ಇಡೀ ಭಾರತ ಹೊತ್ತಿ ಉರಿಯುತ್ತದೆ ಎಂದುಕೊಂಡಿದ್ದು ಸುಳ್ಳಾಯಿತಲ್ಲ:
ಲಾಡೆನ್ಗೆ ಉಗ್ರನ ಪತ್ರ
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ. ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ.
$$iND987432$$
*********
ತಮ್ಮೊಡನೆ ಸಂಪರ್ಕ ಹೊಂದಿರಲು ಅಂತಾರಾಷ್ಟ್ರೀಯ ಜಿಹಾದಿ ದಂಡನಾಯಕರು ಬಳಸುವ ಈ ಮೇಲಿನ ಎರಡೂ ಯೂಸರ್ ಐಡಿ ಮತ್ತು ಪಾಸ್ವರ್ಡ್ ಸರಿಯಾಗಿದೆ ಎಂದು ಭಾವಿಸುತ್ತೇನೆ. ಹಾಗೆಯೇ ನನ್ನ ಪರಿಚಯಕ್ಕಾಗಿ ಈ ಕೆಳಗಿನ ಐಡಿ ಮತ್ತು ಪಾಸ್ವರ್ಡನ್ನು ತಾಮ ತಮ್ಮ ಲ್ಯಾಪ್ಟಾಪಿನಲ್ಲಿ ಪರಿಶೀಲಿಸಿ ಖಾತ್ರಿ ಮಾಡಿಕೊಳ್ಳಬಹುದಾಗಿ ವಿನಂತಿಸುತ್ತೇನೆ.
$$iND987432$$
*********
ಮರ್ಹಬಾ ಲಾಡನ್, ಕೈಫಾ ಹಲೂಕ್?
ಅಲ್ ಹಮ್ದು ಲೆಲ್ಲಾಹ್. ನಾನು ಆರಾಂ ಇದ್ದೇನೆ. ಹೆಚ್ಚು ಹೆಚ್ಚು ಭಯೋತ್ಪಾದನೆಗಳಲ್ಲಿ ಯಶಸ್ವಿಯಾಗುತ್ತಿದ್ದೇನೆ. ನಮಗೆ ಸಾಕಷ್ಟು ನೆರಮ ಹಾಗೂ ನೈತಿಕ ಬೆಂಬಲ ನೀಡುತ್ತಿರುಮದಕ್ಕೆ ಶುಕ್ರಾನ್.
ಕಳೆದ ವಾರ ಕಾಶಿಯ ಸಂಕಟ ಮೋಚನ ಹನುಮಾನ್ ಮಂದಿರದಲ್ಲಿ ಬಾಂಬ್ ಸ್ಫೋಟ ಮಾಡುವಲ್ಲಿ ನಾಮ ಯಶಸ್ವಿಯಾಗಿದ್ದಕ್ಕೆ ತಾಮ ಕಳಿಸಿದ ಮಬ್ರೂಕ್ ಸಂದೇಶ ತಲುಪಿದೆ. ಹಿಂದೂಗಳ ಪರಮ ಪವಿತ್ರ ಕ್ಷೇತ್ರದಲ್ಲೇ ಭಯೋತ್ಪಾದನೆ ನಡೆಸಿದ್ದಕ್ಕೆ ನೀಮ ಹರ್ಷ ವ್ಯಕ್ತಪಡಿಸಿದ್ದೀರಿ. ಶುಕ್ರಾನ್.
ಆದರೆ, ಅಫ್ವಾನ್... ನಾವಂದುಕೊಂಡಂತೆ, ಈ ಬಾಂಬ್ ಸ್ಫೋಟದಿಂದ ಏನೂ ಪ್ರಯೋಜನವಾಗಿಲ್ಲ ಎನ್ನುವ ಖೇದದ ಸಂಗತಿಯನ್ನು ನಿಮಗೆ ತಿಳಿಸಬೇಕಾಗಿದೆ.
