Wednesday, August 19, 2009

ಪುಟ ವಿನ್ಯಾಸ - ಜಿಲ್ಲಾ ಪತ್ರಿಕೆಗಳಿಗೆ ಒಂದು ಕಾರ್ಯಾಗಾರ

ತ್ತೀಚೆಗೆ ಸಂಯುಕ್ತ ಕರ್ನಾಟಕ ಹಾಗೂ ಹೊಸ ದಿಗಂತ ಪತ್ರಿಕೆಗಳು ಹೊಸ ರೂಪ ಪಡೆಯುವುದರೊಂದಿಗೆ ರಾಜ್ಯ ಮಟ್ಟದ ಕನ್ನಡ ಪತ್ರಿಕೆಗಳೆಲ್ಲಾ ಒಂದು ಸುತ್ತು ಮರುವಿನ್ಯಾಸ ಪ್ರಕ್ರಿಯೆಗೆ ಒಳಗಾದಂತಾಗಿದೆ. ಈಗ ಕನ್ನಡಪತ್ರಿಕಾ ಕಚೇರಿಗಳಲ್ಲೆಲ್ಲಾ Newspaper Design ಎನ್ನುವುದು Buzz word. ಮುಂದಿನ ತಯಾರಿ ಗ್ರಾಮೀಣ ಹಾಗೂ ಜಿಲ್ಲಾ ಪತ್ರಿಕೆಗಳದ್ದು. ಕರ್ನಾಟಕ ಮಾಧ್ಯಮ ಅಕಾಡೆಮಿ ಇತ್ತೀಚೆಗೆ ಕೋಲಾರ ಜಿಲ್ಲಾ ಮಟ್ಟದ ಪತ್ರಿಕೆಗಳಿಗಾಗಿ ಒಂದು ಕಾರ್ಯಾಗಾರ ಏರ್ಪಡಿಸಿತ್ತು. ಅಲ್ಲಿ ನಾನು ಪುಟ ವಿನ್ಯಾಸದ ಮೂಲ ತತ್ವಗಳ ಕುರಿತು ನೀಡಿದ ಒಂದೂವರೆಗಂಟೆಯ ಪ್ರಸೆಂಟೇಶನ್ ಇದು. [ ppt ಇಂಗ್ಲೀಷಿನಲ್ಲಿದ್ದರೂ ವಿವರಣೆ ನೀಡಿದ್ದು ಕನ್ನಡದಲ್ಲಿ :-) ]

1 comment:

sunaath said...

ರವಿ ಹೆಗಡೆಯವರೆ,
ಪತ್ರಿಕೆಗಳಿಗಾಗಿ ಪುಟವಿನ್ಯಾಸದ ನಿಮ್ಮ ವಿವರಣೆ ಚೆನ್ನಾಗಿದೆ. ಸಂಯುಕ್ತ ಕರ್ನಾಟಕ ಪತ್ರಿಕೆ ಈಗಾಗಲೇ ಪುಟವಿನ್ಯಾಸ ಮಾಡಿದೆ ಎಂದು ಹೇಳಿದ್ದೀರಿ.
ರವಿ,
ರೋಗ ಬಡೆದ ಹೆಣ್ಣಿಗೆ ಕಾಶಿ ಪೀತಾಂಬರ ಉಡಿಸಿದರೆ ಏನು ಪ್ರಯೋಜನ? ಸಂಯುಕ್ತ ಕರ್ನಾಟಕದ ಸ್ಥಿತಿ ಹಾಗೇ ಇದೆ ಎಂದರೆ ತಪ್ಪಾಗಲಾರದು. ಸಂಯುಕ್ತ ಕರ್ನಾಟಕದಲ್ಲಿ ಬರುವ ತಪ್ಪು ಪದಗಳನ್ನು, ತಪ್ಪು ಭಾಷೆಯನ್ನು ಓದಿ ಪ್ರತಿ ದಿನವೂ ನಾನು ಕಣ್ಣೀರು ಹಾಕುತ್ತೇನೆ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನನ್ನ ಬ್ಲಾ^ಗ ‘ಸಲ್ಲಾಪ’ದಲ್ಲಿ (http://sallaap>blogspot.com),
೧೧-೩-೨೦೦೮ರ ಲೇಖನವನ್ನು ಸ್ವಲ್ಪ ನೋಡಿ.