ಮಾಡಬೇಕು. ಇದರಿಂದ ನಮ್ಮ ಸಂಸ್ಕೃತಿಗೆ ಅಪಚಾರವಿಲ್ಲ.

ಮದುವೆಗಿಂತ ಮೊದಲೇ ತಾಯಿಯಾದ ಕುಂತಿ ಕೊನೆಗೆ ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?

ಇಂತಿ ನೈತಿಕ ಕಮಾಂಡೋಗಳು


Kannada Prabha issue dated November 21, 2005
Sex for Naren Kartikeyan, No sex for Sania and Khushbu!

-

Tuesday, November 15, 2005

ಕಂಚಿ ಸ್ವಾಮಿಗಿಲ್ಲದ ರಾಷ್ಟ್ರಪತಿ ಕ್ಷಮಾದಾನ ಅಬು ಸಲೇಂಗೆ!

ಗಲ್ಲು ಶಿಕ್ಷೆಯಿಂದ ಪಾರುಮಾಡುಮದು ಸರ್ಕಾರಕ್ಕೇ ಅನಿವಾರ್ಯ:
ಮೋನಿಕಾ ಬೇಡಿಗೆ ಅಬು ಸಲೇಂ ರಹಸ್ಯ ಪತ್ರ


ಕೋರ್ಟು, ನಮಗೆ ಗಲ್ಲು ಶಿಕ್ಷೆ ವಿಧಿಸಿದರೂ ರಾಷ್ಟ್ರಪತಿ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕಾಗುತ್ತದೆ. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರ್ಕಾರದ ವಿಶ್ವಾಸಾರ್ಹತೆಯ ವಿಷಯ.


ಮೋನಿ ಡಾರ್ಲಿಂಗ್‌,
ಮುಂಬೈ ಸ್ಫೋಟ, ಗುಲ್‌ಶನ್‌ ಕುಮಾರನ್ನ ಮಟಾಷ್‌ ಮಾಡಿದ್ದೂ ಸೇರಿ... ಸುಮಾರು ೬೦ ಪ್ರಕರಣಕ್ಕೆ ಸಂಬಂಧಿಸಿ ನನ್ನನ್ನು ಸಿಬಿಐನವರು ಹಿಡಿದು ಹಾಕಿದ್ದಾರೆ. ಇಲ್ಲಿಗೆ ನಮ್ಮ ಕಥೆ ಮುಗೀತು ಅಂತ ಭಯ ಪಟ್ಕೋಬೇಡ ಮೇರಿ ಜಾನ್‌. ಇವರು ನಮಗೆ ಏನೂ ಮಾಡೋಲ್ಲ. ಕೋರ್ಟಿನಿಂದಲೂ ಏನೂ ಮಾಡೋಕೆ ಆಗೋಲ್ಲ. ನಮ್ಮ ರಕ್ಷಣೆಯ ಭಾರವನ್ನು ಭಾರತ ಸರ್ಕಾರವೇ ಹೊತ್ತಿದೆ. ಸಾಲದೂ ಅಂತ ಪೋರ್ಚುಗಲ್‌ ಸರ್ಕಾರ, ಯೂರೋಪಿಯನ್‌ ಒಕ್ಕೂಟ, ವಿಶ್ವಸಂಸ್ಥೆ ಎಲ್ಲವೂ ನಮ್ಮ ಪರವಾಗೇ ನಿಂತಿವೆ. ಇನ್‌ ಫ್ಯಾಕ್ಟ್‌, ಕಂಚಿ ಸ್ವಾಮೀಜಿಗಿಂತ ನಾವೇ ಸೇಫ್‌ ಗೊತ್ತಾ?

ಕೊಲೆ ಮಾಡಿದ ಆರೋಪ ಸಾಬೀತಾದರೆ, ಕಂಚಿ ಸ್ವಾಮೀಜಿಗೆ ಗಲ್ಲು ಶಿಕ್ಷೆ ಗ್ಯಾರಂಟಿಯಂತೆ. ಯಾಕೆಂದರೆ, ಸಮಾಜಕ್ಕೆ ಮಾರ್ಗದರ್ಶನ ಮಾಡುವವರು, ಜನರಿಗೆ ಮಾದರಿಯಾಗಿ ಇರುವವರು, ಸಮಾಜದಲ್ಲಿ... ಅಂಥ ದೊಡ್ಡ ಸ್ಥಾನದಲ್ಲಿ ಇರುವವರೇ ನಮ್ಮ ಥರ ಕೊಲೆ, ಗಿಲೆ ಮಾಡಿಕೊಂಡಿದ್ದರೆ ಅವರನ್ನು ಕ್ಷಮಿಸಲು ಹೇಗೆ ಸಾಧ್ಯ?

ಆದರೆ, ನಮ್ಮ ಕೇಸ್‌ ಬೇರೆ. ‘ಪಾಪ... ಏನೋ ದಾರಿ ತಪ್ಪಿದ ಮಕ್ಕಳು. ಯಾಮದೋ ಗಳಿಗೆಯಲ್ಲಿ ತಪುý್ಪ ದಾರಿ ಹಿಡಿದಿದ್ದಾರೆ. ಈಗ ತಪ್ಪಿನ ಅರಿವಾಗಿದೆ. ತಪುý್ಪ ತಿದ್ದಿಕೊಳ್ಳಲು ಒಂದು ಅವಕಾಶ ಕೊಡಿ. ಮುಂದೆ ಅವರು ಸರಿಯಾಗ್ತಾರೆ.’ ಅಂತ ನಮ್ಮ ಪರವಾಗಿ ಇಡೀ ದೇಶದ ಬುದ್ಧಿಜೀವಿಗಳೇ ವಾದಿಸುತ್ತಾರೆ ನೋಡುತ್ತಿರು.

ಅಲ್ಲದೇ, ಪೊಲೀಸರು ನಮ್ಮ ಬಾಯಿ ಬಿಡಿಸಲು ನಮಗೆ ಹಿಂಸೆ ಕೊಡುವಂತೆಯೂ ಇಲ್ಲ. ಯಾಕೆಂದರೆ, ಅವರು ಹಾಗೆ ಮಾಡಿದರೆ ಅದು ಮಾನವ ಹಕ್ಕಿನ ಉಲ್ಲಂಘನೆಯಾಗುತ್ತದೆ. ಅದಕ್ಕಾಗಿ, ಮಾನವ ಹಕ್ಕು ಹೋರಾಟಗಾರರೂ ನಮ್ಮ ಪರವಾಗೇ ಹೋರಾಟ ಮಾಡುತ್ತಾರೆ. ವೀರಪ್ಪನ್‌ನ ‘ಮಾನವ ಹಕ್ಕಿಗಾಗೇ’ ಹೋರಾಟ ಮಾಡಿದ ಇವರೆಲ್ಲ ನಮ್ಮ ರಕ್ಷಣೆಗೂ ಬಾರದೇ ಇರುತ್ತಾರಾ!

ಅದಕ್ಕಿಂತ ಹೆಚ್ಚಾಗಿ ನಮಗೆ ಭಾರತ ಮತ್ತು ಪೋರ್ಚುಗಲ್‌... ಎರಡೂ ಸರ್ಕಾರದ ರಕ್ಷಣೆಯಿದೆ ಬಿಡು.

‘ಇವರಿಬ್ಬರಿಗೂ ಗಲ್ಲು ಶಿಕ್ಷೆ ವಿಧಿಸೋಲ್ಲ. ೨೫ ವರ್ಷಕ್ಕಿಂತ ಹೆಚ್ಚು ಜೈಲು ಶಿಕ್ಷೆಯನ್ನೂ ಕೊಡೋಲ್ಲ’... ಅಂತ ಭಾರತ ಸರ್ಕಾರದ ಪರವಾಗಿ ಆಗಿನ ಪ್ರಧಾನಿ ವಾಜಪೇಯೀಜಿ ಪೋರ್ಚುಗಲ್‌ ಸರ್ಕಾರಕ್ಕೆ ಲಿಖಿತ ಭರವಸೆ ಕೊಟ್ಟಿದ್ದರಿಂದ ತಾನೆ ನಮ್ಮನ್ನು ಆ ಸರ್ಕಾರ ಭಾರತದ ವಶಕ್ಕೆ ಕೊಟ್ಟಿದ್ದು. ಒಂದು ವೇಳೆ ಭಾರತ ಈ ರೀತಿ ಭರವಸೆ ಕೊಡದೇ ಇದ್ದಿದ್ದರೆ ಪೋರ್ಚುಗಲ್‌ ಸರ್ಕಾರ ನಮ್ಮನ್ನು ಭಾರತದ ವಶಕ್ಕೆ ನೀಡುತ್ತಲೇ ಇರಲಿಲ್ಲ. ಏಕೆಂದರೆ, ಯೂರೋಪಿನ ದೇಶಗಳಲ್ಲಿ ಗಲ್ಲು ಶಿಕ್ಷೆಯೂ ಇಲ್ಲ. ೨೫ ವರ್ಷಕ್ಕಿಂತ ದೀರ್ಘ ಕಾಲದ ಜೈಲು ಶಿಕ್ಷೆಯೂ ಇಲ್ಲ. ಆದ್ದರಿಂದ ಗಲ್ಲು ಶಿಕ್ಷೆಯಿರುವ ದೇಶಗಳಿಗೆ ಯುರೋಪ್‌ ಅಪರಾಧಿಗಳನ್ನು ಹಸ್ತಾಂತರಿಸುಮದಿಲ್ಲ.

ಈ ಕಟ್ಟಳೆಯನ್ನು ಒಪ್ಪಿ ನಮ್ಮನ್ನು ವಶಪಡಿಸಿಕೊಂಡಿರುವ ಭಾರತವೇನಾದರೂ ಈಗ ತನ್ನ ಮಾತಿಗೆ ತಪ್ಪಿ ನಮ್ಮ ಸಾವಿಗೆ ಕಾರಣವಾದರೆ ಪೋರ್ಚುಗಲ್‌ ದೇಶ ಸುಮ್ಮನಿರುತ್ತದಾ? ಅಂತಾರಾಷ್ಟ್ರೀಯ ಒಪ್ಪಂದದ ಉಲ್ಲಂಘನೆ ಅಂತ ಹುಯಿಲೆಬ್ಬಿಸುತ್ತದೆ. ಇಡೀ ಯುರೋಪಿಯನ್‌ ಒಕ್ಕೂಟವನ್ನು ಭಾರತದ ವಿರುದ್ಧ ಎತ್ತಿಕಟ್ಟುತ್ತದೆ. ಈ ಗದ್ದಲ ಸಹಜವಾಗಿ ವಿಶ್ವಸಂಸ್ಥೆವರೆಗೂ ಹೋಗದೇ ಇರುತ್ತದಾ? ಹಾಗಾಗಿ ನಮ್ಮನ್ನು ರಕ್ಷಿಸುಮದು ಈಗ ಭಾರತಕ್ಕೆ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಪ್ರಶ್ನೆ. ಇಂಥ ಸರ್ಕಾರಿ ಗೌರವ ಪಡೆಯುತ್ತಿರುವ ಭಾರತದ ಮೊದಲ ಪ್ರಜೆಗಳು ನಾಮ ಅಂತ ಹೆಮ್ಮೆ ಪಡು ಮೋನಿ!

ಒಂಥರಾ ತಮಾಷೆಯಾಗಿದೆಯಲ್ಲಾ?...
ಅಷ್ಟು ಕೊಲೆಗಳನ್ನು ಮಾಡಿದ ನನ್ನನ್ನ ಎರಡು ಬೃಹತ್‌ ದೇಶಗಳ ಸರ್ಕಾರಗಳೇ ಹೇಗೆ ರಕ್ಷಿಸುತ್ತಿವೆ ನೋಡು! ನಾನೆಷ್ಟು ಪವರ್‌ಫುಲ್‌ ಅಲ್ಲವಾ? ನನ್ನಂಥ ಗಂಡ ಸಿಕ್ಕಿದ್ದು ನಿನ್ನ ಲಕ್ಕು ಅಂದುಕೊಳ್ಳುತ್ತೀಯಾ ಡಾರ್ಲಿಂಗ್‌?

ಭಾರತಕ್ಕೆ ನಮ್ಮನ್ನು ಕರೆತಂದು ಟಾಡಾ ಕೋರ್ಟಿಗೆ ಸಿಬಿಐ ಹಾಜರುಪಡಿಸಿದ ದಿನ , ಕೋರ್ಟಿನ ಗರ್ಜನೆ ಕೇಳಿ ನನಗೂ ಸ್ವಲ್ಪ ಭಯ ಆದದ್ದು ನಿಜ.

‘ಇವರು ಇಬ್ಬರೂ ಅಪರಾಧಿಗಳು ಅಂತ ಸಾಬೀತಾದರೂ ಇವರಿಗೆ ಗಲ್ಲು ಶಿಕ್ಷೆ ವಿಧಿಸುವಂತಿಲ್ಲ ಹಾಗೂ ೨೫ ವರ್ಷಕ್ಕಿಂತ ಹೆಚ್ಚು ಶಿಕ್ಷೆ ಕೊಡುವಂತಿಲ್ಲ’ ಎಂದು ನಮ್ಮ ಪರವಾಗಿ ಸರ್ಕಾರಿ ವಕೀಲ ವಾದ ಮಂಡಿಸುತ್ತಿದ್ದಂತೆ, ಆ ಜಡ್ಜಿಗೆ ತುಂಬಾ ಕೋಪ ಬಂತು. ‘ಕೋರ್ಟಿಗೆ ಹೀಗೆಲ್ಲ ಕಟ್ಟಳೆ ವಿಧಿಸಲು ನೀವ್ಯಾರು? ಅಪರಾಧಕ್ಕೆ ತಕ್ಕ ಶಿಕ್ಷೆಯನ್ನು ಕೋರ್ಟು ವಿಧಿಸುತ್ತದೆ. ಸೂರ್ಯನಿಗೇ ಟಾರ್ಚಾ? ಕೋರ್ಟಿಗೇ ಶರತ್ತಾ?’ ಅಂತ ದೇವೇಗೌಡರ ಥರ ಗುಡುಗಿದರು.

ಆ ಕ್ಷಣ ನನಗೆ ಎಲ್ಲಿ ಎಡವಟ್ಟಾಗುತ್ತದೋ ಅಂತ ದಿಗಿಲಾಯಿತು. ಈಗ ವಕೀಲರ ಜೊತೆ ಸಮಾಲೋಚನೆ ನಡೆಸಿದ ನಂತರ ನನಗೆ ಸಂಪೂರ್ಣ ಸಮಾಧಾನ ಆಗಿದೆ.

ಕೋರ್ಟು, ಬೇಕಾದರೆ ನಮಗೆ ಗಲ್ಲು ಶಿಕ್ಷೆ ವಿಧಿಸಲಿ. ಆದರೂ ನಮಗೆ ಯಾವ ಭಯವೂ ಇಲ್ಲ. ಯಾಕೆ ಗೊತ್ತಾ? ರಾಷ್ಟ್ರಪತಿ ನಮಗೆ ಕ್ಷಮಾದಾನ ನೀಡಿ ನಮ್ಮನ್ನು ಗಲ್ಲು ಶಿಕ್ಷೆಯಿಂದ ಪಾರುಮಾಡುತ್ತಾರೆ. ಅವರು ಪಾರು ಮಾಡಲೇ ಬೇಕು. ಯಾಕೆಂದರೆ, ಇದು ಭಾರತ ಸರ್ಕಾರ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ಲಿಖಿತ ಭರವಸೆಯ ಪ್ರಶ್ನೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿಶ್ವಾಸಾರ್ಹತೆ ಹಾಗೂ ಪ್ರತಿಷ್ಠೆಯ ವಿಷಯ. ಆದ್ದರಿಂದ ಈ ದೇಶದ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಉಳಿಸಲು ರಾಷ್ಟ್ರಪತಿಗಳು ನಮಗೆ ವಿಧಿಸಿದ ಗಲ್ಲು ಶಿಕ್ಷೆಯನ್ನು ರದ್ದು ಪಡಿಸಲೇ ಬೇಕಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರಪತಿಗಳು ಯಾರಿಗೂ ಕ್ಷಮಾದಾನ ನೀಡಿಲ್ಲ. ಅದನ್ನು ಪಡೆಯುವ ನಾವೇ ಅದೃಷ್ಟವಂತರು ಡಾರ್ಲಿಂಗ್‌.

ಮೋನಿ ಡಾರ್ಲಿಂಗ್‌,
ಈ ನಡುವೆ ಜೈಲಿನಲ್ಲಿ ನನಗೆ ತುಂಬಾ ಫ್ರೀ ಟೈಮ್‌ ಸಿಗುತ್ತೆ. ಆಗ ನಾನು ಒಂದು ಪುಸ್ತಕ ಬರೆಯಬೇಕು ಅಂದುಕೊಂಡಿದ್ದೇನೆ. ಶೀರ್ಷಿಕೆ: ಗಲ್ಲು ಶಿಕ್ಷೆಯಿಂದ ಪಾರಾಗುಮದು ಹೇಗೆ?

ಹೇಗೆ ಯೂರೋಪಿಯನ್‌ ದೇಶಗಳಿಂದ ಭಾರತಕ್ಕೆ ಗಡಿಪಾರಾಗಿ ಬಂದರೆ ಎಂಥ ಅಪರಾಧ ಮಾಡಿದ್ದರೂ ಭಾರತದ ಗಲ್ಲು ಶಿಕ್ಷೆಯಿಂದ ಪಾರಾಗಬಹುದು ಎಂಬುದನ್ನು ಹಂತ ಹಂತವಾಗಿ ವಿವರಿಸುತ್ತೇನೆ. ಈ ಪುಸ್ತಕ ಹೇಗೆ ಖರ್ಚಾಗುತ್ತೆ ನೋಡುತ್ತಿರು!

ಕಂಚಿ ಮಠದ ಒಂದೇ ಒಂದು ಕೊಲೆ ಕೇಸಿನಲ್ಲಿ ಸಿಕ್ಕಿಕೊಂಡು ವಿಲಿವಿಲಿ ಒದ್ದಾಡುತ್ತಿರುವ ಸ್ವಾಮಿಗಳ ಪರಿಸ್ಥಿತಿ ನೋಡಿ ನಗು ಬರುತ್ತಿದೆ. ಅಷ್ಟೇ ಅಲ್ಲ... ಈ ಸಿಬಿಐ ಅಧಿಕಾರಿಗಳ ಕಷ್ಟ ಕಂಡು ಪಾಪ ಅನ್ನಿಸುತ್ತಿದೆ.

ಮುಂಬೈ ಸ್ಫೋಟ ಸಂಭವಿಸಿ ೧೨ ವರ್ಷವಾದರೂ ಸಿಬಿಐ ಅಧಿಕಾರಿಗಳು ಇನ್ನೂ ಅಪರಾಧಿಗಳ ಹುಡುಕಾಟದಲ್ಲೇ ಇದ್ದಾರೆ. ನನ್ನನ್ನು ಪಡೆಯಲು ಪೋರ್ಚುಗಲ್‌ ದೇಶದ ಕಾನೂನಿನೊಡನೆ ಕಳೆದ ಮೂರು ವರ್ಷದಿಂದ ಬಡಿದಾಡಿ ಹೈರಾಣಾಗಿದ್ದಾರೆ. ಈಗ ಭಾರತದ ಕಾನೂನಿನೊಡನೆ ಅವರ ಹೋರಾಟ ಆರಂಭವಾಗಿದೆ. ಅವರು ಹೋರಾಡುತ್ತಲೇ ಇರುತ್ತಾರೆ. ಇದು ಅವರ ಹಣೆಬರಹ.
ನನಗೆ ಈಗ ಈ ಕಾನೂನಿನ ಭಯ ಉಳಿದಿಲ್ಲ. ಭಯವಿರುಮದು ನಮ್ಮ ಭೂಗತ ಲೋಕದ ಜನರ ಮೇಲೆ ಮಾತ್ರ. ಅದರಲ್ಲೂ ದಾವೂದ್‌ ಭಯ್ಯಾ ನನ್ನನ್ನು ಫಿನಿಷ್‌ ಮಾಡಲು ಖಂಡಿತ ಪ್ರಯತ್ನಿಸುತ್ತಾನೆ. ಅವನಿಗೆ ಸಿಬಿಐಗಿರುವಂಥ ಯಾವ ಕಾನೂನು ಇಲ್ಲವಲ್ಲ. ಅವರು ಎಲ್ಲಿಂದ, ಯಾವಾಗ, ಹೇಗೆ ನನ್ನ ಮೇಲೆ ಅಟ್ಯಾಕ್‌ ಮಾಡುತ್ತಾರೋ ಗೊತ್ತಿಲ್ಲ! ಸಿಬಿಐ ಅಧಿಕಾರಿಗಳು ಲಂಚ ತಗೊಂಡು ನನ್ನನ್ನು ದಾವೂದ್‌ ಕಡೆಯವರಿಗೆ ‘ಅರ್ಪಿಸು’ತ್ತಾರೋ ಎಂಬ ಭಯವೂ ಇದೆ. ಅಥವಾ ನಕಲಿ ಎನ್‌ಕೌಂಟರಿನಲ್ಲಿ ಸಾಯಿಸಿಬಿಡುತ್ತಾರೋ ಎಂಬ ಅಳುಕಿದೆ. ಹಾಗಾಗಿ ನನ್ನ ೧೦೦೦ ಕೋಟಿ ರುಪಾಯಿ ಆಸ್ತಿಯ ಆಮಿಷವನ್ನು ನಾನೂ ಇವರಿಗೆ ಒಡ್ಡಿದ್ದೇನೆ. ಪೊಲೀಸರು ನನಗೆ ಕೈಕೊಡಲಿಕ್ಕಿಲ್ಲ ಎಂದುಕೊಂಡಿದ್ದೇನೆ.

ಆದರೆ, ನನ್ನ ರಕ್ಷಣೆಯ ಹೊಣೆಯನ್ನು ಸಿಬಿಐ ಮತ್ತು ಭಾರತ ಸರ್ಕಾರ ಹೊತ್ತಿದೆ. ಯಾರಿಗೂ ನೀಡದಷ್ಟು ಬಿಗಿ ಭದ್ರತೆಯನ್ನು ಒದಗಿಸಿದ್ದಾರೆ. ಅದೂ ಉಚಿತವಾಗಿ! ಇದಕ್ಕಾಗಿ ನಾನು ಭಾರತ ಸರ್ಕಾರಕ್ಕೆ ಚಿರಋಣಿ.

ಹಾಗಾಗಿ ನಿಶ್ಚಿಂತೆಯಿಂದಿರು ಡಾರ್ಲಿಂಗ್‌.

ವಿತ್‌ ಲವ್‌
-ಅಬು ಸಲೇಂ



Kannada Prabha issue dated November 14, 2005
Clemency for Abu Salem Which the Kanchi Seer Wouldn't Get!

-


Tuesday, November 08, 2005

೧೦೦೦೦ ರು. ಕೊಡಿ, ಹೊಸ ಟಾಟಾ ಕಾರು ತಗೊಳ್ಳಿ

ಬುಕಿಂಗ್‌ ಆರಂಭಿಸುವ ಕುರಿತು ಜೈಲಿನಿಂದ ಹರ್ಷದ್‌ ಮೆಹ್ತಾಗೆ ವಿನಿವಿಂಕಿಯ ಯೋಜನಾ ಪತ್ರ!

ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ‘ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ‘ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರು. ಜನರು ಮುಗಿಬಿದ್ದು ಹಣ ಹೂಡುತ್ತಾರೆ ನೋಡುತ್ತಿರಿ!


ಇವರಿಂದ:
ಮಿ. ವಿನಿವಿಂಕಿ,
ಟಾಟಾ ಬೈ ಬೈ ಪಬ್ಲಿಕ್‌ ಲಿ.,
ನಂ.೧-೪೨೦, ಚೋರ್‌ ಬಝಾರ್‌,
ಕನ್ನಿಂಗ್‌ ಹ್ಯಾಂ ರಸ್ತೆ, ಪೆಂಗಳೂರು -೪೨೦೮೪೦

ಇವರಿಗೆ:
ಮಿ. ಹರ್ಷದ್‌ ಮೆಹ್ತಾ
ಲೂಸ್‌ ಮೋರ್‌ ರಿಸರ್ಚ್‌ ಆಂಡ್‌
ಅಸೆಟ್‌ ಡ್ಯಾಮೇಜ್‌ಮೆಂಟ್‌ ಕಂ. ಲಿ.
ಸ್ವರ್ಗ ಅಪಾರ್ಟ್‌ಮೆಂಟ್‌ ಎದುರು,
ಗೋ ಟು ಹೆಲ್‌ ರಸ್ತೆ, ಖಬರಸ್ತಾನ್‌ -೨೩೪೧೯೯೨

ವಿಷಯ: ನೂತನ ಬ್ಲೇಡ್‌ ಯೋಜನೆಯ ರೂಪರೇಷೆ

ಉಲ್ಲೇಖ: ರತನ್‌ ಟಾಟಾ ಕಂಪನಿಯ ೧ ಲಕ್ಷ ರು. ಕಾರು

ಡಿಯರ್‌ ಮಿ.ಮೆಹ್ತಾ,
ಈ ಮೇಲೆ ಉಲ್ಲೇಖಿಸಲಾದ ವಿಷಯಕ್ಕೆ ಸಂಬಂಧಿಸಿ ನಮ್ಮ ಕಂಪನಿಯು ತಮ್ಮಿಂದ ಕೆಲಮ ಸಲಹೆ ಪಡೆಯಲು ಬಯಸುತ್ತದೆ. ಈ ಹಿನ್ನೆಲೆಯಲ್ಲಿ ನಾಮ ನಿಮಗೆ ಈ ಪತ್ರ ಬರೆಯುತ್ತಿದ್ದೇವೆ. ‘೧೯೯೨ ಎ ಸ್ಕಾü್ಯಮ್‌ ಸ್ಟೋರಿ’ಯ ಕರ್ತೃರೂ, ಭಾರತದ ಷೇರು ಹಗರಣದ ಪಿತಾಮಹರೂ ಆದ ತಾಮ ದಯಮಾಡಿ ನಮ್ಮ ಕಂಪನಿಗೆ ಅಮೂಲ್ಯ ಸಲಹೆ, ಸಹಕಾರ ನೀಡುತ್ತೀರೆಂದು ಭಾವಿಸಿದ್ದೇವೆ.

ನಮ್ಮ ಈ ಮೊದಲಿನ ಕಂಪನಿಯ ಮೂಲಕ ನಾಮ ಈಗಾಗಲೇ ಪಂಗನಾಮ ಉದ್ಯಮದಲ್ಲಿ ಪಳಗಿದ್ದು, ಸುಮಾರು ೯೦೦೦ ಹೂಡಿಕೆದಾರರ ೧೫೦ ಕೋಟಿ ರುಪಾಯಿಗಿಂತಲೂ ಹೆಚ್ಚು ಮೊತ್ತದ ಹಣದ ಅವ್ಯವಹಾರ ಮಾಡಿದ್ದೇವೆ. ನಮ್ಮ ಈ ಮೊದಲ ಕಂಪನಿಯನ್ನು ಯಶಸ್ವಿಯಾಗಿ ಮುಚ್ಚಲಾಗಿದ್ದು, ಬಹುಪಾಲು ಹಣವನ್ನು ಮಾಯಮಾಡಿದ್ದೇವೆ. ಸದ್ಯ ನಾಮ ಪೊಲೀಸರ ಬಲೆಗೆ ಬಿದ್ದು ಜೈಲು ಸೇರಿದ್ದೇವೆ. ಆದರೆ, ಈ ಹಿಂದೆ, ನೀಮ ಜೈಲಿನಿಂದ ಹೊರಬಂದು ಹೊಸ ವ್ಯವಹಾರ ಶುರುವಿಟ್ಟುಕೊಂಡ ರೀತಿಯಲ್ಲೇ ನಾವೂ ಸಹ ಆದಷ್ಟು ಬೇಗನೆ ಜೈಲಿನಿಂದ ಹೊರಬರುವ ವಿಶ್ವಾಸ ನಮಗಿದೆ.
ಈ ಹಿನ್ನೆಲೆಯಲ್ಲಿ ಭವಿಷ್ಯದ ಯೋಜನೆಯನ್ನು ರೂಪಿಸಲು ನಾಮ ಆರಂಭಿಸಿದ್ದು ಜೈಲಿನ ಪ್ರಶಾಂತ ಕೊಠಡಿಯಲ್ಲಿ ಕುಳಿತು ಕೂಲಂಕಷ ಸ್ಕೆಚ್‌ ಹಾಕುತ್ತಿದ್ದೇವೆ.

ನಾಮ ಜೈಲಿನಿಂದ ಹೊರಬಂದು ಹೊಸ ಅವ್ಯವಹಾರ ಆರಂಭಿಸುವ ಬಗ್ಗೆ ತಮಗೆ ಸಂಶಯ ಬೇಡ. ಇದಕ್ಕೆ ನಾಮ ಈ ಕೆಳಗಿನ ಕಾರಣಗಳನ್ನು ನೀಡಲು ಬಯಸುತ್ತೇವೆ:

೧. ಕಳೆದ ಒಂದು ದಶಕದಲ್ಲಿ ಭಾರತದ ಯಾಮದೇ ಹಣಕಾಸು ಹಗರಣಗಳನ್ನಾದರೂ ಗಮನಿಸಿ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿಲ್ಲ. ಎಲ್ಲರೂ ಜೈಲಿನಿಂದ ಹೊರಬಂದು ಇನ್ನಷ್ಟು ಭಾರೀ ಹಗರಣಗಳಿಗೆ ಕಾರಣವಾಗಿದ್ದಾರೆ. ಅಥವಾ ಜೈಲಿನಲ್ಲೇ ಕುಳಿತು ಯಶಸ್ವಿಯಾಗಿ ಇನ್ನೊಂದು ಹಗರಣವನ್ನು ನಡೆಸಿದ್ದಾರೆ.

೨. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಹಣಕಾಸು ಅವ್ಯವಹಾರಕ್ಕೆ ಯಾಮದೇ ಕಠೋರ ಶಿಕ್ಷೆಗಳಿಲ್ಲ. ಅಲ್ಲದೇ, ಹಗರಣದಿಂದ ನುಣುಚಿಕೊಳ್ಳಲು ನಮಗೆ ಅನೇಕ ಅನುಕೂಲಕರ ದಾರಿಗಳಿವೆ.

೩. ಉದಾಹರಣೆಗೆ, ನಿಮ್ಮ ಪ್ರಕರಣವನ್ನೇ ತೆಗೆದುಕೊಳ್ಳಿ. ಭಾರತದ ಆರ್ಥಿಕ ಹಗರಣದ ’ಮಹಾತಾಯಿ’ ಎಂದೇ ಬಣ್ಣಿಸಲಾಗುವ ೧೯೯೨ರ ನಿಮ್ಮ ಷೇರು ಹಗರಣದ ಬಳಿಕ ತಮ್ಮನ್ನು ಬಂಧಿಸಿ ಜೈಲಿಗೆ ತಳ್ಳಲಾಯಿತು. ಆದರೆ, ಕೆಲಮ ತಿಂಗಳ ನಂತರ ನೀಮ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಬಂದಿರಿ. ಹರ್ಷದ್‌ ಡಾಟ್‌ ಕಾಮ್‌ ಹಾಗೂ ಕೆಲ ಪತ್ರಿಕೆಗಳ ಅಂಕಣಗಳ ಮೂಲಕ ನೀಮ ಹೊಸ ವ್ಯವಹಾರಕ್ಕೆ ಶುರುವಿಟ್ಟುಕೊಂಡಿರಿ. ಅಲ್ಲದೇ, ಜೈಲಿನಲ್ಲೇ ಕುಳಿತು ನೀಮ ಷೇರುಪೇಟೆಯನ್ನು ಆಟವಾಡಿಸುತ್ತಿದ್ದಿರಿ ಎನ್ನುವ ಸುದ್ದಿಯೂ ಇತ್ತು. ಈ ನಡುವೆ, ಭಾರತದ ಪ್ರಧಾನಿ ಪಿ.ವಿ. ನರಸಿಂಹ ರಾವ್‌ ಅವರಿಗೆ ೧ ಕೋಟಿ ರುಪಾಯಿಯನ್ನು ಸೂಟ್‌ಕೇಸ್‌ನಲ್ಲಿ ಲಂಚ ನೀಡಿದ್ದಿರಿ ಎಂದು ನೀಮ ನಿರೂಪಿಸಿದಿರಿ. ಈ ಘಟನೆಯ ನಂತರ ನಿಮ್ಮ ಕೇಸುಗಳೆಲ್ಲ ಮುಚ್ಚಿಹೋದಮ. ಆದರೆ, ದುರದೃಷ್ಟವಶಾತ್‌ ಹೃದಯಾಘಾತ ನಿಮ್ಮನ್ನು ಬಲಿತೆಗೆದುಕೊಂಡಿತು. ಜೈಲಿನಿಂದ ಹೊರಬಂದಂತೆ ಈ ಬಾರಿ ನಿಮಗೆ ಸಾವಿನಿಂದ ಹೊರಬರಲಾಗಲಿಲ್ಲ ಎಂಬುದೇ ವಿಷಾದದ ಸಂಗತಿ. ಇಷ್ಟಾದರೂ, ೪೦೦೦ ಕೋಟಿ ರುಪಾಯಿಯನ್ನು ತೆಳ್ಳನೆ ಗಾಳಿಯಲ್ಲಿ ಮಾಯ ಮಾಡಿದ ನಿಮಗೆ ಶಿಕ್ಷೆಯಾಗಲಿಲ್ಲ ಎಂಬುದು ನಮಗೆ ಅತ್ಯಂತ ಸಂತೋಷದ ವಿಷಯ.

೪. ನಂತರ ಬಂದ ಎಂ.ಎಸ್‌.ಶೂ ಹಗರಣವೂ ಅಷ್ಟೇ. ಪವನ್‌ ಸಚದೇವ ಹಾಗೂ ಇನ್ನಿತರ ಚಾಣಾಕ್ಷರಿಂದ ಸೃಷ್ಟಿಯಾದ ಈ ಹೊಸ ಷೇರುಗಳ ಹಗರಣ ವಾಸ್ತವವಾಗಿ ನಿಮ್ಮ ಹಗರಣಕ್ಕಿಂತ ದೊಡ್ಡದು. ಆದರೆ, ಈ ನೆಲದ ಕಾನೂನು ಯಾರನ್ನೂ ಶಿಕ್ಷಿಸಲಿಲ್ಲ.

೫. ನಂತರ ನಡೆದ ಸಿಆರ್‌ಬಿ ಕ್ಯಾಪಿಟಲ್‌ ಹಗರಣದಲ್ಲಿ ಲಕ್ಷಾಂತರ ಹೂಡಿಕೆದಾರರ ೧೦೦೦ ಕೋಟಿ ರುಪಾಯಿ ಠೇವಣಿ ಹಣ ತಗುಲಿಕೊಂಡಿತು. ಹಗರಣದ ರೂವಾರಿ ಸಿ. ಆರ್‌. ಬನ್ಸಾಲಿಗೆ ಶಿಕ್ಷೆಯಾಯಿತೆ? ಇಲ್ಲ. ಜಾಮೀನಿನ ಮೇಲೆ ಹೊರಬಂದು ಬೇರೆ ಬಿಸಿನೆಸ್‌ ಶುರುವಿಟ್ಟುಕೊಂಡ.

೬. ಅನುಭವ ಟೀಕ್‌ನಂತಹ ಅನೇಕ ಪ್ಲಾಂಟೇಶನ್‌ ಕಂಪನಿಗಳ ಹಗರಣದಲ್ಲಿ ಸುಮಾರು ೮೦೦೦ ಕೋಟಿ ರುಪಾಯಿ ಹಣ ಎಲ್ಲಿ ಹೋಯಿತೋ ಗೊತ್ತಾಗಲಿಲ್ಲ. ಯಾರಿಗೂ ಶಿಕ್ಷೆಯಾಗಲಿಲ್ಲ. ಈಗಲೂ ಅನೇಕ ಟೀಕ್‌ ಕಂಪನಿಗಳು ಜನರಿಂದ ರಾಜಾರೋಷವಾಗಿ ಹಣ ಸಂಗ್ರಹಿಸುತ್ತಿವೆ.

೭. ನಿಮಗಿಂತ ದೊಡ್ಡ ಹಗರಣಕ್ಕೆ ಕಾರಣವಾದ ಖೇತನ್‌ ಪಾರಿಖ್‌ಗೆ ಯಾವ ಮಹಾ ಶಿಕ್ಷೆಯಾಯಿತು? ಹೋಮ್‌ ಟ್ರೇಡ್‌ ಡಾಟ್‌ ಕಾಮ್‌ನ ೬೦೦ ಕೋಟಿ ರುಪಾಯಿ ಪ್ರಕರಣದಲ್ಲಿ ಸಹಕಾರಿ ಬ್ಯಾಂಕುಗಳೂ ಹಗರಣದಲ್ಲಿ ತೊಡಗಿವೆ ಎಂಬುದು ಸಾಬೀತಾಗಲಿಲ್ಲವೇ? ಶಿಕ್ಷೆ ಆಗಿದ್ದು ಹಣ ಕಳೆದುಕೊಂಡ ಜನರಿಗೇ ಹೊರತು ನಮ್ಮಂಥ ಜಾಣರಿಗಲ್ಲ.

೯. ಹೋಗಲಿ, ಕರ್ನಾಟಕದ ಲೋಕಾಯುಕ್ತರು ಕಳೆದ ಮೂರು ವರ್ಷಗಳಲ್ಲಿ ಕೋಟ್ಯಂತರ ರುಪಾಯಿ ಅವ್ಯವಹಾರಗಳನ್ನು ಪತ್ತೆ ಮಾಡಿ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಆರೋಪಿಗಳ ಫೋಟೋಗಳನ್ನು ಪ್ರಕಟಿಸಿ ಪ್ರಚಾರ ನೀಡಿದ್ದಾರೆ. ಯಾರಿಗಾದರೂ ಶಿಕ್ಷೆಯಾಯಿತೇ?

೧೦. ಭಾರತ ಕಂಡ ಅತಿ ದೊಡ್ಡ ಹಗರಣ ಕರೀಂ ಲಾಲಾ ತೆಲಗಿಯ ಛಾಪಾ ಹಗರಣ. ಇದರಲ್ಲಿ ಸಿಲುಕಿದ್ದ ಹಲವಾರು ಜನರು ಈಗ ನಿಷ್ಕಳಂಕ ಎಂದು ಖುಲಾಸೆಯಾಗಲಿಲ್ಲವೇ? ಕರೀಂ ಲಾಲಾ ತೆಲಗಿಗೆ ಈವರೆಗೂ ಶಿಕ್ಷೆಯಾಗಿದೆಯೇ?

ಇಂತಹ ಇನ್ನೂ ಹಲವಾರು ಉದಾಹರಣೆಗಳಿರುಮದು ನಿಮಗೂ ಗೊತ್ತು. ಆದ್ದರಿಂದ ಈಗ ಜೈಲಿನಲ್ಲಿರುವ ನಾಮ ಕೂಡ ಇಂದಲ್ಲ ನಾಳೆ ಹೊರಬರುತ್ತೇವೆ ಎಂಬ ಭರವಸೆಯನ್ನು ನಿಮಗೆ ನೀಡಲು ಇಚ್ಛಿಸುತ್ತೇವೆ. ಒಂದು ವೇಳೆ ಹೊರ ಬರಲು ಸಾಧ್ಯವಾಗದಿದ್ದರೆ ನಾಮ ಜೈಲಿನಲ್ಲೇ ಕುಳಿತು ವ್ಯವಹಾರ ನಡೆಸಲೂ ಉತ್ಸುಕರಾಗಿದ್ದೇವೆ.

ಈಗ ನಾಮ ಹಾಕಿರುವ ಯೋಜನೆ ಆಕರ್ಷಕವಾಗಿದೆ. ಇನ್ನು ಮೂರು ವರ್ಷದಲ್ಲಿ ರತನ್‌ ಟಾಟಾ ಕಂಪನಿ ತನ್ನ ಮಹತ್ವಾಕಾಂಕ್ಷೆಯ ಕಾರನ್ನು ಹೊರತರಲಿದೆ. ಕೇವಲ ೧ ಲಕ್ಷ ರುಪಾಯಿ ಬೆಲೆಯ ಈ ಕಾರಿನ ತಯಾರಿ ಪುಣೆ ಕಾರ್ಖಾನೆಯಲ್ಲಿ ಸಾಗಿದ್ದು, ಭಾರತದ ಮಧ್ಯಮ ವರ್ಗದ ಜನರು ಈ ಕಾರನ್ನು ಖರೀದಿಸಲು ಮುಗಿಬೀಳಲಿದ್ದಾರೆ.

ಈ ಆಮಿಷವನ್ನೇ ಇಟ್ಟುಕೊಂಡು ನಾಮ ಈಗಿನ ಕಾರ್‌ ಲೋನ್‌ ಯುಗಕ್ಕೆ ತಕ್ಕ ಯೋಜನೆ ರೂಪಿಸಿದ್ದೇವೆ. ’ಈಗ ಕೇವಲ ೧೦ ಸಾವಿರ ರುಪಾಯಿ ನೀಡಿ. ಮೂರು ವರ್ಷ ಬಿಟ್ಟು ೧ ಲಕ್ಷ ರುಪಾಯಿಯ ಟಾಟಾ ಕಾರು ಪಡೆಯಿರಿ’ ಎಂಬುದು ನಮ್ಮ ಘೋಷಣೆ. ಈ ಯೋಜನೆಗೆ ಮ್ಯೂಚುವಲ್‌ ಫಂಡ್‌ ರೀತಿಯಲ್ಲಿ ’ಟಾಟಾ ವೆಹಿಕಲ್‌ ಫಂಡ್‌’ ಎಂದು ಆಕರ್ಷಕ ಹೆಸರಿಡಬಹುದು.
ಆನಂತರ ನಾಮ ‘ಬುಕಿಂಗ್‌ ಆರಂಭವಾಗಿದೆ. ಇಂದೇ ಹಣ ಠೇವಣಿ ಮಾಡಿ’ ಎಂದು ಜಾಹೀರಾತು ನೀಡಬಹುದು.
೧೦೦೦೦ ಸಾವಿರ ರುಪಾಯಿಗೆ ೧ ಲಕ್ಷ ರುಪಾಯಿ ಕಾರು ಹೇಗೆ ನೀಡಲು ಸಾಧ್ಯ ಎಂದು ಜನರು ಯೋಚಿಸುಮದಿಲ್ಲ. ಹಿಂದಿನ ಇಂಥ ಬ್ಲೇಡ್‌ ಯೋಜನೆಗಳಿಂದ ಪಾಠ ಕಲಿಯುಮದಿಲ್ಲ. ಪಾಠ ಕಲಿತರೂ, ’ಇರಲಿ ಒಂದು ಕೈ ನೋಡಿ ಬಿಡುವಾ... ಕೇವಲ ೧೦ ಸಾವಿರ ತಾನೇ?’ ಎಂದು ರಿಸ್ಕ್‌ ತೆಗೆದುಕೊಳ್ಳುವ ದಡ್ಡರೂ ಕಡಿಮೆ ಏನಿಲ್ಲ.

ಈ ಯೋಜನೆ ಮೂಲಕ ಮೂರು ವರ್ಷದಲ್ಲಿ ಕನಿಷ್ಠ ೧೦೦-೨೦೦ ಕೋಟಿ ರುಪಾಯಿ ಸಂಗ್ರಹವಾಗುಮದು ಗ್ಯಾರಂಟಿ. ಆಮೇಲೆ ನಮ್ಮ ಎಲ್ಲಾ ಸುಂದರ ಶಾಖೆಗಳನ್ನೂ ಮುಚ್ಚಿ ನಾಮ ಓಡಿ ಹೋಗಬಹುದು. ಬಿಸಿನೆಸ್‌ ನಷ್ಟವಾಯಿತು ಎಂದು ಬಹುಪಾಲು ಹಣವನ್ನು ನಾಮ ಬಚ್ಚಿಡಬಹುದು. ಆಮೇಲೆ ನಾಮ ಸಿಕ್ಕಿಬಿದ್ದರೂ ಜಾಮೀನು ಪಡೆದು ಹೊರಬಂದು ಸುಖವಾಗಿ ಇರಬಹುದು.

ಕೊಟ್ಟವ ಮಂಕಿ. ಇಸಕೊಂಡವ ವಿನಿವಿಂಕಿ ಎಂಬುದೇ ನಮ್ಮ ಕಂಪನಿಯ ಧ್ಯೇಯ ವಾಕ್ಯ. ಇದನ್ನು ತಾವೂ ಒಪುý್ಪತ್ತೀರಿ ಎಂಬ ವಿಶ್ವಾಸ ನಮಗಿದ್ದು, ಈ ಯೋಜನೆಯನ್ನು ಪರಿಷ್ಕರಿಸುವ ಕುರಿತು ತಾಮ ತಮ್ಮ ಅಮೂಲ್ಯ ಸಲಹೆ, ಸೂಚನೆ ನೀಡಬೇಕಾಗಿ ನಾಮ ಈ ಮೂಲಕ ಕೋರುತ್ತೇವೆ.

ಧನ್ಯವಾದಗಳೊಂದಿಗೆ,
ಟಾಟಾ ಬೈ ಬೈ ಪಬ್ಲಿಕ್‌ ಲಿ. ಪರವಾಗಿ
ಮಿ. ವಿನಿವಿಂಕಿ


Kannada Prabha issue dated November 7, 2005
Pay just Rs.10000. Get Tata 1 lakh Rupee Nano Car Vinivinc Scam

-

Wednesday, November 02, 2005

ಕನ್ನಡ ಭಾಷೆಗೆ ಐಶ್ವರ್ಯ ರೈ ಪ್ರಚಾರ ರಾಯಭಾರಿ!

ಆಕೆ ದುಬಾರಿಯಾದರೆ ಮಲ್ಲಿಕಾ ಶೆರಾವತ್‌ ಆದರೂ ಓಕೆ:
ಕನ್ನಡದ ಕಣ್ವ ಬಿಎಂಶ್ರೀಗೆ ಯೆಂಡ್ಗುಡ್ಕ್‌ ರತ್ನನ ಈ-ಮೇಲ್‌

ಹೋರಾಟ ಮಾಡಿ, ಜನರ ಮೇಲೆ ಒತ್ತಡ ಹೇರಿ ಕನ್ನಡ ಭಾಷೆಯನ್ನ ಉದ್ಧಾರ ಮಾಡೋಕೆ ಆಗಲ್ಲ ಸಾರ್‌. ಕನ್ನಡ ಉದ್ಧಾರ ಆಗಬೇಕೂಂದ್ರೆ ಯುವ ಜನಾಂಗಾನ ಪ್ರೀತಿಯಿಂದ ಕನ್ನಡದತ್ತ ಆಕರ್ಷಿಸಬೇಕು... ಸಾರ್‌. ಅದಕ್ಕೆ ಸುಂದರ ಬ್ರಾಂಡ್‌ ಅಂಬಾಸಡರ್‌ ಇದ್ದರೆ ಕೆಲಸ ಸಲೀಸು. ಕನ್ನಡ ರಾಜ್ಯೋತ್ಸವದ ದಿನಾನೇ ಹುಟ್ಟಿರುವ ಐಶ್ವರ್ಯ ರೈಗಿಂತ ಬೇರೆ ‘ಕನ್ನಡ ಕುವರಿ’ ಎಲ್ಲಿ ಸಿಗ್ತಾಳೆ... ಸಾರ್‌!


ಕನ್ನಡದ ಕಣ್ವರಾದ ಶ್ರೀ ಬಿಎಂಶ್ರೀ ಸಾರ್‌ರವರೇ,
ನಮಸ್ಕಾರ ಸಾರ್‌... ನಾನು ರತ್ನ. ಯಂಡ್ಗುಡ್ಕ್‌ ರತ್ನ.
ಜಿ. ಪಿ. ರಾಜರತ್ನಂ ಅವರ ಕವನಪುತ್ರ ಸಾರ್‌. ಗೊತ್ತಾಗಲಿಲ್ವಾ ಸಾರ್‌...? ಬ್ರಮ್ಮಾ ನಿಂಗೆ ಜೋಡಿಸ್ತೀನಿ ಯೆಂಡಾ ಮುಟ್ಟಿದ ಕೈನಾ ಅನ್ನೋ ಫೇಮಸ್‌ ಸಾಂಗು ನಂದೇ ಸಾರ್‌. ನಾನೊಬ್ಬ ಕನ್ನಡದ ’ಉಟ್ಟು ಓರಾಟಗಾರ’ ಸಾರ್‌... ನಾನು ನನ್‌ ಫೇಮಸ್‌ ಸಾಂಗಲ್ಲಿ ಹೇಳ್ದಂಗೆ ಆ ಬ್ರಮ್ಮನೇ ಬಂದು ಕನ್ನಡ ಬಿಟ್ಟಾಕು ಅಂತ ಹೇಳದ್ರೂನೂ, ನನ್‌ ನಾಲ್ಗೆ ಸೀಳಾಕ್‌ದ್ರೂನೂ ನಾನು ಕನ್ನಡ ಮಾತಾಡೋದು ಮಾತ್ರ ಬಿಡೋದಿಲ್ಲ ಸಾರ್‌... ಬಿಡೋದಿಲ್ಲ.

ನಾಳೆ ಕನ್ನಡ ರಾಜ್ಯೋತ್ಸವ ಸಾರ್‌. ಈ ಹಿನ್ನೆಲೆಯಲ್ಲೇ ನಿಮಗೆ ನಾನು ಈ ಮೇಲ್‌ ಬರೀತಿದ್ದೇನೆ ಸಾರ್‌. ಈಗಿನ ಗ್ಲೋಬಲೈಸೇಶನ್‌ ಅರ್ಥಾತ್‌ ಜಾಗತೀಕರಣ ಯುಗದಲ್ಲಿ ಕನ್ನಡ ಉದ್ಧಾರಕ್ಕೆ ಸಾಂಪ್ರದಾಯಿಕ ವಿಧಾನ ನಡೆಯೋದಿಲ್ಲ. ಅದಕ್ಕೆ ಸಮಕಾಲೀನ ಗಿಮಿಕ್ಕೇ ಬೇಕು ಅನ್ನೋ ಪ್ರಾಕ್ಟಿಕಲ್‌ ಸಲಹೆ ನೀಡೋದು ಈ ಪತ್ರದ ಉದ್ದೇಶ ಸಾರ್‌.

ಸಾರ್‌... ಕನ್ನಡದ ಮಕ್ಕಳೆಲ್ಲ ಕನ್ನಡ ಬಿಟ್ಟು ಇಂಗ್ಲೀಷಿಗೆ ಅಂಟಿಕೊಂಡಿದ್ದಾರೆ ಅನ್ನೋದು ನಿಜ ಸಾರ್‌. ಈ ಪರಿಪಾಠ ಹೆಚ್ಚುತ್ತಿದೆ ಅನ್ನೋದೂ ನಿಜ ಸಾರ್‌. ಇದೆಲ್ಲಾ ಗ್ಲೋಬಲ್‌ ಫಿನೋಮಿನಾ ಸಾರ್‌ ಗ್ಲೋಬಲ್‌ ಫಿನೋಮಿನಾ.

ಹೀಗಾಗೋಕೆ ಕಾರಣ ಯುವಜನಾಂಗ ಸಾರ್‌. ಇವರೆಲ್ಲಾ ಒಂದೋ ಇಂಗ್ಲೀಷ್‌ ಲಾಂಗ್ವೇಜ್‌ ಹಿಂದೆ ಬಿದ್ದಿದ್ದಾರೆ ಇಲ್ಲಾ ಕಂಪ್ಯೂಟರ್‌ ಲಾಂಗ್ವೇಜ್‌ ಹಿಂದೆ ಬಿದ್ದಿದ್ದಾರೆ ಸಾರ್‌. ಅವರಿಗೆ ಇಂಗ್ಲೀಷು ಮತ್ತು ಕಂಪ್ಯೂಟರು ಎರಡೂ ಫ್ಯಾಷನ್ನು ಸಾರ್‌. ಕನ್ನಡ ಓಲ್ಡ್‌ ಫ್ಯಾಷನ್ನು ಸಾರ್‌. ಅದಕ್ಕೇ ಕನ್ನಡ ಅವಸಾನ ಆಗ್ತಿದೆ ಸಾರ್‌. ಕನ್ನಡ ಹೊಸ ಫ್ಯಾಷನ್‌ ಆದ್ರೆ ಮಾತ್ರ ಉದ್ಧಾರವಾಗುತ್ತೆ .... ಇದೇ ಈ ಶತಮಾನದ ಫಂಡಾ ಸಾರ್‌.

ಈಗ ಕನ್ನಡ ಉದ್ಧಾರ ಆಗಬೇಕೂಂದ್ರೆ ಈ ಯುವ ಜನಾಂಗಾನ ಕನ್ನಡದತ್ತ ಆಕರ್ಷಿಸಬೇಕು ಸಾರ್‌. ಯಾಕೆಂದರೆ ಇಂದಿನ ಯುವಕರೇ ಮುಂದಿನ ಪ್ರಜೆಗಳು ಸಾರ್‌. ಅಂದರೆ, ಅವರು ಇವತ್ತು ಯಾವ ಭಾಷೆಯನ್ನ ಕಲೀತಾರೋ ಮುಂದೆ ಆ ಭಾಷೆ ಬದುಕುತ್ತೆ. ಅವರು ಇವತ್ತು ಯಾವ ಭಾಷೆಯನ್ನ ಮರೀತಾರೋ ಮುಂದೆ ಆ ಭಾಷೆ ವಿನಾಶ ಆಗುತ್ತೆ ಸಾರ್‌. ಆದ್ದರಿಂದ ಕನ್ನಡ ಭಾಷೆ ಉಳೀಬೇಕು ಅಂದ್ರೆ ಮೊದಲು ಈ ಯುವ ಜನಾಂಗಾನ ಆಕರ್ಷಿಸಬೇಕು ಸಾರ್‌.

ಈಗಿನ ಕನ್ನಡ ಹೋರಾಟಗಾರರಿಗೆ ಕಷ್ಟ ಆಗ್ತಿರೋದು ಇದೇ ಸಾರ್‌. ಪಾಟೀಲ ಪುಟ್ಟಪ್ಪ, ಚಿದಾನಂದಮೂರ್ತಿ, ಚಂಪಾ, ವಾಟಾಳ್‌ನಾಗರಾಜ್‌ ಮುಂತಾದ ಕಟ್ಟಾಳುಗಳೆಲ್ಲ ನಿಜಕ್ಕೂ ಬಹಳ ಪ್ರಯತ್ನ ಪಡ್ತಾ ಇದ್ದಾರೆ ಸಾರ್‌. ಆದರೂ ಕನ್ನಡದತ್ತ ಯುವಕರು ಆಕರ್ಷಿತರಾಗ್ತಾ ಇಲ್ಲ ಸಾರ್‌.

ಸಾರ್‌... ನಿಜ ಹೇಳಿ ಸಾರ್‌... ಈ ಯುವಜನಾಂಗ ಪಾಟೀಲ ಪುಟ್ಟಪ್ಪ, ಚಿದಾನಂದ ಮೂರ್ತಿಯವರನ್ನೆಲ್ಲ ನೋಡಿ ಆಕರ್ಷಿತರಾಗೋಕೆ ಸಾಧ್ಯಾನಾ ಸಾರ್‌? ವಾಟಾಳ್‌ ನಾಗರಾಜ್‌ ಚಂದಾನೋ ಐಶ್ವರ್ಯ ರೈ ಚಂದಾನೋ ನೀವೇ ಹೇಳಿ ಸಾರ್‌!.. ಈ ರಹಸ್ಯಾನ ನೀಮ ಅರ್ಥ ಮಾಡಿಕೋಬೇಕು ಸಾರ್‌. ಅರ್ಥ ಮಾಡಿಕೊಂಡರೆ ಕನ್ನಡ ಅರ್ಧ ಉದ್ಧಾರ ಆದ ಹಾಗೇ ಸಾರ್‌.

ಅದಕ್ಕೇ ನನ್ನ ಸಲಹೆ ಏನೂಂದ್ರೆ... ಈ ಯುವಜನರನ್ನ ಆಕರ್ಷಿಸೋಕೆ ಕನ್ನಡಕ್ಕೊಬ್ಬಳು ಅತಿ ಸುಂದರ ಬ್ರಾಂಡ್‌ ಅಂಬಾಸಡರ್‌ ಬೇಕು ಸಾರ್‌. ಬ್ರಾಂಡ್‌ ಅಂಬಾಸಡರ್‌ ಅಂದ್ರೆ ಪ್ರಚಾರ ರಾಯಭಾರಿ ಅಂತ ಮಾರ್ಕೆಟಿಂಗ್‌ ಭಾಷೆಯಲ್ಲಿ ಅರ್ಥ ಸಾರ್‌.

ಸಾರ್‌... ಹಮಾಮ್‌ ಸೋಪಿನಿಂದ ಹಿಡಿದು ಗಾಡ್ರೆಜ್‌ ಹೇರ್‌ ಕಲರ್‌ವರೆಗೆ, ಮಹಿಳೆಯರ ಹೇರ್‌ ರಿಮೂವಲ್‌ ಕ್ರೀಮ್‌ನಿಂದ ಹಿಡಿದು ಪುರುಷರ ಷೇವಿಂಗ್‌ ಬ್ಲೇಡ್‌ವರೆಗೆ, ಮಕ್ಕಳ ಹಾರ್ಲಿಕ್ಸ್‌ನಿಂದ ಹಿಡಿದು ದೊಡ್ಡವರ ಆಲ್ಕೋಹಾಲ್‌ವರೆಗೆ ತಾರೆಯರೇ ಬ್ರಾಂಡ್‌ ಅಂಬಾಸಡರ್‌ ಅನ್ನೋದನ್ನ ಗಮನಿಸಿ ಸಾರ್‌. ಸಾರ್‌ ಯಾರನ್ನು ಬೇಕಾದ್ರೂ ಕೇಳಿ ಸಾರ್‌... ಸಿನಿಮಾ ತಾರೆಯರ ಸೌಂದರ್ಯದ ಗುಟ್ಟು ಲಕ್ಸ್‌ ಸೋಪು ಹೇಗೋ ಲಕ್ಸ್‌ ಸೋಪಿನ ಯಶಸ್ಸಿನ ಗುಟ್ಟೂ ಸಿನಿಮಾ ತಾರೆಯರು ಅಂತ ಹೇಳ್ತಾರೆ ಸಾರ್‌!

ಸಾರ್‌... ನಮಗೆ ಬೇಕಾದ ಬ್ರಾಂಡ್‌ ಅಂಬಾಸಡರ್‌ ಹೇಗಿರಬೇಕು ಅಂದರೆ, ಐಶ್ವರ್ಯ ರೈ ಥರ ಇರಬೇಕು ಸಾರ್‌. ಇಂಗ್ಲೀಷ್‌, ಹಿಂದಿ, ತೆಲಗು, ತಮಿಳು, ಮಲೆಯಾಳಂ... ಹೀಗೆ ಯಾಮದೇ ಭಾಷೆ ಮಾತಾಡುವ ಬಾಲಕ ಬಾಲಕಿಯರಿಗೂ, ಯುವಕ ಯುವತಿಯರಿಗೂ, ಪಾಲಕ ಪಾಲಕಿಯರಿಗೂ, ಮುದುಕ ಮುದುಕಿಯರಿಗೂ ಆಕೆ ಗೊತ್ತು ಸಾರ್‌. ಎಲ್ಲರೂ ಆಕೆ ಥರ ಕಾಣೋಕೆ ಬಯಸ್ತಾರೆ ಸಾರ್‌. ಅದರಲ್ಲೂ ಕಾಲೇಜ್‌ ಹುಡುಗೀರಂತೂ ಐಶ್ವರ್ಯ ಥರಾನೇ ಆಡ್ತಾರೆ ಸಾರ್‌. ಐಶ್ವರ್ಯ ಪ್ಯಾಂಟ್‌ ಹಾಕ್ಕೊಂಡರೆ ಇವರೂ ಪ್ಯಾಂಟ್‌ ಹಾಕ್ಕೋತಾರೆ ಸಾರ್‌. ಆಕೆ ಪ್ಯಾಂಟ್‌ ತೆಗೆದ್ರೆ ಇವರೂ ತೆಗೀತಾರೆ ಸಾರ್‌. ಆಕೆ ಇಂಗ್ಲೀಷಲ್ಲಿ ಹಾಯ್‌ ಎಂದರೆ ಇವ್ರೂ ಹಾಯ್‌ ಅಂತಾರೆ ಸಾರ್‌. ಆಕೆ ಕ್ಯಾ ಹೈ ಅಂತ ಹಿಂದಿಯಲ್ಲಿ ಉಲಿದರೆ ಇವರೂ ಕ್ಯಾ ಹೈ ಅಂತಾರೆ ಸಾರ್‌.

ಆದ್ದರಿಂದ ಆಕೆ ಕನ್ನಡದಲ್ಲಿ ಮಾತಾಡಿದರೆ, ಇವ್ರೂ ಕನ್ನಡದಲ್ಲಿ ಮಾತಾಡೋದು ಗ್ಯಾರಂಟಿ. ಆಕೆ ಕನ್ನಡದಲ್ಲಿ ಬರೆದರೆ ಇವರೂ ಕನ್ನಡದಲ್ಲಿ ಬರೆಯೋದು ಗ್ಯಾರಂಟಿ ಸಾರ್‌. ಇದು ಮಾರ್ಕೆಟ್ಟಲ್ಲಿ ಸಕ್ಸಸಾಗಿರೋ ಫಾರ್ಮುಲಾ.... ಸಾರ್‌.

ಸಾರ್‌... ಆಕೆ ಕನ್ನಡದ ರಾಯಭಾರಿಯಾದ್ರೆ ಕನ್ನಡ ಅಷ್ಟೇ ಅಲ್ಲ ಸಾರ್‌... ಕನ್ನಡೇತರ ಯುವಜನಾಂಗಾನೂ ಒಮ್ಮೆಲೇ ಕನ್ನಡದತ್ತ ಒಲಮ ತೋರಿಸುತ್ತೆ ಸಾರ್‌. ಒಂದು ಕಾಲೇಜಿನ ಹುಡುಗಿಯರು ಕನ್ನಡದಲ್ಲಿ ಉಲಿದರೆ ಸುತ್ತಲಿನ ಎಲ್ಲಾ ಕಾಲೇಜಿನ ಹುಡುಗರು ಕನ್ನಡದಲ್ಲೇ ಮಾತು ಶುರುವಿಟ್ಟುಕೊಳ್ಳುತ್ತಾರೆ ಸಾರ್‌. ಈ ಸ್ಟೈಲು ಇಡೀ ಊರಿಗೇ ವ್ಯಾಪಿಸುತ್ತೆ ಸಾರ್‌. ಊರಿಂದ... ಊರಿಗೆ, ಜಿಲ್ಲೆಯಿಂದ ಜಿಲ್ಲೆಗೆ.... ಆಮೇಲೆ ರಾಜ್ಯಕ್ಕೆ... ನಂತರ ಇಡೀ ದೇಶಕ್ಕೆ ಕನ್ನಡ ಫ್ಯಾಷನ್ನಾಗುತ್ತೆ ಸಾರ್‌. ನೋಡುತ್ತಿರಿ ಸಾರ್‌... ಕನ್ನಡ ಭಾಷೆ ಆಟೋಮ್ಯಾಟಿಕ್ಕಾಗಿ ಅಭಿವೃದ್ಧಿಯಾಗುತ್ತೆ ಸಾರ್‌!

ಸಾರ್‌... ಐಶ್ವರ್ಯ ರೈಗೆ ಕನ್ನಡ ಬರುತ್ತಾ ಅಂತ ನೀಮ ಕೇಳಬಹುದು. ಬೇಕಾಗಿಲ್ಲ ಸಾರ್‌. ಜಾಹೀರಾತಲ್ಲಿ ಆಕೆ ಲಕ್ಸ್‌ ಸೋಪ್‌ ಹಚ್ಚಿಕೋತಾಳೆ. ಹಾಗಂತ ದಿನಾ ಅದೇ ಸೋಪು ಹಚ್ಚಿಕೊಂಡು ಸ್ನಾನ ಮಾಡುತ್ತಾಳೆ ಅಂದುಕೊಂಡಿರಾ ಸಾರ್‌? ದುಡ್ಡು ಕೊಟ್ಟರೆ ರಾಯಭಾರಿಗಳು ಇದಕ್ಕೆಲ್ಲ ರೆಡಿ ಸಾರ್‌. ನಾವೂ ಆಕೆಗೆ ವರ್ಷಕ್ಕೆ ಐದೋ ಆರೋ ಕೋಟಿ ರುಪಾಯಿ ಕೊಟ್ಟರೆ ಆಯಿತು. ಇದನ್ನು ಸರ್ಕಾರ ಕನ್ನಡಾಭಿವೃದ್ಧಿ ಯೋಜನೆ ವೆಚ್ಚದಲ್ಲಿ ಸೇರಿಸಬಹುದು ಸಾರ್‌. ಐಶ್ವರ್ಯ ಕನ್ನಡ ಮ್ಯಾನೇಜ್‌ ಮಾಡುತ್ತಾಳೆ ಸಾರ್‌. ಇಷ್ಟಕ್ಕೂ ಆಕೆ ದಕ್ಷಿಣ ಕನ್ನಡದ ಮೂಲದವಳು ಸಾರ್‌. ಇಷ್ಟಕ್ಕೂ ಆಕೆ ಹುಟ್ಟಿದ್ದು ಕನ್ನಡ ರಾಜ್ಯೋತ್ಸವದ ದಿನಾನೇ ಸಾರ್‌. ಅದಕ್ಕೇ ಕನ್ನಡಕ್ಕೆ ಆಕೆಗಿಂತ ಉತ್ತಮ ಅಂಬಾಸಡರ್‌ ಯಾರು ಸಿಗ್ತಾರೆ ಸಾರ್‌?

ಸಾರ್‌... ಆಕೆ ದುಬಾರಿಯಾಯ್ತು ಅಂತೀರಾ ಸಾರ್‌? ಮಲ್ಲಿಕಾ ಶೆರಾವತ್‌ ಅಂತ ಇನ್ನೊಬ್ಳು ಸೆಕ್ಸ್‌ ಬಾಂಬ್‌ ಇದ್ದಾಳೆ ಸಾರ್‌. ಆಕೆಗೂ ಐಶ್ವರ್ಯಳಷ್ಟೇ ಪ್ರಭಾವವಿದೆ ಸಾರ್‌. ಅರ್ಧ ಬಜೆಟ್ಟಿಗೇ ಒಪ್ಪಿಕೊಳ್ಳುತ್ತಾಳೆ. ಅಷ್ಟೇ ಅಲ್ಲ ಸಾರ್‌... ಕೇವಲ ೧೦ ಲಕ್ಷಕ್ಕೆ ಅತ್ಯಂತ ಸೆಕ್ಸಿ ಸೀನಿನಲ್ಲಿ ಕಾಣಿಸಿಕೊಂಡಿದ್ದ ಆಕೆ ೨ ಕೋಟಿ ರುಪಾಯಿ ಕೊಟ್ಟರೆ ಕನ್ನಡಕ್ಕಾಗಿ ಏನೂ ಮಾಡಲು ರೆಡಿ ಇರ್ತಾಳೆ ಸಾರ್‌!

ಪ್ಲೀಸ್‌ ತಪುý್ಪ ತಿಳೀಬೇಡಿ ಸಾರ್‌. ಈಗಿನ ಕಾಲದ ಯುವ ಜನರು ಕನ್ನಡದ ಬಗ್ಗೆ ಆಕರ್ಷಿತರಾಗಲು ಇದೊಂದೇ ಮಾರ್ಗ ಸಾರ್‌. ಯೋಚಿಸಿ ನೋಡಿ ಸಾರ್‌. ಇದೆಲ್ಲ ಸರಿ ಅಲ್ಲ ಅನ್ನಿಸಿದ್ರೆ ನನ್ನ ಕ್ಷಮಿಸಿಬಿಡಿ ಸಾರ್‌. ಎಷ್ಟಂದ್ರೂ ನಾನು ಯಂಡ್ಗುಡ್ಕ್‌ ರತ್ನ ಸಾರ್‌.


ಜೈ ಕನ್ನಡ. ಜೈ ಕರ್ನಾಟಕ.

Kannada Prabha issue dated November 1, 2005
Airshwarya Rai as Brand Ambassador to Kannada Language

-