ಕಾಶಿಯಂಥ ಪವಿತ್ರ ಕ್ಷೇತ್ರಕ್ಕೆ ಬಾಂಬ್ ಹಾಕಿ ಹಿಂದೂ ಹಾಗೂ ಮುಸ್ಲಿಮರ ನಡುವೆ ಗಲಭೆ ಉಂಟುಮಾಡಬೇಕು ಅಂತ ನಮ್ಮ ಉದ್ದೇಶವಾಗಿತ್ತು. ಆದರೆ, ನಮ್ಮ ಮೂಲ ಉದ್ದೇಶವೇ ವಿಫಲವಾಗಿದೆ. ಯಾಕೆ ಅಂತಾನೇ ಗೊತ್ತಾಗ್ತಾ ಇಲ್ಲ.
ನಮ್ಮ ಪ್ರಕಾರ, ಕಾಶಿಯ ದೇವಾಲಯದಲ್ಲಿ ಬಾಂಬ್ ಸ್ಫೋಟವಾದ ಸುದ್ದಿ ಟೀವಿಯಲ್ಲಿ ಪ್ರಸಾರವಾಗುತ್ತಿದ್ದಂತೆ, ಇಡೀ ಭಾರತ ಉದ್ವಿಗ್ನವಾಗಬೇಕಿತ್ತು. ರಾತ್ರೋ ರಾತ್ರಿ ಹಿಂದೂಗಳು ಕ್ರುದ್ಧರಾಗಿ ಹಿಂಸಾಚಾರ ಆರಂಭಿಸಬೇಕಿತ್ತು. ಕೋಮು ಗಲಭೆಗಳಾಗಿ ದೇಶವೆಲ್ಲ ತಲ್ಲಣಗೊಳ್ಳಬೇಕಿತ್ತು. ಕನಿಷ್ಠ ನೂರಾರು ಮುಸ್ಲಿಮರನ್ನು ಹಿಂದುಗಳು ಇರಿದು ಕೊಂದುಹಾಕುತ್ತಾರೆ ಅಂತ ನಾಮ ಅಂದುಕೊಂಡಿದ್ದೆಮ. ಒಂದೆರಡು ಮಸೀದಿಗಳ ಮೇಲೆ ದಾಳಿ ನಡೆಯುತ್ತದೆ ಅಂತ ನಮ್ಮ ನಿರೀಕ್ಷೆಯಿತ್ತು.
ಕನಿಷ್ಠ ೧೫ ದಿನ ಭಾರತ ಹಿಂದೂ ಮುಸ್ಲಿಂ ಹಿಂಸೆಯಲ್ಲಿ ನಲುಗಿಹೋಗುತ್ತದೆ ಅನ್ನುವ ನಂಬಿಕೆ ನಮ್ಮದಾಗಿತ್ತು. ನಮ್ಮದಷ್ಟೇ ಅಲ್ಲ, ಭಾರತದಾದ್ಯಂತ ಎಲ್ಲ ಸಾಮಾನ್ಯ ಜನರ ಭಯವೂ ಇದೇ ಆಗಿತ್ತು.
ಆದರೆ, ಹಾಗಾಗಲೇ ಇಲ್ಲ. ಇಡೀ ಭಾರತ ಬಹಳ ಜವಾಬ್ದಾರಿಯಿಂದ ವರ್ತಿಸಿತು. ಸ್ವಲ್ಪ ಕೂಡ ಹಿಂಸಾಚಾರ ಆಗದಂತೆ ಇಡೀ ದೇಶ ಎಚ್ಚರ ವಹಿಸಿತು. ಇದು ಹೇಗೆ ಸಾಧ್ಯವಾಯಿತು? ಹಿಂಸಾಚಾರ ಭುಗಿಲೇಳದಂತೆ ತಡೆದವರು ಯಾರು ಅಂತಾನೇ ಗೊತ್ತಾಗ್ತಾ ಇಲ್ಲ. ನಮಗಷ್ಟೇ ಅಲ್ಲ... ಭಾರತದ ಜನಸಾಮಾನ್ಯರಿಗೂ ಇದೇ ಅಚ್ಚರಿಯ ವಿಷಯ!
ನಾಮ ಒಂದು ವಾರ ಹಾಗೂ ಹೀಗೂ ಕಾದು ನೋಡಿದ್ದಾಯ್ತು. ಈ ಬಿಜೆಪಿಯವರು, ಹಿಂದೂ ಪರಿವಾರದವರು ದೇಶದ ಶಾಂತಿ ಕದಡುವ ಯಾವ ಕ್ರಮವನ್ನೂ ಕೈಗೊಳ್ಳುತ್ತಿಲ್ಲ. ಅವರು ಯಾಮದೇ ಪ್ರಚೋದನಾತ್ಮಕ ಹೇಳಿಕೆ ನೀಡದೇ ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ಜನತೆ ಸಹನೆಯಿಂದ ಇರುವಂತೆ ಕರೆ ನೀಡಿದ್ದಾರೆ. ಈ ಹಿಂದುಗಳೂ ಕೆರಳದ ಹೊರತು ನಾಮ ಮುಸ್ಲಿಮರ ಕಿಚ್ಚು ಎಬ್ಬಿಸಲು ಸಾಧ್ಯವಾಗ್ತಾ ಇಲ್ಲ.
ಒಟ್ಟಿನಲ್ಲಿ ನಮ್ಮ ಕಾಶಿ ಬಾಂಬ್ ಪುಸ್ ಅಂದಿದೆ... ಹಿಂಸೆಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಇದರಿಂದ ನಮ್ಮ ತಂಡದ ಎಲ್ಲರಿಗೂ ಬಹಳ ನಿರಾಶೆಯಾಗಿದೆ. ಕಾಶಿಗೆ ಬಾಂಬ್ ಹಾಕಿದರೂ ಏನೂ ಆಗಲಿಲ್ಲ ಎಂದರೆ, ಇನ್ಯಾವ ರೀತಿಯ ಭಯೋತ್ಪಾದನೆ ಮಾಡುಮದು ಅಂತ ನಮ್ಮ ಕೆಲಮ ಯುವಕರು ಚಿಂತೆಗೆ ಒಳಗಾಗಿದ್ದಾರೆ.
ಈ ಸಮಯದಲ್ಲಿ ನಮ್ಮ ಯುವಕರ ‘ಜಿಹಾದ್’ ಇಚ್ಛಾಶಕ್ತಿ ಉಡುಗದಂತೆ ತಾವೇ ಏನಾದರೂ ಮಾಡಬೇಕು. ತಮ್ಮ ಉಪನ್ಯಾಸದ ಲೇಟೆಸ್ಟ್ ಕ್ಯಾಸೆಟ್ ಒಂದನ್ನು ಕಳಿಸಿಕೊಡಿ. ಅದನ್ನು ನೋಡಿಯಾದರೂ ನಮ್ಮ ಯುವ ಜಿಹಾದ್ ಸೇನಾನಿಗಳಿಗೆ ಉತ್ಸಾಹ ಬಂದೀತು!
ಹಾಗೆ ನೋಡಿದರೆ, ಈ ಭಾರತದ ಹೊಸ ಪರಿಸ್ಥಿತಿಯೇ ನಮಗೆ ಬಹಳ ನಿರಾಸೆ ತರುವಂತಿದೆ. ಮೊದಲಿನಂತೆ ಹಿಂದೂ ಧರ್ಮದ ಹೆಸರಿನಲ್ಲಿ ಶಾಂತಿ ಕದಡುಮದು ನಮಗೆ ಸಾಧ್ಯವಾಗುತ್ತಿಲ್ಲ.
ಉದಾಹರಣೆಗೆ: ಇತ್ತೀಚೆಗೆ ರೋಮ್ನ ಒಂದು ಬಾರ್ನಲ್ಲಿ ದುರ್ಗಾ ದೇವಿಯ ಕೈಯಲ್ಲಿ ಹೆಂಡದ ಬಾಟಲಿಗಳನ್ನು ಹಿಡಿಸಿರುವ ಜಾಹೀರಾತು ಪೋಸ್ಟರುಗಳನ್ನು ಹಚ್ಚಲಾಯಿತು. ಈ ಸುದ್ದಿ ಕೇಳಿದ ಹಿಂದೂಗಳು ಕೆರಳಿ ಹಿಂಸಾಚಾರಕ್ಕೆ ಇಳಿಯಲಿಲ್ಲ. ಎಂ. ಎಫ್. ಹುಸೇನ್ ಎಂಬ ಮಹಾ ಕಲಾವಿದ ಹಿಂದೂಗಳ ದೇವರನ್ನೂ, ಭಾರತ ಮಾತೆಯನ್ನೂ ಕಲಾತ್ಮಕವಾಗಿ ನಗ್ನಗೊಳಿಸಿದ. ಒಂಚೂರು ಪ್ರತಿಭಟನೆ ನಡೆಯಿತು ಎಂಬುದನ್ನು ಬಿಟ್ಟರೆ ಹುಸೇನ್ಗೆ ಹಿಂದಿನಂತೆ ಭಾರೀ ಪ್ರಚಾರ ಸಿಗಲಿಲ್ಲ. ಅಲ್ಲೊಂದು ಇಲ್ಲೊಂದು ದೇವರ ಪ್ರತಿಮೆಗಳು ಭಗ್ನವಾದರೂ ಉದ್ವಿಗ್ನ ಪರಿಸ್ಥಿತಿ ಗ್ರಾಮದ ಗಡಿ ದಾಟಲಿಲ್ಲ.
ಇದೇ ರೀತಿ ಮುಂದುವರಿದರೆ, ಮತಾಂಧತೆಯ ಮಂತ್ರದಿಂದ ಹಿಂದೂಗಳನ್ನು ರೊಚ್ಚಿಗೆಬ್ಬಿಸುಮದು ಕಷ್ಟ ಅಂತ ನಮಗನ್ನಿಸಿದೆ. ಸದ್ಯ ನಾವಂತೂ ಇನ್ನಷ್ಟು ಹಿಂದೂ ದೇವಾಲಯಗಳು ಹಾಗೂ ಪುಣ್ಯ ಕ್ಷೇತ್ರಗಳ ಮೇಲೆ ದಾಳಿ ನಡೆಸಲು ಉದ್ದೇಶಿಸಿದ್ದೇವೆ. ಆದರೆ, ಅಮಗಳಿಂದ ನಿಶ್ಚಿತ ಫಲ ದೊರೆಯುಮದೇ ಅಂತ ನಮಗೇ ಗೊಂದಲ ಉಂಟಾಗಿದೆ.
ಇಷ್ಟಕ್ಕೂ ಜನರು ಈಗ ಬಾಂಬಿಗೆ ಬೆದರುತ್ತಲೇ ಇಲ್ಲ. ಮೊದಲಾದರೆ ಹುಸಿಬಾಂಬ್ ಕರೆಗೂ ಜನ ಹೆದರಿ ವಾರಗಟ್ಟಲೆ ಅಳುಕಿ ನಡೆಯುತ್ತಿದ್ದರು. ಈಗ ಶಕ್ತಿಶಾಲಿ ಬಾಂಬ್ ಸಿಡಿದರೂ ಕೆಲವೇ ಗಂಟೆಗಳಲ್ಲಿ ಆರಾಮವಾಗಿ ಅಲ್ಲಿ ಜನ ನಡೆದಾಡಿಕೊಂಡಿರುತ್ತಾರೆ. ಬಾಂಬುಗಳಿಗೆ ಜನ ಒಗ್ಗಿಹೋಗಿದ್ದಾರೆ. ಹೀಗಾದರೆ, ನಾಮ ಭಯೋತ್ಪಾದನೆ ಮಾಡುಮದು ಹೇಗೆ ಎಂಬ ಭಯ ನಮಗೇ ಉಂಟಾಗಿದೆ.
ಸಾಲದು ಎಂಬಂತೇ, ರಾಜಕಾರಣಿಗಳೂ ಪರಿಸ್ಥಿತಿಯನ್ನು ತಿಳಿಗೊಳಿಸುವ ಹೊಸ ವಿದ್ಯೆ ಕಲಿತುಕೊಂಡಿರುಮದು ನಮ್ಮ ಹಿನ್ನಡೆಗೆ ಇನ್ನೊಂದು ಕಾರಣ. ಬಾಂಬ್ ಸ್ಫೋಟವಾದ ಕೆಲವೇ ಗಂಟೆಯಲ್ಲಿ ಪೊಲೀಸರು ಯಾರನ್ನೋ ಹಿಡಿದು ಹಾಕಿ ಈತನೇ ‘ಬಾಂಬರ್’ ಎಂದು ಪತ್ರಿಕಾಗೋಷ್ಠಿ ನಡೆಸುತ್ತಾರೆ. ಅಥವಾ ಯಾರನ್ನೋ ಗುಂಡುಹೊಡೆದು ಸಾಯಿಸಿ ಈತನೇ ಬಾಂಬ್ ಇಟ್ಟವನು ಅಂತ ಟೀವಿಯಲ್ಲಿ ತೋರಿಸುತ್ತಾರೆ. ಅದು ನಿಜವೋ ಸುಳ್ಳೋ ಎಂಬುದು ಗೊತ್ತಾಗುವ ಹೊತ್ತಿಗೆ ಇಡೀ ಘಟನೆಯ ಮೇಲೆ ಮಾಧ್ಯಮಗಳಿಗೆ ಹಾಗೂ ಜನರಿಗೆ ಆಸಕ್ತಿ ಕಡಿಮೆಯಾಗುತ್ತದೆ. ಸುದ್ದಿ ಮೊದಲ ಪುಟದಿಂದ ಒಳಪುಟಕ್ಕೆ ಜಾರುತ್ತದೆ. ಬೆಂಗಳೂರು ಐಐಎಸ್ಸಿ ಮೇಲಿನ ದಾಳಿ, ದೆಹಲಿಯಲ್ಲಿ ಬಾಂಬ್ ಸ್ಫೋಟ ಹಾಗೂ ಕಾಶಿಯಲ್ಲಿ ಬಾಂಬ್ ಸ್ಫೋಟ... ಎಲ್ಲ ಘಟನೆಯಲ್ಲೂ ಹೀಗೇ ಆಯಿತು.
ಈ ಸಿನಿಮಾಗಳೋ... ನಮಗಿಂತಲೂ ಹೆಚ್ಚು ಭಯೋತ್ಪಾದನೆ ಉಂಟು ಮಾಡುತ್ತವೆ. ಲಾಂಗು, ಮಚ್ಚು, ಬಾಂಬು, ಪಿಸ್ತೂಲು, ರಕ್ತ, ಕಿರುಚಾಟ ಇಲ್ಲದ ಸಿನಿಮಾವೇ ಇಲ್ಲ. ಇವಿಷ್ಟು ಐಟಂ ಹೆಚ್ಚಿದ್ದಷ್ಟೂ ಸಿನಿಮಾ ಹಿಟ್ ಆಗುತ್ತವೆ. ಹಿಂಸೆ ಹೆಚ್ಚಾದಷ್ಟೂ ಜನ ಆನಂದ ಪಡುತ್ತಾರೆ. ಹಾಗಾಗಿ ಜನ ಭಯೋತ್ಪಾದನೆಯನ್ನೂ ಹಿಂದಿ ಸಿನಿಮಾಗಳ ಥರ ಎಂಜಾಯ್ ಮಾಡೋದನ್ನು ಕಲಿತುಬಿಟ್ಟಿದ್ದಾರೆಯೇ ಅಂತ ನಮ್ಮ ಅನುಮಾನ.
ನಾಮ ಕಾಶಿ ಬಾಂಬ್ ಘಟನೆಯ ಕುರಿತು ಒಂದು ಮಾರ್ಕೆಟ್ ಸರ್ವೆ ನಡೆಸಿದೆಮ. ಈ ಸಮೀಕ್ಷೆಯಲ್ಲಿ ಅಚ್ಚರಿಯ ವಿಷಯವೊಂದು ಪತ್ತೆಯಾಗಿದೆ. ಕಾಶಿಯಲ್ಲಿ ಬಾಂಬ್ ಸ್ಫೋಟಗೊಂಡಿರುವ ಬಗ್ಗೆ ಜನರಿಗೆ ಅಂತಹ ಭಯವೇನೂ ಆಗಿಲ್ಲವಂತೆ.
ಆದರೆ, ಇದೇ ಬಾಂಬ್ ಏನಾದರೂ ಮೆಕ್ಕಾದಲ್ಲಿ ಸ್ಫೋಟಗೊಂಡಿದ್ದರೆ ಪರಿಸ್ಥಿತಿ ಏನಾಗುತ್ತಿತ್ತು ಎಂಬ ಊಹೆಯೇ ಜನರಿಗೆ ಭಯ ಉಂಟುಮಾಡಿದೆಯಂತೆ. ಒಂದು ಕಾರ್ಟೂನ್ ವಿಶ್ವಾದ್ಯಂತ ಉದ್ವಿಗ್ನ ಪರಿಸ್ಥಿತಿಯನ್ನು ಸೃಷ್ಟಿಸಲು ಯಶಸ್ವಿಯಾದರೆ ಒಂದು ಬಾಂಬ್ ಇನ್ನೆಂತಹ ಪರಿಸ್ಥಿತಿಯನ್ನು ಉಂಟುಮಾಡಬಲ್ಲದು ಎಂಬ ಕಲ್ಪನೆಯೇ ಹೆಚ್ಚು ಭಯಾನಕ. ಥ್ಯಾಂಕ್ ಗಾಡ್. ಮೆಕ್ಕಾದಲ್ಲಿ ಈ ಬಾಂಬ್ ಸ್ಫೋಟಿಸಲಿಲ್ಲ ... ಎಂದು ಸಮೀಕ್ಷೆಯಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ನಾಮ ದೇಶದಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಲು ಹೊಸ ದಾರಿಯನ್ನು ಹುಡುಕಬೇಕಾಗಿದೆ. ಇದಕ್ಕೆ ಭಯೋತ್ಪಾದನಾ ಎಕ್ಸ್ಪರ್ಟ್ ಆದ ತಾವೇ ಏನಾದರೂ ಸಲಹೆ ನೀಡಬೇಕು. ಆಸೆಫ್. ಅಫ್ವಾನ್. ನಾನು ತಮಗೆ ಈ ರೀತಿಯ ಪತ್ರ ಬರೆಯಬೇಕಾಯಿತು. ದಯವಿಟ್ಟು ದಾರಿ ತೋರಿ. ಇಲ್ಲವಾದರೆ ನಾಮ ಸಿನಿಮಾ ಡೈರಕ್ಟರುಗಳು ಹಾಗೂ ಚಿತ್ರಕಥೆಗಾರರ ಸಲಹೆ ಕೋರಬೇಕಾಗುತ್ತದೆ.
ತಮ್ಮ ಮಾರ್ಗದರ್ಶನದ ನಿರೀಕ್ಷೆಯಲ್ಲಿ,
-ಖುದಾ ಆಫೀಸ್
$$iND987432$$
Kannada Prabha issue dated March 13, 2006
Kashi Bombers are disappointed
--
Showing posts with label Bin Laden. Show all posts
Showing posts with label Bin Laden. Show all posts
Tuesday, March 14, 2006
ಕಾಶಿಯಲ್ಲಿ ಬಾಂಬ್ ಸ್ಫೋಟಿಸಿದ ಉಗ್ರರಿಗೆ ನಿರಾಶೆ
Subscribe to:
Posts (Atom)