Showing posts with label Salman Khan. Show all posts
Showing posts with label Salman Khan. Show all posts

Tuesday, April 18, 2006

ಹೊಡಿ ಮಗಾ, ಹೊಡಿ ಮಗಾ.. ಸಲ್ಮಾನ್‌ ಖಾನ್‌ಗೇ ಜೈ

ಡಾ.ರಾಜ್‌ ಆದರ್ಶಗಳು ಈಗ ಯಾರಿಗೆ ಬೇಕು? ವಿವೇಕ್‌ ಒಬೇರಾಯ್‌ಗೆ
ಸುಂದರಿ ಸುಶ್ಮಿತಾ ಪತ್ರ


ಕಾನೂನನ್ನು ಪದೇ ಪದೆ ಗಾಳಿಗೆ ತೂರಿ, ಅಪರಾಧಿ ಎನಿಸಿಕೊಂಡಿರುವ ಈ ದೇಶದ ನ್ಯಾಶನಲ್‌ ಹೀರೋ ಸಲ್ಮಾನ್‌ ಖಾನ್‌ ಕಳೆದ ವಾರ ಅಕ್ಷರಶಃ ಜೈಲು ಸೇರಿದ. ಮೂರು ದಿನದ ನಂತರ ಜಾಮೀನಿನ ಮೇಲೆ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇತ್ತ ರಾಜ್‌ ಮತ್ತು ಅವರ ಆದರ್ಶಗಳು ಸಮಾಧಿಯಾಗುತ್ತಿರುವಾಗ ಅತ್ತ ಸಲ್ಮಾನ್‌ ಮತ್ತು ಆತನ ಹೀರೋಯಿಸಂಗಳು ಸಂಭ್ರಮಿಸುತ್ತಿದ್ದಮ!


ಅಬ್ಬೇ ವಿವೇಕ್‌,
ಈಗಾದರೂ ಬುದ್ಧಿ ಬಂತಾ ಮರೀ? ಆ ನಖ್ರಾವಾಲಿ ಐಶ್ವರ್ಯ ನಿನ್ನ ಮಹಾ ಫ್ರೆಂಡು ಅಂತ ಹೇಳ್ತಾ ಇದ್ದೆ. ಆಕೆ ಜತೆ ನಿನ್ನ ಮದುವೆ ಅಂತಿದ್ದೆ. ಆಕೆಗಾಗಿ, ನೀನು ಪತ್ರಿಕಾಗೋಷ್ಠಿ ನಡೆಸಿ ’ಸಲ್ಮಾನ್‌ ಖಾನ್‌ ಒಬ್ಬ ವಿಕೃತ ಮನಸಿನ ರೋಗಿ’ ಅಂತ ಆರೋಪ ಮಾಡಿದ್ದೆ. ಈಗೇನಾಯ್ತು? ಐಶ್ವರ್ಯ ನಿನ್ನ ತೋಳು ಬಿಟ್ಟು ಪುರ್ರಂತ ಹಾರಿಹೋಗಿ ಅಭಿಷೇಕ್‌ ಬಚ್ಚನ್‌ ಭುಜದ ಮೇಲೆ ಕುಳಿತಿದ್ದಾಳೆ. ನಿಂಗೆ ಇದರಿಂದ ಬೇಜಾರಾಗಿದೆಯೇನೋ... ಪಾಪ. ಹೋಗಲಿ ಬಿಡು ವಿವೇಕ್‌. ಇದನ್ನ ಸುಮ್ಮನೆ ತಮಾಷೆ ಅಂತ ನೋಡ್ತಾ ಇರು ಅಷ್ಟೇ. ಅಭಿಷೇಕ್‌ಗೂ ಐಶ್‌ ಕೈಕೊಡುವ ಲಕ್ಷಣ ಕಾಣಿಸಿಸ್ತಿದೆ.

ಅವರ ಕಥೆ ಏನಾದ್ರೂ ಆಗಲಿ. ಆದರೆ, ಆಕೆಗಾಗಿ ನೀನು ಸಾಧಿಸಿದ್ದಾದರೂ ಏನು? ಸಲ್ಮಾನ್‌ ಜತೆ ದುಶ್ಮನಿ ತಾನೆ? ಅದರಿಂದ ನಿನ್ನ ಭವಿಷ್ಯ ಏನಾಯ್ತು? ನಿನ್ನ ಹಾದಿಯಲ್ಲಿದ್ದ ಎಲ್ಲಾ ಸಿನಿಮಾಗಳೂ ಬ್ಲಾಕ್‌ ಆಗಿಹೋದಮ ಗೊತ್ತಾ! ನಿಂಗೆ ಒಳ್ಳೆ ಅವಕಾಶಗಳು ಎಲ್ಲಿಂದ ಬರಬೇಕು ಹೇಳು? ಯೂ ಲಾಸ್ಟ್‌ ಬೋಥ್‌... ಐಶ್ವರ್ಯ ಆಂಡ್‌ ಆಫರ್ಸ್‌. ನಿನ್ನಥರ, ಇನ್ನಿತರ ಬಾಲಿಮಡ್‌ ಹೀರೋಗಳೂ, ಐಶ್ವರ್ಯಾಗಾಗಿ ಸಲ್ಮಾನ್‌ ಖಾನ್‌ ವಿರೋಧ ಕಟ್ಟಿಕೊಂಡರಾ? ಇಲ್ಲ. ಯಾಕೆ ಹೇಳು? ಅವರಿಗೆ ಗೊತ್ತು ಇಂಡಸ್ಟ್ರಿಯಲ್ಲಿ ಸಲ್ಮಾನ್‌ ಎಷ್ಟು ಪವರ್‌ಫುಲ್‌ ಅಂತ.

ಹೋಗಲಿ, ಇದು ನಿಂಗೆ ತಡವಾಗಿಯಾದರೂ ಅರ್ಥವಾಯಿತಲ್ಲ ಮಾರಾಯ. ನೀನೀಗ ಸಲ್ಮಾನ್‌ ಜತೆ ಗೆಳತನ ಬೆಳೆಸೋದಕ್ಕೆ ನಿರ್ಧರಿಸಿದ್ದೀಯಂತೆ. ಮೊನ್ನೆ ಮೊನ್ನೆ ಸಲ್ಮಾನ್‌ ತಾಯಿ ಆಸ್ಪತ್ರೆಯಲ್ಲಿ ಇದ್ದಾಗ, ನೀನು ಮತ್ತು ನಿನ್ನ ಅಪ್ಪ-ಅಮ್ಮ ಅಲ್ಲಿಗೆ ಭೇಟಿ ನೀಡಿದ್ದಿರಂತೆ. ನೀನು ಅಲ್ಲಿ ಸಲ್ಮಾನ್‌ ಖಾನ್‌ನ ತಾಯಿಯ ಕಾಲಿಗೆ ನಮಸ್ಕಾರ ಮಾಡಿದೆಯಂತೆ? ಆಮೇಲೆ, ಸಲ್ಮಾನ್‌ ಖಾನ್‌ನ ತಂದೆಯನ್ನೂ ಹೋಗಿ ನೋಡಿಬಂದಿರಂತೆ?

ಹೀಗೆಲ್ಲಾ ಮಾಡಿದರೆ, ಸಲ್ಮಾನ್‌ ದಾದಾನ ಕೃಪೆ ದೊರೆಯುತ್ತಾ ವಿವೇಕ್‌? ನನಗೆ ಗೊತ್ತಾಗಿರುವ ಮಾಹಿತಿ ಪ್ರಕಾರ, ಸಲ್ಮಾನ್‌ಗೆ ಇನ್ನೂ ನಿನ್ನ ಬಗ್ಗೆ ಕೋಪ ಹೋಗಿಲ್ಲ. ಅದು ಹಾಗೆಲ್ಲ ಹೋಗೋದೂ ಇಲ್ಲ. ನಿಂಗೆ ಸಲ್ಮಾನ್‌ ಹ್ಯಾಗೆ ಅಂತ ಗೊತ್ತಲ್ಲ? ಆತನನ್ನು ಒಲಿಸಿಕೊಳ್ಳಲು ಮಾಮೂಲಿ ವಿಧಾನಗಳು ನಡೆಯೋಲ್ಲ. ನನ್ನ ಸಲಹೆ ಕೇಳು.

ಸಲಹೆ ೧. ಮೊದಲು ಸಲ್ಮಾನ್‌ಗೆ ಒಂದು ಸ್ಲಗಲ್‌ ಆಗಿರುವ ಬಂದೂಕು ಉಡುಗೊರೆ ನೀಡು. ಇಂಥ ಉಡುಗೊರೆ ಸಿಕ್ಕರೆ ಸಲ್ಮಾನ್‌ ಖುಷಿಯಾಗುತ್ತಾನೆ.

ಸಲಹೆ ೨. ಯಾಮದಾದರೂ ಕಾಡಿಗೆ ಕರೆದುಕೊಂಡು ಹೋಗಿ ಜಿಂಕೆಗಳನ್ನು ತೋರಿಸು. ಸಲ್ಮಾನ್‌ ಖುಷಿಯಿಂದ ಬೇಟೆಯಾಡುತ್ತಾನೆ. ನೀನದಕ್ಕೆ ಕೇಕೆ ಹಾಕಿ ಉತ್ತೇಜನ ನೀಡು. ಜತೆಗೆ ಕಿಲಕಿಲ ನಗಲು ಒಂದಿಬ್ಬರು ಹೀರೋಯಿನ್‌ಗಳು ಇರಲಿ.

ಸಲಹೆ ೩. ಸಲ್ಮಾನ್‌ಗೆ ರಾತ್ರಿ ಮೂರು ಗಂಟೆಗೆ ಯದ್ವಾತದ್ವಾ ಹೆಂಡ ಕುಡಿಸಿ, ಸುಂಕ ತಪ್ಪಿಸಿ ತಂದ ವಿದೇಶಿ ಕಾರನ್ನು ಏಕಮುಖ ರಸ್ತೆಯಲ್ಲಿ ಡ್ರೆೃವಿಂಗಿಗೆ ಅಂತ ಕೊಡು. ಆಗ ನೋಡು ಸಲ್ಮಾನ್‌ ಒಂದೋ ಎರಡೋ ಆಕ್ಸಿಡೆಂಟ್‌ ಮಾಡಿ ಹೇಗೆ ಆನಂದ ಪಡ್ತಾನೆ ಅಂತ.

ಸಲಹೆ ೪. ಸಲ್ಮಾನ್‌ ಖಾನ್‌ಗೆ ಇರುವ ಭೂಗತ ವ್ಯಕ್ತಿಗಳ ಬಗ್ಗೆ ಪ್ರಶ್ನೆ ಹಾಕು. ಆತ ಒಂದೊಂದಾಗಿ... ದಾವೂದ್‌ ಇಬ್ರಾಹಿಂ, ನೂರ್‌ ಇಬ್ರಾಹಿಂ, ಚೋಟಾ ಶಕೀಲ್‌, ಅಬುಸಲೇಂ ಅಂತ ಕಥೆ ಹೇಳ್ತಾನೆ. ಕೆಲಮ ಸುಳ್ಳು ಸುಳ್ಳೇ ಘಟನೆ ಹೇಳ್ತಾನೆ. ನೀನದಕ್ಕೆ ಭಯ ಬಿದ್ದವನಂತೆ ನಟಿಸು.

ಸಲಹೆ ೫. ವೇಳೆ ಸಿಕ್ಕಾಗಲೆಲ್ಲ ಆಧುನಿಕ ಜಿಮ್‌ಗೆ ಕರೆದುಕೊಂಡು ಹೋಗು. ಬಾಡಿ ಬಿಲ್ಡ್‌ ಮಾಡಲು ಹೊಸ ಹೊಸ ಡ್ರಗ್‌ ಯಾಮದು ಬಂದಿದೆ ಅಂತ ಮಾಹಿತಿ ಕೊಡು.

ಸಲಹೆ ೬. ಅತ್ಯಂತ ಹೊಲಸು ಭಾಷೆ ಹಾಗೂ ಶಬ್ದಗಳನ್ನು ಬಳಸಿ ಮಾತನಾಡು. ಸಲ್ಮಾನ್‌ ಖುಷ್‌ ಹೋಗಾ!
ಒಂದು ಅಂಶವನ್ನು ಚೆನ್ನಾಗಿ ತಿಳಿದಿರು... ಸಲ್ಮಾನ್‌ಗೆ ಕಾನೂನು ಅಂದರೆ ಅಲರ್ಜಿ. ಹಿ ಹೇಟ್ಸ್‌ ನಯ, ವಿನಯ, ಶಿಸ್ತು, ನಾಗರಿಕತೆ, ಘನತೆ, ಗೌರವ ಇತ್ಯಾದಿ... ಅಷ್ಟೇ ಅಲ್ಲ. ಆತನಿಗೆ ಅಂಗಿ ಕಂಡರೂ ಆಗೋಲ್ಲ. ಅದಕ್ಕೇ ಸಲ್ಮಾನ್‌ ಬರೀ ಪ್ಯಾಂಟು ಮಾತ್ರ ಹಾಕ್ಕೊಂಡು ಅಕ್ಷರಶಃ ಅರೆನಗ್ನವಾಗಿರ್ತಾನೆ!

ಸಲ್ಮಾನ್‌ ಖಾನ್‌ ಈ ದೇಶದ ನ್ಯಾಶನಲ್‌ ಹೀರೋ ಅನ್ನೋದನ್ನ ಮರೆಯಬೇಡ. ಕಳೆದ ವಾರ, ಆತ ಮೂರು ದಿನ ಜೈಲಿನಲ್ಲಿ ಇದ್ದ ತಾನೆ? ಅದರಿಂದ, ಆತನ ಬಗ್ಗೆ ಉದ್ಯಮದಲ್ಲಿ ವಿಪರೀತ ಕನಿಕರ ಉಂಟಾಗಿದೆ. ಅನೇಕ ಮಹಾನ್‌ ವ್ಯಕ್ತಿಗಳು ಸಲ್ಮಾನ್‌ ಪರವಾಗಿ ಮಾತನಾಡಿದ್ದಾರೆ. ಅವರೆಲ್ಲ ಕೋರ್ಟಿನ ಮೇಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಲ್ಮಾನ್‌ ಅಭಿಮಾನಿ ಬಳಗ ಕೋರ್ಟಿಗೆ ಕಲ್ಲು ತೂರಿ ಪ್ರತಿಭಟನೆ ವ್ಯಕ್ತಪಡಿಸಿದೆ. ಕಟ್ರಿನಾ ಕೈಫ್‌ ಎಂಬ ಸುಂದರಿಯ ಹೃದಯ ಸಲ್ಮಾನ್‌ಗಾಗಿ ಮಿಡಿಯುತ್ತಾ ಜೈಲಿನವರೆಗೂ ಹೋಗಿತ್ತು. ಬಾಲಿಮಡ್‌ನ ನೂರಾರು ಕಿರಿಯ ಕಲಾವಿದರು ಸಲ್ಮಾನ್‌ ಖಾನ್‌ಗೆ ಬೆಂಬಲ ನೀಡಲು ತಮ್ಮ ತಲೆ ಬೋಳಿಸಿಕೊಂಡರು.

ಮೂರು ದಿನದ ನಂತರ ಸಲ್ಮಾನ್‌ ಜಾಮೀನು ಪಡೆದು ಜೈಲಿನಿಂದ ಹೊರಬಂದ. ಆಗ ನೋಡಬೇಕಿತ್ತು... ಸ್ವಾತಂತ್ರ್ಯ ಹೋರಾಟಗಾರ ಜೈಲಿನಿಂದ ಹೊರಗೆ ಬಂದಾಗ ನೀಡುವಂಥ ಸ್ವಾಗತವನ್ನು ಅಭಿಮಾನಿಗಳು ಸಲ್ಮಾನ್‌ಗೆ ನೀಡಿದರು. ಇದರಿಂದಲೇ ಗೊತ್ತಾಗುತ್ತದೆ, ಸಲ್ಮಾನ್‌ ಎಂಥ ಹೀರೋ ಅಂತ!

ಈ ನಡುವೆ ಸಲ್ಮಾನ್‌ ಎಂಥ ಒಳ್ಳೆಯ ಮನುಷ್ಯ ಅಂತ ಸಾಬೀತು ಪಡಿಸುವ ಅನೇಕ ಘಟನೆಗಳು ಜೈಲಿನಲ್ಲಿ ನಡೆದಮ. ಜೈಲಿನಲ್ಲಿ ಟಾಯ್ಲೆಟ್‌ ಸರಿಯಿಲ್ಲ ಎನ್ನುವ ವಿಷಯ ಸಲ್ಮಾನ್‌ಗೆ ಸ್ವತಃ ಅನುಭವಕ್ಕೆ ಬಂತು. ಅದ್ಕಕಾಗಿ, ಸಲ್ಮಾನ್‌ ಈಗ ಜೈಲಿನ ಟಾಯ್ಲೆಟ್‌ಗಳ ಅಭಿವೃದ್ಧಿಯ ಸಂಪೂರ್ಣ ವೆಚ್ಚ ಭರಿಸುಮದಾಗಿ ಭರವಸೆ ನೀಡಿದ್ದಾನೆ. ಕೈದಿಗಳು ತಮ್ಮ ಶಕ್ತಿವರ್ದಿಸಿಕೊಳ್ಳಲು ಅಗತ್ಯವಾದ ವ್ಯಾಯಾಮ ಶಾಲೆಕಟ್ಟಿಸಲೂ ಆತ ನಿರ್ಧರಿಸಿದ್ದಾನೆ. ಕೈದಿಗಳು ಜೈಲಿನಲ್ಲಿ ಆರಾಮವಾಗಿರಬೇಕು ಎಂಬ ಸಲ್ಮಾನ್‌ ಖಾನನ ಕಳಕಳಿ ನಿಜಕ್ಕೂ ಶ್ಲಾಘನೀಯವಲ್ಲವೇ?

ಅಲ್ಲದೇ, ಸಲ್ಮಾನ್‌ ಖಾನ್‌ಗೆ ಜೈಲಿನಲ್ಲಿ ಸಾಥಿಯಾಗಿದ್ದವನು ಒಬ್ಬ ಕೊಲೆಗಾರ. ಆತ ೪೭೫೦೦ ರು. ತುಂಬಿದರೆ, ಆತನ ಶಿಕ್ಷೆ ೫ ವರ್ಷ ಕಡಿಮೆಯಾಗಿ ಆತ ಬೇಗನೆ ಜೈಲಿನಿಂದ ಹೊರಬರಲು ಸಾಧ್ಯವಂತೆ. ಅದಕ್ಕೆ ನೆರಮ ನೀಡುಮದಾಗಿ ಸಲ್ಮಾನ್‌ ಖಾನ್‌ ಕೊಲೆಗಾರನಿಗೆ ಭರವಸೆ ನೀಡಿದ್ದಾನೆ.

ಅಷ್ಟೇ ಅಲ್ಲ, ಸಲ್ಮಾನ್‌ ಖಾನ್‌ ನಿಜಕ್ಕೂ ತಾಯಿಗೆ ತಕ್ಕ ಮಗ. ಸಲ್ಮಾನ್‌ಗೆ ತಂದೆಗಿಂತ ತಾಯಿ ಅಂದರೆ ಅತೀವ ಪ್ರೀತಿ. ಆತ ಜೈಲು ಸೇರಿದ ಸುದ್ದಿ ಕೇಳಿ ತಾಯಿ ಆಸ್ಪತ್ರೆ ಸೇರಿದ್ದರು. ಈ ವಿಷಯ ಸಲ್ಮಾನ್‌ಗೆ ಗೊತ್ತಾಗಿದ್ದು ಆತ ಜೈಲಿನಿಂದ ಹೊರಬಂದ ನಂತರ. ಆಗ... ಸಲ್ಮಾನ್‌ ಅರಚಿದ್ದೇನು ಗೊತ್ತೇ?... ’ಈ ವಿಷಯ ನನಗೆ ಮೊದಲೇ ಗೊತ್ತಾಗಿದ್ದರೆ, ನಾನು ಜೈಲನ್ನೇ ಒಡೆದುಕೊಂಡು ಹೊರಬಹುತ್ತಿದ್ದೆ’ ಅಂತ! ಇಂಥ ಉದ್ಘಾರ ಕೇಳಿದ ಯಾವ ಮಾತೃಹೃದಯ ತಾನೆ ಉಕ್ಕಿಬರುಮದಿಲ್ಲ? ಭಾರತದಲ್ಲಿ ಎಲ್ಲ ತಾಯಂದಿರಿಗೂ ಇದ್ದರೆ ಇರಬೇಕು ಇಂಥ ಮಗ! ಎಲ್ಲ ಅಭಿಮಾನಿಗಳಿಗೂ ಇರಬೇಕು ಇಂಥ ಹೀರೋ!
ಅದನ್ನು ಬಿಟ್ಟು, ಕಣ್ಣೀರಧಾರೆ ಎಂದು ದುಃಖಿಸುವ, ಹಿರಿಯರಿಗೆ ಗೌರವ ನೀಡುವ, ಮಹಿಳೆಯರೆಂದರೆ ಸೌಜನ್ಯದಿಂದ ವರ್ತಿಸುವ, ನೆಲದ ಕಾನೂನನ್ನು ಶಿರಸಾವಹಿಸುವ, ಕುಡಿತ, ಧೂಮಪಾನವನ್ನು ಎಂದೂ ಉತ್ತೇಜಿಸದ ೧೯ನೇ ಶತಮಾನದ ಹೀರೋ ಈಗ ಯಾರಿಗೆ ಬೇಕು?

ಈಗಿನ ಕಾಲ ಬದಲಾಗಿದೆ. ಪ್ರೇಕ್ಷಕ ಬದಲಾಗಿದ್ದಾನೆ. ಅದಕ್ಕಾಗಿ ಈಗಿನ ಕಾಲಕ್ಕೆ ರಾಜ್‌ಕಪೂರ್‌ ಅಥವಾ ರಾಜ್‌ಕುಮಾರ್‌ ಅವರಂಥ ಹೀರೋಗಳು ಬೇಕಾಗಿಲ್ಲ. ರಾಜ್‌ಕುಮಾರ್‌ ಮೊನ್ನೆ ನಿಧನರಾದರೂ ಅವರ ಆದರ್ಶ ಸಿನೆಮಾಗಳ ಯುಗ ಬಹಳ ಹಿಂದೆಯೇ ಅವಸಾನವಾಗಿದೆ. ಅವರ ತೆರೆಯ ಮೇಲಿನ ಕಲೆಗಾಗಲೀ, ತೆರೆಯ ಹೊರಗಿನ ನಡತೆಗಾಗಲೀ ಈಗ ಬೆಲೆಯಿಲ್ಲ. ಜನರಿಗೇನಿದ್ದರೂ ಈಗ ಬೇಟೆಗಾರ ಸಲ್ಮಾನ್‌ ಖಾನ್‌, ಮುಂಬೈ ಬಾಂಬರ್‌- ಮುನ್ನಾಭಾಯಿ ಸಂಜಯ ದತ್‌ ಅಂಥವರೇ ಹೀರೋಗಳು. ಹೊಡಿ ಮಗ ಹೊಡಿ ಮಗ ಎನ್ನುಮದೇ ಆದರ್ಶ. ಆದ್ದರಿಂದಲೇ ಕಳೆದ ವಾರ ರಾಜ್‌ಕುಮಾರ್‌ ಅವರ ಅಂತಿಮ ಯಾತ್ರೆಯಲ್ಲಿ ಹಲವಾರು ಸಲ್ಮಾನ್‌ ಖಾನ್‌ಗಳ ಹೀರೋಯಿಸಂ ವಿಜ್ರಂಭಿಸಿತು!

ವಿವೇಕ್‌, ಇದನ್ನು ಅರ್ಥ ಮಾಡಿಕೊಂಡು ನಿನ್ನ ಇಮೇಜನ್ನು ಬದಲಾಯಿಸಿಕೊಂಡರೆ ನೀನೂ ಸಲ್ಮಾನ್‌ ಥರಾ ಹೀರೋ ಆಗ್ತೀಯಾ. ಆಲ್‌ ದಿ ಬೆಸ್ಟ್‌!

ಇಂತಿ ನಿನ್ನ ಹಿತೈಷಿ
ತ್ರಿಪುರ ಸುಂದರಿ ಸುಶ್ಮಿತಾ



Kannada Prabha issue dated April 17, 2006

Our National Hero Is Mahatma Salman Khan... Jai Jai Khan

--

Tuesday, November 22, 2005

ಸಾನಿಯಾ, ಖುಷ್ಬುಗೆ ಸೆಕ್ಸ್‌ ನಿಷೇಧ: ನರೇನ್‌ಗೆ ಪರವಾನಗಿ!

ಸಲ್ಮಾನ್‌, ಫರ್ದಿನ್‌ ಖಾನ್‌ ವಿರುದ್ಧ ಫತ್ವಾ ಇಲ್ಲ. ಪುರುಷರಿಗೆ ಶಿಕ್ಷೆಯಿಲ್ಲ
- ನೈತಿಕ ಕಾಂಡೋಂಗಳ ಕರಪತ್ರ


ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ? ಮದುವೆಗಿಂತ ಮೊದಲೇ ತಾಯಿಯಾದ ಕುಂತಿ, ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?



ಮಹಾಜನಗಳೇ,
ನಾಮ ಈ ಭೂಮಿಯ ಸಾಮಾಜಿಕ, ಸಾಂಸ್ಕೃತಿಕ, ನೈತಿಕ ಹಾಗೂ ಚಾರಿತ್ರಿಕ ರಕ್ಷಕರು. ನಮ್ಮನ್ನು ಬೇಕಾದರೆ ನೀಮ, ಸಮಾಜ ಸಂಸ್ಕೃತಿಯ ಕಮಾಂಡೋಗಳು ಅಥವಾ ನೈತಿಕ ಕಾಂಡೋಂಗಳು ಅಂತ ಕರೆಯಬಹುದು. ಯಾವ್ಯಾವಾಗ ಧರ್ಮಕ್ಕೆ, ಸಂಸ್ಕೃತಿಗೆ ಚ್ಯುತಿಯಾಗುತ್ತದೋ, ಆಗೆಲ್ಲ ನಾಮ ಪ್ಯಾಕಿನಿಂದ ಹೊರಬರುತ್ತೇವೆ... ಅರ್ಥಾತ್‌ ಅವತರಿಸುತ್ತೇವೆ! ...ಸಂಭವಾಮಿ ಯುಗೇ ಯುಗೇ, ಅಂತ ಹೇಳಿದ ಆ ಕೃಷ್ಣ ಪರಮಾತ್ಮ ಎಲ್ಲಿ ಮಾಯವಾದನೋ ಗೊತ್ತಿಲ್ಲ! ನಾಮ ಮಾತ್ರ ಕರೆಕ್ಟಾಗಿ ಟೈಮಿಗೆ ಸರಿಯಾಗಿ ಅವತರಿಸುತ್ತೇವೆ.

ನಮ್ಮನ್ನು ನಾಮ ಸಂಸ್ಕೃತಿಯ ರಕ್ಷಕರು, ನೈತಿಕತೆಯ ಕಮಾಂಡೋಗಳು ಅಂತ ಕರೆದುಕೊಳ್ಳುತ್ತೇವೆ.
ನಮಗೆ ಕಾಂಡೋಂಗಳು ಅಂತ ಸೆಕ್ಸೀ ಹೆಸರೂ ಇದೆ. ಏಕೆಂದರೆ, ಮನುಷ್ಯನಿಗೆ ಏಡ್ಸ್‌ ರೋಗ ಹರಡುಮದನ್ನು ಕಾಂಡೋಂಗಳು ಹೇಗೆ ತಡೆಯುತ್ತವೋ ಅದೇ ರೀತಿ ನಾಮ ನಮ್ಮ ಧರ್ಮ ಮತ್ತು ಸಂಸ್ಕೃತಿಗೆ ಲೈಂಗಿಕ ರೋಗ ಹರಡುಮದನ್ನು ತಡೆಯುತ್ತೇವೆ. ನೈತಿಕತೆ ಕೆಡುಮದನ್ನು ತಡೆಯುತ್ತೇವೆ. ಅದಕ್ಕಾಗಿ, ನಮಗೆ ಈ ಅನ್ವರ್ಥಕ ನಾಮ.

ಮಹಾಜನಗಳೇ,
ಎಂಥಾ ಪುಣ್ಯ ಭೂಮಿಯಾಗಿತ್ತು ನಮ್ಮದು! ಒಂದು ಕಾಲದಲ್ಲಿ ಲೈಂಗಿಕ ಕ್ರಿಯೆಯೇ ಇಲ್ಲದೇ ಸಂತಾನ ಉತ್ಪತ್ತಿಯಾಗುತ್ತಿದ್ದ ದೇಶ ನಮ್ಮದು. ದೇಶದ ಆರಾಧ್ಯ ದೈವ ಗಣಪತಿ ಸೃಷ್ಟಿಯಾದದ್ದು ಪಾರ್ವತಿ ತನ್ನ ಮೈಕೆಸರಿನಿಂದ ಮಾಡಿದ ಮೂರ್ತಿಯಿಂದ. ನಂತರ ಆತನಿಗೆ ಆನೆಯ ಮುಖ ಬಂದಿದ್ದು ಅಂಗಾಂಗ ಕಸಿಯಿಂದ. ಶ್ರೀರಾಮಚಂದ್ರ ಆಂಡ್‌ ಬ್ರದರ್ಸ್‌ ಹುಟ್ಟಿದ್ದು ದಶರಥನ ರಾಣಿಯರಿಗೆ ಯಜ್ಞದಿಂದ ಪ್ರಾಪ್ತವಾದ ಪಾಯಸದಿಂದ. ಈ ವೈದ್ಯ ವಿಜ್ಞಾನವನ್ನೇ ಈಗ ಕೃತಕ ಗರ್ಭಧಾರಣೆ ಎನ್ನಲಾಗುತ್ತದೆ. ಹಾಗೆ ನೋಡಿದರೆ, ಕೌರವರು ವಿಶ್ವದ ಮೊದಲ ಸಾಮೂಹಿಕ ಟೆಸ್ಟ್‌ಟ್ಯೂಬ್‌ ಬೇಬಿಗಳು. ವ್ಯಾಸ ಮಹಾಮುನಿಗಳು ನೀಡಿದ ತುಪ್ಪವನ್ನು ತಾಯಿ ಗಾಂಧಾರಿ ನೂರು ಕುಂಭಗಳಲ್ಲಿ ತುಂಬಿಟ್ಟಳು. ಕೆಲ ತಿಂಗಳುಗಳ ನಂತರ ಆ ಕುಂಭಗಳಿಂದ ಕೌರವರು ಜನಿಸಿದರು. ಇವರಿಗಿಂತ ಮೊದಲು ದ್ರೋಣರು ಎಲೆಯ ತಟ್ಟೆಯಲ್ಲಿ ಜನ್ಮ ಪಡೆದಿದ್ದರಿಂದ ಅವರೇ ವಿಶ್ವದ ಮೊದಲ ಟೆಸ್ಟ್‌ಟ್ಯೂಬ್‌ ಬೇಬಿ ಇರಬಹುದು. ಪಾಂಡವರು ಹುಟ್ಟಿದ್ದು ಕುಂತಿಗೆ ಪ್ರಾಪ್ತವಾದ ಮಂತ್ರಶಕ್ತಿಯಿಂದ. ಇದನ್ನು ಅಲ್ಟ್ರಸೋನಿಕ್‌ ಗರ್ಭ ತಂತ್ರಜ್ಞಾನ ಎಂದು ಇನ್ನು ವಿಜ್ಞಾನಿಗಳು ಕಂಡುಹಿಡಿಯಬಹುದೇನೋ! ಈ ಎಲ್ಲ ಉದಾಹರಣೆಗಿಂತ ಹೆಚ್ಚಾಗಿ ಗಂಗಾ ನದಿಯ ತಟದ ಮೇಲೆ, ಯುವತಿಯಾಗಿದ್ದ ಕುಂತಿ ಸೂರ್ಯಮಂತ್ರವನ್ನು ಪಠಿಸಿ ಮಗ ಕರ್ಣನನ್ನು ಪಡೆದ ಕಥೆ ಜನಜನಿತ. ರಕ್ತಬೀಜಾಸುರ ಎಂಬ ರಾಕ್ಷಸನ ಹನಿ ಹನಿ ರಕ್ತ ಭೂಮಿಗೆ ಬಿದ್ದಾಗಲೂ ಬೀಜ ಅಂಕುರವೊಡೆದಂತೆ ನೂರಾರು, ಸಾವಿರಾರು ಸಂಖ್ಯೆಯಲ್ಲಿ ’ತದ್ರೂಪಿಗಳಂತೆ’ ಪುನರುತ್ಪತ್ತಿ ಆಗುತ್ತಿದ್ದರಂತೆ. ಇದನ್ನೇ ವಿಜ್ಞಾನಿಗಳು ರಕ್ತದ ಕಣದಿಂದ ತದ್ರೂಪಿಗಳನ್ನು ಸೃಷ್ಟಿಸುವ ಕ್ಲೋನಿಂಗ್‌ ತಂತ್ರಜ್ಞಾನ ಎಂದು ಕರೆಯುತ್ತಾರೆ.

ಇಂಥ ಸೆಕ್ಸ್‌ರಹಿತ ಸಂತಾನ ಭಾಗ್ಯವಿದ್ದ ಈ ಭರತಭೂಮಿಯಲ್ಲಿ ಇಂದು ಸಂತಾನ ಭಾಗ್ಯವೇ ಬೇಡದ ಲೈಂಗಿಕತೆ ವಿಜೃಂಭಿಸುತ್ತಿದೆ! ಭಾರತ ಕಾಮದೇವನ ಆಡುಂಬೋಲವಾಗಿದೆ.

ಸಾಲದು ಎಂಬಂತೆ ದೇಶದ ಹೆಣ್ಣುಮಕ್ಕಳೆಲ್ಲಾ ಯುವಕರಿಗೆ ಸೆಕ್ಸಾಯಣ ಸೂತ್ರ ಕಲಿಸುತ್ತಿದ್ದಾರೆ. ’ತಾಮ ಕೆಟ್ಟಿದ್ದಲ್ಲದೇ ನೀವೂ ಕೆಟ್ಟುಹೋಗಿ. ಈಗಿನ ಕಾಲದಲ್ಲಿ ನೀಮ ಕೆಟ್ಟು ಹೋಗುಮದನ್ನು ತಪ್ಪಿಸಲು ಸಾಧ್ಯವಿಲ್ಲ. ಆದ್ದರಿಂದಲೇ, ನೀಮ ಸುರಕ್ಷಿತ ರೀತಿಯಲ್ಲಿ ಕೆಟ್ಟು ಹೋಗಿ’ ಅಂತ ಧರ್ಮಬೋಧೆ ಮಾಡುತ್ತಿದ್ದಾರೆ. ಇಂಥ ಸೂತ್ರಗಳನ್ನು ಕಲಿಸುವ ಹಕ್ಕು ಇರುಮದು ವಾತ್ಸಾಯನನಂಥ ಮಹರ್ಷಿಗಳಿಗೆ ಮಾತ್ರ. ಇಡೀ ಪುರಾಣದಲ್ಲಿ ಯಾರಾದರೂ ಸ್ತ್ರೀ ಮಹರ್ಷಿ ಇಂತಹ ಉಪದೇಶ ಮಾಡಿದ ಉದಾಹರಣೆ ತೋರಿಸಿ!
‘ಈಗಿನ ಕಾಲದಲ್ಲಿ ಕನ್ಯೆಯರು ಕನ್ಯತ್ವ ಉಳಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ, ವಿದ್ಯಾವಂತ ಹುಡುಗರು ಕನ್ಯೆಯರನ್ನೇ ಮದುವೆಯಾಗುತ್ತೇವೆ ಎಂದು ಬಯಸುಮದಿಲ್ಲ.’ ಎಂಬರ್ಥದಲ್ಲಿ ಖುಷ್ಬು ಪ್ರವಚನ ನೀಡಿದ್ದಾಳೆ.

ಇದನ್ನು ಖುಷ್ಬು ಹೇಳಿರುಮದಕ್ಕೆ ನಮ್ಮ ವಿರೋಧವಿದೆ. ಅದನ್ನೇ ಯಾರಾದರೂ ಪುರುಷ ಹೇಳಿದ್ದರೆ ನಾಮ ಒಪ್ಪಿಕೊಳ್ಳುತ್ತಿದ್ದೆಮ.
ಈಗಿನ ಸಾಮಾಜಿಕ ಪರಿಸ್ಥಿತಿಯನ್ನು ನೋಡಿದರೆ ಖುಷ್ಬು ಹೇಳಿರುಮದು ನಿಜ ಅಂತ ನಮಗೂ ಗೊತ್ತು. ಆದರೂ, ಆ ಸತ್ಯವನ್ನು ಹೇಳಲು ಆಕೆಗೆ ಹಕ್ಕಿಲ್ಲ ಅನ್ನುಮದೇ ನಮ್ಮ ಪ್ರಮುಖ ಆಕ್ಷೇಪ.

ಆಕೆ ಮದುವೆಗಿಂತ ಮೊದಲು ಕನ್ಯತ್ವ ಕಳೆದುಕೊಂಡಿದ್ದರೂ ನಮ್ಮ ಅಭ್ಯಂತರವಿಲ್ಲ. ಆಕೆ, ಸಿನಿಮಾಗಳಲ್ಲಿ ತನ್ನ ಬಹುತೇಕ ಅಂಗಾಂಗಗಳನ್ನು ತೋರಿಸಿರುಮದಕ್ಕೂ ನಮ್ಮ ತಕರಾರಿಲ್ಲ. ಆದರೆ, ಆ ಮಾತನ್ನು ಸಾರ್ವಜನಿಕವಾಗಿ ಆಕೆ ಹೇಳಬಾರದಿತ್ತು. ಇದು ನಮ್ಮ ಸಂಸ್ಕೃತಿಗೆ ತಕ್ಕುದಲ್ಲ.

ಇನ್ನು ಸಾನಿಯಾ ಕಥೆಯೂ ಅಷ್ಟೇ. ಆಕೆ, ಬುರ್ಖಾ ಹಾಕಿಕೊಂಡು ಟೆನಿಸ್‌ ಆಡುಮದು ಬಿಟ್ಟು ಚೋಟುದ್ದ ಲಂಗ ಹಾಕಿಕೊಂಡು ಟೆನಿಸ್‌ ಆಡುತ್ತಾಳೆ. ಟೈಟ್‌ ಟೀಶರ್ಟ್‌ ತೊಟ್ಟ ಆಕೆ ಶಾಟ್‌ ಹೊಡೆದರೆ, ನಮ್ಮ ಕಣ್ಣುಗಳೆಲ್ಲ ಆಟ ನೋಡುಮದು ಬಿಟ್ಟು ಆಕೆಯ ಮಾಟ ನೋಡುತ್ತವೆ.

ಟೆನಿಸ್‌ ಆಟಕ್ಕೇ ಇಷ್ಟು ಸಣ್ಣ ಬಟ್ಟೆ ತೊಟ್ಟುಕೊಳ್ಳುವ ಆಕೆ ಇನ್ನು ಈಜು ಸ್ಪರ್ಧೆಯಲ್ಲಿ ಭಾಗವಹಿಸುಮದಾದರೆ ಎಷ್ಟು ಬಟ್ಟೆ ತೊಟ್ಟುಕೊಳ್ಳುತ್ತಿದ್ದಳೋ ಅಂತ ಭಯವಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಕೆ ಕೂಡ ಖುಷ್ಬು ಮಾಡಿದ ತಪ್ಪನ್ನೇ ಮಾಡಿದ್ದಾಳೆ. ಅದಕ್ಕೇ ನೈತಿಕ ಕಾಂಡೋಮ್‌ಗಳಾದ ನಾಮ ಆಕೆಯ ವಿರುದ್ಧ ಫತ್ವಾ ಹೊರಡಿಸುವ ತಯಾರಿಯನ್ನು ಮಾಡಿಕೊಂಡಿದ್ದೇವೆ.

ನಾಮ ಎಷ್ಟು ಸಂಪ್ರದಾಯ ರಕ್ಷಕರು ನೋಡಿ. ಸಾನಿಯಾ ಜತೆ, ಅದೇ ಸ್ಥಳದಲ್ಲಿ, ಅದೇ ಸಂದರ್ಭದಲ್ಲಿ, ಅದೇ ಕ್ಷಣದಲ್ಲಿ ಅದೇ ರೀತಿಯ ಹೇಳಿಕೆಯನ್ನು ನೀಡಿದ ನರೇನ್‌ ಕಾರ್ತಿಕೇಯನ್‌ ವಿರುದ್ಧ ನಾಮ ತಕರಾರು ಮಾಡಲೇ ಇಲ್ಲವಲ್ಲ. ಯಾಕೆ ಹೇಳಿ?
ಯಾಕೆಂದರೆ, ಆತ ಪುರುಷ. ಆತನಿಗೆ ಸೆಕ್ಸ್‌ ಬಗ್ಗೆ ಅಥವಾ ವಿವಾಹ ಪೂರ್ವ ಸೆಕ್ಸ್‌ ಬಗ್ಗೆ ಮಾತನಾಡಲು ಪರವಾನಗಿಯಿದೆ. ಅದಕ್ಕಾಗಿ ಆತನ ವಿರುದ್ಧ ನಾಮ ಸೊಲ್ಲು ಎತ್ತಲಿಲ್ಲ. ನಾವಷ್ಟೇ ಏನು, ಸಾನಿಯಾ ಪ್ರಕರಣದ ಕುರಿತು ವರದಿ ಮಾಡಿದ ಭಾರತದ ಯಾವ ಪತ್ರಿಕೆಯೂ ಈ ಕುರಿತು ಪ್ರಶ್ನೆ ಹಾಕಲಿಲ್ಲ. ಏಕೆಂದರೆ, ಪುರಷರಿಗೆ ಲೈಂಗಿಕ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯ ನೀಡಿದೆ. ಮಹಿಳೆಯರಿಗೆ ನೀಡಿಲ್ಲ. ಈ ಸಂಪ್ರದಾಯದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದ ಭಾವವಿಲ್ಲ. ಇದನ್ನು ಎಲ್ಲರೂ ಅರಿತು ನಡೆಯಬೇಕು.
ಅಷ್ಟೇ ಅಲ್ಲ. ಫರ್ದಿನ್‌ ಖಾನ್‌ ಎಂಬ ಸಿನಿಮಾ ನಟ ಕೇವಲ ಒಂದೇ ಒಂದು ಚಿಕ್ಕ ಒಳಉಡುಪು ಧರಿಸಿದ ಚಿತ್ರಗಳು ಎಷ್ಟಿಲ್ಲ. ಐಶ್ವರ್ಯ ರೈ ಜತೆ ಬೇಕಾದಷ್ಟು ಆಡಿಕೊಂಡಿದ್ದ ಸಲ್ಮಾನ್‌ ಖಾನ್‌ನ ಸಂಭಾಷಣೆ ಪ್ರಕಟವಾಗಿದ್ದು ನೆನಪಿರಬಹುದು. ಆತ ಎಷ್ಟು ಬಾರಿ ಫ... ಎಂಬ ನಿಷೇಧಿತ ಶಬ್ದವನ್ನು ಬಳಸಿಲ್ಲ. ಯಾವ್ಯಾವ ಹೀರೋಯಿನ್‌ಗಳ ಜತೆಗೆ ತಾನು ಮಲಗಿದ್ದೆ ಎಂದು ಅತ ಹೇಳಿದ್ದನಲ್ಲ. ಆದರೆ, ಅದು ತಪ್ಪಲ್ಲ. ಏಕೆಂದರೆ, ಆತ ಪುರುಷ. ಅದಕ್ಕೇ, ಸಲ್ಮಾನ್‌ ಖಾನ್‌ ವಿರುದ್ಧವಾಗಲಿ, ಫರ್ದಿನ್‌ ಖಾನ್‌ ವಿರುದ್ಧವಾಗಿ ಯಾರೂ ಪತ್ವಾ ಹೊರಡಿಸಲಿಲ್ಲ.

ಇಷ್ಟಕ್ಕೂ ನಿಮಗೆ ಗೊತ್ತಲ್ಲ? ಯಾವಾಗಲೂ ಹೇಳದೇ ಮಾಡುವವ ರೂಢಿಯೊಳಗುತ್ತಮನು. ಆಡಿ ಮಾಡುವ ಮಧ್ಯಮನು. ಆಡಿಯೂ ಮಾಡದವ ಅಧಮನು ಎಂದು ಸರ್ವಜ್ಞನೇ ಹೇಳಿದ್ದಾನೆ. ಆದ್ದರಿಂದ ಸಂಪ್ರದಾಯದ ಪ್ರಕಾರ ಉತ್ತಮ ಮಹಿಳೆ ಎನ್ನಿಸಿಕೊಳ್ಳಬೇಕಾದರೆ ಯಾಮದೇ ಮಹಿಳೆ ಮಾಡಬೇಕಾದದ್ದು ಇಷ್ಟೇ... ಆಕೆ ವಿವಾಹದ ಮೊದಲಾಗಲೀ, ನಂತರವಾಗಲೀ, ಪತಿಯ ಜತೆಗಾಗಲೀ, ಮಿತ್ರನ ಜತೆಗಾಗಲೀ ಲೈಂಗಿಕತೆಯಲ್ಲಿ ತೊಡಗಬುಹುದು. ಆದರೆ, ಆಕೆ ಅದನ್ನ ಗುಪ್ತವಾಗಿ ಇಟ್ಟಿರಬೇಕು. ಅರ್ಥಾತ್‌ ಆಡದೇ ಮಾಡಬೇಕು. ಇದರಿಂದ ನಮ್ಮ ಸಂಸ್ಕೃತಿಗೆ ಅಪಚಾರವಿಲ್ಲ.

ಮದುವೆಗಿಂತ ಮೊದಲೇ ತಾಯಿಯಾದ ಕುಂತಿ ಕೊನೆಗೆ ವಿಷಯ ಬಯಲಾದಾಗ ದೋಷಾರೋಪಕ್ಕೆ ಒಳಗಾದಳು. ಆದರೆ, ಯಾರೂ ಇದಕ್ಕೆ ಕಾರಣನಾದ ಸೂರ್ಯನನ್ನು ದೂಷಿಸಲಿಲ್ಲ. ಇದೇ ತಾನೇ ನಮ್ಮ ಸಂಸ್ಕೃತಿ?

ಇಂತಿ ನೈತಿಕ ಕಮಾಂಡೋಗಳು


Kannada Prabha issue dated November 21, 2005
Sex for Naren Kartikeyan, No sex for Sania and Khushbu!

-