Showing posts with label Failure of Judiciary. Show all posts
Showing posts with label Failure of Judiciary. Show all posts

Tuesday, January 13, 2009

ದಿವಾಳಿ ಜಡ್ಜ್ !


ಭಾಗ - 9

ಅಮೆರಿಕದಲ್ಲಿ ಪೊಲೀಸ್ ಕಮಿಷನರ್ ಅಥವಾ ಕೋರ್ಟುಗಳ ನ್ಯಾಯಾಧೀಶರಾಗಲು ಸಾರ್ವಜನಿಕ ಚುನಾವಣೆಯಲ್ಲಿ ಗೆಲ್ಲಬೇಕು! ಇಂಥ ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ. ಅದಕ್ಕಿಂತ ಅಲ್ಲಿ ‘ದಿವಾಳಿ ಜಡ್ಜ್’ ಇದ್ದಾರೆ. ಗೊತ್ತೇ?


ನ್ನ ಅಜ್ಞಾನವೋ ಅಥವಾ ನಿಮಗೂ ಇದೊಂದು ಹೊಸ ವಿಷಯವೋ ಗೊತ್ತಿಲ್ಲ. ನನಗಂತೂ ಇದು ಸೋಜಿಗವೆನಿಸಿತು.

ಅಮೆರಿಕದ ಜಿಲ್ಲಾ ವರಿಷ್ಠಾಧಿಕಾರಿ ಹುದ್ದೆ ಹಾಗೂ ಕೋರ್ಟುಗಳ ನ್ಯಾಯಾಧೀಶರ ಹುದ್ದೆ ಜಗತ್ತಿನಲ್ಲೇ ವಿಶಿಷ್ಟ. ಏಕೆಂದರೆ, ಈ ಹುದ್ದೆಗಳಿಗೆ ಚುನಾವಣೆ ನಡೆಯುತ್ತದೆ. ನ್ಯಾಯಾಧೀಶರಾಗಲು ಬಯಸುವವರು ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಆಗಲು ಇಚ್ಚಿಸುವವರು ರಾಜಕಾರಣಿಗಳ ರೀತಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಬೇಕು. ಸ್ವಲ್ಪ ಹೆಚ್ಚು ಕಡಿಮೆ ರಾಜಕಾರಣಿಗಳ ರೀತಿಯೇ ಪ್ರಚಾರ ಮಾಡಬೇಕು. ಹಲವಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡಬೇಕು. ಹಾಗೂ ತಮ್ಮ ಅಧಿಕಾರಾವಧಿ ಮುಗಿದ ತಕ್ಷಣ ಅಧಿಕಾರ ಬಿಟ್ಟಿಳಿಯಬೇಕು. ಒಂದು ವೇಳೆ ಆಯ್ಕೆಯಾದ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನ್ಯಾಯಾಧೀಶ ಸರಿಯಾಗಿ ಕೆಲಸ ಮಾಡಲಿಲ್ಲ ಎಂದಾದರೆ ಆತನ್ನು ಜನರು ಮತ್ತೆ ‘ಕಾಲ್ ಬ್ಯಾಕ್’ ಮತದಾನ ಮಾಡಿ ಹುದ್ದೆಯಿಂದ ಕೆಳಗಿಳಿಸಬಹುದು. ಇಂಥದೊಂದು ಪದ್ಧತಿ ಅಮೆರಿಕದಲ್ಲಿ ಮಾತ್ರ ಇದೆ.

ಕಳೆದ ನವೆಂಬರ್ ೪ರಂದು ಅಧ್ಯಕ್ಷೀಯ ಚುನಾವಣೆಯ ಮತದಾನದ ಜೊತೆಯಲ್ಲೇ ಅಮೆರಿಕದ ಅನೇಕ ರಾಜ್ಯಗಳಲ್ಲಿ ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಆಯ್ಕೆಗೂ ಜನ ಓಟು ಹಾಕಿದರು.

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಎಂದರೆ ಜಗತ್ಪ್ರಸಿದ್ಧ. ಆದರೆ, ಅಲ್ಲಿ ಪ್ರತಿ ವರ್ಷ ನಡೆಯುವ ಇನ್ನಿತರ ಸಹಸ್ರಾರು ಚುನಾವಣೆಗಳ ಬಗ್ಗೆ ಬಹುಜನರಿಗೆ ಗೊತ್ತೇ ಆಗುವುದಿಲ್ಲ. ಅಮೆರಿಕಕ್ಕೆ ಹೋಗಿ ಬಂದ ಅನೇಕರು ವೈಟ್ ಹೌಸ್, ನಯಾಗರಾ ಫಾಲ್ಸು, ಡಿಸ್ನಿ ಲ್ಯಾಂಡು, ಹಾಲಿವುಡ್ಡು, ಲಾಸ್‌ವೇಗಾಸ್ ಅಂತೆಲ್ಲ ಸಾಕಷ್ಟು ಪ್ರವಾಸ ಕಥನ ಬರೆದಿದ್ದಾರೆ. ಆದರೆ, ಅಮೆರಿಕದ ನ್ಯಾಯಾಂಗ ಚುನಾವಣೆ ಅಥವಾ ಷರೀಫ್ ಚುನಾವಣೆ ಕುರಿತ ಬರಹವನ್ನು ನಾನಂತೂ ಓದಿರಲಿಲ್ಲ. ಅದಕ್ಕಾಗಿ, ಪೊಲೀಸ್ ವರಿಷ್ಠ ಹಾಗೂ ನ್ಯಾಯಾಧೀಶರ ಹುದ್ದೆಯ ಚುನಾವಣೆ ನನಗೆ ಸೋಜಿಗ ಎನಿಸಿತು.

ಇದ್ಯಾಕೆ ಹೀಗೆ? ಅಮೆರಿಕದಲ್ಲಿ ಮಾತ್ರ ಈ ವಿಶಿಷ್ಟ ಪದ್ಧತಿ ಯಾಕಿದೆ? ಎಂದು ವಾಷಿಂಗ್‌ಟನ್ ಡಿ.ಸಿ.ಯ ಕ್ಯಾಪಿಟಲ್ ಕಮ್ಯುನಿಕೇಶನ್ ಗ್ರೂಪ್‌ನ ನಿರ್ದೇಶಕರಲ್ಲೊಬ್ಬರಾದ ಅಕ್ರಂ ಎಲಿಯಾಸ್ ಅವರನ್ನು ಕೇಳಿದೆ.

That is the beauty of American Democracy ಎಂದರು ಅವರು.

ಅಮೆರಿಕದ ಜನತಂತ್ರ ಒಂದು ಸಂಪೂರ್ಣ ಪ್ರಜಾಪ್ರಭುತ್ವ ಮಾದರಿ. ಚೆಕ್ ಆಂಡ್ ಬ್ಯಾಲೆನ್ಸ್ ಹಾಗೂ ಎಲ್ಲಾ ಹಂತದಲ್ಲೂ ಪ್ರಜೆಗಳ ಅಭಿಪ್ರಾಯಕ್ಕೆ ಮಹತ್ವ ನೀಡುವುದು ಅಮೆರಿಕ ಪ್ರಜಾಪ್ರಭುತ್ವ ಪದ್ಧತಿಯ ಹೆಗ್ಗುರುತು. ಹಾಗಾಗಿ ಅಮೆರಿಕದಲ್ಲಿ ಜನಮತ ಗಣನೆಗಾಗಿ ನಡೆದಷ್ಟು ಚುನಾವಣೆಗಳು ಜಗತ್ತಿನ ಇನ್ಯಾವ ದೇಶದಲ್ಲೂ ನಡೆಯುವುದಿಲ್ಲ.

ಅಮೆರಿಕದಲ್ಲಿ, ತಮ್ಮ ಬಡಾವಣೆಯ ಮನೆಗಳಿಗೆ ನೀಲಿ ಬಣ್ಣದ ಬದಲು ಹಳದಿ ಬಣ್ಣ ಬಳಿಯೋಣವೇ ಎಂಬ ವಿಷಯದಿಂದ ಹಿಡಿದು ರಾಜ್ಯದ ಸುಪ್ರೀಂ ಕೋರ್ಟಿನ ಮುಖ್ಯನ್ಯಾಯಾಧೀಶರ ಆಯ್ಕೆಯವರೆಗೆ ವಿವಿಧ ವಿಷಯಗಳ ಕುರಿತು ಚುನಾವಣೆ ನಡೆಯುತ್ತದೆ.
ಹಾಗಾದರೆ, ಇರಾಕ್ ಮೇಲೆ ಯುದ್ಧ ಮಾಡಲು ಬುಷ್ ಯಾಕೆ ಜನಾಭಿಪ್ರಾಯ ಕೇಳಲಿಲ್ಲ ಎಂಬ ನನ್ನ ಪ್ರಶ್ನೆಗೆ ಎಲಿಯಾಸ್ ಉತ್ತರ ಒಂದು ದೊಡ್ಡ ನಗು!

ಕೌಂಟಿ ಷರೀಫ್

ನಮ್ಮ ಪೊಲೀಸ್ ಕಮಿಷನರ್ ಅಥವಾ ಎಸ್ಪಿ ಹುದ್ದೆಯ ಅಮೆರಿಕನ್ ಹೆಸರು ‘ಕೌಂಟಿ ಷರೀಫ್’. ಈತ ಆಯಾ ಜಿಲ್ಲೆಯ ಪೊಲೀಸ್ ವಿಭಾಗದ ಚುನಾಯಿತ ಮುಖ್ಯಸ್ಥ. ಈತನ ಅಡಿಯಲ್ಲಿ ಇಡೀ ಪೊಲೀಸ್ ಇಲಾಖೆ ಕೆಲಸ ಮಾಡುತ್ತದೆ. (ಈ ಹುದ್ದೆಗೆ ಸಮಾನಾಂತರವಾಗಿ ನನಗೆ ತಕ್ಷಣದ ಹೋಲಿಕೆ ಕಾಣಿಸಿದ್ದು ಬೆಂಗಳೂರಿನ ಮೇಯರ್ ಹುದ್ದೆ. ಮೇಯರ್ ಕೂಡ ಜನರಿಂದ ಆಯ್ಕೆಯಾದ ಪ್ರತಿನಿಧಿ ತಾನೇ? ಈತನ ಅಡಿಯಲ್ಲಿ ಇಡೀ ಮಹಾನಗರ ಪಾಲಿಕೆ ಕೆಲಸ ಮಾಡುತ್ತದೆ. ಅವಧಿ ಮುಗಿದ ನಂತರ ಆ ಹುದ್ದೆಗೆ ಮತ್ತೆ ಚುನಾವಣೆ ನಡೆಯುತ್ತದೆಯಷ್ಟೇ?)

ಷರೀಫ್‌ಗಳ ಅಧಿಕಾರ ರಾಜ್ಯದಿಂದ ರಾಜ್ಯಕ್ಕೆ, ಕೌಂಟಿಯಿಂದ ಕೌಂಟಿಗೆ ಬದಲಾಗುತ್ತದೆ. ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ಪೂರ್ಣ ಅಧಿಕಾರವಿದ್ದರೆ ಇನ್ನು ಕೆಲವು ಪ್ರದೇಶಗಳಲ್ಲಿ ಷರೀಫ್‌ಗೆ ನಿಗದಿತ ಅಧಿಕಾರ ಮಾತ್ರ ಇದೆ. ಇನ್ನೂ ಕೆಲವೆಡೆ ಷರೀಫ್ ಅಂದರೆ ಭಾರತದ ರಾಷ್ಟ್ರಪತಿಯಂತೆ ಒಂದು ‘ರಬ್ಬರ್ ಸ್ಟಾಂಪ್’ ಮಾತ್ರ.

ನ್ಯಾಯಾಧೀಶರ ಚುನಾವಣೆ

ಷರೀಫ್ ಚುನಾವಣೆಗಿಂತ ನನಗೆ ವಿಚಿತ್ರ ಎನಿಸಿದ್ದು ನ್ಯಾಯಾಂಗ ಚುನಾವಣೆ. ಅಮೆರಿಕದಲ್ಲಿ ಇಡೀ ದೇಶಕ್ಕೆಲ್ಲಾ ಒಂದು ಫೆಡರಲ್ ಸುಪ್ರೀಂ ಕೋರ್ಟ್ ಇದ್ದರೆ, ಪ್ರತಿ ರಾಜ್ಯದಲ್ಲೂ ಒಂದೊಂದು ಸುಪ್ರೀಂ ಕೋರ್ಟ್ ಇದೆ. ರಾಜ್ಯ ಸುಪ್ರೀಂ ಕೋರ್ಟ್ ಸೇರಿದಂತೆ, ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಚುನಾವಣೆಯಲ್ಲಿ ಜನರಿಂದಲೇ ಆಯ್ಕೆಯಾಗುತ್ತಾರೆ.

ಈ ಚುನಾವಣೆಯಲ್ಲಿ ನ್ಯಾಯಾಧೀಶರು ತಮಗೇ ಓಟು ನೀಡಿ ಎಂದು ಮತಯಾಚಿಸಬೇಕು. ‘ನನಗೆ ಓಟು ನೀಡಿದರೆ ನಾನು ಉತ್ತಮ ಜಡ್ಜ್‌ಮೆಂಟ್ ನೀಡುತ್ತೇನೆ’ ಎಂದು ಪ್ರಚಾರ ಮಾಡಬೇಕು. ಇದಕ್ಕಾಗಿ ಕೆಲವು ಅಭ್ಯರ್ಥಿಗಳು ಹತ್ತಾರು ಮಿಲಿಯನ್ ಡಾಲರ್ ಹಣ ಖರ್ಚು ಮಾಡುತ್ತಾರೆ. ಅವರ ಅಧಿಕಾರಾವಧಿ ಕೆಲವು ರಾಜ್ಯಗಳಲ್ಲಿ ೧೦ ವರ್ಷ ಇನ್ನು ಕೆಲವು ರಾಜ್ಯಗಳಲ್ಲಿ ೧೫ ವರ್ಷ.

ಅಮೆರಿಕದ ಫೆಡರಲ್ ಕೋರ್ಟಿನ ನ್ಯಾಯಾಧೀಶರು ಮಾತ್ರ ಸರ್ಕಾರದಿಂದ ನೇಮಕಗೊಳ್ಳುತ್ತಾರೆ. ಆದರೆ, ಅವರಿಗೆ ನಿವೃತ್ತಿ ಎಂಬುದೇ ಇಲ್ಲ. ಸಾಯುವವರೆಗೂ ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು! ಇದೂ ಒಂದು ಅಮೆರಿಕ ನ್ಯಾಯಾಂಗ ವ್ಯವಸ್ಥೆಯ ವೈಶಿಷ್ಟ್ಯ.

ಒಂದು ವೇಳೇ, ಇದೇ ವ್ಯವಸ್ಥೆ ಭಾರತದಲ್ಲಿ ಬಂದರೆ ಹೇಗಿರುತ್ತದೆ? -ಎಂದು ಒಂದು ಕ್ಷಣ ಯೋಚಿಸಿದೆ. ನ್ಯಾಯಾಧೀಶರು ಹಾಗೂ ಪೊಲೀಸರ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮುಂತಾದ ಪಕ್ಷಗಳ ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಮುಂದೆ ಪೊಲೀಸ್ ಮುಖ್ಯಸ್ಥರಾಗುವವರು ಹಾಗೂ ನ್ಯಾಯಾಧೀಶರಾಗುವವರು ಸಿಕ್ಕಾಪಟ್ಟೆ ಹಣ, ಹೆಂಡ, ಸೀರೆ, ಪಂಚೆ ಮುಂತಾದವುಗಳನ್ನು ಹಂಚುತ್ತಾರೆ. ಆರಿಸಿ ಬಂದಮೇಲೆ, ಒಂದು ಪಕ್ಷದ ಪೊಲೀಸರು ಇನ್ನೊಂದು ಪಕ್ಷದ ಅನುಯಾಯಿಗಳನ್ನು ಹಿಗ್ಗಾಮುಗ್ಗಾ ಹಿಂಸಿಸಿ ಬಂಧಿಸಿ ಜೈಲಿಗೆ ನೂಕುತ್ತಾರೆ. ಅದೇ ಪಕ್ಷದ ನ್ಯಾಯಾಧೀಶ ಇದ್ದರೆ ಕೋರ್ಟಿನಲ್ಲಿ ಆ ಪ್ರಕರಣಕ್ಕೆ ಜಯವಾಗುತ್ತೆ. ಆದರೆ, ಬೇರೆ ಪಕ್ಷದ ನ್ಯಾಯಾಧೀಶ ಇದ್ದರೆ ಕೇಸ್ ಪುಸ್ ಆಗುತ್ತದೆ! ಓ ಗಾಡ್... ಸದ್ಯ ಭಾರತದಲ್ಲಿ ಇಷ್ಟೊಂದು ಕೆಟ್ಟ ವ್ಯವಸ್ಥೆಯಿಲ್ಲ ಎಂದು ಸಮಾಧಾನ.

ಹಾಗಾದರೆ, ಅಮೆರಿಕದಲ್ಲಿ ಮಾತ್ರ ಯಾಕೆ ಈ ವ್ಯವಸ್ಥೆ ವಿಫಲವಾಗಿಲ್ಲ?

ಏಕೆಂದರೆ, ಅಮೆರಿಕದ ಶೇ.೯೦ರಷ್ಟು ಮತದಾರರು ಪ್ರಜ್ಞಾವಂತ ಮತದಾರರು. ಅವರು ಹಣ, ಹೆಂಡಕ್ಕೆ ಮತ ಚಲಾಯಿಸುವುದಿಲ್ಲ. ಆದ್ದರಿಂದ, ಅಲ್ಲಿ ಭ್ರಷ್ಟಾಚಾರದಿಂದ ಆರಿಸಿಬರುವುದು ಕಷ್ಟ. ಅದಕ್ಕಾಗಿ, ಅಲ್ಲಿ ಷರೀಫ್ ಹಾಗೂ ನ್ಯಾಯಾಂಗ ಚುನಾವಣಾ ವ್ಯವಸ್ಥೆ ಯಶಸ್ವಿಯಾಗುತ್ತಿದೆ.

ದಿವಾಳಿ ಜಡ್ಜ್

ಕೊನೆಯಲ್ಲೊಂದು ಕಿರು ಮಾಹಿತಿ: ಅಮೆರಿಕದ ಜಿಲ್ಲಾ ನ್ಯಾಯಾಲಯಗಳಲ್ಲಿ ‘ದಿವಾಳಿ ನ್ಯಾಯಾಧೀಶ’ - Bankruptcy Judge ಎಂಬ ವಿಚಿತ್ರ ಹುದ್ದೆಯೊಂದಿದೆ. ಈ ನ್ಯಾಯಾಧೀಶರು ಅಮೆರಿಕದ ನ್ಯಾಯಾಲಯ ಹಾಗೂ ಸಂಸತ್ತಿನ ಶಿಫಾರಸುಗಳ ಮೂಲಕ ನೇಮಕೊಳ್ಳುತ್ತಾರೆ. ಅಮೆರಿಕದಲ್ಲಿ ದಿವಾಳಿಯಾಗುವವರ ಪ್ರಕರಣ ಅಧಿಕ. ಅಂಥ ದಿವಾಳಿ ಪ್ರಕರಣಗಳನ್ನು ಪರಿಶೀಲಿಸಿ ಅವರಿಗೆ ದಿವಾಳಿ ಪಟ್ಟ ಕರುಣಿಸುವುದು ಈ ನ್ಯಾಯಾಧೀಶರ ಕೆಲಸ!

ನಾನು ಕಳೆದ ಅಕ್ಟೋಬರ್‌ನಲ್ಲಿ ಅಮೆರಿಕದಲ್ಲಿದ್ದಾಗ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಪರಿಣಾಮವಾಗಿ ದಿವಾಳಿಯಾಗುವವರ ಸಂಖ್ಯೆ ಹೆಚ್ಚಾಗಿತ್ತು. ಅದಕ್ಕಾಗಿ ಅಮೆರಿಕದ ದಿವಾಳಿ ನ್ಯಾಯಾಧೀಶರಿಗೆಲ್ಲ ಬಿಡುವಿಲ್ಲದಷ್ಟು ಕೆಲಸವಿತ್ತು!

Tuesday, February 28, 2006

ಈಗ ಪತ್ತೆಯಾಗಿದೆ ನಮ್ಮ ಕೋರ್ಟುಗಳ ವೈಫಲ್ಯಕ್ಕೆ ಕಾರಣ

ತನ್ನ ಪತ್ತೆದಾರಿ ಕೆಲಸದ ಕುರಿತು ಬೀರಬಲ್‌ಗೆ
‘ವಿಕಟೆಕಟೆಕವಿ’ ತೆನಾಲಿರಾಮನ ಪತ್ರ


ಈಗ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ. ಆದರೆ, ನಮ್ಮ ಕಾಲದಲ್ಲಿ ವಾದಿ-ಪ್ರತಿವಾದಿ ವಕೀಲರಿರಲಿಲ್ಲ. ನಾವೇ ಜಾಣತನದಿಂದ ಅಪರಾಧಿ ಬಾಯಿಂದ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಜಾಣರಾದ್ದರಿಂದ ಸತ್ಯಕ್ಕೇ ಜಯವಾಗುತ್ತಿತ್ತು.


ಹಾಯ್‌ ಬೀರ್ಬಲ್‌, ಹೌ ಆರ್ ಯು?

ಹೌಹಾರಿದ್ಯಾ... ಈ ಪತ್ರ ನೋಡಿ!
ನಾನು ಕಣಯ್ಯಾ ತೆನಾಲಿ ರಾಮ. ಇದೇನು ಸಡನ್ನಾಗಿ ನಾನು ನಿಂಗೆ ಪತ್ರ ಬರೆದಿದ್ದೇನೆ ಅಂತ ನಿಂಗೆ ಸರ್‌ಪ್ರೈಸ್ ಆಗಿರಬೇಕಲ್ಲ. ಹೀಗೆ ಎಲ್ಲಾರನ್ನೂ ಸರ್‌ಪ್ರೈಸ್ ಮಾಡೋದೇ ನನ್‌ ಸ್ಟೈಲು ಗೊತ್ತಲ್ಲ? ಅದಿರಲಿ, ನಾನು ನಿಂಗೆ ಈ ಪತ್ರ ಬರೆಯೋಕೆ ಒಂದು ಕಾರಣ ಇದೆ. ನಾನು ಇತ್ತೀಚೆಗೆ ಒಂದು ಮಹತ್ವದ ಪತ್ತೆದಾರಿ ಕೆಲಸ ಮಾಡಿದ್ದೇನೆ. ಆ ವಿಚಾರವನ್ನ ನಿನ್ನತ್ರ ಸ್ವಲ್ಪ ಡಿಸ್‌ಕಸ್‌ ಮಾಡೋದಿತ್ತು.

ಎಕ್ಚುವಲಿ ನಮ್ಮ ಕಾಲ ಮುಗಿದು ಶತಮಾನಗಳೇ ಆಯ್ತು ಅನ್ನೋದು ನಿಜ. ಈಗ ಎಷ್ಟೋ ಎಜುಕೇಟೆಡ್‌ ಹುಡುಗರಿಗೆ ನಮ್ಮಿಬ್ಬರ ಹೆಸರೇ ಗೊತ್ತಿಲ್ಲ. ನಾಕೌಟ್‌ ಗಿರಾಕಿಗಳು... ಬೀರ್‌ ಓಕೆ. ಬಲ್‌ ಯಾಕೇ... ಅಂತ ಕೂಗ್ತಾರೆ. ನಮ್ಮ ಕಥೆ ಕೇಳಿ ಗೊತ್ತಿರೋರಂತೂ ನಮ್ಮನ್ನ ಜೋಕರ್‌ಗಳ ಥರ ನೋಡ್ತಾರೆ. ಪ್ರೆೃಮರಿ ಸ್ಕೂಲಲ್ಲಿ ಕಲಿತಿರೋ ಮಕ್ಕಳಿಗೆ ನಮ್ಮ ಹೆಸರು ಗೊತ್ತಿರುತ್ತೆ. ದುರದೃಷ್ಟವಶಾತ್‌ ಅವರು ನಮ್ಮನ್ನೂ ಮಿಕ್ಕಿ ಮೌಸ್‌, ಸ್ಕೂಬಿ ಡೂ, ಟಾಮ್‌ ಆಂಡ್‌ ಜೆರ್ರಿ ಥರ ಕಾರ್ಟೂನ್‌ ಅಂದುಕೊಂಡಿರ್ತಾರೆ. ಐ ಪಿಟಿ ಯೂ. ಯೂ ಪಿಟಿ ಮಿ!

ಅಲ್ವಾ ಮತ್ತೆ? ಎಷ್ಟು ಜನರು ನಮ್ಮನ್ನು ಅತಿ ಬುದ್ಧಿವಂತ ನ್ಯಾಯದಾನಿಗಳು ಅಂತ ಗುರುತಿಸುತ್ತಾರೆ? ಕೃಷ್ಣದೇವರಾಯನ ಆಸ್ಥಾನದಲ್ಲಿ ನಾನು ವಿದೂಷಕ ಆಗಿದ್ದೆ ಅನ್ನೋದು ನಿಜ. ಆದರೆ, ನಾನು ಬುದ್ಧಿವಂತ ವಿಕಟಕವಿ ಕೂಡ ಆಗಿದ್ದೆನಲ್ಲ. ನನ್ನ ಲಾ ನಾಲೆಜ್‌ನಿಂದಾಗಿ ನಾನು ಕೋರ್ಟಿನ ಕಟೆಕಟೆಯಲ್ಲೂ ಎತ್ತಿದ ಕೈ ತಾನೆ. ಅದಕ್ಕೆ ನನ್ನನ್ನು ಬೇಕಾದರೆ ನೀನು ‘ವಿಕಟೆಕಟೆಕವಿ’ ಅಂತ ಕರಿ. ನೀನು? ಅಕ್ಬರ್‌ ಮಹಾರಾಜನ ಆಸ್ಥಾನದ ನವರತ್ನಗಳಲ್ಲಿ ಎಲ್ಲರಿಗೂ ಗೊತ್ತಿರುವ ಏಕೈಕ ರತ್ನ ತಾನೆ? ಈ ದೇಶ ಕಂಡ ಚಾಣಾಕ್ಷ ಮಂತ್ರಿ. ಆದರೂ ಜನ ನಿನ್ನನ್ನು ನೆನಪು ಮಾಡಿಕೊಳ್ಳುಮದು ನಿನ್ನ ತಮಾಷೆಯ ಕಥೆಗಳಿಗಾಗಿ ಮಾತ್ರ. ಹೌ ರಿಡಿಕ್ಯುಲಸ್‌!

ನಮ್ಮಿಬ್ಬರ ನ್ಯಾಯದಾನ ಸಾಮರ್ಥ್ಯಕ್ಕೆ ಸರಿಸಾಟಿಯಾದ ಬುದ್ಧಿವಂತರೇ ನಮ್ಮ ಕಾಲದಲ್ಲಿ ಯಾರೂ ಇರಲಿಲ್ಲ. ಅತ್ಯಂತ ಕಠಿಣವಾದ ಕೇಸುಗಳಲ್ಲೂ ಅತಿ ಜಾಣ್ಮೆಯಿಂದ ಸತ್ಯ ಕಂಡು ಹಿಡಿದವರು ನಾಮ. ನಮ್ಮ ನ್ಯಾಯದಾನದ ಮುಂದೆ ಉಳಿದ ಮಂತ್ರಿ -ಮಹೋದಯರು ಇಂಗು ತಿಂದ ಮಂಗನಂತಾದ ಘಟನೆಗಳು ನೂರಾರು. ಇನ್‌ ಫ್ಯಾಕ್ಟ್‌, ಉಳಿದ ಆಸ್ಥಾನ ವಿದ್ವಾಂಸರು ಹಾಗೂ ರಾಜರು ಬರೀ ಕಣ್ಣಿಗೆ ಕಾಣುವ, ಕಿವಿಗೆ ಕೇಳುವ ಸಾಕ್ಷ್ಯಗಳನ್ನು ನಂಬಿ ಪ್ರಜೆಗಳಿಗೆ ಅನ್ಯಾಯ ಮಾಡುತ್ತಿದ್ದರು. ಆಗೆಲ್ಲ ನಾಮ ಜಾಣ್ಮೆಯಿಂದ ಸತ್ಯ ಕಂಡುಹಿಡಿದು ನಿಜವಾದ ನ್ಯಾಯ ಒದಗಿಸಿದ್ದೇವೆ. ಬೋಗಸ್‌ ಸಾಕ್ಷ್ಯಗಳನ್ನು ಬಯಲುಮಾಡಿ ಅವರ ನ್ಯಾಯ ವಿತರಣೆ ಪದ್ಧತಿ ಎಷ್ಟು ಸ್ಟುಪಿಡ್‌ ಎಂದು ಪ್ರೂವ್‌ ಮಾಡಿದ್ದೇವೆ. ಕರೆಕ್ಟಾಗಿ ನ್ಯಾಯ ಒದಗಿಸುಮದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದ್ದೇವೆ. ಆದರೂ, ಈ ಜನರಿಗೆ ನಾಮ ಮಾದರಿ ನ್ಯಾಯಾಧೀಶರಾಗಲೇ ಇಲ್ವಲ್ಲ ಮಾರಾಯ. ಯಾಕೆ?

ಐರನಿ ಏನು ಅಂದರೆ, ಅಂದು ಯಾವ ಪದ್ಧತಿ ತಪುý್ಪ ಅಂತ ನಾಮ ತೋರಿಸಿಕೊಟ್ಟೆವೋ ಈಗಿನ ಕೋರ್ಟುಗಳು ಆ ಪದ್ಧತಿಯನ್ನೇ ಸರಿ ಎಂಬಂತೆ ಪಾಲಿಸುತ್ತಿವೆ. ಯಾಮದು ಮೂರ್ಖತನದ ನ್ಯಾಯವಿಚಾರಣೆ ಎಂದು ನಾಮ ಜಗಜ್ಜಾಹೀರು ಮಾಡಿದೆವೋ ಅದನ್ನೇ ಇಂದಿನ ನ್ಯಾಯಾಲಯಗಳು ಸರಿ ಎನ್ನುವಂತೆ ಪಾಲಿಸುತ್ತಿವೆ. ಬರೀ ಸಾಕ್ಷಿಗಳು ಹಾಗೂ ವಕೀಲರ ವಾಕ್ಚಾತುರ್ಯದಲ್ಲಿ ನ್ಯಾಯದೇವತೆ ತಲೆಚಿಟ್ಟು ಹಿಡಿದು ಕುಳಿತಿದ್ದಾಳೆ.

ಈಗಿನ ಕೋರ್ಟುಗಳಿಂದ ನ್ಯಾಯದಾನ ಪದ್ಧತಿಯನ್ನೇ ಗೇಲಿಯಾದಂಥ ಎರಡು ಘಟನೆಗಳು ಕಳೆದವಾರ ನಡೆದುಹೋಗಿವೆ. ಜೆಸ್ಸಿಕಾ ಲಾಲ್‌ ಪ್ರಕರಣ. ಇನ್ನೊಂದು ಬೆಸ್ಟ್‌ ಬೇಕರಿ ಪ್ರಕರಣ.

ಹಾಗೆಂದು, ಭಾರತದ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣ ಕುಸಿದಿದೆ ಅಂತ ನಾನು ಹೇಳುತ್ತಿಲ್ಲ. ಆದರೆ, ಜನರ ನಂಬಿಕೆ ಕಳೆದುಕೊಳ್ಳುತ್ತಿದೆ ಅನ್ನೋದು ಮಾತ್ರ ನಿಜ. ನೂರಾರು ಜನರ ಕಣ್ಣೆದುರೇ ಹುಡುಗಿಯೊಬ್ಬಳು ಕೊಲೆಯಾದರೂ, ಅಪರಾಧಿಗಳು ನಾಜೂಕಾಗಿ ತಪ್ಪಿಸಿಕೊಳ್ಳುತ್ತಾರೆ. ಅಪರಾಧಿಗಳು ಧರ್ಮಗ್ರಂಥದ ಮೇಲೆ ಪ್ರಮಾಣ ಮಾಡಿ ಸುಳ್ಳು ಹೇಳಿ ಕೋರ್ಟುಗಳ ದಾರಿ ತಪ್ಪಿಸುತ್ತಾರೆ. ಇದು ಸದ್ಯ ಭಾರತದ ನ್ಯಾಯಾಂಗ ವ್ಯವಸ್ಥೆಗೇ ಸವಾಲಾಗಿದೆ. ಈ ಎರಡೂ ಪ್ರಕರಣವನ್ನು ನ್ಯಾಯಾಂಗ ಗಂಭೀರವಾಗಿ ಪರಿಗಣಿಸಿದೆ ಅನ್ನೋದು ನಿಜಕ್ಕೂ ಗುಡ್‌ ನ್ಯೂಸ್‌.

ಆದ್ರೆ ಬೀರಬಲ್‌, ನನಗನಿಸುತ್ತೆ. ಈ ರೀತಿ ಒಂದೋ ಎರಡು ಪ್ರಕರಣಗಳನ್ನು ಮಾತ್ರ ಕೋರ್ಟುಗಳು ಪರಿಹರಿಸುಮದು ಪ್ರಾಕ್ಟಿಕಲಿ ಸಾಧ್ಯ. ದೇಶದಲ್ಲಿ ಇಂತಹ ಸಾವಿರಾರು ಪ್ರಕರಣಗಳು ಆಗುತ್ತವಲ್ಲ. ಅಮಗಳ ಬಗ್ಗೆ ಯಾರು ಹೋರಾಟ ಮಾಡುತ್ತಾರೆ. ಎಷ್ಟು ಕೋರ್ಟುಗಳು, ಎಷ್ಟು ಪ್ರಕರಣಗಳನ್ನು, ಎಷ್ಟು ಸಲ ಅಂತ ಪದೇ ಪದೇ ವಿಚಾರಣೆ ಮಾಡಲು ಸಾಧ್ಯ? ಅದಕ್ಕೆ, ಇದಕ್ಕೆಲ್ಲ ಮೂಲಭೂತ ಕಾರಣ ಏನು? ಪರಿಹಾರ ಏನು ಅಂತ ಕಂಡುಹಿಡಿಯಬೇಕೆನಿಸಿತು ನನಗೆ. ಹಾಗಾಗಿ, ನಾನೊಂದು ತನಿಖೆ ಮಾಡಿ ಒಂದು ಪರಿಹಾರ ಸೂಚಿಸುತ್ತಿದ್ದೇನೆ. ಸ್ವಲ್ಪ ಯೋಚಿಸಿ ನಿನ್ನ ಅಬಿಪ್ರಾಯ ಹೇಳಯ್ಯ.

ಅನ್‌ಫಾರ್ಚುನೇಟ್‌ಲಿ, ಈಗಿನ ನ್ಯಾಯ ವ್ಯವಸ್ಥೆಯಲ್ಲಿ ಸಾಕ್ಷಿಗಳೇ ಭಾಳಾ ಇಂಪಾರ್ಟೆಂಟು. ಅವರಿಗಿಂತ ವಕೀಲರು ಇನ್ನೂ ಇಂಪಾರ್ಟೆಂಟು. ನ್ಯಾಯವಾಗಿ ಇಮಗಳಿಗಿಂತ ನ್ಯಾಯಾಧೀಶರ ಬುದ್ಧಿವಂತಿಕೆ ಇಂಪಾರ್ಟೆಂಟ್‌ ಆಗಬೇಕಿತ್ತು! ಆದರೆ, ಪರಿಸ್ಥಿತಿ ಹಾಗಿಲ್ಲ. ಪಾಯಿಂಟ್‌ ಟು ಬಿ ನೋಟೆಡ್‌ ಯುವರ್‌ ಆನರ್‌.

ಬೀರಬಲ್‌, ಒಂದು ಅಪ್ರಿಯ ಸತ್ಯ ಹೇಳುತ್ತೇನೆ ಕೇಳು. ನಮ್ಮ ಎಷ್ಟೋ ನ್ಯಾಯಾಧೀಶರಿಗಿಂತ ವಕೀಲರೇ ಬುದ್ಧಿವಂತರಿರುಮದು ನಮ್ಮ ನ್ಯಾಯಾಂಗ ವ್ಯವಸ್ಥೆಯ ವೈಫಲ್ಯಕ್ಕೆ ಕಾರಣ. ಈ ವಕೀಲರ ವಾದಗಳ ನಡುವೆ ಸತ್ಯವನ್ನು ಹುಡುಕಿ ತೆಗೆಯಲು ನ್ಯಾಯಾಧೀಶರಿಗೆ ಬಹುತೇಕ ಪ್ರಕರಣಗಳಲ್ಲಿ ಸಾಧ್ಯವಾಗುಮದಿಲ್ಲ. ಜೆಸ್ಸಿಕಾ ಪ್ರಕರಣದಲ್ಲಿ ಆದದ್ದೂ ಇದೇ.
ಈಗ ವಕೀಲರೇ ತಮ್ಮ ಜಾಣ ತರ್ಕದಿಂದ ಕೇಸುಗಳನ್ನು ಗೆಲ್ಲಿಸುತ್ತಾರೆ ಅಥವಾ ಸೋಲಿಸುತ್ತಾರೆ. ಇವರ ವಾದ- ವಿವಾದಗಳಿಂದಾಗಿ ನ್ಯಾಯಾಧೀಶರು ಪ್ರತಿ ಹಂತದಲ್ಲೂ ಗೊಂದಲಗೊಳ್ಳುತ್ತಾ ಹೋಗುತ್ತಾರೆ. ಎಷ್ಟೋ ವರ್ಷಗಳ ನಂತರ ನ್ಯಾಯಾಧೀಶರು ಈ ವಾದ - ವಿವಾದಗಳ ಆಧಾರದ ಮೇಲೆ ಯಾರ ವಾದ ಗಟ್ಟಿಯಾಗಿದೆಯೋ ಅವರ ಪರ ತೀರ್ಪು ನೀಡುತ್ತಾರೆ. ಇದು ಈಗಿನ ಸಿಸ್ಟಂ. ಭಾರತದಲ್ಲಿ ಅಷ್ಟೇ ಅಲ್ಲ. ಜಗತ್ತಿನ ಬಹುತೇಕ ದೇಶಗಳಲ್ಲಿ ಇದೇ ಕಥೆ. ಇಡೀ ವ್ಯವಸ್ಥೆಯಲ್ಲಿ ಸತ್ಯ ಏನು ಎನ್ನುಮದಕ್ಕಿಂತ ವಾದ ಹಾಗೂ ಸಾಕ್ಷಿ ಎರಡೇ ಮುಖ್ಯವಾಗುತ್ತದೆ.

ಅದರಲ್ಲೂ, ಭಾರತೀಯ ನ್ಯಾಯಾಂಗದಲ್ಲಿ ಒಂದು ಬಹಳ ಮುಖ್ಯವಾದ ಪಾಯಿಂಟ್‌ ಇದೆ. ಹತ್ತು ಅಪರಾಧಿಗಳಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ಒಬ್ಬ ನಿರಪರಾಧಿಗೆ ಶಿಕ್ಷೆಯಾಗಕೂಡದು. ಇದರ ಉದ್ದೇಶವೇನೋ ಭಾಳಾ ಒಳ್ಳೆಯದು ಬೀರ್‌ಬಲ್‌. ಆದರೆ, ಬಹುತೇಕ ಅಪರಾಧಿಪರ ವಕೀಲರು ಬಚಾವಾಗಲು ಇದೇ ಪಾಯಿಂಟನ್ನು ಬಳಸಿಕೊಳ್ಳುತ್ತಾರೆ ಅನ್ನೋದೆ ಡ್ರಾಬ್ಯಾಕು. ಸರಿಯಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣ ‘ಬೆನಿಫಿಟ್‌ ಆಫ್‌ ಡೌಟ್‌’ ಆಧಾರದಲ್ಲಿ ಅಪರಾಧಿಗಳು ಕೇಸಿನಿಂದ ಹೊರಬರುತ್ತಾರೆ. ನ್ಯಾಯಾಧೀಶರು ಈ ವಿಷಯದಲ್ಲಿ ನಿಸ್ಸಹಾಯಕರು.

ಅನೇಕ ಭಯಂಕರ ಆರೋಪಿಗಳು ಅತಿ ಜಾಣ ವಕೀಲರನ್ನು ಹಿಡಿದುಕೊಂಡು ಪ್ರಕರಣದಿಂದ ಬಚಾವಾಗುತ್ತಾರೆ. ಉದಾಹರಣೆಗೆ ಭಾರತದ ‘ಮೋಸ್ಟ್‌ ವಾಂಟೆಡ್‌ ಕ್ರಿಮಿನಲ್‌’ ದಾವೂದ್‌ ಇಬ್ರಾಹಿಂ ಈಗ ಖ್ಯಾತ ವಕೀಲ ಹಾಗೂ ರಾಜಕಾರಣಿ ರಾಮ್‌ ಜೇಠ್ಮಲಾನಿಯವರನ್ನು ಹಿಡಿದುಕೊಂಡು ಪಾರಾಗಲು ಹವಣಿಸುತ್ತಿಲ್ಲವೇ ಹಾಗೆ.

ಆದರೆ, ನಮ್ಮ ಕಾಲದಲ್ಲಿ ಹಾಗಲ್ಲ. ನಾಮ ನೇರವಾಗಿ ವಾದಿಗಳು ಹಾಗೂ ಪ್ರತಿವಾದಿಗಳ ಜೊತೆ ಮಾತನಾಡುತ್ತಿದ್ದೆಮ. ಆಗ ವಾದಿ ಹಾಗೂ ಪ್ರತಿವಾದಿ ವಕೀಲರಿರಲಿಲ್ಲ. ನಮ್ಮ ಜಾಣತನ ಉಪಯೋಗಿಸಿ ಅಪರಾಧಿಯ ಬಾಯಿಂದ ನಾವೇ ನಿಜ ಹೊರಡಿಸುತ್ತಿದ್ದೆಮ. ಅಪರಾಧಿಗಳಿಗಿಂತ ನಾಮ ಹೆಚ್ಚು ಬುದ್ಧಿವಂತರಾಗಿದ್ದುದರಿಂದ ಸತ್ಯಕ್ಕೇ ಜಯವಾಗುತ್ತಿತ್ತು. ನಾಮ ಕೇಸುಗಳನ್ನು ವರ್ಷಾನುಗಟ್ಟಲೆ ಎಳೆಯುತ್ತ ಹೋಗುತ್ತಿರಲಿಲ್ಲ. ಸತ್ಯ ಗೊತ್ತಾದ ತಕ್ಷಣ ತೀರ್ಪು ನೀಡುತ್ತಿದ್ದೆಮ. ಇದರಿಂದ ನ್ಯಾಯ ವಿತರಣೆ ಸುಲಭವೂ, ಕ್ಷಿಪ್ರವೂ ಆಗಿರುತ್ತಿತ್ತು. ಈಗಲೂ ಇಂಥದೇ ಸಿಸ್ಟಂ ಮತ್ತೆ ಜಾರಿಗೆ ತರಬೇಕು. ಅಂತ ನನ್ನ ಸಲಹೆ.

ಆದರೆ, ಕಾನೂನು ಪುಸ್ತಕದ ಬದನೇಕಾಯಿಯ ಈ ಪ್ರಪಂಚದಲ್ಲಿ ನನ್ನ ಹಿಸ್ಟಾರಿಕಲ್‌ ಸಲಹೆಯನ್ನು ಜಾರಿಗೆ ತರಲು ಶ್ರೀಕೃಷ್ಣ ದೇವರಾಯನೂ ಇಲ್ಲ. ನಿನ್ನ ಅಕ್ಬರ್‌ ಬಾದಶಹಾ ಕೂಡ ಇಲ್ಲ. ವಾಟ್‌ ಡು ವಿ ಡೂ?

ನಿನ್ನ ಚತುರ ಉತ್ತರಕ್ಕೆ ಕಾದಿರುತ್ತೇನೆ.

ಇಂತಿ ವಿಕಟೆಕಟೆಕವಿ
ತೆನಾಲಿ ರಾಮ


Kannada Prabha issue dated February 27, 2006

Honey.. Now I know why our courts Fail

-