Tuesday, January 24, 2006

ಕಾಂಗ್ರೆಸ್‌ ರಾಜಕಾರಣಕ್ಕೆ ವಿಶ್ವನಾಥನ್‌ ಆನಂದ್‌ ನೆರಮ

ದೇವೇಗೌಡರ ‘ಫೋರ್ಕ್‌’ ಅರ್ಥ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಚೆಸ್‌ ಗ್ರಾಂಡ್‌ ಮಾಸ್ಟರ್‌ಗೆ ಮಾತ್ರ ಸಾಧ್ಯ!

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಇಂಥ ಭಯಂಕರ ಫೋರ್ಕ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ಫೋರ್ಕ್‌ ಎದರಿಸಲು ವಿಶ್ವ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ಗೆ ಮಾತ್ರ ಸಾಧ್ಯ!



ಗೆ-
ಸ್ಯಾಮ್‌ ಪಿತ್ರೊಡ
ರಾಜೀವ್‌ ಗಾಂಧಿಯವರ ಮಾಜಿ ತಾಂತ್ರಿಕ ಸಲಹೆಗಾರರು

ಇಂದ-
ನರಾರ್ದನ ಪೂಜಾರಿ
ಕಾಂಗ್ರೆಸ್‌ ಕಾರ್ಯಕರ್ತರು, ಕರ್ನಾಟಕ

ಮಾನ್ಯರೇ,
ತಾಮ ಶ್ರೀಯುತ ರಾಜೀವ್‌ ಗಾಂಧಿಯವರ ಮಿತ್ರರಾಗಿ ಇದ್ದಂಥವರು. ಅಷ್ಟೇ ಅಲ್ಲ... ಶ್ರೀ ರಾಜೀವ್‌ಜೀಯವರ ತಾಂತ್ರಿಕ ಸಲಹೆಗಾರರಾಗಿ ಇದ್ದಂಥವರು. ಮಾನ್ಯ ರಾಜೀವ್‌ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಲೆಯಲ್ಲಿ ೨೧ನೇ ಶತಮಾನದ ಕಂಪ್ಯೂಟರ್‌ ಚಿಪ್‌ಗಳನ್ನು ಅಳವಡಿಸಿದಂಥವರು. ಪಬ್ಲಿಕ್‌ ಟೆಲಿಫೋನ್‌ ಬೂತ್‌ ಎನ್ನತಕ್ಕಂಥ ಕಲ್ಪನೆಯನ್ನು ಶ್ರೀ ರಾಜೀವ್‌ ಗಾಂಧಿಯವರ ಮೂಲಕ ಈ ದೇಶಕ್ಕೆ ಪರಿಚಯಿಸಿರತಕ್ಕಂಥವರು. ಈ ಮೂಲಕ... ಭಾರತದಲ್ಲಿ ದೂರಸಂಪರ್ಕ ಎನ್ನತಕ್ಕಂಥ ಕ್ರಾಂತಿಗೆ ಕಾರಣರಾಗಿರತಕ್ಕಂಥವರು. ಈಗ ಶ್ರೀಮತಿ ಸೋನಿಯಾಜೀ ಹಾಗೂ ಶ್ರೀ ರಾಹುಲ್‌ಜೀ ಏನಿದ್ದಾರೆ.... ಅವರ ನಿಕಟವರ್ತಿಯಾಗಿದ್ದೀರಿ. ತಾಮ ಮಾತನಾಡತಕ್ಕಂಥ ಮಾಡರ್ನ್‌ ಮಾತುಗಳು ಏನಿವೆ... ಅವನ್ನ ಶ್ರೀಮತಿ ಸೋನಿಯಾಜೀಯವರೂ, ಶ್ರೀ ರಾಹುಲ್‌ ಗಾಂಧಿಯವರೂ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಾರೆ.

ಆದ್ದರಿಂದ ನಾನು ನಿಮ್ಮಲ್ಲಿ ನಿವೇದನೆ ಮಾಡಿಕೊಳ್ಳತಕ್ಕಂಥದ್ದು ಏನಿದೆ ಅಂದರೆ, ದಯವಿಟ್ಟು ತಾಮ ಕರ್ನಾಟಕ ಕಾಂಗ್ರೆಸ್‌ನ ನೆರವಿಗೆ ಬರಬೇಕು. ಇದನ್ನ ನಾನು ನರಾರ್ದನ ಪೂಜಾರಿ ಮಾತ್ರ ಅಲ್ಲ, ಇಡೀ ಕರ್ನಾಟಕ ರಾಜ್ಯವೆ... ಬಹಳ ಕಳಕಳಿಯಿಂದ ಬೇಡಿಕೊಳ್ಳುತ್ತಿದೆ.

ಹಾಗೆಂದಾಕ್ಷಣ, ನಾವೇನು ರಾಜಕೀಯ ಮಾಡ್ತೇವೆ ಆ ರಾಜಕೀಯವನ್ನು ನೀವೂ ಮಾಡಬೇಕು ಅಂತಾ ಹೇಳ್ತಾ ಇಲ್ಲ. ನೀವೇನು ಮಾಡಬೇಕು? ಒಂದು ಸಣ್ಣ ಸಹಾಯ ಮಾಡಬೇಕು. ಏನದು? ಶ್ರೀಮತಿ ಸೋನಿಯಾಜೀಯವರು, ಶ್ರೀ ರಾಹುಲ್‌ ಗಾಂಧಿಯವರೂ ಏನಿದ್ದಾರೆ... ಅವರಿಗೆ ಒಂದು ಮಾತು ಹೇಳಬೇಕು. ಯಾವ ಮಾತು?

ವಿಶ್ವನಾಥನ್‌ ಆನಂದ್‌ ಏನಿದ್ದಾರೆ... ಅಂತಾರಾಷ್ಟ್ರೀಯ ಚದುರಂಗ ಗ್ರಾಂಡ್‌ ಮಾಸ್ಟರ್‌... ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ವ್ಯವಹಾರಗಳಿಗೆ ಸಂಬಂಧಿಸಿ ಸೋನಿಯಾಜೀಯವರು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು.... ಈ ಮಾತನ್ನ ತಾಮ ಶ್ರೀಮತಿ ಸೋನಿಯಾಜೀ ಅವರಿಗೆ ಹೇಳಬೇಕು. ನೀಮ ನೀಡಿರತಕ್ಕಂಥ ಈ ಸಲಹೆ ಏನಿದೆ ಅದನ್ನ ಶ್ರೀಮತಿ ಸೋನಿಯಾಜಿಯವರು ಕೇಳ್ತಾರೆ.

ಈ ದೇವೇಗೌಡರು ಏನಿದ್ದಾರೆ... ಅವರ ಹಾವಳಿ ಭಾಳಾ ಆಗಿದೆ. ಅವರ ರಾಜಕೀಯ ಲೆಕ್ಕಾಚಾರ ಏನಿದೆ... ಅದು ಭಾಳ ಆಳವಾಗಿದೆ. ಅವರ ತಂತ್ರ ಕುತಂತ್ರ ಏನಿದೆ... ಅಮಗಳನ್ನ ಅರ್ಥ ಮಾಡಿಕೊಳ್ಳೋಕೆ... ಕರ್ನಾಟಕದ ಯಾಮದೇ ಕಾಂಗ್ರೆಸ್‌ ನಾಯಕರಿಗೂ ಆಗ್ತಾ ಇಲ್ಲ. ಕಾಂಗ್ರೆಸ್‌ ಅಷ್ಟೇ ಏನು... ಯಾವ ಪಕ್ಷದ ನಾಯಕರಿಗೂ ಆಗ್ತಾ ಇಲ್ಲ.

ಈ ದೇವೇಗೌಡರು ಏನಿದ್ದಾರೆ... ಅವರಿಗೆ ಉತ್ತರ ಕೊಟ್ಟೂ ಕೊಟ್ಟೂ... ನಮಗೆಲ್ಲ ಸಾಕಾಗಿದೆ. ಅವರ ತಂತ್ರಗಳು ಏನಿದ್ದಾವೆ... ಅಮಗಳಿಗೆ ಪ್ರತಿತಂತ್ರ ಹುಡುಕೀ ಹುಡುಕೀ ನಮಗೆ ಸುಸ್ತಾಗಿದೆ. ನಮ್ಮ ಬುದ್ಧಿಯೇನಿತ್ತು.... ಎಲ್ಲಾ ಖರ್ಚಾಗಿಹೋಗಿದೆ. ಆದರೆ, ಈ ಗೌಡರು ಏನಿದ್ದಾರೆ... ಅವರು ಒಬ್ಬರೇ ಕರ್ನಾಟಕದ ಎಲ್ಲಾ ರಾಜಕಾರಣಿಗಳನ್ನೂ ಒಂಟಿಯಾಗಿ ಆಡಿಸುತ್ತಿದ್ದಾರೆ!

ಗೌಡರು ಬಹುಶಃ ಅವರ ಶಾಲಾ, ಕಾಲೇಜು ದಿನಗಳಲ್ಲಿ ಚೆಸ್‌ ಛಾಂಪಿಯನ್‌ ಆಗಿದ್ರೂ ಅಂತ ಕಾಣುತ್ತೆ! ಅದಕ್ಕೇ... ದೇವೇಗೌಡರ ಪ್ರತಿ ರಾಜಕೀಯ ನಡೆಗಳು ಏನಿವೆ... ಅವೆಲ್ಲ ಪಕ್ಕಾ ಚದುರಂಗದ ನಡೆಗಳ ಹಾಗಿರುತ್ತವೆ. ಯಾವ ಕಾಯಿಯನ್ನು ಇಲ್ಲಿ, ಈಗ ನಡೆಸಿದರೆ... ಇಪ್ಪತ್ತು ನಡೆಯ ನಂತರ ಎಲ್ಲಿ ಯಾವ ಕಾಯಿ ಉದುರಿಹೋಗುತ್ತೆ... ಯಾವ ಕಾಯಿಯನ್ನು ಈಗ ಬಲಿಕೊಟ್ಟರೆ.... ಹತ್ತನೆ ನಡೆಯಲ್ಲಿ ಯಾವ ದೊಡ್ಡ ಕಾಯಿ ತಮಗೆ ಸಿಗುತ್ತೆ... ಅಂತ ಗೌಡರಿಗೆ ಕರೆಕ್ಟಾಗಿ ಲೆಕ್ಕ ಸಿಗುತ್ತೆ. ಅವರ ಈ ಪ್ರಮಾಣದ ಲೆಕ್ಕಾಚಾರ ಸಾಮರ್ಥ್ಯ ನೋಡಿದರೆ, ದೇವೇಗೌಡರು ಇಲ್ಲಿ ರಾಜಕೀಯಕ್ಕೆ ಬರದೇ ಇದ್ದಿದ್ದರೆ ಅವರು ಖಂಡಿತ ಕ್ಯಾಸ್ಪರೋವ್‌, ಕಾರ್ಪೋವ್‌ ಅವರನ್ನೆಲ್ಲ ನುಂಗಿ ನೀರು ಕುಡಿದು ವಿಶ್ವ ಗ್ರಾಂಡ್‌ ಮಾಸ್ಟರ್‌ ಆಗೇ ಬಿಡುತ್ತಿದ್ದರು ಅಂತ ನಾನು ಹೇಳುತ್ತೇನೆ!

ಅದಕ್ಕಾಗೇ... ನಾನು ಹೇಳೋದು ಇಷ್ಟೇ: ಗೌಡರಿಗೆ ನಾಮ ಪ್ರತಿತಂತ್ರ ಹೂಡಬೇಕು ಅಂದರೆ... ಕ್ಯಾಸ್ಪರೋವ್‌, ಕಾರ್ಪೋವ್‌ ಅವರಿಗಿಂತ ಬುದ್ಧಿವಂತ ಚೆಸ್‌ ಮಾಸ್ಟರನ್ನು ಕಾಂಗ್ರೆಸ್‌ ಪಕ್ಷ ಹಿಡಿಯಬೇಕು. ಗೌಡರಿಗಿಂತ ಚೆನ್ನಾಗಿ ಲೆಕ್ಕ ಹಾಕಬಲ್ಲ ಚೆಸ್‌ ಪಟು ಮಾತ್ರ ಕಾಂಗ್ರೆಸ್‌ನ ಷಡ್ಯಂತ್ರಗಳನ್ನು ರೂಪಿಸಬೇಕು. ಅಂಥ ವ್ಯಕ್ತಿಗಳು ಭಾರತದಲ್ಲಿ ಯಾರಾದರೂ ಇದ್ದಾರಾ... ಅಂತ ಹುಡುಕಿದರೆ ನಮಗೆ ಕಂಡಿದ್ದು ಒಂದೇ ಹೆಸರು... ಅದು ಸದ್ಯ ಜಗತ್ತಿನ ಅತಿ ಬುದ್ಧಿವಂತ ಚೆಸ್‌ ಪಟು... ವಿಶ್ವ ಗ್ರಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌!

ಆತ ಏನಿದ್ದಾನೆ.... ಆತ ಮಾತ್ರ ದೇವೇಗೌಡರ ಚಾಣಕ್ಯ ರಾಜಕೀಯ ನಡೆ ಎದುರಿಸಬಲ್ಲ ಅಂತ ತಾಮ ದಯವಿಟ್ಟು ಮೇಡಂ ಅವರಿಗೆ ಸಲಹೆ ನೀಡಬೇಕು. ಅಷ್ಟೇ ಅಲ್ಲ. ನೀಮ ಹೇಳಬೇಕು... ಆದಷ್ಟು ಬೇಗ ಅತಿ ಬುದ್ಧಿವಂತ ಚೆಸ್‌ ಪಟು ಕಾಂಗ್ರೆಸ್‌ನ ಸಲಹೆಗಾರ ಆಗದಿದ್ದರೆ, ಗೌಡರ ನಡೆಗಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಷ್ಟೇ ಅಲ್ಲ, ಎಲ್ಲ ಪಕ್ಷಗಳೂ ತರಗೆಲೆಗಳಾಗುತ್ತವೆ... ಅಂತ!

ಪಿತ್ರೊಡಾ ಅವರೇ,
ನಮ್ಮ ದಕ್ಷಿಣ ಕನ್ನಡದಲ್ಲಿ ಪತ್ರೊಡೆ ಅಂತ ಒಂದು ತಿನಿಸಿದೆ. ನಿಮ್ಮ ಹೆಸರು ಏನಿದೆ... ಅದು ಸ್ಪಲ್ಪ ಪತ್ರೊಡೆ ಥರ ಕೇಳಿಸ್ತದೆ. ಹಾಗಾಗಿ, ನಿಮ್ಮ ಹೆಸರು ನಮಗೆ ಭಾಳಾ ಇಷ್ಟ. ಅದಿರಲಿ... ಆ ವಿಷಯ ಈಗ ಬೇಡಾ. ನಾವೀಗ ಮಾತನಾಡಬೇಕಿರತಕ್ಕಂಥ ವಿಷಯ ಗೌಡರ ರಾಜಕೀಯ ಚದುರಂಗದ ಬಗ್ಗೆ.

ಈ ಗೌಡರು ಈಗೇನು ಮಾಡಿದ್ದಾರೆ... ಇದಕ್ಕೆ ಚೆಸ್‌ ಆಟದಲ್ಲಿ ಫೋರ್ಕ್‌ ಎನ್ನತಕ್ಕಂಥ ಹೆಸರಿದೆ. ಅಂದರೆ, ಚದುರಂಗದ ಕುದುರೆಯನ್ನು ಒಮ್ಮೆ ಹಾರಿಸಿದರೆ... ಎದುರಾಳಿಯ ಎರಡು ಕಾಯಿಗಳ ಮೇಲೆ ಏಕಕಾಲದಲ್ಲಿ ದಾಳಿಯಾಗುತ್ತದೆ. ಎದುರಾಳಿ ಒಂದು ಕಾಯಿಯನ್ನು ಈ ದಾಳಿಯಿಂದ ತಪ್ಪಿಸಿಕೊಂಡರೆ ಇನ್ನೊಂದು ಕಾಯಿ ಕುದುರೆಗೆ ಆಹುತಿಯಾಗುಮದಂತೂ ಗ್ಯಾರಂಟಿ.

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಒಂದು ಕಡೆ... ಆ ಕುಮಾರಸ್ವಾಮಿ ಏನಿದ್ದಾರೆ... ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇನೆ ಅಂತ ಜೆಡಿಎಸ್‌ ಶಾಸಕರನ್ನೂ ಹೈಜಾಕ್‌ ಮಾಡಿದ್ದಾರೆ. ಇನ್ನೊಂದು ಕಡೆ... ದೇವೇಗೌಡರು... ಸೋನಿಯಾ ಜೊತೆ ಮಾತುಕತೆಗೆ ಇಳಿದಿದ್ದಾರೆ. ತಮ್ಮ ಒಂಬತ್ತು ಷರತ್ತುಗಳಿಗೆ ಒಪ್ಪಿದರೆ... ಈಗಲೂ ಕಾಂಗ್ರೆಸ್‌ ಜೊತೆಯೇ ಸರ್ಕಾರ ಮಾಡುತ್ತೇನೆ ಅಂತ ಭಾಷೆ ಕೊಟ್ಟಿದ್ದಾರೆ. ಆ ಕುಮಾರ ನನ್ನ ಮಗ. ಆತ ನಾನು ಹೇಳಿದಂತೆ ಕೇಳುತ್ತಾನೆ...
ಯೂ ಡೋಂಟ್‌ ವರಿ ಅಂತ ಗೌಡರು ಪದೇ ಪದೇ ಹೇಳುತ್ತಿದ್ದಾರೆ. ಇದರ ಅರ್ಥವೇನು?

ಸೋನಿಯಾಜೀಯವರು ಗೌಡರ ಷರತ್ತಿಗೆ ಸೋತರೆ... ಈಗಿನ ರಾಜಕೀಯ ಆಟದಲ್ಲಿ ಎಸ್‌. ಎಂ. ಕೃಷ್ಣ ಅವರ ಗ್ಯಾಂಗು ಹಾಗೂ ಸಿದ್ದರಾಮಯ್ಯ ಗ್ಯಾಂಗು ಒಟ್ಟಿಗೇ ಬಲಿ! ಒಂದು ವೇಳೆ ಷರತ್ತಿಗೆ ಸೋನಿಯಾಜೀಯವರು ಸೋಲದಿದ್ದರೆ... ಕಾಂಗ್ರೆಸ್‌ ಅಧಿಕಾರವೇ ಬಲಿ! ಇದರರ್ಥ ಹೇಗೆ ನೋಡಿದರೂ ಕಾಂಗ್ರೆಸ್ಸಿಗೆ ಒಂದಲ್ಲ ಒಂದು ಲಾಸ್‌!

ಇಂಥ ಭಯಂಕರ ಫೋರ್ಕಿಂಗ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ನೂರಾರು ಫೋರ್ಕ್‌ಗಳನ್ನ ಎದುರಿಸಿ ಗೆದ್ದ ಅಭ್ಯಾಸವಿರುವ ವಿಶ್ವನಾಥನ್‌ ಆನಂದ್‌ ಅವರ ಸಲಹೆಯನ್ನು ಸೋನಿಯಾಜೀಯವರು ಪಡೆಯುವಂತೆ ನೀಮ ಮಾಡಬೇಕು. ಈ ಮೂಲಕ ನಮ್ಮನ್ನೆಲ್ಲ ನೀಮ ಕಾಪಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪರವಾಗಿ ನಾನು ನರಾರ್ದನ ಪೂಜಾರಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಜೈ ಹಿಂದ್‌, ಜೈ ಕರ್ನಾಟಕ


Kannada Prabha issue dated January 23, 2006
Vishwanathan Anand To Help Congress Politics Against H D Dewegowda

(In chess, a fork is a tactic that uses one piece to attack two or more of the opponent's pieces at the same time, to achieve material gain.)

--

No comments: