Tuesday, January 17, 2006

ಸ್ತ್ರೀಯರು ಮನೆಯಿಂದ ಹೊರಬರದಂತೆ ನಿಷೇಧಾಜ್ಞೆ

ಪೊಲೀಸ್‌ ಹಿರಿಯಾಧಿಕಾರಿ ಟಿಂಟೆಡ್‌ ಸಿಂಗ್‌ ಅವರಿಗೆ ಕೋಲ್ಯ ಸಿಂಗ್‌ ನೀಡಿದ ಹೊಸ ಲಾ ಆಂಡ್‌ ಆರ್ಡರ್‌ ಸಲಹೆ

ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಓಡಾಡುಮದರಿಂದಲೇ ಎಂಬುದು ಪೊಲೀಸರ ಅಂದಾಜು. ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ಆದ್ದರಿಂದ ಅವರು ಮನೆಯಿಂದ ಹೊರಬರಲು ನಿಷೇಧ ಹೇರಿದರೆ ಅಪರಾಧ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ!

ಮಾನ್ಯ ಟಿಂಟೆಡ್‌ ಸಿಂಗ್‌ರವರು
ಪೊಲೀಸ್‌ ಹಿರಿಯಾಧಿಕಾರಿಗಳು, ಇವರಿಗೆ

ಕೋಲ್ಯ ಸಿಂಗ್‌ ಎಂಬ, ಅಜಮಾಸು ೮೩ ವರ್ಷದ,
ಬೆಂಗಳೂರು ನಿವಾಸಿಯಾದ ನಾನು ಮಾಡುವ ಪ್ರಣಾಮಗಳು.

ಬೆಂಗಳೂರಿನ ಜಗತ್‌ಪ್ರಸಿದ್ಧ ಎಂ.ಜಿ. ರಸ್ತೆಯನ್ನು ಭಾನುವಾರ ಬಂದ್‌ ಮಾಡಿ, ಮಕ್ಕಳ ಸ್ಕೇಟಿಂಗ್‌ ರಸ್ತೆಯನ್ನಾಗಿ ಆದೇಶ ಹೊರಡಿಸಲು ಉದ್ದೇಶಿದ್ದ, ಖ್ಯಾತ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನಾ ನಂತರ ಅತ್ಯಂತ ಜನರಂಜನಾತ್ಮಕ ನಿರ್ಧಾರ ಕೈಗೊಳ್ಳುತ್ತಿರುವ ತಮ್ಮಂಥ ಪೊಲೀಸ್‌ ಅಧಿಕಾರಿಗೆ ನನ್ನ ಅಭಿನಂದನೆಗಳು.

ಎಲ್ಲಕ್ಕಿಂತ ಮುಖ್ಯವಾಗಿ ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾಳ ಅತ್ಯಾಚಾರ ಹಾಗೂ ಕೊಲೆಯನ್ನು ಹೇಗೆ ತಪ್ಪಿಸಬಹುದಿತ್ತು ಎಂಬುದಕ್ಕೆ ನೀಮ ಉತ್ತರ ಕಂಡು ಹಿಡಿದು ಮಹಾನ್‌ ಸಾಧನೆ ಮಾಡಿದ್ದೀರಿ. ನಿಮ್ಮ ಸಂಶೋಧನೆಯ ಪ್ರಕಾರ, ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಕಪ್ಪಾಗಿದ್ದದ್ದೇ ಇಡೀ ದುರಂತಕ್ಕೆ ಕಾರಣ! ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಟಿಂಟೆಡ್‌ ಗ್ಲಾಸುಗಳಾಗಿರದೇ, ಪಾರದರ್ಶಕವಾಗಿದ್ದರೆ ಆಕೆಯ ಅತ್ಯಾಚಾರವೂ ಆಗುತ್ತಿರಲಿಲ್ಲ. ಕೊಲೆಯೂ ಆಗುತ್ತಿರಲಿಲ್ಲ! ಇಂಥ ಸತ್ಯ ಶೋಧನೆ ಮಾಡಿದ ತಮ್ಮ ಸಾಮರ್ಥ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ!

ಈ ತಮ್ಮ ಸತ್ಯ ಶೋಧನೆಯ ನಂತರ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ತಮ್ಮ ಇಲಾಖೆ ಒಂದು ಪಾರದರ್ಶಕ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ. ಬೆಂಗಳೂರಿನಲ್ಲಿರುವ ಸುಮಾರು ೨ ಲಕ್ಷ ಕಾರುಗಳ ಕಿಟಕಿ ಗಾಜುಗಳ ತಂಪಿನ ಪೊರೆಯನ್ನು ತೆಗೆಯಬೇಕೆಂದು ತಮ್ಮ ಇಲಾಖೆ ಆದೇಶಿಸಿದೆ. ಬೆಂಗಳೂರಿನ ಎಲ್ಲ ವಾಹನಗಳ ತಂಪಿನ ಪೊರೆ ತೆಗೆದುಬಿಟ್ಟರೆ ಇನ್ನು ಮುಂದೆ ಇಂತಹ ಅಪರಾಧಗಳು ನಡೆಯುಮದೇ ಇಲ್ಲ ಎಂಬುದು ಶತಃಸಿದ್ಧ!

ಈ ಆದೇಶವನ್ನು ಕೆಲಮ ಅಜ್ಞಾನಿಗಳು ಟೀಕಿಸುತ್ತಿದ್ದಾರೆ. ಯಾಮದೋ ಓಬಿರಾಯನ ಕಾಲದ ಕಾನೂನನ್ನು ಈಗ ಅನುಷ್ಠಾನ ಮಾಡುವ ಮೂಲಕ ಪೊಲೀಸ್‌ ಇಲಾಖೆ ಮುಗ್ಧ ನಾಕರಿಕರಿಗೆ ಕಿರುಕಳ ನೀಡುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿರುಮದು ಖಂಡಿತ ತಪುý್ಪ.

ಈಗ ಜಗತ್ತೇ ಬದಲಾಗಿದೆ ಅಂತ ನಮ್ಮ ಓಬಿರಾಯನ ಕಾಲದ ಕಾನೂನನ್ನೂ ಬದಲಾಯಿಸುಮದು ಸರಿಯೇ? ಪ್ರಪಂಚ ಬದಲಾಗಿದೆ ಅಂತ ಭಗವದ್ಗೀತೆಯನ್ನೂ ತಿದ್ದಲು ಆಗುತ್ತದೆಯೇ? ಆದ್ದರಿಂದ ಜನರಿಗೆ ಅನನುಕೂಲತೆ ಆಗುತ್ತೆ ಅಂತ ಕಾನೂನನ್ನು ಸರಳಮಾಡುಮದು ತರವೇ? ಕಾನೂನು ಅಂದರೆ ಕಠಿಣವಾಗಿರಬೇಕು!

ಈ ಹೊಸ ಆದೇಶದ ಬಗ್ಗೆ ಕೆಲಮ ಗೊಂದಲಗಳಿರುಮದು ನಿಜ. ಆದರೆ, ಅವಕ್ಕೆ ನನ್ನ ಬಳಿ ಉತ್ತರವಿದೆ. ಅಮಗಳನ್ನು ನಿಮಗೆ ತಿಳಿಸುಮದೇ ಈ ಪತ್ರದ ಉದ್ದೇಶ.

ಗೊಂದಲ ೧ : ಈ ಕಾನೂನನ್ನು ಬೆಂಗಳೂರಿನಲ್ಲಿ ಮಾತ್ರ ಜಾರಿಗೆ ತಂದರೆ, ಬೆಂಗಳೂರಿಗೆ ಹೊರಗಿನಿಂದ ಬರುವ ವಾಹನಗಳು ಏನು ಮಾಡಬೇಕು?

ಉತ್ತರ: ಅಮ ಬೆಂಗಳೂರಿಗೆ ಬರುವಾಗ ತಮ್ಮ ತಂಪಿನ ಗಾಜುಗಳನ್ನು ತೆಗೆದುಹಾಕಿ ಪಾರದರ್ಶಕ ಗಾಜುಗಳನ್ನು ಹಾಕಿಕೊಳ್ಳಬೇಕು. ಮತ್ತೆ ಊರಿಗೆ ಹೋದ ನಂತರ ತಂಪಿನ ಗಾಜುಗಳನ್ನು ಹಾಕಿಕೊಳ್ಳಬಹುದು. ಇದು ದುಬಾರಿ ಎನಿಸಿದರೆ, ಇನ್ನೊಂದು ಉಪಾಯವಿದೆ. ಬೆಂಗಳೂರಿಗೆ ತಂಪಿನ ಗಾಜುಗಳನ್ನು ಹಾಕಿಕೊಂಡು ಬಂದಾಗ, ಪೊಲೀಸರು ದಂಡ ಹಾಕುತ್ತಾರೆ. ಅದಷ್ಟನ್ನು ಕೊಟ್ಟು, ಬಂದ ಕೆಲಸ ಮುಗಿಸಿಕೊಂಡು ವಾಪಸ್‌ ಹೋಗಬಹುದು.

ಗೊಂದಲ ೨ : ಕಿಟಕಿ ಗಾಜುಗಳನ್ನು ಪಾರದರ್ಶಕ ಮಾಡಿದರೆ, ಕಾರಿನ ಒಳಗೆ ಇಟ್ಟಿರುಮದೆಲ್ಲ ಕಾಣಿಸುತ್ತದೆ. ಇದರಿಂದ ಕಳ್ಳರಿಗೆ ಯಾವ ಕಾರಿಗೆ ಕನ್ನ ಹಾಕಬೇಕು ಎಂಬುದು ಸುಲಭವಾಗಿ ತಿಳಿಯುತ್ತದೆ.

ಉತ್ತರ: ಕಾರುಗಳು ಇರುಮದು ಬರೀ ಓಡಾಡುಮದಕ್ಕೆ. ಅದನ್ನು ಅಮೂಲ್ಯ ವಸ್ತುಗಳನ್ನು ಇಡುವ ಅಲ್ಮೆರಾ ಮಾಡಬೇಡಿ. ಕಾರಿನಿಂದ ಇಳಿದು ಓಡಾಡುವಾಗ ಕಾರಿನಲ್ಲಿರುವ ಬ್ಯಾಗು, ಫೈಲು, ಷಾಪಿಂಗ್‌ ಮಾಡಿದ ಪೆಟ್ಟಿಗೆಗಳು, ಬ್ರೀಫ್‌ಕೇಸ್‌ ಹಾಗೂ ಸ್ಟೀರಿಯೋ ಸೆಟ್‌ಗಳನ್ನು ನಿಮ್ಮ ಜೊತೆಯೇ ತೆಗೆದುಕೊಂಡು ಹೋಗಿ. ಇದರಿಂದ ಖಾಲಿ ಕಾಣಿಸುವ ಕಾರು ನೋಡಿ ಕಳ್ಳರು ನಿಮ್ಮ ಕಾರಿಗೆ ಕನ್ನ ಹಾಕುಮದಿಲ್ಲ. ಅಥವಾ, ನಿಮ್ಮ ಕಾರಿನ ಜೊತೆ ಒಬ್ಬ ಕಾವಲುಗಾರರನ್ನು ಕರೆದೊಯ್ಯಿರಿ. ನೀಮ ಕಾರಿನಿಂದ ಆಚೆ ಹೋದಾಗ ಆತ ಕಾರು ಕಾಯುತ್ತಿರಲಿ.

ಗೊಂದಲ ೩ : ವಾಹನಗಳ ಕಿಟಕಿ ಗಾಜುಗಳು ಪಾರದರ್ಶಕವಾಗಿದ್ದರೆ, ದೊಡ್ಡ ಸಿನಿಮಾ ಸ್ಟಾರ್‌ಗಳು, ಖ್ಯಾತನಾಮರಿಗೆ ಕಷ್ಟವಾಗುತ್ತದೆ. ಏಕೆಂದರೆ, ಕಾರಿನೊಳಗಿದ್ದವರು ಯಾರು ಅಂತ ಕಾಣಿಸಿ ಜನ ವಾಹನಕ್ಕೆ ಮುಗಿಬೀಳಬಹುದು. ಅಲ್ಲದೇ, ಯಾಮದೇ ಕುಟುಂಬದ ಪ್ರವಾಸದಲ್ಲೂ ಪ್ರೆೃವಸಿ ಇರುಮದಿಲ್ಲ.

ಉತ್ತರ: ಸ್ಟಾರ್‌ಗಳು ಹಾಗೂ ಖ್ಯಾತನಾಮರು ಪಾರದರ್ಶಕ ಕಿಟಕಿಗಳ ವಾಹನಗಳಲ್ಲಿ ಓಡಾಡುಮದನ್ನು ಬಿಡಬೇಕು. ಅವರು ಸರಕು ಸಾಗಣೆಯ ವಾಹನದೊಳಗೆ ಕುಳಿತರೆ ಒಳಗೆ ಯಾರಿದ್ದಾರೆ ಎಂದು ಹೊರ ಜಗತ್ತಿಗೆ ತಿಳಿಯುಮದಿಲ್ಲ. ಮುಚ್ಚಿದ ಕ್ಯಾಬ್‌, ಲಾರಿ, ಮಾರುತಿ ಕಾರ್ಗೋ ಓಮ್ನಿ ಅಥವಾ ಟೆಂಪೋ ರಿಕ್ಷಾದಂತಹ ವಾಹನಗಳಿಗೆ ಕಿಟಕಿಯೇ ಇರುಮದಿಲ್ಲ. ಆದ್ದರಿಂದ ಒಳಗೆ ಕುಳಿತ ಖ್ಯಾತನಾಮರು ಹೊರಗಿನ ಜನರಿಗೆ ಕಾಣಿಸುಮದಿಲ್ಲ. ಇದರಿಂದ ಖ್ಯಾತನಾಮರು ನಿರಾಳವಾಗಿ ಓಡಾಡಬಹುದು. ಅಲ್ಲದೇ, ಓಡಾಡುವಾಗ ಪ್ರೆೃವಸಿ ಬೇಕು ಎನ್ನುವ ಕುಟುಂಬಗಳೂ ಸಹ ಇಂತಹ ಸರಕು ಸಾಗಣೆ ವಾಹನವನ್ನೇ ಬಳಸಬಹುದು.

ಗೊಂದಲ ೪ : ಪಾರದರ್ಶಕ ಗಾಜುಗಳಿದ್ದರೆ ರಾತ್ರಿ ವೇಳೆ ಮಹಿಳೆಯರು ಕಾರು ಓಡಿಸುಮದು ಕಷ್ಟ. ಏಕೆಂದರೆ, ಮಹಿಳೆಯರು ಕಾರು ಓಡಿಸುಮದು ಕಂಡರೆ ಪುಂಡರಿಂದ ಆಪಾಯ ಆಗಬಹುದು. ಇದರಿಂದ ಮಹಿಳೆಯರಿಗೆ ರಾತ್ರಿ ಕಾರು ಓಡಿಸಲು ಭಯವಾಗುತ್ತದೆ.

ಉತ್ತರ: ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಇರುಮದು ಬಿಟ್ಟು ಯಾಕೆ ಕಾರು ಓಡಿಸಬೇಕು? ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ರಾಮಾಯಣದಲ್ಲಿ ಲಕ್ಷ್ಮಣ ರೇಖೆಯನ್ನು ದಾಟಿ ಸೀತೆಗೆ ಯಾವ ಗತಿ ಬಂತು ಗೊತ್ತಲ್ಲ? ಹಾಗೆ, ಈಗ ಮಹಿಳೆಯರು ಮನೆ ಬಿಟ್ಟು ಹೊರಗೆ ಬರಬಾರದು. ಅದರಲ್ಲೂ ಸುಂದರ ಯುವತಿಯರು ಹೊರ ಬಂದರೆ, ಯುವಕರು ಕೋತಿಗಳಂತೆ ಆಗುತ್ತಾರೆ. ಆ ಯುವತಿಯರು ಮಿನಿ ಫ್ಯಾಷನ್‌ ಬಟ್ಟೆ ತೊಟ್ಟರಂತೂ ಪಡ್ಡೆಗಳು ಕೋತಿಗಳಿಗೆ ಸುರೆ ಕುಡಿಸಿದಂತೆ ಕುಣಿಯುತ್ತಾರೆ. ಇನ್ನು, ಯವತಿಯರು ಒಂದು ಕುಡಿನೋಟ ಹಾಯಿಸಿ, ಮುಗುಳು ನಗು ಬೀರಿ, ಎರಡು ಮಾತು ಆಡಿದರಂತೂ ಮುಗಿದೇಹೋಯಿತು. ಹುಡುಗರು ಎಂಥ ಅನರ್ಥಕ್ಕೂ ಕೈಹಾಕುತ್ತಾರೆ. ಹಾಗೆ ನೋಡಿದರೆ, ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಚೆಲ್ಲುಚೆಲ್ಲಾಗಿ ಓಡಾಡುಮದರಿಂದಲೇ ಎಂಬುದು ಒಂದು ಪೊಲೀಸ್‌ ಅಂದಾಜು. ಆದ್ದರಿಂದ, ಮಹಿಳೆಯರು ಮನೆಯಿಂದ ಹೊರಕ್ಕೆ ಬರಲೇಬಾರದು. ಬಂದರೂ ಸಾಯಂಕಾಲದ ನಂತರ ಮಹಿಳೆಯರು ಮನೆಯೊಳಗೇ ಇರಬೇಕು. ಆಗ ಮಹಿಳೆಯರ ಮೇಲಿನ ದೌರ್ಜನ್ಯ ಶೇ.೯೦ರಷ್ಟು ಕಡಿಮೆಯಾಗುತ್ತದೆ. ಈ ಬಗ್ಗೆ ಪೊಲೀಸರು ಒಂದು ನಿಷೇಧಾಜ್ಞೆ ಹೊರಡಿಸಬೇಕು. ಇದಕ್ಕೆ ಪೊಲೀಸರು ಓಬಿರಾಯನ ಕಾಲದ ಲಾ ಆಂಡ್‌ ಆರ್ಡರ್‌ನ ಯಾಮದಾದರೂ ಐಪಿಸಿ ಸೆಕ್ಷನ್ನನ್ನು ತೋರಿಸಬಹುದು.

ಗೊಂದಲ ೫ : ದುಷ್ಕರ್ಮಿಗಳು ಕಿಟಕಿ ಇರುವ ವಾಹನಬಿಟ್ಟು, ಬೆಡ್‌ರೂಮ್‌ನಷ್ಟು ಸ್ಥಳಾಕಾವಕಾಶ ಇರುವ ಲಾರಿಯಂಥ ಸರಕು ಸಾಗಣೆ ವಾಹನ ಬಳಸಿ, ಮಹಿಳೆಯನ್ನು ಅಪಹರಣ ಮಾಡಿ, ಅದರಲ್ಲಿ ಅತ್ಯಾಚಾರ ಮಾಡಬಹುದಲ್ಲ! ಆಗ ಟಿಂಟೆಡ್‌ ಗ್ಲಾಸ್‌ ನಿಷೇಧದಿಂದ ಏನು ಪ್ರಯೋಜನ?

ಉತ್ತರ: ಅದೆಲ್ಲ ನಮಗೆ ಗೊತ್ತಿಲ್ಲ. ನಮ್ಮ ಕಾನೂನು ಇರುಮದು ಕಿಟಕಿ ಇರುವ ವಾಹನಗಳಲ್ಲಿ ಅತ್ಯಾಚಾರ, ಅಪಹರಣ ಮತ್ತಿತ್ಯಾದಿ ದುಷ್ಕರ್ಮ ತಡೆಯಲು ಮಾತ್ರ. ಅದಕ್ಕಾಗಿ, ಮುಂದಿನ ದಿನಗಳಲ್ಲಿ ’ಸರಕು ಸಾಗಣೆ ವಾಹನಕ್ಕೂ ಬಸ್‌ನಂತೆ ಕಿಟಕಿಗಳು ಇರಬೇಕು ಹಾಗೂ ಅಮಗಳಿಗೆ ಟಿಂಟೆಡ್‌ ಗ್ಲಾಸ್‌ ಇರಬಾರದು’ ಎಂದು ಇನ್ನೊಂದು ಆದೇಶ ಹೊರಡಿಸಿ ಆ ಸರಕು ಸಾಗಣೆ ವಾಹನಗಳನ್ನೂ ಟಿಂಟೆಡ್‌ ಗ್ಲಾಸ್‌ ಕಾನೂನಿನ ವ್ಯಾಪ್ತಿಗೆ ತರಬಹುದು. ಅಲ್ಲಿವರೆಗೂ ದುಷ್ಕರ್ಮಿಗಳು ತಮ್ಮ ಕೃತ್ಯವನ್ನು ಸರಕು ಸಾಗಣೆ ವಾಹನಗಳಲ್ಲಿ ನಡೆಸಬಹುದು.

ಗೊಂದಲ ೬ : ಟಿಂಟೆಡ್‌ ಗ್ಲಾಸ್‌ ಇಲ್ಲದಿದ್ದರೂ ದುಷ್ಕರ್ಮಿಗಳು ರಾಜಾರೋಷವಾಗಿ ಪಾರದರ್ಶಕ ಕಿಟಕಿಗಳ ವಾಹನಗಳಲ್ಲೇ ಬಂದು ಅಪರಾಧ ನಡೆಸುವ ಎಷ್ಟೋ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ತೋರಿಸುತ್ತಾರಲ್ಲ? ಅಪರಾಧಕ್ಕೂ ಟಿಂಟೆಡ್‌ ಗ್ಲಾಸಿಗೂ ಏನು ಸಂಬಂಧ?

ಉತ್ತರ: ಚಲನಚಿತ್ರಗಳೇ ಬಹುತೇಕ ಅಪರಾಧಗಳಿಗೆ ಕಾರಣ ಎಂದು ಇನ್ನೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಬೆಂಗಳೂರಿನಲ್ಲಿ ಎಲ್ಲಾ ಚಲನಚಿತ್ರಗಳ ಪ್ರದರ್ಶನವನ್ನೂ ನಿಷೇಧಿಸಬಹುದು. ಟಿಂಟೆಡ್‌ ಗ್ಲಾಸ್‌ ನಿಷೇಧಿಸಿದ ಪೊಲೀಸರಿಗೆ ಇದೇನೂ ದೊಡ್ಡ ಕೆಲಸವಲ್ಲ! ಇದಕ್ಕೆ ಕಾನೂನು ತೊಡಕೂ ಇಲ್ಲ. ಓಬಿರಾಯನ ಕಾಲದ ಕಾನೂನಿನ ಪ್ರಕಾರ ಅಪರಾಧಕ್ಕೆ ಪ್ರಚೋದನೆ ನೀಡುವ ಯಾಮದೇ ವಿಷಯವನ್ನೂ ನಿಷೇಧಿಸಲು ಪೊಲೀಸರಿಗೆ ಅವಕಾಶವಿದೆ.
ನನ್ನ ಈ ಸಲಹೆಗಳನ್ನು ತಾಮ ಜಾರಿಗೊಳಿಸಿದರೆ ತಾಮ ಸಾಂಗ್ಲಿಯಾನಾ ಅವರಿಗಿಂತಲೂ ಖ್ಯಾತರಾಗುಮದು ಶತಃಸಿದ್ಧ.
ತಮ್ಮ ಇನ್ನಷ್ಟು ಜನರಂಜನಾ ಸೇವೆಗೆ ಶುಭವಾಗಲಿ.

ಇಂತಿ ತಮ್ಮ ಅಭಿಮಾನಿ
ಕೋಲ್ಯ ಸಿಂಗ್‌



Kannada Prabha issue dated January 16, 2006
Women Coming Out of House is Banned

--

No comments: