Tuesday, March 28, 2006

ಸೋನಿಯಾ ಬಿಟ್ಟ ಲಾಭದ ಹುದ್ದೆಗೆ ಪುತ್ರಿ ಪ್ರಿಯಾಂಕಾ?

ದೇಶದ ಅತ್ಯಂತ ಲಾಭದ ಹುದ್ದೆ ಸೋನಿಯಾ ಕೈಲೇ ಇದೆ
- ಸಂಸದ ಲಾಸು ಪ್ರಸಾದ್‌ ಯಾದವ್‌


ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ಸೋನಿಯಾ ಅಣತಿ ಇಲ್ಲದೇ ‘ಕಾಂಗ್ರೆಸ್‌ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?



ಶ್ರೀಮತಿ ರಾಬಡ್ಡಿ ದೇವಿಯವರೆ,

ನಾನು ದುಃಖದಲ್ಲಿದ್ದೇನೆ. ನನ್ನಂತೆ ನೀವೂ ದುಃಖದಲ್ಲಿ ಇದ್ದೀರಿ ಎಂದು ನಾನು ತೀರ್ಮಾನಿಸುತ್ತೇನೆ. ನಾನು ಈ ಪತ್ರವನ್ನು ತಮ್ಮ ಪತಿಯಾಗಿ ಬರೆಯುತ್ತಿಲ್ಲ. ಲಾಭದಾಯಕ ಹುದ್ದೆಯಲ್ಲಿರುವ ಓರ್ವ ರಾಜಕಾರಣಿಯಾಗಿ ನನ್ನ ವಿಚಾರಧಾರೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಈ ದೇಶದ ರಾಜಕೀಯ ಯಾವ ಲೆವಲ್ಲಿಗೆ ಬಂತು ನೋಡಿದಿರಾ? ಲಾಭದಾಯಕ ಹುದ್ದೆಯಲ್ಲಿರುಮದು ತಪ್ಪಂತೆ ತಪುý್ಪ. ಅದ್ಯಾಮದೋ ಸಂವಿಧಾನದಲ್ಲೂ ಕರೆಕ್ಟಾಗಿ ವ್ಯಾಖ್ಯಾನ ಇಲ್ಲದ ರೂಲ್ಸ್‌ ಹಿಡಿದುಕೊಂಡು ಬಂದು ಈಗಿನ ರಾಜಕೀಯ ವ್ಯವಸ್ಥೆಯನ್ನೇ ತಲೆಕೆಳಗು ಮಾಡಲು ಪ್ರಯತ್ನಿಸುತ್ತಿದ್ದಾರೆ ಕೆಲವರು.

ವಾಟ್‌ ನಾನ್‌ಸೆನ್ಸ್‌! ಲಾಭ ಇಲ್ಲದಿದ್ದರೆ ಹುದ್ದೆ ಯಾಕೆ ಬೇಕು? ರಾಜಕೀಯ ಯಾರಿಗೆ ಬೇಕು! ಎಂಬುದನ್ನೂ ಯೋಚಿಸದ, ಕೆಲ ನಾನ್‌ಸೆನ್ಸ್‌ ರಾಜಕಾರಣಿಗಳು ಈ ಲಾಭದಾಯಕ ಹುದ್ದೆಯ ಗದ್ದಲವೆಬ್ಬಿಸಿದ್ದಾರೆ. ಈ ಗದ್ದಲದಿಂದ ಸುಮ್ಮನೆ ನಮ್ಮಂಥವರಿಗೆ ನಿದ್ದೆ ಹಾಳು ಅಷ್ಟೇ.

ಯಾವ ಹುದ್ದೆ ಕೊಟ್ಟರೂ ಲಾಭ ಮಾಡಿಕೊಳ್ಳುಮದು ಹೇಗೆ ಅಂತ ನಮ್ಮಂಥವರಿಗೆ ಗೊತ್ತಿಲ್ಲವಾ? ಲಾಭದಾಯಕ ಹುದ್ದೆ ಇಲ್ಲದಿದ್ದರೇನು ನಮಗೆ ಲಾಭ ಮಾಡಿಕೊಳ್ಳಲು ಆಗುಮದಿಲ್ಲವಾ? ವೋ ಹಮೆ ಕ್ಯಾ ಸಮಝ್‌ತೇ ಹೈ? ಎಮ್ಮೆಯ ಮೇವಿನಿಂದಲೇ ಲಾಭ ಹಿಂಡುಮದು ಹೇಗೆ ಎಂಬ ತಂತ್ರಜ್ಞಾನ ನಮಗೆ ಗೊತ್ತಿದೆ!

ಈ ಸೋನಿಯಾ ಮೇಡಂಗೆ ಏನಾಗಿದೆ? ಉತ್ತರ ಪ್ರದೇಶದಲ್ಲಿ ಯಾರೋ ಹೆಸರೇ ಗೊತ್ತಿಲ್ಲದ ರಾಜಕಾರಣಿ ಲಾಭದಾಯಕ ಹುದ್ದೆಯ ಅಪಸ್ವರ ಎತ್ತಿದ. ಅದಕ್ಕೆ ಈ ಅಮ್ಮ ರಾಜೀನಾಮೆ ಬಿಸಾಕಿಬಿಡೋದಾ? ಇದು ಬಿಜೆಪಿಯ ಕಾಲ ಇರಬಹುದು. ಆದರೆ, ರಾಮಾಯಣದ ಕಾಲ ಅಲ್ಲವಲ್ಲ! ಯಾಮದೋ ಅಗಸ ಸೀತೆಯ ಸಾಚಾತನದ ಬಗ್ಗೆ ಗಾಸಿಪ್‌ ಹಬ್ಬಿಸಿದ. ಈ ರಾಮ ಸಂಸಾರಕ್ಕೆ ರಾಜೀನಾಮೆ ನೀಡಿ ಸೀತೆಯನ್ನು ಕಾಡಿಗೆ ಕಳಿಸಿದ!

ನಾವೀಗ ಅದನ್ನೇ ಫಾಲೋ ಮಾಡಬೇಕಾ? ಈಗಿನ ಕಾಲದಲ್ಲಾಗಿದ್ದರೆ ಸೀತೆ, ರಾಮನಿಂದ ಕಾಂಪನ್‌ಸೇಷನ್‌ ಪಡೆಯಬಹುದಾಗಿತ್ತು. ಮೊನ್ನೆ ಮೊನ್ನೆ, ಸುಪ್ರೀಂ ಕೋರ್ಟು ಹೇಳಿಲ್ಲವಾ? ಗಂಡ ಹೆಂಡತಿ ದೂರವಾಗಿದ್ದರೆ, ಲೈಂಗಿಕ ಸಂಪರ್ಕ ಇಲ್ಲದಿದ್ದರೆ ಡೈವೋರ್ಸ್‌ ಪಡೆಯಬಹುದು ಅಂತ? ಆಗಿನ ಕಾಲಕ್ಕೇನೋ ರಾಮ ಮಾಡಿದ್ದು ಸರಿ ಅನ್ನಬಹುದು. ಈಗಿನ ಕಾಲದಲ್ಲಿ ಅದನ್ನೇ ಸರಿ ಅಂದರೆ ದೇಶದಲ್ಲಿ ಶೇ.೫೦ ರಷ್ಟು ಸೀತೆಯರನ್ನು ಕಾಡಿಗೆ ಕಳಿಸಬೇಕಾಗುತ್ತೆ.

ಇಷ್ಟಕ್ಕೂ ಸೋನಿಯಾ ಅವರ್ಯಾಕೆ ನಮ್ಮಂಥ ಮಾದರಿ ರಾಜಕಾರಣಿಗಳಿಂದ ಪಾಠ ಕಲಿಯುಮದಿಲ್ಲ? ರಾಜೀನಾಮೆ ಕೊಡಲೇ ಬೇಕು ಅಂತಿದ್ದರೆ, ಸೋನಿಯಾ ಕೂಡ ನಾನು ಮಾಡಿದಂತೆ ಮಾಡಬಹುದಾಗಿತ್ತು. ತಾಮ ಲಾಭದಾಯಕ ಹುದ್ದೆಗೆ ರಾಜೀನಾಮೆ ಕೊಟ್ಟು ತಮ್ಮ ಪುತ್ರಿ ಪ್ರಿಯಾಂಕಾ ಅವರನ್ನು ಆ ಹುದ್ದೆಯಲ್ಲಿ ಕೂರಿಸಿ ಲಾಭ ಮಾಡಿಕೊಳ್ಳಬಹುದಾಗಿತ್ತು! ನಾನು ನಿಮ್ಮಂಥ ಅವಿದ್ಯಾವಂತೆಯನ್ನೇ ರಾಜ್ಯದ ಅತ್ಯಂತ ಲಾಭದಾಯಕ ಹುದ್ದೆಯಾದ ಮುಖ್ಯಮಂತ್ರಿ ಗದ್ದುಗೆಯ ಮೇಲೆ ಕೂರಿಸಿರಲಿಲ್ಲವಾ? ಇಡೀ ದೇಶಕ್ಕೇ ಇದೊಂದು ಮಾದರಿಯಾಗಿ, ದೇಶದ ರಾಜಕಾರಣದ ಗಿನ್ನಿಸ್‌ ದಾಖಲೆಯಾಗಿ ಉಳಿದಿದೆ. ಹೀಗಿರುವಾಗ, ಪ್ರಿಯಾಂಕನಂಥ ಚೆಲುವೆ, ವಿದ್ಯಾವಂತೆ, ಸ್ಟೈಲ್‌ ಐಕಾನನ್ನು ಲಾಭದ ಹುದ್ದೆಯಲ್ಲಿ ಕೂರಿಸಿದ್ದರೆ ಸೋನಿಯಾಗೇ ಇನ್ನೂ ಹೆಚ್ಚಿನ ಲಾಭ ಆಗುತ್ತಿತ್ತು.

ಹೋಗ್ಲಿ ಬಿಡಿ. ಈಗ ಸೋನಿಯಾ ಲಾಭದ ಹುದ್ದೆ ಹೆಸರಲ್ಲಿ ಎರಡು ಹುದ್ದೆಗಳಿಗೆ ರಾಜೀನಾಮೆ ಕೊಟ್ಟಿದ್ದಾರೆ ತಾನೇ? ಒಂದು ತಮ್ಮ ಸಂಸತ್‌ ಸದಸ್ಯತ್ವಕ್ಕೆ ಹಾಗೂ ಇನ್ನೊಂದು ರಾಷ್ಟ್ರೀಯ ಸಲಹಾ ಮಂಡಳಿಗೆ. ಹಾಗಂತ, ಸೋನಿಯಾ ಅವರ ಲಾಭ ಏನು ಈಗ ಕಡಿಮೆ ಆಗೋಯ್ತಾ? ಈ ದೇಶದ ಅತ್ಯಂತ ಲಾಭದ ಹುದ್ದೆ ಈಗಲೂ ಸೋನಿಯಾ ಕೈಲೇ ಇದೆ. ನೆನಪಿರಲಿ. ‘ತೇನ ವಿನಾ ತೃಣಮಪಿ ನ ಚಲತಿ...’ ಅನ್ನುವಂತೆ ಸೋನಿಯಾ ಅಣತಿ ಇಲ್ಲದೇ ’ಕಾಂಗ್ರೆಸ್‌ ಹುಲ್ಲು’ ಕಡ್ಡಿ ಕೂಡ ಚಲಿಸದು. ಹಾಗಿರುವಾಗ ಕಾಂಗ್ರೆಸ್‌ನ ’ಹುಲು ಮಾನವ’ ಆಗಿರುವ ಪ್ರಧಾನಮಂತ್ರಿಯ ಬುದ್ಧಿ ಹೇಗೆ ಚಲಿಸೀತು?

ಸದ್ಯಕ್ಕೆ ಪ್ರಧಾನ ಮಂತ್ರಿಯ ಸಿಂಹಾಸನವೇ ಸೋನಿಯಾ ಕೈಲಿರುವಾಗ ಜುಜುಬಿ ಒಂದು ಹುದ್ದೆ ಸೋನಿಯಾ ಕೈಲಿ ಇದ್ದರೆಷ್ಟು ಬಿಟ್ಟರೆಷ್ಟು! ಇಷ್ಟಕ್ಕೂ ಸೋನಿಯಾ ನಾಳೆ ತಾವೇ ಪ್ರಧಾನಿ ಹುದ್ದೆ ಅಲಂಕರಿಸ್ತೀನಿ ಅಂದ್ರೆ ಬೇಡ ಅನ್ನೋರು ಕಾಂಗ್ರೆಸ್‌ನಲ್ಲಿ ಯಾರಾದರೂ ಇದ್ದಾರಾ? ಈಗಲೂ, ಸೋನಿಯಾ ಅವರು, ನಂ.೧೦, ಜನ್‌ಪಥ್‌ ರಸ್ತೆಯ, ತಮ್ಮ ಮನೆಯಲ್ಲಿ ಕುಳಿತುಕೊಳ್ಳುವ ಕುರ್ಚಿಯೇ ಈ ದೇಶದ ಅತ್ಯಂತ ಲಾಭದಾಯಕ ಹುದ್ದೆ. ನೀವೇನಂತೀರಾ ರಾಬಡ್ಡಿ?

ನಾನು ನನ್ನ ಈ ವಿಚಾರಧಾರೆಯನ್ನು ವಿವರಿಸುತ್ತ ಇರುವಾಗ, ಅದ್ಯಾರೋ ಬಂದು ಲಾಭದಾಯಕ ಹುದ್ದೆಗೆ ಸಂವಿಧಾನದಲ್ಲಿ ಈ ರೀತಿಯ ಲೌಕಿಕ ಲಾಭದ ಅರ್ಥವಿಲ್ಲ. ಅಲ್ಲಿನ ಅರ್ಥವೇ ಬೇರೆ ಎಂದು ಸಾಂವಿಧಾನಿಕವಾಗಿ ವಿವರಿಸಲು ಆರಂಭಿಸಿದ. ನಾನು ಅವನಿಗೆ ಶಟ್‌ ಅಪ್‌ ಅಂದೆ. ಈ ಸಂವಿಧಾನದಲ್ಲಿ ಏನೇನೋ ಹೇಳಿರ್ತಾರೆ. ಅದನ್ನೆಲ್ಲ ಸೀರಿಯಸ್ಸಾಗಿ ತಗೋಳ್ಳೋಕಾಗುತ್ತಾ ಅಂತ ಬೈದು ಕಳಿಸಿದೆ.

ನಾಮ ಯಾಮದನ್ನೇ ಆದರೂ ಪ್ರಾಕ್ಟಿಕಲ್ಲಾಗಿ ನೋಡಬೇಕು. ಸರ್ಕಾರದ ಹುದ್ದೆಗಳಲ್ಲಿ ಯಾಮದು ಲಾಭದಾಯಕ ಹುದ್ದೆ ಯಾಮದು ಅಲ್ಲ ಎಂದು ವಿಭಾಗ ಮಾಡುಮದೇ ಪ್ರಾಕ್ಟಿಕಲ್‌ ಅಲ್ಲ. ಇದನ್ನು ನ್ಯಾಯಾಲಯವಾಗಲೀ, ಚುನಾವಣಾ ಆಯೋಗವಾಗಲೀ ತೀರ್ಮಾನಿಸುಮದೇ ತಪುý್ಪ ಅಂತ ನನ್ನ ವಾದ. ಸರ್ಕಾರ ಅಂದಮೇಲೆ, ಎಲ್ಲ ಹುದ್ದೆಗಳೂ ಲಾಭದಾಯಕವೇ. ಆದರೆ, ಲಾಭ ಮಾಡಿಕೊಳ್ಳುಮದು ಹೇಗೆ ಮತ್ತು ಎಷ್ಟು ಎನ್ನುಮದು ಆಯಾ ವ್ಯಕ್ತಿಯ ಶಕ್ತಿ ಸಾಮರ್ಥ್ಯಕ್ಕೆ ಬಿಟ್ಟ ವಿಚಾರ -ಎನ್ನುಮದು ನನ್ನ ವಿಚಾರಧಾರೆ.

ಹುದ್ದೆ ಯಾಮದೇ ಆಗಿರಲಿ, ಅದಕ್ಕೆ ಘನತೆ ಹೇಗೆ ಬರುತ್ತೆ ಗೊತ್ತಾ? ಆ ಹುದ್ದೆ ಎಷ್ಟು ಲಾಭ ತಂದು ಕೊಡುತ್ತೆ ಎಂಬ ಒಂದೇ ಅಂಶದಿಂದ! ಉದಾಹರಣೆಗೆ, ಪೊಲೀಸ್‌ ಪೇದೆಯ ಹುದ್ದೆಗಿಂತ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಗೆ ಯಾಕೆ ಹೆಚ್ಚು ಘನತೆಯಿದೆ ಹೇಳು. ಪೇದೆಯ ಹುದ್ದೆಗೆ ಬರೀ ೫ ರುಪಾಯಿಯಿಂದ ೫೦೦ ರುಪಾಯಿ ಲಂಚ ಸಿಗುತ್ತೆ. ಅದೇ ಸಬ್‌ ಇನ್‌ಸ್ಪೆಕ್ಟರ್‌ ಹುದ್ದೆಯಲ್ಲಿ ಇರುವಾತನಿಗೆ ೫೦೦ ರುಪಾಯಿಯಿಂದ ೫೦,೦೦೦ ರುಪಾಯಿ ಘನತೆಯಿದೆ. ಇನ್‌ಸ್ಪೆಕ್ಟರ್‌ ಹುದ್ದೆಗೆ ಲಕ್ಷ ರುಪಾಯಿಗಳಲ್ಲಿ ಘನತೆಯಿದೆ. ಹೀಗೆ ಹುದ್ದೆ ಹೆಚ್ಚಿದಂತೆಲ್ಲಾ ಘನತೆ ಹೆಚ್ಚುತ್ತಾ ಹೋಗುತ್ತದೆ! ಈ ಘನತೆ ಮೀರಿ ಕೋಟಿ ಗಟ್ಟಲೆ ಸಂಪಾದಿಸಿದರೆ ಮಿಕ್ಕವರ ಕಣ್ಣು ಆ ಹುದ್ದೆಯ ಮೇಲೆ ಬೀಳುತ್ತದೆ. ಆಗ ಲೋಕಾಯುಕ್ತ ವೆಂಕಟಾಚಲಯ್ಯ ದಾಳಿ ಮಾಡುತ್ತಾರೆ. ಪರಿಣಾಮವಾಗಿ ಲೋಕಾಯುಕ್ತ ಕಚೇರಿಯ ಅನೇಕ ಹುದ್ದೆಗಳ ಘನತೆ ಹೆಚ್ಚುತ್ತಾ ಹೋಗುತ್ತದೆ! ಶಾಸಕರು, ಸಂಸದರು, ಮಂತ್ರಿಗಳ ಹುದ್ದೆಗಳಿಗೂ ಇದೆ ನೀತಿ ಅನ್ವಯಿಸುತ್ತದೆ.

ಹೀಗೆ, ಇಡೀ ಸರ್ಕಾರಿ ವ್ಯವಸ್ಥೆಯ ಘನತೆ ಲಾಭದಾಯಕ ಹುದ್ದೆಗಳ ಮೇಲೆ ಅವಲಂಬಿತವಾಗಿದೆ. ಲಾಭದಾಯಕ ಹುದ್ದೆಗಳು ಹೆಚ್ಚಿದಷ್ಟೂ ಇಡೀ ಸರ್ಕಾರದ ಘನತೆ ಹೆಚ್ಚುತ್ತದೆ. ಆದ್ದರಿಂದ, ಲಾಭದಾಯಕ ಹುದ್ದೆಗಳ ಬಗ್ಗೆ ಯಾರೂ ಅಪಸ್ವರ ಎತ್ತಬಾರದು.
ಆದರೆ, ಒಬ್ಬರಿಗೆ ಒಂದೇ ಲಾಭದಾಯಕ ಹುದ್ದೆ ಎಂದು ಬೇಕಾದರೆ ಕಾನೂನು ಮಾಡಬಹುದು. ಇದರಿಂದ ದೇಶದಲ್ಲಿ ಹೆಚ್ಚಿನ ಜನರಿಗೆ ಲಾಭದಾಯಕ ಹುದ್ದೆ ಲಭಿಸಿ ಸರ್ವರ ಅಭಿವೃದ್ಧಿಯಾಗುತ್ತದೆ ಅಂತ ನನ್ನ ಸಲಹೆ.

ಒಂದು ವೇಳೆ ನನ್ನ ಸಲಹೆಗೆ ಮನ್ನಣೆ ನೀಡದೆ, ಸದ್ಯ ಲಾಭದ ಹುದ್ದೆಯಲ್ಲಿರುವ ಎಲ್ಲ ಶಾಸಕರೂ, ಸಂಸದರೂ ರಾಜೀನಾಮೆ ನೀಡುವಂತಾದರೆ, ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಇದರಿಂದ ದೇಶಕ್ಕೆ ನಷ್ಟವಾಗುತ್ತದೆ. ಹಾಗಾಗಬಾರದು ಎಂದರೆ, ಲಾಭದ ಹುದ್ದೆಗಳ ಗದ್ದಲ ತಕ್ಷಣ ಸ್ಥಗಿತವಾಗಬೇಕು.

ಲಾಭಾಕಾಂಕ್ಷಿ
ಲಾಸು ಪ್ರಸಾದ್‌ ಯಾದವ್‌


Kannada Prabha issue dated March 27, 2006

Priyanka Gets The Office-of-Profit Witch Sonia Quit

No comments: