Tuesday, January 31, 2006

ಕೆಡವೋಣು ಬಾರಾ... ಕೆಡವೋಣು ಬಾ...

ಎಲ್‌-ಬೋರ್ಡ್‌ ಸರ್ಕಾರ ಕೆಡವಲು ಐದು ಐಡಿಯಾಗಳು
ಅಕಅಶಒ ಕಾರ್ಯದರ್ಶಿ ಪತ್ರ


ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಿಳಿಸಲು ನಮಗೆ ಹರ್ಷವೆನಿಸುತ್ತಿದೆ. ನಮ್ಮ ಒಕ್ಕೂಟದ ಅಧ್ಯಕ್ಷರು, ಸರ್ಕಾರ ಬೀಳಿಸುವ ೫ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.


ಅತೃಪ್ತ ಶಾಸಕರೇ ನಂ ನಮಸ್ಕಾರ ನಿಮಗ...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವಂತೆ ಹಳೆ ಸರ್ಕಾರ ಬಿದ್ದರೂ ಹೊಸ ಸರ್ಕಾರ ಬರುತಿದೆ. ಅದರ ಹಿಂದೆ ಅತೃಪ್ತಿಯನ್ನೂ ಹೊಸತು ಹೊಸತು ತರುತಿದೆ!

ಪ್ರಿಯ ಅತೃಪ್ತ ಮಿತ್ರರೇ, ಕರ್ನಾಟಕದಲ್ಲಿ ಏನು ಆಗುಮದು ಬೇಡ ಎಂದು ನಾಮ ಅಂದುಕೊಂಡಿದ್ದೆವೋ ಅದೇ ಆಗಿಹೋಗಿದೆ. ಧರ್ಮಸಿಂಗ್‌ ಸರ್ಕಾರವನ್ನು ಬೀಳಿಸುವ ನಮ್ಮ ಉದ್ದೇಶ ಈಡೇರಿದೆ. ಆದರೆ, ಇನ್ನೊಂದು ಸರ್ಕಾರ ರಚನೆ ಆಗದಂತೆ ತಡೆಯಲು ನಮ್ಮಿಂದ ಆಗಲಿಲ್ಲ. ನಮ್ಮೆಲ್ಲ ಪ್ರಯತ್ನವನ್ನೂ ಮೀರಿದ ’ಅಗೋಚರ ದೇವ’ಶಕ್ತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.

ಈ ಬೆಳವಣಿಗೆಯಿಂದ ನಮ್ಮಂತೆ ನೀಮ ಸಹ ಅತೃಪ್ತರಾಗಿದ್ದೀರಿ ಅಥವಾ ಆಗಲಿದ್ದೀರಿ ಅಂತ ನಮಗೆ ಗೊತ್ತು. ನಮ್ಮ ನಮ್ಮ ಅತೃಪ್ತಿಗಳಿಗೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ, ನಮ್ಮೆಲ್ಲರ ಅತೃಪ್ತಿ ಮಾತ್ರ ಒಂದೇ ತಾನೇ? ಈ ಹಿನ್ನೆಲೆಯಲ್ಲಿ ನಾಮ ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ ’ಅಕಅಶಒ’ ರಚಿಸಲು ಉದ್ದೇಶಿಸಿದ್ದೇವೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಅವರು ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಮಗೆ ತಿಳಿಸಲು ನಮಗೆ ಹರ್ಷವೆನಿಸುತ್ತಿದೆ.

ಈ ಒಕ್ಕೂಟಕ್ಕೆ ಪಕ್ಷ, ಜಾತಿ ಹಾಗೂ ಸಿದ್ಧಾಂತಗಳ ಭೇದವಿಲ್ಲ. ತಮಗೆ ಈ ಸರ್ಕಾರದ ಬಗ್ಗೆ ಅತೃಪ್ತಿಯೊಂದಿದ್ದರೆ ಸಾಕು. ತಮ್ಮನ್ನು ಈ ಒಕ್ಕೂಟದ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುಮದು.

ನಮ್ಮ ಒಕ್ಕೂಟದ ಸ್ಥಾಪಕ ಸದಸ್ಯರು, ಸರ್ಕಾರ ಬೀಳಿಸುವ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.

ಈ ಯೋಜನೆಯ ೫ ಪ್ರಮುಖ ಹಂತಗಳು ಹೀಗಿವೆ:

೧. ಮಂತ್ರಿಗಿರಿ ಅತೃಪ್ತಿ
ಮಂತ್ರಿ ಮಂಡಳ ಹಂಚಿಕೆ ವಿಚಾರವಾಗಿ ಹೊಸ ಮೈತ್ರಿ ಪಕ್ಷಗಳಲ್ಲಿ ಶೀಘ್ರವೇ ಕೆಲಮ ಶಾಸಕರಿಗೆ ಅತೃಪ್ತಿ ಉಂಟಾಗಲಿದೆ. ಅಂಥವರಿಗೆ ಉತ್ತೇಜನ ನೀಡಿ, ಅತೃಪ್ತಿಯನ್ನು ಹೆಚ್ಚಿಸುಮದು ನಮ್ಮ ತಕ್ಷಣದ ಕಾರ್ಯತಂತ್ರ.

೨. ಕಾಮನ್‌ ಮಿನಿಮಮ್‌ ಅತೃಪ್ತಿ:
ಜಾತ್ಯತೀತಾತೀತ ಜನತಾದಳ ಮತ್ತು ರಾಮವಾದಿ ಪಕ್ಷ ಸದ್ಯವೇ ತಮ್ಮ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿವೆ. ಈ ಸಂದರ್ಭದಲ್ಲಿ, ಜಾತ್ಯತೀತಾತೀತ ದಳಕ್ಕೆ ದೇವೇಗೌಡರ ಪರೋಕ್ಷ ನೆರಮ ಸಿಗುವಂತೆ ನಾಮ ಕಾರ್ಯತಂತ್ರ ರೂಪಿಸಬೇಕು. ಆಗ ಹೊಸ ದೋಸ್ತಿಗಳ ನಡುವೆ ಅಸಮಾಧಾನ ಆರಂಭವಾಗುತ್ತದೆ!

ಇಲ್ಲದಿದ್ದರೆ, ಹೊಸ ದೋಸ್ತಿಗಳ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ಸುಲಭವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ಕುಮಾರಸ್ವಾಮಿ ಬಣದಲ್ಲಿ ಈಗ ಯಾಮದೇ ಮಹಾನ್‌ ರಾಷ್ಟ್ರ ನಾಯಕರೂ ಇಲ್ಲ. ಇರುವ ಎಲ್ಲರೂ ಸಣ್ಣ ಪುಟ್ಟ ಲೋಕಲ್‌ ನಾಯಕರೇ. ಆದರೆ, ಬಿಜೆಪಿಯಲ್ಲಿ ಹಾಗಲ್ಲ... ದೊಡ್ಡ ನಾಯಕರ ದೊಡ್ಡ ಬ್ಯಾಚೇ ಇದೆ. ಈ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ರೂಪಿಸುವಾಗ ಬಿಜೆಪಿ ಪರವಾಗಿ ಈ ದೊಡ್ಡ ನಾಯಕರ ಬ್ಯಾಚು, ಕುಮಾರಸ್ವಾಮಿಯವರ ಲೋಕಲ್‌ ನಾಯಕರ ಮೇಲೆ ಸುಲಭವಾಗಿ ಒತ್ತಡ ಹಾಕುಮದು ಖಚಿತ. ಅದರಲ್ಲೂ ’ವೀರ ಕನ್ನಡಿಗ’ ಕುಮಾರಸ್ವಾಮಿಯವರ ಮುಂದೆ ಜೇಟ್ಲಿ, ವೆಂಕಯ್ಯ ನಾಯ್ಡು, ವಾಜಪೇಯಿ ಮುಂತಾದವರೆಲ್ಲ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ವಾಗ್ಝರಿ ಹರಿಸುತ್ತಾರೆ. ಆಗ, ಆ ಒತ್ತಡ ತಾಳಲಾರದೇ, ಈ ಲೋಕಲ್‌ ನಾಯಕರು ದೊಡ್ಡ ನಾಯಕರು ಹೇಳಿದ್ದಕ್ಕೆ ಸುಲಭವಾಗಿ ತಲೆಯಾಡಿಸುತ್ತಾರೆ. ತಲೆಯಾಡಿಸಲಿಲ್ಲ ಎಂದರೆ ಬಿಜೆಪಿ ನಾಯಕರು ಬೆಂಬಲ ಹಿಂತೆಗೆದುಕೊಳ್ಳುಮದಾಗಿ ಬೆದರಿಸುತ್ತಾರೆ. ಆಗ, ಕುಮಾರಸ್ವಾಮಿ ಪಕ್ಷದವರು ಬಿಜೆಪಿ ಹೇಳಿದ ಕಾಮನ್‌ ಮಿನಿಮಮ್‌ ಪ್ರೋಗ್ರಾಮ್‌ಗೆ ಒಪುý್ಪತ್ತಾರೆ. ಇದು ಒಂಥರಾ ಅತೃಪ್ತಿಗೆ ಕಾರಣವಾಗುತ್ತದೆ. ಇದನ್ನು ನಾಮ ಪೊರೆದು ಪೋಷಿಸಬೇಕು. ಅಲ್ಲದೇ, ಈ ಮಿನಿಮಮ್‌ ಪ್ರೋಗ್ರಾಂ ವಿಷಯದಲ್ಲಿ ಎಷ್ಟು ಮ್ಯಾಕ್ಸಿಮಮ್‌ ಆಗುತ್ತದೋ ಅಷ್ಟು ಭಿನ್ನಾಭಿಪ್ರಾಯ ಉಂಟಾಗುವಂತೆ ನಾಮ ಮಾಡಬೇಕು. ಆಮೇಲೆ, ಜಾತ್ಯತೀತರು ಕೋಮುವಾದಿಗಳ ಒತ್ತಡಕ್ಕೆ ಮಣಿದರು ಎಂದು ನಾಮ ಪ್ರಚಾರ ಮಾಡಬೇಕು. ಆಗ ದೋಸ್ತಿಗಳಲ್ಲಿ ಅತೃಪ್ತಿ ಹೆಚ್ಚಾಗುತ್ತದೆ. ಒಂದು ವೇಳೆ ಈ ಹಂತದಲ್ಲಿ ಕುಮಾರ ಪಕ್ಷದ ಏಕೈಕ ರಾಷ್ಟ್ರನಾಯಕ ದೇವೇಗೌಡರು ಪರೋಕ್ಷವಾಗಿ ನೆರಮ ನೀಡಿದರೆ, ಬಿಜೆಪಿಯವರಲ್ಲಿ ತಾನೇ ತಾನಾಗಿ ಅತೃಪ್ತಿ ಹೆಚ್ಚಾಗುತ್ತದೆ. ಅದೇನೇ ಆದರೂ ನಮಗೆ ಅನುಕೂಲ.

೩. ಮೆಟ್ರೋ ಮತ್ತು ನಕ್ಸಲರ ಅತೃಪ್ತಿ
ತಂದೆಯವರಿಂದ ಭೇಷ್‌ ಅನ್ನಿಸಿಕೊಳ್ಳುವಂಥ ಆಡಳಿತ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅದರ ಅರ್ಥ, ಕುಮಾರಸ್ವಾಮಿಯವರು ಮೆಟ್ರೋ ರೈಲನ್ನು ಕ್ಯಾನ್ಸಲ್‌ ಮಾಡಿ ಮಾನೋ ರೈಲಿಗೆ ಟಿಕೆಟ್‌ ನೀಡಬೇಕು. ಅದು ಬಿಜೆಪಿ ವಿರುದ್ಧ ನಿರ್ಧಾರ. ಅದೇ ರೀತಿ ನಕ್ಸಲರ ನಿಗ್ರಹದ ಬಗ್ಗೆ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಐತ್ರಿ! ಇದು ಅತೃಪ್ತಿಗೆ ಕಾರಣವಾಗುಮದು ಗ್ಯಾರಂಟಿ. ನಾಮ ಅದಕ್ಕೆ ಉಪುý್ಪ ಖಾರ ಸೇರಿಸಬೇಕು.

೪. ರಾಮಾಯಣ ಮತ್ತು ನಾರಾಯಣ ಅತೃಪ್ತಿ
ಬಿಜೆಪಿಯ ರಾಮಾಯಣದ ಪರಿಣಾಮ ಬಾಬಾಬುಡನ್‌ಗಿರಿ, ಹುಬ್ಬಳ್ಳಿಯ ಈದ್ಗಾ ಮೈದನದಲ್ಲಿ ಆಗುಮದು ಖಚಿತ. ಇದಕ್ಕೆ ಜಾತ್ಯತೀತ ಕುಮಾರಸ್ವಾಮಿ ಗ್ಯಾಂಗು ಅತೃಪ್ತಿಯಿಂದ ಪ್ರತಿರೋಧ ವ್ಯಕ್ತಪಡಿಸದೇ ಇದ್ದೀತೇ? ಆಹಾ... ಈ ಅತೃಪ್ತ ಹೊಗೆಯನ್ನು ನಾಮ ತೀವ್ರಗೊಳಿಸಬೇಕು. ಇತ್ತ ಕುಮಾರಸ್ವಾಮಿಯವರು ಪಿತೃವಾಕ್ಯ ಪರಿಪಾಲನಾರ್ಥಾಯ ದರಿದ್ರನಾರಾಯಣ ವ್ರತ ಕೈಗೊಳ್ಳುಮದು ಕಷ್ಟವಾಗಲಾರದು. ಆದರೆ, ಐಟಿ ನಾರಾಯಣರನ್ನು ಕುಮಾರಸ್ವಾಮಿ ಒಲಿಸಿಕೊಳ್ಳದಿದ್ದರೆ ನಷ್ಟ. ಒಲಿಸಿಕೊಂಡರೆ ಗೌಡರಿಂದ ಕಷ್ಟ. ಪತ್ರದ ಮೇಲೆ ಪತ್ರ. ಗೋಷ್ಠಿಯ ಮೇಲೆ ಪತ್ರಿಕಾಗೋಷ್ಠಿ. ದೇವೇಗೌಡರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ರಿಟೈರ್‌ ಆಗಿರಬಹುದು. ಆದರೆ, ಸರಣಿ ಪತ್ರ ಬರೆಯುವ ಕೃತ್ಯದಿಂದ ದೂರಾಗಿದ್ದಾರೆ ಎಂದುಕೊಳ್ಳಬೇಡಿ. ಗೌಡರ ಪತ್ರವನ್ನೇ ಮುಂದಿಟ್ಟುಕೊಂಡು ನಾಮ ಕುಮಾರಸ್ವಾಮಿಯವರ ಚಿಂತೆಗಳನ್ನು ಹೆಚ್ಚಿಸಬಹುದು. ಥ್ಯಾಂಕ್ಯೂ ಗೌಡಾಜೀ!

೫. ಬಿಸಿ ರಕ್ತದ ಅತೃಪ್ತಿ
ಈ ಸರ್ಕಾರದಲ್ಲಿ ಇರುವ ಬಹು ಪಾಲು ಶಾಸಕರು, ಮಂತ್ರಿಗಳು ಎಲ್ಲ ಯುವಕರು. ಮಂತ್ರಿಗಿರಿ ಹಾಗಿರಲಿ, ಕರೆಕ್ಟಾಗಿ ರಾಜಕೀಯದ ಅನುಭವ ಕೂಡ ಇಲ್ಲದವರು. ಎಲ್‌-ಬೋರ್ಡುಗಳು! ಅರ್ಥಾತ್‌... ಲರ್ನರ್ಸ್‌ ಲೈಸೆನ್ಸ್‌ನಲ್ಲೇ ಸರ್ಕಾರ ಚಲಾಯಿಸುವವರು. ಅದರಲ್ಲೂ ಬಿಸಿ ರಕ್ತದವರು. ಹೋರಾಟ ಮನೋಭಾವದವರು. ಕೆಲವರಂತೂ ಇನ್ನೂ ಟೀನ್‌ ಏಜ್‌ ಯುವಕರು. ಇವರನ್ನೆಲ್ಲ ಕೆರಳಿಸಿ ಬಿಡುಮದು ನಮಗೆ ಕಷ್ಟವೇನಲ್ಲ. ಬಿಸಿ ರಕ್ತವನ್ನು ಒಂದಷ್ಟು ಕುದಿಸಿ ಬಿಟ್ಟರೆ... ಸರ್ಕಾರ ಬೀಳಿಸುವ ನಮ್ಮ ಕೆಲಸ ಸಲೀಸು.

ಹಾಗಂತ, ಸರ್ಕಾರ ನಡೆಸಲು ಭಾರೀ ಅನುಭವ ಬೇಕು ಅಂತೇನಿಲ್ಲ. ಹೊಸ ಯುವಕರು ಮನಸ್ಸು ಮಾಡಿದರೆ ಉತ್ತಮ ಆಡಳಿತ ನೀಡಲೂಬಹುದು. ಇಡೀ ದೇಶದಲ್ಲಿ ಯುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಹುಲ್‌ ಗಾಂಧಿ ಎಂಬ ಯುವಕ ಹೇಗೆ ರಾಷ್ಟ್ರದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ ನೋಡಿ. ಕರ್ನಾಟಕದಲ್ಲೂ ಯುವ ರಾಜಕಾರಣಿಗಳ ಟ್ರೆಂಡ್‌ ಇದೆ. ಆದರೆ, ಈ ಯುವ ರಾಜಕಾರಣಿಗಳನ್ನು ರಾಹುಲ್‌ ಗಾಂಧಿಯಂತೆ ಬೆಳೆಸಲು ಯಾರೂ ಯತ್ನಿಸುತ್ತಿಲ್ಲ. ನಾವೂ ಅಷ್ಟೇ... ಈ ಯುವ ರಾಜಕಾರಣಿಗಳು ಪಕ್ಕಾ ನಾಯಕರಾಗಿ ಬೆಳೆಯದಂತೆ ಎಚ್ಚರ ವಹಿಸಬೇಕು. ಈ ಯುವ ರಾಜಾಕಾರಣಿಗಳು ಚಿಲ್ಲರೆ ಪೊಲಿಟ್ರಿಕ್ಸ್‌ನಲ್ಲೇ ಬ್ಯುಸಿಯಾಗಿರುವಂತೆ ನಾಮ ಮುತುವರ್ಜಿ ವಹಿಸಬೇಕು. ಆಗ ಮಾತ್ರ ನಮ್ಮಂಥ ಅತೃಪ್ತರಿಗೆ ಉಜ್ವಲ ಭವಿಷ್ಯವಿರುತ್ತದೆ. ಇಲ್ಲವಾದರೆ, ನಮ್ಮಂಥ ಅನುಭವಿ, ಸದಾ ಅತೃಪ್ತ ರಾಜಕಾರಣಿಗಳಿಗೆ ಅಪಾಯ ಕಾದಿದೆ!

ಅದಕ್ಕೇ... ಈ ಯುವಕರ ಸರ್ಕಾರವನ್ನು ಕೆಡವೋಣು ಬಾರಾ... ಕೆಡವೋಣು ಬಾ!

ಇಂತಿ
ಸಂಘಟನಾ ಕಾರ್ಯದರ್ಶಿ
ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ



Kannada Prabha issue dated January 30, 2006

Let's Pull it Down... Let's Pull it Down...

--

No comments: