Tuesday, January 31, 2006

ಕೆಡವೋಣು ಬಾರಾ... ಕೆಡವೋಣು ಬಾ...

ಎಲ್‌-ಬೋರ್ಡ್‌ ಸರ್ಕಾರ ಕೆಡವಲು ಐದು ಐಡಿಯಾಗಳು
ಅಕಅಶಒ ಕಾರ್ಯದರ್ಶಿ ಪತ್ರ


ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಕುಮಾರಸ್ವಾಮಿ ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಿಳಿಸಲು ನಮಗೆ ಹರ್ಷವೆನಿಸುತ್ತಿದೆ. ನಮ್ಮ ಒಕ್ಕೂಟದ ಅಧ್ಯಕ್ಷರು, ಸರ್ಕಾರ ಬೀಳಿಸುವ ೫ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.


ಅತೃಪ್ತ ಶಾಸಕರೇ ನಂ ನಮಸ್ಕಾರ ನಿಮಗ...

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುವಂತೆ ಹಳೆ ಸರ್ಕಾರ ಬಿದ್ದರೂ ಹೊಸ ಸರ್ಕಾರ ಬರುತಿದೆ. ಅದರ ಹಿಂದೆ ಅತೃಪ್ತಿಯನ್ನೂ ಹೊಸತು ಹೊಸತು ತರುತಿದೆ!

ಪ್ರಿಯ ಅತೃಪ್ತ ಮಿತ್ರರೇ, ಕರ್ನಾಟಕದಲ್ಲಿ ಏನು ಆಗುಮದು ಬೇಡ ಎಂದು ನಾಮ ಅಂದುಕೊಂಡಿದ್ದೆವೋ ಅದೇ ಆಗಿಹೋಗಿದೆ. ಧರ್ಮಸಿಂಗ್‌ ಸರ್ಕಾರವನ್ನು ಬೀಳಿಸುವ ನಮ್ಮ ಉದ್ದೇಶ ಈಡೇರಿದೆ. ಆದರೆ, ಇನ್ನೊಂದು ಸರ್ಕಾರ ರಚನೆ ಆಗದಂತೆ ತಡೆಯಲು ನಮ್ಮಿಂದ ಆಗಲಿಲ್ಲ. ನಮ್ಮೆಲ್ಲ ಪ್ರಯತ್ನವನ್ನೂ ಮೀರಿದ ’ಅಗೋಚರ ದೇವ’ಶಕ್ತಿಯ ಪರಿಣಾಮವಾಗಿ ಕರ್ನಾಟಕದಲ್ಲಿ ಇನ್ನೊಂದು ಸರ್ಕಾರ ಅಧಿಕಾರಕ್ಕೆ ಬರುತ್ತಿದೆ.

ಈ ಬೆಳವಣಿಗೆಯಿಂದ ನಮ್ಮಂತೆ ನೀಮ ಸಹ ಅತೃಪ್ತರಾಗಿದ್ದೀರಿ ಅಥವಾ ಆಗಲಿದ್ದೀರಿ ಅಂತ ನಮಗೆ ಗೊತ್ತು. ನಮ್ಮ ನಮ್ಮ ಅತೃಪ್ತಿಗಳಿಗೆ ಬೇರೆ ಬೇರೆ ಕಾರಣಗಳು ಇರಬಹುದು. ಆದರೆ, ನಮ್ಮೆಲ್ಲರ ಅತೃಪ್ತಿ ಮಾತ್ರ ಒಂದೇ ತಾನೇ? ಈ ಹಿನ್ನೆಲೆಯಲ್ಲಿ ನಾಮ ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ ’ಅಕಅಶಒ’ ರಚಿಸಲು ಉದ್ದೇಶಿಸಿದ್ದೇವೆ.

ನೂತನ ಸರ್ಕಾರ ಅಸ್ತಿತ್ವಕ್ಕೆ ಬರುಮದು ಫೆಬ್ರವರಿ ೩ರಿಂದ. ಆದರೆ, ನಮ್ಮ ಒಕ್ಕೂಟ ಈಗಾಗಲೇ ಅಸ್ತಿತ್ವಕ್ಕೆ ಬಂದಿದೆ. ಅವರು ಸರ್ಕಾರ ರಚನೆಯ ಕಾರ್ಯ ಆರಂಭಿಸುಮದಕ್ಕಿಂತ ಮುಂಚೆಯೇ ಅದನ್ನು ಬೀಳಿಸುವ ನಮ್ಮ ಕಾರ್ಯ ಆರಂಭಿಸಿದ್ದೇವೆ ಎಂದು ತಮಗೆ ತಿಳಿಸಲು ನಮಗೆ ಹರ್ಷವೆನಿಸುತ್ತಿದೆ.

ಈ ಒಕ್ಕೂಟಕ್ಕೆ ಪಕ್ಷ, ಜಾತಿ ಹಾಗೂ ಸಿದ್ಧಾಂತಗಳ ಭೇದವಿಲ್ಲ. ತಮಗೆ ಈ ಸರ್ಕಾರದ ಬಗ್ಗೆ ಅತೃಪ್ತಿಯೊಂದಿದ್ದರೆ ಸಾಕು. ತಮ್ಮನ್ನು ಈ ಒಕ್ಕೂಟದ ಸದಸ್ಯರನ್ನಾಗಿ ಸೇರಿಸಿಕೊಳ್ಳಲಾಗುಮದು.

ನಮ್ಮ ಒಕ್ಕೂಟದ ಸ್ಥಾಪಕ ಸದಸ್ಯರು, ಸರ್ಕಾರ ಬೀಳಿಸುವ ಪ್ರಾಥಮಿಕ ಯೋಜನೆಗಳ ರೂಪರೇಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದಾರೆ.

ಈ ಯೋಜನೆಯ ೫ ಪ್ರಮುಖ ಹಂತಗಳು ಹೀಗಿವೆ:

೧. ಮಂತ್ರಿಗಿರಿ ಅತೃಪ್ತಿ
ಮಂತ್ರಿ ಮಂಡಳ ಹಂಚಿಕೆ ವಿಚಾರವಾಗಿ ಹೊಸ ಮೈತ್ರಿ ಪಕ್ಷಗಳಲ್ಲಿ ಶೀಘ್ರವೇ ಕೆಲಮ ಶಾಸಕರಿಗೆ ಅತೃಪ್ತಿ ಉಂಟಾಗಲಿದೆ. ಅಂಥವರಿಗೆ ಉತ್ತೇಜನ ನೀಡಿ, ಅತೃಪ್ತಿಯನ್ನು ಹೆಚ್ಚಿಸುಮದು ನಮ್ಮ ತಕ್ಷಣದ ಕಾರ್ಯತಂತ್ರ.

೨. ಕಾಮನ್‌ ಮಿನಿಮಮ್‌ ಅತೃಪ್ತಿ:
ಜಾತ್ಯತೀತಾತೀತ ಜನತಾದಳ ಮತ್ತು ರಾಮವಾದಿ ಪಕ್ಷ ಸದ್ಯವೇ ತಮ್ಮ ಕನಿಷ್ಠ ಸಾಮಾನ್ಯ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿವೆ. ಈ ಸಂದರ್ಭದಲ್ಲಿ, ಜಾತ್ಯತೀತಾತೀತ ದಳಕ್ಕೆ ದೇವೇಗೌಡರ ಪರೋಕ್ಷ ನೆರಮ ಸಿಗುವಂತೆ ನಾಮ ಕಾರ್ಯತಂತ್ರ ರೂಪಿಸಬೇಕು. ಆಗ ಹೊಸ ದೋಸ್ತಿಗಳ ನಡುವೆ ಅಸಮಾಧಾನ ಆರಂಭವಾಗುತ್ತದೆ!

ಇಲ್ಲದಿದ್ದರೆ, ಹೊಸ ದೋಸ್ತಿಗಳ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ಸುಲಭವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ. ಏಕೆಂದರೆ, ಕುಮಾರಸ್ವಾಮಿ ಬಣದಲ್ಲಿ ಈಗ ಯಾಮದೇ ಮಹಾನ್‌ ರಾಷ್ಟ್ರ ನಾಯಕರೂ ಇಲ್ಲ. ಇರುವ ಎಲ್ಲರೂ ಸಣ್ಣ ಪುಟ್ಟ ಲೋಕಲ್‌ ನಾಯಕರೇ. ಆದರೆ, ಬಿಜೆಪಿಯಲ್ಲಿ ಹಾಗಲ್ಲ... ದೊಡ್ಡ ನಾಯಕರ ದೊಡ್ಡ ಬ್ಯಾಚೇ ಇದೆ. ಈ ಕಾಮನ್‌ ಮಿನಿಮಮ್‌ ಪ್ರೋಗ್ರಾಂ ರೂಪಿಸುವಾಗ ಬಿಜೆಪಿ ಪರವಾಗಿ ಈ ದೊಡ್ಡ ನಾಯಕರ ಬ್ಯಾಚು, ಕುಮಾರಸ್ವಾಮಿಯವರ ಲೋಕಲ್‌ ನಾಯಕರ ಮೇಲೆ ಸುಲಭವಾಗಿ ಒತ್ತಡ ಹಾಕುಮದು ಖಚಿತ. ಅದರಲ್ಲೂ ’ವೀರ ಕನ್ನಡಿಗ’ ಕುಮಾರಸ್ವಾಮಿಯವರ ಮುಂದೆ ಜೇಟ್ಲಿ, ವೆಂಕಯ್ಯ ನಾಯ್ಡು, ವಾಜಪೇಯಿ ಮುಂತಾದವರೆಲ್ಲ ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ವಾಗ್ಝರಿ ಹರಿಸುತ್ತಾರೆ. ಆಗ, ಆ ಒತ್ತಡ ತಾಳಲಾರದೇ, ಈ ಲೋಕಲ್‌ ನಾಯಕರು ದೊಡ್ಡ ನಾಯಕರು ಹೇಳಿದ್ದಕ್ಕೆ ಸುಲಭವಾಗಿ ತಲೆಯಾಡಿಸುತ್ತಾರೆ. ತಲೆಯಾಡಿಸಲಿಲ್ಲ ಎಂದರೆ ಬಿಜೆಪಿ ನಾಯಕರು ಬೆಂಬಲ ಹಿಂತೆಗೆದುಕೊಳ್ಳುಮದಾಗಿ ಬೆದರಿಸುತ್ತಾರೆ. ಆಗ, ಕುಮಾರಸ್ವಾಮಿ ಪಕ್ಷದವರು ಬಿಜೆಪಿ ಹೇಳಿದ ಕಾಮನ್‌ ಮಿನಿಮಮ್‌ ಪ್ರೋಗ್ರಾಮ್‌ಗೆ ಒಪುý್ಪತ್ತಾರೆ. ಇದು ಒಂಥರಾ ಅತೃಪ್ತಿಗೆ ಕಾರಣವಾಗುತ್ತದೆ. ಇದನ್ನು ನಾಮ ಪೊರೆದು ಪೋಷಿಸಬೇಕು. ಅಲ್ಲದೇ, ಈ ಮಿನಿಮಮ್‌ ಪ್ರೋಗ್ರಾಂ ವಿಷಯದಲ್ಲಿ ಎಷ್ಟು ಮ್ಯಾಕ್ಸಿಮಮ್‌ ಆಗುತ್ತದೋ ಅಷ್ಟು ಭಿನ್ನಾಭಿಪ್ರಾಯ ಉಂಟಾಗುವಂತೆ ನಾಮ ಮಾಡಬೇಕು. ಆಮೇಲೆ, ಜಾತ್ಯತೀತರು ಕೋಮುವಾದಿಗಳ ಒತ್ತಡಕ್ಕೆ ಮಣಿದರು ಎಂದು ನಾಮ ಪ್ರಚಾರ ಮಾಡಬೇಕು. ಆಗ ದೋಸ್ತಿಗಳಲ್ಲಿ ಅತೃಪ್ತಿ ಹೆಚ್ಚಾಗುತ್ತದೆ. ಒಂದು ವೇಳೆ ಈ ಹಂತದಲ್ಲಿ ಕುಮಾರ ಪಕ್ಷದ ಏಕೈಕ ರಾಷ್ಟ್ರನಾಯಕ ದೇವೇಗೌಡರು ಪರೋಕ್ಷವಾಗಿ ನೆರಮ ನೀಡಿದರೆ, ಬಿಜೆಪಿಯವರಲ್ಲಿ ತಾನೇ ತಾನಾಗಿ ಅತೃಪ್ತಿ ಹೆಚ್ಚಾಗುತ್ತದೆ. ಅದೇನೇ ಆದರೂ ನಮಗೆ ಅನುಕೂಲ.

೩. ಮೆಟ್ರೋ ಮತ್ತು ನಕ್ಸಲರ ಅತೃಪ್ತಿ
ತಂದೆಯವರಿಂದ ಭೇಷ್‌ ಅನ್ನಿಸಿಕೊಳ್ಳುವಂಥ ಆಡಳಿತ ನೀಡುತ್ತೇನೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಅದರ ಅರ್ಥ, ಕುಮಾರಸ್ವಾಮಿಯವರು ಮೆಟ್ರೋ ರೈಲನ್ನು ಕ್ಯಾನ್ಸಲ್‌ ಮಾಡಿ ಮಾನೋ ರೈಲಿಗೆ ಟಿಕೆಟ್‌ ನೀಡಬೇಕು. ಅದು ಬಿಜೆಪಿ ವಿರುದ್ಧ ನಿರ್ಧಾರ. ಅದೇ ರೀತಿ ನಕ್ಸಲರ ನಿಗ್ರಹದ ಬಗ್ಗೆ ಮೈತ್ರಿಯಲ್ಲಿ ಭಿನ್ನಾಭಿಪ್ರಾಯ ಐತ್ರಿ! ಇದು ಅತೃಪ್ತಿಗೆ ಕಾರಣವಾಗುಮದು ಗ್ಯಾರಂಟಿ. ನಾಮ ಅದಕ್ಕೆ ಉಪುý್ಪ ಖಾರ ಸೇರಿಸಬೇಕು.

೪. ರಾಮಾಯಣ ಮತ್ತು ನಾರಾಯಣ ಅತೃಪ್ತಿ
ಬಿಜೆಪಿಯ ರಾಮಾಯಣದ ಪರಿಣಾಮ ಬಾಬಾಬುಡನ್‌ಗಿರಿ, ಹುಬ್ಬಳ್ಳಿಯ ಈದ್ಗಾ ಮೈದನದಲ್ಲಿ ಆಗುಮದು ಖಚಿತ. ಇದಕ್ಕೆ ಜಾತ್ಯತೀತ ಕುಮಾರಸ್ವಾಮಿ ಗ್ಯಾಂಗು ಅತೃಪ್ತಿಯಿಂದ ಪ್ರತಿರೋಧ ವ್ಯಕ್ತಪಡಿಸದೇ ಇದ್ದೀತೇ? ಆಹಾ... ಈ ಅತೃಪ್ತ ಹೊಗೆಯನ್ನು ನಾಮ ತೀವ್ರಗೊಳಿಸಬೇಕು. ಇತ್ತ ಕುಮಾರಸ್ವಾಮಿಯವರು ಪಿತೃವಾಕ್ಯ ಪರಿಪಾಲನಾರ್ಥಾಯ ದರಿದ್ರನಾರಾಯಣ ವ್ರತ ಕೈಗೊಳ್ಳುಮದು ಕಷ್ಟವಾಗಲಾರದು. ಆದರೆ, ಐಟಿ ನಾರಾಯಣರನ್ನು ಕುಮಾರಸ್ವಾಮಿ ಒಲಿಸಿಕೊಳ್ಳದಿದ್ದರೆ ನಷ್ಟ. ಒಲಿಸಿಕೊಂಡರೆ ಗೌಡರಿಂದ ಕಷ್ಟ. ಪತ್ರದ ಮೇಲೆ ಪತ್ರ. ಗೋಷ್ಠಿಯ ಮೇಲೆ ಪತ್ರಿಕಾಗೋಷ್ಠಿ. ದೇವೇಗೌಡರು ಜೆಡಿಎಸ್‌ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ರಿಟೈರ್‌ ಆಗಿರಬಹುದು. ಆದರೆ, ಸರಣಿ ಪತ್ರ ಬರೆಯುವ ಕೃತ್ಯದಿಂದ ದೂರಾಗಿದ್ದಾರೆ ಎಂದುಕೊಳ್ಳಬೇಡಿ. ಗೌಡರ ಪತ್ರವನ್ನೇ ಮುಂದಿಟ್ಟುಕೊಂಡು ನಾಮ ಕುಮಾರಸ್ವಾಮಿಯವರ ಚಿಂತೆಗಳನ್ನು ಹೆಚ್ಚಿಸಬಹುದು. ಥ್ಯಾಂಕ್ಯೂ ಗೌಡಾಜೀ!

೫. ಬಿಸಿ ರಕ್ತದ ಅತೃಪ್ತಿ
ಈ ಸರ್ಕಾರದಲ್ಲಿ ಇರುವ ಬಹು ಪಾಲು ಶಾಸಕರು, ಮಂತ್ರಿಗಳು ಎಲ್ಲ ಯುವಕರು. ಮಂತ್ರಿಗಿರಿ ಹಾಗಿರಲಿ, ಕರೆಕ್ಟಾಗಿ ರಾಜಕೀಯದ ಅನುಭವ ಕೂಡ ಇಲ್ಲದವರು. ಎಲ್‌-ಬೋರ್ಡುಗಳು! ಅರ್ಥಾತ್‌... ಲರ್ನರ್ಸ್‌ ಲೈಸೆನ್ಸ್‌ನಲ್ಲೇ ಸರ್ಕಾರ ಚಲಾಯಿಸುವವರು. ಅದರಲ್ಲೂ ಬಿಸಿ ರಕ್ತದವರು. ಹೋರಾಟ ಮನೋಭಾವದವರು. ಕೆಲವರಂತೂ ಇನ್ನೂ ಟೀನ್‌ ಏಜ್‌ ಯುವಕರು. ಇವರನ್ನೆಲ್ಲ ಕೆರಳಿಸಿ ಬಿಡುಮದು ನಮಗೆ ಕಷ್ಟವೇನಲ್ಲ. ಬಿಸಿ ರಕ್ತವನ್ನು ಒಂದಷ್ಟು ಕುದಿಸಿ ಬಿಟ್ಟರೆ... ಸರ್ಕಾರ ಬೀಳಿಸುವ ನಮ್ಮ ಕೆಲಸ ಸಲೀಸು.

ಹಾಗಂತ, ಸರ್ಕಾರ ನಡೆಸಲು ಭಾರೀ ಅನುಭವ ಬೇಕು ಅಂತೇನಿಲ್ಲ. ಹೊಸ ಯುವಕರು ಮನಸ್ಸು ಮಾಡಿದರೆ ಉತ್ತಮ ಆಡಳಿತ ನೀಡಲೂಬಹುದು. ಇಡೀ ದೇಶದಲ್ಲಿ ಯುವ ರಾಜಕಾರಣಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಹುಲ್‌ ಗಾಂಧಿ ಎಂಬ ಯುವಕ ಹೇಗೆ ರಾಷ್ಟ್ರದ ನಾಯಕನನ್ನಾಗಿ ಬೆಳೆಸಲಾಗುತ್ತಿದೆ ನೋಡಿ. ಕರ್ನಾಟಕದಲ್ಲೂ ಯುವ ರಾಜಕಾರಣಿಗಳ ಟ್ರೆಂಡ್‌ ಇದೆ. ಆದರೆ, ಈ ಯುವ ರಾಜಕಾರಣಿಗಳನ್ನು ರಾಹುಲ್‌ ಗಾಂಧಿಯಂತೆ ಬೆಳೆಸಲು ಯಾರೂ ಯತ್ನಿಸುತ್ತಿಲ್ಲ. ನಾವೂ ಅಷ್ಟೇ... ಈ ಯುವ ರಾಜಕಾರಣಿಗಳು ಪಕ್ಕಾ ನಾಯಕರಾಗಿ ಬೆಳೆಯದಂತೆ ಎಚ್ಚರ ವಹಿಸಬೇಕು. ಈ ಯುವ ರಾಜಾಕಾರಣಿಗಳು ಚಿಲ್ಲರೆ ಪೊಲಿಟ್ರಿಕ್ಸ್‌ನಲ್ಲೇ ಬ್ಯುಸಿಯಾಗಿರುವಂತೆ ನಾಮ ಮುತುವರ್ಜಿ ವಹಿಸಬೇಕು. ಆಗ ಮಾತ್ರ ನಮ್ಮಂಥ ಅತೃಪ್ತರಿಗೆ ಉಜ್ವಲ ಭವಿಷ್ಯವಿರುತ್ತದೆ. ಇಲ್ಲವಾದರೆ, ನಮ್ಮಂಥ ಅನುಭವಿ, ಸದಾ ಅತೃಪ್ತ ರಾಜಕಾರಣಿಗಳಿಗೆ ಅಪಾಯ ಕಾದಿದೆ!

ಅದಕ್ಕೇ... ಈ ಯುವಕರ ಸರ್ಕಾರವನ್ನು ಕೆಡವೋಣು ಬಾರಾ... ಕೆಡವೋಣು ಬಾ!

ಇಂತಿ
ಸಂಘಟನಾ ಕಾರ್ಯದರ್ಶಿ
ಅಖಿಲ ಕರ್ನಾಟಕ ಅತೃಪ್ತ ಶಾಸಕರ ಒಕ್ಕೂಟ



Kannada Prabha issue dated January 30, 2006

Let's Pull it Down... Let's Pull it Down...

--

Tuesday, January 24, 2006

ಕಾಂಗ್ರೆಸ್‌ ರಾಜಕಾರಣಕ್ಕೆ ವಿಶ್ವನಾಥನ್‌ ಆನಂದ್‌ ನೆರಮ

ದೇವೇಗೌಡರ ‘ಫೋರ್ಕ್‌’ ಅರ್ಥ ಮಾಡಿಕೊಳ್ಳಲು ಅಂತಾರಾಷ್ಟ್ರೀಯ ಚೆಸ್‌ ಗ್ರಾಂಡ್‌ ಮಾಸ್ಟರ್‌ಗೆ ಮಾತ್ರ ಸಾಧ್ಯ!

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಇಂಥ ಭಯಂಕರ ಫೋರ್ಕ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ಫೋರ್ಕ್‌ ಎದರಿಸಲು ವಿಶ್ವ ಚೆಸ್‌ ಪಟು ವಿಶ್ವನಾಥನ್‌ ಆನಂದ್‌ಗೆ ಮಾತ್ರ ಸಾಧ್ಯ!



ಗೆ-
ಸ್ಯಾಮ್‌ ಪಿತ್ರೊಡ
ರಾಜೀವ್‌ ಗಾಂಧಿಯವರ ಮಾಜಿ ತಾಂತ್ರಿಕ ಸಲಹೆಗಾರರು

ಇಂದ-
ನರಾರ್ದನ ಪೂಜಾರಿ
ಕಾಂಗ್ರೆಸ್‌ ಕಾರ್ಯಕರ್ತರು, ಕರ್ನಾಟಕ

ಮಾನ್ಯರೇ,
ತಾಮ ಶ್ರೀಯುತ ರಾಜೀವ್‌ ಗಾಂಧಿಯವರ ಮಿತ್ರರಾಗಿ ಇದ್ದಂಥವರು. ಅಷ್ಟೇ ಅಲ್ಲ... ಶ್ರೀ ರಾಜೀವ್‌ಜೀಯವರ ತಾಂತ್ರಿಕ ಸಲಹೆಗಾರರಾಗಿ ಇದ್ದಂಥವರು. ಮಾನ್ಯ ರಾಜೀವ್‌ ಗಾಂಧಿಯವರು ಪ್ರಧಾನ ಮಂತ್ರಿಯಾಗಿದ್ದಾಗ ಅವರ ತಲೆಯಲ್ಲಿ ೨೧ನೇ ಶತಮಾನದ ಕಂಪ್ಯೂಟರ್‌ ಚಿಪ್‌ಗಳನ್ನು ಅಳವಡಿಸಿದಂಥವರು. ಪಬ್ಲಿಕ್‌ ಟೆಲಿಫೋನ್‌ ಬೂತ್‌ ಎನ್ನತಕ್ಕಂಥ ಕಲ್ಪನೆಯನ್ನು ಶ್ರೀ ರಾಜೀವ್‌ ಗಾಂಧಿಯವರ ಮೂಲಕ ಈ ದೇಶಕ್ಕೆ ಪರಿಚಯಿಸಿರತಕ್ಕಂಥವರು. ಈ ಮೂಲಕ... ಭಾರತದಲ್ಲಿ ದೂರಸಂಪರ್ಕ ಎನ್ನತಕ್ಕಂಥ ಕ್ರಾಂತಿಗೆ ಕಾರಣರಾಗಿರತಕ್ಕಂಥವರು. ಈಗ ಶ್ರೀಮತಿ ಸೋನಿಯಾಜೀ ಹಾಗೂ ಶ್ರೀ ರಾಹುಲ್‌ಜೀ ಏನಿದ್ದಾರೆ.... ಅವರ ನಿಕಟವರ್ತಿಯಾಗಿದ್ದೀರಿ. ತಾಮ ಮಾತನಾಡತಕ್ಕಂಥ ಮಾಡರ್ನ್‌ ಮಾತುಗಳು ಏನಿವೆ... ಅವನ್ನ ಶ್ರೀಮತಿ ಸೋನಿಯಾಜೀಯವರೂ, ಶ್ರೀ ರಾಹುಲ್‌ ಗಾಂಧಿಯವರೂ ಕಿವಿಗೊಟ್ಟು ಕೇಳಿಸಿಕೊಳ್ಳುತ್ತಾರೆ.

ಆದ್ದರಿಂದ ನಾನು ನಿಮ್ಮಲ್ಲಿ ನಿವೇದನೆ ಮಾಡಿಕೊಳ್ಳತಕ್ಕಂಥದ್ದು ಏನಿದೆ ಅಂದರೆ, ದಯವಿಟ್ಟು ತಾಮ ಕರ್ನಾಟಕ ಕಾಂಗ್ರೆಸ್‌ನ ನೆರವಿಗೆ ಬರಬೇಕು. ಇದನ್ನ ನಾನು ನರಾರ್ದನ ಪೂಜಾರಿ ಮಾತ್ರ ಅಲ್ಲ, ಇಡೀ ಕರ್ನಾಟಕ ರಾಜ್ಯವೆ... ಬಹಳ ಕಳಕಳಿಯಿಂದ ಬೇಡಿಕೊಳ್ಳುತ್ತಿದೆ.

ಹಾಗೆಂದಾಕ್ಷಣ, ನಾವೇನು ರಾಜಕೀಯ ಮಾಡ್ತೇವೆ ಆ ರಾಜಕೀಯವನ್ನು ನೀವೂ ಮಾಡಬೇಕು ಅಂತಾ ಹೇಳ್ತಾ ಇಲ್ಲ. ನೀವೇನು ಮಾಡಬೇಕು? ಒಂದು ಸಣ್ಣ ಸಹಾಯ ಮಾಡಬೇಕು. ಏನದು? ಶ್ರೀಮತಿ ಸೋನಿಯಾಜೀಯವರು, ಶ್ರೀ ರಾಹುಲ್‌ ಗಾಂಧಿಯವರೂ ಏನಿದ್ದಾರೆ... ಅವರಿಗೆ ಒಂದು ಮಾತು ಹೇಳಬೇಕು. ಯಾವ ಮಾತು?

ವಿಶ್ವನಾಥನ್‌ ಆನಂದ್‌ ಏನಿದ್ದಾರೆ... ಅಂತಾರಾಷ್ಟ್ರೀಯ ಚದುರಂಗ ಗ್ರಾಂಡ್‌ ಮಾಸ್ಟರ್‌... ಅವರನ್ನ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ವ್ಯವಹಾರಗಳಿಗೆ ಸಂಬಂಧಿಸಿ ಸೋನಿಯಾಜೀಯವರು ತಮ್ಮ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಬೇಕು.... ಈ ಮಾತನ್ನ ತಾಮ ಶ್ರೀಮತಿ ಸೋನಿಯಾಜೀ ಅವರಿಗೆ ಹೇಳಬೇಕು. ನೀಮ ನೀಡಿರತಕ್ಕಂಥ ಈ ಸಲಹೆ ಏನಿದೆ ಅದನ್ನ ಶ್ರೀಮತಿ ಸೋನಿಯಾಜಿಯವರು ಕೇಳ್ತಾರೆ.

ಈ ದೇವೇಗೌಡರು ಏನಿದ್ದಾರೆ... ಅವರ ಹಾವಳಿ ಭಾಳಾ ಆಗಿದೆ. ಅವರ ರಾಜಕೀಯ ಲೆಕ್ಕಾಚಾರ ಏನಿದೆ... ಅದು ಭಾಳ ಆಳವಾಗಿದೆ. ಅವರ ತಂತ್ರ ಕುತಂತ್ರ ಏನಿದೆ... ಅಮಗಳನ್ನ ಅರ್ಥ ಮಾಡಿಕೊಳ್ಳೋಕೆ... ಕರ್ನಾಟಕದ ಯಾಮದೇ ಕಾಂಗ್ರೆಸ್‌ ನಾಯಕರಿಗೂ ಆಗ್ತಾ ಇಲ್ಲ. ಕಾಂಗ್ರೆಸ್‌ ಅಷ್ಟೇ ಏನು... ಯಾವ ಪಕ್ಷದ ನಾಯಕರಿಗೂ ಆಗ್ತಾ ಇಲ್ಲ.

ಈ ದೇವೇಗೌಡರು ಏನಿದ್ದಾರೆ... ಅವರಿಗೆ ಉತ್ತರ ಕೊಟ್ಟೂ ಕೊಟ್ಟೂ... ನಮಗೆಲ್ಲ ಸಾಕಾಗಿದೆ. ಅವರ ತಂತ್ರಗಳು ಏನಿದ್ದಾವೆ... ಅಮಗಳಿಗೆ ಪ್ರತಿತಂತ್ರ ಹುಡುಕೀ ಹುಡುಕೀ ನಮಗೆ ಸುಸ್ತಾಗಿದೆ. ನಮ್ಮ ಬುದ್ಧಿಯೇನಿತ್ತು.... ಎಲ್ಲಾ ಖರ್ಚಾಗಿಹೋಗಿದೆ. ಆದರೆ, ಈ ಗೌಡರು ಏನಿದ್ದಾರೆ... ಅವರು ಒಬ್ಬರೇ ಕರ್ನಾಟಕದ ಎಲ್ಲಾ ರಾಜಕಾರಣಿಗಳನ್ನೂ ಒಂಟಿಯಾಗಿ ಆಡಿಸುತ್ತಿದ್ದಾರೆ!

ಗೌಡರು ಬಹುಶಃ ಅವರ ಶಾಲಾ, ಕಾಲೇಜು ದಿನಗಳಲ್ಲಿ ಚೆಸ್‌ ಛಾಂಪಿಯನ್‌ ಆಗಿದ್ರೂ ಅಂತ ಕಾಣುತ್ತೆ! ಅದಕ್ಕೇ... ದೇವೇಗೌಡರ ಪ್ರತಿ ರಾಜಕೀಯ ನಡೆಗಳು ಏನಿವೆ... ಅವೆಲ್ಲ ಪಕ್ಕಾ ಚದುರಂಗದ ನಡೆಗಳ ಹಾಗಿರುತ್ತವೆ. ಯಾವ ಕಾಯಿಯನ್ನು ಇಲ್ಲಿ, ಈಗ ನಡೆಸಿದರೆ... ಇಪ್ಪತ್ತು ನಡೆಯ ನಂತರ ಎಲ್ಲಿ ಯಾವ ಕಾಯಿ ಉದುರಿಹೋಗುತ್ತೆ... ಯಾವ ಕಾಯಿಯನ್ನು ಈಗ ಬಲಿಕೊಟ್ಟರೆ.... ಹತ್ತನೆ ನಡೆಯಲ್ಲಿ ಯಾವ ದೊಡ್ಡ ಕಾಯಿ ತಮಗೆ ಸಿಗುತ್ತೆ... ಅಂತ ಗೌಡರಿಗೆ ಕರೆಕ್ಟಾಗಿ ಲೆಕ್ಕ ಸಿಗುತ್ತೆ. ಅವರ ಈ ಪ್ರಮಾಣದ ಲೆಕ್ಕಾಚಾರ ಸಾಮರ್ಥ್ಯ ನೋಡಿದರೆ, ದೇವೇಗೌಡರು ಇಲ್ಲಿ ರಾಜಕೀಯಕ್ಕೆ ಬರದೇ ಇದ್ದಿದ್ದರೆ ಅವರು ಖಂಡಿತ ಕ್ಯಾಸ್ಪರೋವ್‌, ಕಾರ್ಪೋವ್‌ ಅವರನ್ನೆಲ್ಲ ನುಂಗಿ ನೀರು ಕುಡಿದು ವಿಶ್ವ ಗ್ರಾಂಡ್‌ ಮಾಸ್ಟರ್‌ ಆಗೇ ಬಿಡುತ್ತಿದ್ದರು ಅಂತ ನಾನು ಹೇಳುತ್ತೇನೆ!

ಅದಕ್ಕಾಗೇ... ನಾನು ಹೇಳೋದು ಇಷ್ಟೇ: ಗೌಡರಿಗೆ ನಾಮ ಪ್ರತಿತಂತ್ರ ಹೂಡಬೇಕು ಅಂದರೆ... ಕ್ಯಾಸ್ಪರೋವ್‌, ಕಾರ್ಪೋವ್‌ ಅವರಿಗಿಂತ ಬುದ್ಧಿವಂತ ಚೆಸ್‌ ಮಾಸ್ಟರನ್ನು ಕಾಂಗ್ರೆಸ್‌ ಪಕ್ಷ ಹಿಡಿಯಬೇಕು. ಗೌಡರಿಗಿಂತ ಚೆನ್ನಾಗಿ ಲೆಕ್ಕ ಹಾಕಬಲ್ಲ ಚೆಸ್‌ ಪಟು ಮಾತ್ರ ಕಾಂಗ್ರೆಸ್‌ನ ಷಡ್ಯಂತ್ರಗಳನ್ನು ರೂಪಿಸಬೇಕು. ಅಂಥ ವ್ಯಕ್ತಿಗಳು ಭಾರತದಲ್ಲಿ ಯಾರಾದರೂ ಇದ್ದಾರಾ... ಅಂತ ಹುಡುಕಿದರೆ ನಮಗೆ ಕಂಡಿದ್ದು ಒಂದೇ ಹೆಸರು... ಅದು ಸದ್ಯ ಜಗತ್ತಿನ ಅತಿ ಬುದ್ಧಿವಂತ ಚೆಸ್‌ ಪಟು... ವಿಶ್ವ ಗ್ರಾಂಡ್‌ ಮಾಸ್ಟರ್‌ ವಿಶ್ವನಾಥನ್‌ ಆನಂದ್‌!

ಆತ ಏನಿದ್ದಾನೆ.... ಆತ ಮಾತ್ರ ದೇವೇಗೌಡರ ಚಾಣಕ್ಯ ರಾಜಕೀಯ ನಡೆ ಎದುರಿಸಬಲ್ಲ ಅಂತ ತಾಮ ದಯವಿಟ್ಟು ಮೇಡಂ ಅವರಿಗೆ ಸಲಹೆ ನೀಡಬೇಕು. ಅಷ್ಟೇ ಅಲ್ಲ. ನೀಮ ಹೇಳಬೇಕು... ಆದಷ್ಟು ಬೇಗ ಅತಿ ಬುದ್ಧಿವಂತ ಚೆಸ್‌ ಪಟು ಕಾಂಗ್ರೆಸ್‌ನ ಸಲಹೆಗಾರ ಆಗದಿದ್ದರೆ, ಗೌಡರ ನಡೆಗಳಿಗೆ ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಅಷ್ಟೇ ಅಲ್ಲ, ಎಲ್ಲ ಪಕ್ಷಗಳೂ ತರಗೆಲೆಗಳಾಗುತ್ತವೆ... ಅಂತ!

ಪಿತ್ರೊಡಾ ಅವರೇ,
ನಮ್ಮ ದಕ್ಷಿಣ ಕನ್ನಡದಲ್ಲಿ ಪತ್ರೊಡೆ ಅಂತ ಒಂದು ತಿನಿಸಿದೆ. ನಿಮ್ಮ ಹೆಸರು ಏನಿದೆ... ಅದು ಸ್ಪಲ್ಪ ಪತ್ರೊಡೆ ಥರ ಕೇಳಿಸ್ತದೆ. ಹಾಗಾಗಿ, ನಿಮ್ಮ ಹೆಸರು ನಮಗೆ ಭಾಳಾ ಇಷ್ಟ. ಅದಿರಲಿ... ಆ ವಿಷಯ ಈಗ ಬೇಡಾ. ನಾವೀಗ ಮಾತನಾಡಬೇಕಿರತಕ್ಕಂಥ ವಿಷಯ ಗೌಡರ ರಾಜಕೀಯ ಚದುರಂಗದ ಬಗ್ಗೆ.

ಈ ಗೌಡರು ಈಗೇನು ಮಾಡಿದ್ದಾರೆ... ಇದಕ್ಕೆ ಚೆಸ್‌ ಆಟದಲ್ಲಿ ಫೋರ್ಕ್‌ ಎನ್ನತಕ್ಕಂಥ ಹೆಸರಿದೆ. ಅಂದರೆ, ಚದುರಂಗದ ಕುದುರೆಯನ್ನು ಒಮ್ಮೆ ಹಾರಿಸಿದರೆ... ಎದುರಾಳಿಯ ಎರಡು ಕಾಯಿಗಳ ಮೇಲೆ ಏಕಕಾಲದಲ್ಲಿ ದಾಳಿಯಾಗುತ್ತದೆ. ಎದುರಾಳಿ ಒಂದು ಕಾಯಿಯನ್ನು ಈ ದಾಳಿಯಿಂದ ತಪ್ಪಿಸಿಕೊಂಡರೆ ಇನ್ನೊಂದು ಕಾಯಿ ಕುದುರೆಗೆ ಆಹುತಿಯಾಗುಮದಂತೂ ಗ್ಯಾರಂಟಿ.

ಈ ಫೋರ್ಕ್‌ ಏನಿದೆ... ಇದು ಚದುರಂಗದಲ್ಲಿ ಭಯಂಕರ ಡೆಡ್ಲಿ ಮೂವ್‌. ಗೌಡರು ಈಗ ಕರ್ನಾಟಕ ರಾಜಕೀಯದ ಮೇಲೆ ಮಾಡಿರುವ ದಾಳಿ ಏನಿದೆ... ಇದು ಫೋರ್ಕ್‌ ಅಲ್ಲದೇ ಬೇರಾಮದೂ ಅಲ್ಲ. ಒಂದು ಕಡೆ... ಆ ಕುಮಾರಸ್ವಾಮಿ ಏನಿದ್ದಾರೆ... ಬಿಜೆಪಿ ಜೊತೆ ಸೇರಿ ಸರ್ಕಾರ ಮಾಡುತ್ತೇನೆ ಅಂತ ಜೆಡಿಎಸ್‌ ಶಾಸಕರನ್ನೂ ಹೈಜಾಕ್‌ ಮಾಡಿದ್ದಾರೆ. ಇನ್ನೊಂದು ಕಡೆ... ದೇವೇಗೌಡರು... ಸೋನಿಯಾ ಜೊತೆ ಮಾತುಕತೆಗೆ ಇಳಿದಿದ್ದಾರೆ. ತಮ್ಮ ಒಂಬತ್ತು ಷರತ್ತುಗಳಿಗೆ ಒಪ್ಪಿದರೆ... ಈಗಲೂ ಕಾಂಗ್ರೆಸ್‌ ಜೊತೆಯೇ ಸರ್ಕಾರ ಮಾಡುತ್ತೇನೆ ಅಂತ ಭಾಷೆ ಕೊಟ್ಟಿದ್ದಾರೆ. ಆ ಕುಮಾರ ನನ್ನ ಮಗ. ಆತ ನಾನು ಹೇಳಿದಂತೆ ಕೇಳುತ್ತಾನೆ...
ಯೂ ಡೋಂಟ್‌ ವರಿ ಅಂತ ಗೌಡರು ಪದೇ ಪದೇ ಹೇಳುತ್ತಿದ್ದಾರೆ. ಇದರ ಅರ್ಥವೇನು?

ಸೋನಿಯಾಜೀಯವರು ಗೌಡರ ಷರತ್ತಿಗೆ ಸೋತರೆ... ಈಗಿನ ರಾಜಕೀಯ ಆಟದಲ್ಲಿ ಎಸ್‌. ಎಂ. ಕೃಷ್ಣ ಅವರ ಗ್ಯಾಂಗು ಹಾಗೂ ಸಿದ್ದರಾಮಯ್ಯ ಗ್ಯಾಂಗು ಒಟ್ಟಿಗೇ ಬಲಿ! ಒಂದು ವೇಳೆ ಷರತ್ತಿಗೆ ಸೋನಿಯಾಜೀಯವರು ಸೋಲದಿದ್ದರೆ... ಕಾಂಗ್ರೆಸ್‌ ಅಧಿಕಾರವೇ ಬಲಿ! ಇದರರ್ಥ ಹೇಗೆ ನೋಡಿದರೂ ಕಾಂಗ್ರೆಸ್ಸಿಗೆ ಒಂದಲ್ಲ ಒಂದು ಲಾಸ್‌!

ಇಂಥ ಭಯಂಕರ ಫೋರ್ಕಿಂಗ್‌ನಲ್ಲಿ ಕಾಂಗ್ರೆಸ್ಸನ್ನು ಸಿಕ್ಕಿ ಹಾಕಿಸಿದ ಗೌಡರಿಗೆ ಎದುರಾಗಿ ಪ್ರತಿತಂತ್ರ ರೂಪಿಸಲು ಕಾಂಗ್ರೆಸ್ಸಿನಲ್ಲಿ ಯಾವ ನಾಯಕರಿಗೂ ಆಗಲಿಲ್ಲ. ಅದಕ್ಕೇ... ಇಂಥ ನೂರಾರು ಫೋರ್ಕ್‌ಗಳನ್ನ ಎದುರಿಸಿ ಗೆದ್ದ ಅಭ್ಯಾಸವಿರುವ ವಿಶ್ವನಾಥನ್‌ ಆನಂದ್‌ ಅವರ ಸಲಹೆಯನ್ನು ಸೋನಿಯಾಜೀಯವರು ಪಡೆಯುವಂತೆ ನೀಮ ಮಾಡಬೇಕು. ಈ ಮೂಲಕ ನಮ್ಮನ್ನೆಲ್ಲ ನೀಮ ಕಾಪಾಡಬೇಕು ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಪರವಾಗಿ ನಾನು ನರಾರ್ದನ ಪೂಜಾರಿ ಕಳಕಳಿಯ ವಿನಂತಿ ಮಾಡಿಕೊಳ್ಳುತ್ತೇನೆ.

ಜೈ ಹಿಂದ್‌, ಜೈ ಕರ್ನಾಟಕ


Kannada Prabha issue dated January 23, 2006
Vishwanathan Anand To Help Congress Politics Against H D Dewegowda

(In chess, a fork is a tactic that uses one piece to attack two or more of the opponent's pieces at the same time, to achieve material gain.)

--

Tuesday, January 17, 2006

ಸ್ತ್ರೀಯರು ಮನೆಯಿಂದ ಹೊರಬರದಂತೆ ನಿಷೇಧಾಜ್ಞೆ

ಪೊಲೀಸ್‌ ಹಿರಿಯಾಧಿಕಾರಿ ಟಿಂಟೆಡ್‌ ಸಿಂಗ್‌ ಅವರಿಗೆ ಕೋಲ್ಯ ಸಿಂಗ್‌ ನೀಡಿದ ಹೊಸ ಲಾ ಆಂಡ್‌ ಆರ್ಡರ್‌ ಸಲಹೆ

ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಓಡಾಡುಮದರಿಂದಲೇ ಎಂಬುದು ಪೊಲೀಸರ ಅಂದಾಜು. ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ಆದ್ದರಿಂದ ಅವರು ಮನೆಯಿಂದ ಹೊರಬರಲು ನಿಷೇಧ ಹೇರಿದರೆ ಅಪರಾಧ ಪ್ರಮಾಣ ಗಣನೀಯವಾಗಿ ತಗ್ಗುತ್ತದೆ!

ಮಾನ್ಯ ಟಿಂಟೆಡ್‌ ಸಿಂಗ್‌ರವರು
ಪೊಲೀಸ್‌ ಹಿರಿಯಾಧಿಕಾರಿಗಳು, ಇವರಿಗೆ

ಕೋಲ್ಯ ಸಿಂಗ್‌ ಎಂಬ, ಅಜಮಾಸು ೮೩ ವರ್ಷದ,
ಬೆಂಗಳೂರು ನಿವಾಸಿಯಾದ ನಾನು ಮಾಡುವ ಪ್ರಣಾಮಗಳು.

ಬೆಂಗಳೂರಿನ ಜಗತ್‌ಪ್ರಸಿದ್ಧ ಎಂ.ಜಿ. ರಸ್ತೆಯನ್ನು ಭಾನುವಾರ ಬಂದ್‌ ಮಾಡಿ, ಮಕ್ಕಳ ಸ್ಕೇಟಿಂಗ್‌ ರಸ್ತೆಯನ್ನಾಗಿ ಆದೇಶ ಹೊರಡಿಸಲು ಉದ್ದೇಶಿದ್ದ, ಖ್ಯಾತ ಪೊಲೀಸ್‌ ಅಧಿಕಾರಿ ಸಾಂಗ್ಲಿಯಾನಾ ನಂತರ ಅತ್ಯಂತ ಜನರಂಜನಾತ್ಮಕ ನಿರ್ಧಾರ ಕೈಗೊಳ್ಳುತ್ತಿರುವ ತಮ್ಮಂಥ ಪೊಲೀಸ್‌ ಅಧಿಕಾರಿಗೆ ನನ್ನ ಅಭಿನಂದನೆಗಳು.

ಎಲ್ಲಕ್ಕಿಂತ ಮುಖ್ಯವಾಗಿ ಕಾಲ್‌ಸೆಂಟರ್‌ ಉದ್ಯೋಗಿ ಪ್ರತಿಭಾಳ ಅತ್ಯಾಚಾರ ಹಾಗೂ ಕೊಲೆಯನ್ನು ಹೇಗೆ ತಪ್ಪಿಸಬಹುದಿತ್ತು ಎಂಬುದಕ್ಕೆ ನೀಮ ಉತ್ತರ ಕಂಡು ಹಿಡಿದು ಮಹಾನ್‌ ಸಾಧನೆ ಮಾಡಿದ್ದೀರಿ. ನಿಮ್ಮ ಸಂಶೋಧನೆಯ ಪ್ರಕಾರ, ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಕಪ್ಪಾಗಿದ್ದದ್ದೇ ಇಡೀ ದುರಂತಕ್ಕೆ ಕಾರಣ! ಆಕೆ ಪ್ರಯಾಣಿಸಿದ ವಾಹನದ ಗಾಜುಗಳು ಟಿಂಟೆಡ್‌ ಗ್ಲಾಸುಗಳಾಗಿರದೇ, ಪಾರದರ್ಶಕವಾಗಿದ್ದರೆ ಆಕೆಯ ಅತ್ಯಾಚಾರವೂ ಆಗುತ್ತಿರಲಿಲ್ಲ. ಕೊಲೆಯೂ ಆಗುತ್ತಿರಲಿಲ್ಲ! ಇಂಥ ಸತ್ಯ ಶೋಧನೆ ಮಾಡಿದ ತಮ್ಮ ಸಾಮರ್ಥ್ಯವನ್ನು ಎಷ್ಟು ಬಣ್ಣಿಸಿದರೂ ಕಡಿಮೆಯೇ!

ಈ ತಮ್ಮ ಸತ್ಯ ಶೋಧನೆಯ ನಂತರ, ಇಂತಹ ಘಟನೆಗಳು ಮರುಕಳಿಸದಂತೆ ಮುಂಜಾಗ್ರತೆ ವಹಿಸಲು ತಮ್ಮ ಇಲಾಖೆ ಒಂದು ಪಾರದರ್ಶಕ ಕ್ರಮ ಕೈಗೊಂಡಿದ್ದು ಸರಿಯಾಗಿಯೇ ಇದೆ. ಬೆಂಗಳೂರಿನಲ್ಲಿರುವ ಸುಮಾರು ೨ ಲಕ್ಷ ಕಾರುಗಳ ಕಿಟಕಿ ಗಾಜುಗಳ ತಂಪಿನ ಪೊರೆಯನ್ನು ತೆಗೆಯಬೇಕೆಂದು ತಮ್ಮ ಇಲಾಖೆ ಆದೇಶಿಸಿದೆ. ಬೆಂಗಳೂರಿನ ಎಲ್ಲ ವಾಹನಗಳ ತಂಪಿನ ಪೊರೆ ತೆಗೆದುಬಿಟ್ಟರೆ ಇನ್ನು ಮುಂದೆ ಇಂತಹ ಅಪರಾಧಗಳು ನಡೆಯುಮದೇ ಇಲ್ಲ ಎಂಬುದು ಶತಃಸಿದ್ಧ!

ಈ ಆದೇಶವನ್ನು ಕೆಲಮ ಅಜ್ಞಾನಿಗಳು ಟೀಕಿಸುತ್ತಿದ್ದಾರೆ. ಯಾಮದೋ ಓಬಿರಾಯನ ಕಾಲದ ಕಾನೂನನ್ನು ಈಗ ಅನುಷ್ಠಾನ ಮಾಡುವ ಮೂಲಕ ಪೊಲೀಸ್‌ ಇಲಾಖೆ ಮುಗ್ಧ ನಾಕರಿಕರಿಗೆ ಕಿರುಕಳ ನೀಡುತ್ತಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿರುಮದು ಖಂಡಿತ ತಪುý್ಪ.

ಈಗ ಜಗತ್ತೇ ಬದಲಾಗಿದೆ ಅಂತ ನಮ್ಮ ಓಬಿರಾಯನ ಕಾಲದ ಕಾನೂನನ್ನೂ ಬದಲಾಯಿಸುಮದು ಸರಿಯೇ? ಪ್ರಪಂಚ ಬದಲಾಗಿದೆ ಅಂತ ಭಗವದ್ಗೀತೆಯನ್ನೂ ತಿದ್ದಲು ಆಗುತ್ತದೆಯೇ? ಆದ್ದರಿಂದ ಜನರಿಗೆ ಅನನುಕೂಲತೆ ಆಗುತ್ತೆ ಅಂತ ಕಾನೂನನ್ನು ಸರಳಮಾಡುಮದು ತರವೇ? ಕಾನೂನು ಅಂದರೆ ಕಠಿಣವಾಗಿರಬೇಕು!

ಈ ಹೊಸ ಆದೇಶದ ಬಗ್ಗೆ ಕೆಲಮ ಗೊಂದಲಗಳಿರುಮದು ನಿಜ. ಆದರೆ, ಅವಕ್ಕೆ ನನ್ನ ಬಳಿ ಉತ್ತರವಿದೆ. ಅಮಗಳನ್ನು ನಿಮಗೆ ತಿಳಿಸುಮದೇ ಈ ಪತ್ರದ ಉದ್ದೇಶ.

ಗೊಂದಲ ೧ : ಈ ಕಾನೂನನ್ನು ಬೆಂಗಳೂರಿನಲ್ಲಿ ಮಾತ್ರ ಜಾರಿಗೆ ತಂದರೆ, ಬೆಂಗಳೂರಿಗೆ ಹೊರಗಿನಿಂದ ಬರುವ ವಾಹನಗಳು ಏನು ಮಾಡಬೇಕು?

ಉತ್ತರ: ಅಮ ಬೆಂಗಳೂರಿಗೆ ಬರುವಾಗ ತಮ್ಮ ತಂಪಿನ ಗಾಜುಗಳನ್ನು ತೆಗೆದುಹಾಕಿ ಪಾರದರ್ಶಕ ಗಾಜುಗಳನ್ನು ಹಾಕಿಕೊಳ್ಳಬೇಕು. ಮತ್ತೆ ಊರಿಗೆ ಹೋದ ನಂತರ ತಂಪಿನ ಗಾಜುಗಳನ್ನು ಹಾಕಿಕೊಳ್ಳಬಹುದು. ಇದು ದುಬಾರಿ ಎನಿಸಿದರೆ, ಇನ್ನೊಂದು ಉಪಾಯವಿದೆ. ಬೆಂಗಳೂರಿಗೆ ತಂಪಿನ ಗಾಜುಗಳನ್ನು ಹಾಕಿಕೊಂಡು ಬಂದಾಗ, ಪೊಲೀಸರು ದಂಡ ಹಾಕುತ್ತಾರೆ. ಅದಷ್ಟನ್ನು ಕೊಟ್ಟು, ಬಂದ ಕೆಲಸ ಮುಗಿಸಿಕೊಂಡು ವಾಪಸ್‌ ಹೋಗಬಹುದು.

ಗೊಂದಲ ೨ : ಕಿಟಕಿ ಗಾಜುಗಳನ್ನು ಪಾರದರ್ಶಕ ಮಾಡಿದರೆ, ಕಾರಿನ ಒಳಗೆ ಇಟ್ಟಿರುಮದೆಲ್ಲ ಕಾಣಿಸುತ್ತದೆ. ಇದರಿಂದ ಕಳ್ಳರಿಗೆ ಯಾವ ಕಾರಿಗೆ ಕನ್ನ ಹಾಕಬೇಕು ಎಂಬುದು ಸುಲಭವಾಗಿ ತಿಳಿಯುತ್ತದೆ.

ಉತ್ತರ: ಕಾರುಗಳು ಇರುಮದು ಬರೀ ಓಡಾಡುಮದಕ್ಕೆ. ಅದನ್ನು ಅಮೂಲ್ಯ ವಸ್ತುಗಳನ್ನು ಇಡುವ ಅಲ್ಮೆರಾ ಮಾಡಬೇಡಿ. ಕಾರಿನಿಂದ ಇಳಿದು ಓಡಾಡುವಾಗ ಕಾರಿನಲ್ಲಿರುವ ಬ್ಯಾಗು, ಫೈಲು, ಷಾಪಿಂಗ್‌ ಮಾಡಿದ ಪೆಟ್ಟಿಗೆಗಳು, ಬ್ರೀಫ್‌ಕೇಸ್‌ ಹಾಗೂ ಸ್ಟೀರಿಯೋ ಸೆಟ್‌ಗಳನ್ನು ನಿಮ್ಮ ಜೊತೆಯೇ ತೆಗೆದುಕೊಂಡು ಹೋಗಿ. ಇದರಿಂದ ಖಾಲಿ ಕಾಣಿಸುವ ಕಾರು ನೋಡಿ ಕಳ್ಳರು ನಿಮ್ಮ ಕಾರಿಗೆ ಕನ್ನ ಹಾಕುಮದಿಲ್ಲ. ಅಥವಾ, ನಿಮ್ಮ ಕಾರಿನ ಜೊತೆ ಒಬ್ಬ ಕಾವಲುಗಾರರನ್ನು ಕರೆದೊಯ್ಯಿರಿ. ನೀಮ ಕಾರಿನಿಂದ ಆಚೆ ಹೋದಾಗ ಆತ ಕಾರು ಕಾಯುತ್ತಿರಲಿ.

ಗೊಂದಲ ೩ : ವಾಹನಗಳ ಕಿಟಕಿ ಗಾಜುಗಳು ಪಾರದರ್ಶಕವಾಗಿದ್ದರೆ, ದೊಡ್ಡ ಸಿನಿಮಾ ಸ್ಟಾರ್‌ಗಳು, ಖ್ಯಾತನಾಮರಿಗೆ ಕಷ್ಟವಾಗುತ್ತದೆ. ಏಕೆಂದರೆ, ಕಾರಿನೊಳಗಿದ್ದವರು ಯಾರು ಅಂತ ಕಾಣಿಸಿ ಜನ ವಾಹನಕ್ಕೆ ಮುಗಿಬೀಳಬಹುದು. ಅಲ್ಲದೇ, ಯಾಮದೇ ಕುಟುಂಬದ ಪ್ರವಾಸದಲ್ಲೂ ಪ್ರೆೃವಸಿ ಇರುಮದಿಲ್ಲ.

ಉತ್ತರ: ಸ್ಟಾರ್‌ಗಳು ಹಾಗೂ ಖ್ಯಾತನಾಮರು ಪಾರದರ್ಶಕ ಕಿಟಕಿಗಳ ವಾಹನಗಳಲ್ಲಿ ಓಡಾಡುಮದನ್ನು ಬಿಡಬೇಕು. ಅವರು ಸರಕು ಸಾಗಣೆಯ ವಾಹನದೊಳಗೆ ಕುಳಿತರೆ ಒಳಗೆ ಯಾರಿದ್ದಾರೆ ಎಂದು ಹೊರ ಜಗತ್ತಿಗೆ ತಿಳಿಯುಮದಿಲ್ಲ. ಮುಚ್ಚಿದ ಕ್ಯಾಬ್‌, ಲಾರಿ, ಮಾರುತಿ ಕಾರ್ಗೋ ಓಮ್ನಿ ಅಥವಾ ಟೆಂಪೋ ರಿಕ್ಷಾದಂತಹ ವಾಹನಗಳಿಗೆ ಕಿಟಕಿಯೇ ಇರುಮದಿಲ್ಲ. ಆದ್ದರಿಂದ ಒಳಗೆ ಕುಳಿತ ಖ್ಯಾತನಾಮರು ಹೊರಗಿನ ಜನರಿಗೆ ಕಾಣಿಸುಮದಿಲ್ಲ. ಇದರಿಂದ ಖ್ಯಾತನಾಮರು ನಿರಾಳವಾಗಿ ಓಡಾಡಬಹುದು. ಅಲ್ಲದೇ, ಓಡಾಡುವಾಗ ಪ್ರೆೃವಸಿ ಬೇಕು ಎನ್ನುವ ಕುಟುಂಬಗಳೂ ಸಹ ಇಂತಹ ಸರಕು ಸಾಗಣೆ ವಾಹನವನ್ನೇ ಬಳಸಬಹುದು.

ಗೊಂದಲ ೪ : ಪಾರದರ್ಶಕ ಗಾಜುಗಳಿದ್ದರೆ ರಾತ್ರಿ ವೇಳೆ ಮಹಿಳೆಯರು ಕಾರು ಓಡಿಸುಮದು ಕಷ್ಟ. ಏಕೆಂದರೆ, ಮಹಿಳೆಯರು ಕಾರು ಓಡಿಸುಮದು ಕಂಡರೆ ಪುಂಡರಿಂದ ಆಪಾಯ ಆಗಬಹುದು. ಇದರಿಂದ ಮಹಿಳೆಯರಿಗೆ ರಾತ್ರಿ ಕಾರು ಓಡಿಸಲು ಭಯವಾಗುತ್ತದೆ.

ಉತ್ತರ: ಮಹಿಳೆಯರು ರಾತ್ರಿ ವೇಳೆ ಮನೆಯಲ್ಲಿ ಇರುಮದು ಬಿಟ್ಟು ಯಾಕೆ ಕಾರು ಓಡಿಸಬೇಕು? ಮಹಿಳೆಯರು ಮನೆಯ ಹೊಸ್ತಿಲು ದಾಟುತ್ತಿರುಮದೇ ಈ ಎಲ್ಲ ಸಮಸ್ಯೆಗೂ ಕಾರಣ. ರಾಮಾಯಣದಲ್ಲಿ ಲಕ್ಷ್ಮಣ ರೇಖೆಯನ್ನು ದಾಟಿ ಸೀತೆಗೆ ಯಾವ ಗತಿ ಬಂತು ಗೊತ್ತಲ್ಲ? ಹಾಗೆ, ಈಗ ಮಹಿಳೆಯರು ಮನೆ ಬಿಟ್ಟು ಹೊರಗೆ ಬರಬಾರದು. ಅದರಲ್ಲೂ ಸುಂದರ ಯುವತಿಯರು ಹೊರ ಬಂದರೆ, ಯುವಕರು ಕೋತಿಗಳಂತೆ ಆಗುತ್ತಾರೆ. ಆ ಯುವತಿಯರು ಮಿನಿ ಫ್ಯಾಷನ್‌ ಬಟ್ಟೆ ತೊಟ್ಟರಂತೂ ಪಡ್ಡೆಗಳು ಕೋತಿಗಳಿಗೆ ಸುರೆ ಕುಡಿಸಿದಂತೆ ಕುಣಿಯುತ್ತಾರೆ. ಇನ್ನು, ಯವತಿಯರು ಒಂದು ಕುಡಿನೋಟ ಹಾಯಿಸಿ, ಮುಗುಳು ನಗು ಬೀರಿ, ಎರಡು ಮಾತು ಆಡಿದರಂತೂ ಮುಗಿದೇಹೋಯಿತು. ಹುಡುಗರು ಎಂಥ ಅನರ್ಥಕ್ಕೂ ಕೈಹಾಕುತ್ತಾರೆ. ಹಾಗೆ ನೋಡಿದರೆ, ಶೇ.೫೦ರಷ್ಟು ಅಪರಾಧಗಳು ಮಹಿಳೆಯರು ಹಾಗೂ ಹುಡುಗಿಯರ ಕಾರಣದಿಂದಾಗಿಯೇ ನಡೆಯುತ್ತವೆ. ಶೇ.೩೦ರಷ್ಟು ಲಾ ಆಂಡ್‌ ಆರ್ಡ್‌ರ್‌ ಸಮಸ್ಯೆ ಇರುಮದು ಮಹಿಳೆಯರು ರಸ್ತೆಗಳಲ್ಲಿ ಚೆಲ್ಲುಚೆಲ್ಲಾಗಿ ಓಡಾಡುಮದರಿಂದಲೇ ಎಂಬುದು ಒಂದು ಪೊಲೀಸ್‌ ಅಂದಾಜು. ಆದ್ದರಿಂದ, ಮಹಿಳೆಯರು ಮನೆಯಿಂದ ಹೊರಕ್ಕೆ ಬರಲೇಬಾರದು. ಬಂದರೂ ಸಾಯಂಕಾಲದ ನಂತರ ಮಹಿಳೆಯರು ಮನೆಯೊಳಗೇ ಇರಬೇಕು. ಆಗ ಮಹಿಳೆಯರ ಮೇಲಿನ ದೌರ್ಜನ್ಯ ಶೇ.೯೦ರಷ್ಟು ಕಡಿಮೆಯಾಗುತ್ತದೆ. ಈ ಬಗ್ಗೆ ಪೊಲೀಸರು ಒಂದು ನಿಷೇಧಾಜ್ಞೆ ಹೊರಡಿಸಬೇಕು. ಇದಕ್ಕೆ ಪೊಲೀಸರು ಓಬಿರಾಯನ ಕಾಲದ ಲಾ ಆಂಡ್‌ ಆರ್ಡರ್‌ನ ಯಾಮದಾದರೂ ಐಪಿಸಿ ಸೆಕ್ಷನ್ನನ್ನು ತೋರಿಸಬಹುದು.

ಗೊಂದಲ ೫ : ದುಷ್ಕರ್ಮಿಗಳು ಕಿಟಕಿ ಇರುವ ವಾಹನಬಿಟ್ಟು, ಬೆಡ್‌ರೂಮ್‌ನಷ್ಟು ಸ್ಥಳಾಕಾವಕಾಶ ಇರುವ ಲಾರಿಯಂಥ ಸರಕು ಸಾಗಣೆ ವಾಹನ ಬಳಸಿ, ಮಹಿಳೆಯನ್ನು ಅಪಹರಣ ಮಾಡಿ, ಅದರಲ್ಲಿ ಅತ್ಯಾಚಾರ ಮಾಡಬಹುದಲ್ಲ! ಆಗ ಟಿಂಟೆಡ್‌ ಗ್ಲಾಸ್‌ ನಿಷೇಧದಿಂದ ಏನು ಪ್ರಯೋಜನ?

ಉತ್ತರ: ಅದೆಲ್ಲ ನಮಗೆ ಗೊತ್ತಿಲ್ಲ. ನಮ್ಮ ಕಾನೂನು ಇರುಮದು ಕಿಟಕಿ ಇರುವ ವಾಹನಗಳಲ್ಲಿ ಅತ್ಯಾಚಾರ, ಅಪಹರಣ ಮತ್ತಿತ್ಯಾದಿ ದುಷ್ಕರ್ಮ ತಡೆಯಲು ಮಾತ್ರ. ಅದಕ್ಕಾಗಿ, ಮುಂದಿನ ದಿನಗಳಲ್ಲಿ ’ಸರಕು ಸಾಗಣೆ ವಾಹನಕ್ಕೂ ಬಸ್‌ನಂತೆ ಕಿಟಕಿಗಳು ಇರಬೇಕು ಹಾಗೂ ಅಮಗಳಿಗೆ ಟಿಂಟೆಡ್‌ ಗ್ಲಾಸ್‌ ಇರಬಾರದು’ ಎಂದು ಇನ್ನೊಂದು ಆದೇಶ ಹೊರಡಿಸಿ ಆ ಸರಕು ಸಾಗಣೆ ವಾಹನಗಳನ್ನೂ ಟಿಂಟೆಡ್‌ ಗ್ಲಾಸ್‌ ಕಾನೂನಿನ ವ್ಯಾಪ್ತಿಗೆ ತರಬಹುದು. ಅಲ್ಲಿವರೆಗೂ ದುಷ್ಕರ್ಮಿಗಳು ತಮ್ಮ ಕೃತ್ಯವನ್ನು ಸರಕು ಸಾಗಣೆ ವಾಹನಗಳಲ್ಲಿ ನಡೆಸಬಹುದು.

ಗೊಂದಲ ೬ : ಟಿಂಟೆಡ್‌ ಗ್ಲಾಸ್‌ ಇಲ್ಲದಿದ್ದರೂ ದುಷ್ಕರ್ಮಿಗಳು ರಾಜಾರೋಷವಾಗಿ ಪಾರದರ್ಶಕ ಕಿಟಕಿಗಳ ವಾಹನಗಳಲ್ಲೇ ಬಂದು ಅಪರಾಧ ನಡೆಸುವ ಎಷ್ಟೋ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ತೋರಿಸುತ್ತಾರಲ್ಲ? ಅಪರಾಧಕ್ಕೂ ಟಿಂಟೆಡ್‌ ಗ್ಲಾಸಿಗೂ ಏನು ಸಂಬಂಧ?

ಉತ್ತರ: ಚಲನಚಿತ್ರಗಳೇ ಬಹುತೇಕ ಅಪರಾಧಗಳಿಗೆ ಕಾರಣ ಎಂದು ಇನ್ನೊಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಆದ್ದರಿಂದ ಬೆಂಗಳೂರಿನಲ್ಲಿ ಎಲ್ಲಾ ಚಲನಚಿತ್ರಗಳ ಪ್ರದರ್ಶನವನ್ನೂ ನಿಷೇಧಿಸಬಹುದು. ಟಿಂಟೆಡ್‌ ಗ್ಲಾಸ್‌ ನಿಷೇಧಿಸಿದ ಪೊಲೀಸರಿಗೆ ಇದೇನೂ ದೊಡ್ಡ ಕೆಲಸವಲ್ಲ! ಇದಕ್ಕೆ ಕಾನೂನು ತೊಡಕೂ ಇಲ್ಲ. ಓಬಿರಾಯನ ಕಾಲದ ಕಾನೂನಿನ ಪ್ರಕಾರ ಅಪರಾಧಕ್ಕೆ ಪ್ರಚೋದನೆ ನೀಡುವ ಯಾಮದೇ ವಿಷಯವನ್ನೂ ನಿಷೇಧಿಸಲು ಪೊಲೀಸರಿಗೆ ಅವಕಾಶವಿದೆ.
ನನ್ನ ಈ ಸಲಹೆಗಳನ್ನು ತಾಮ ಜಾರಿಗೊಳಿಸಿದರೆ ತಾಮ ಸಾಂಗ್ಲಿಯಾನಾ ಅವರಿಗಿಂತಲೂ ಖ್ಯಾತರಾಗುಮದು ಶತಃಸಿದ್ಧ.
ತಮ್ಮ ಇನ್ನಷ್ಟು ಜನರಂಜನಾ ಸೇವೆಗೆ ಶುಭವಾಗಲಿ.

ಇಂತಿ ತಮ್ಮ ಅಭಿಮಾನಿ
ಕೋಲ್ಯ ಸಿಂಗ್‌



Kannada Prabha issue dated January 16, 2006
Women Coming Out of House is Banned

--

Tuesday, January 10, 2006

ಕಟ್ಟಾ ಸಸ್ಯಾಹಾರಿಯಾದರೆ ನಾಮ ಬದುಕುಮದೇ ಕಷ್ಟ!

ವೆಜ್‌ ಐಸ್‌ಕ್ರೀಮ್‌ನಲ್ಲೂ ಹಂದಿ ಮಾಂಸ, ಔಷಧಿಯಲ್ಲಿ ಮಾನವನ ಮೂಳೆ -ಸಸ್ಯಾಹಾರಿಯ ದುಃಖತಪ್ತ ಪತ್ರ

ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನಿಸುತ್ತಿದೆ. ಆಹಾರದಲ್ಲಿ ಮಾಂಸ ತಿನ್ನದಿದ್ದರೂ ಔಷಧಿಗಳ ರೂಪದಲ್ಲಿ ಪ್ರಾಣಿಜನ್ಯ ವಸ್ತುಗಳನ್ನು ನಾಮ ಸೇವಿಸಿರುಮದು ಖಂಡಿತ. ಹೊಟೆಲ್‌ ಹಾಗೂ ರೆಡಿಮೇಡ್‌ ತಿನಿಸುಗಳಲ್ಲಿ ಪಕ್ಕಾ ಸಸ್ಯಾಹಾರ ಬಹಳ ಅಪರೂಪ. ಪ್ಯಾಕ್‌ ಆದ ಜ್ಯೂಸ್‌ನಲ್ಲೂ ಇರುತ್ತದೆ ಪ್ರಾಣಿಜನ್ಯ ಪದಾರ್ಥ. ಇಷ್ಟಕ್ಕೂ ಕೋಕ್‌, ಪೆಪ್ಸಿಯಲ್ಲಿ ಮಾಂಸಾಹಾರ ಇಲ್ಲ ಎಂದು ಹೇಳುವ ಕಾರಟ್‌ ಎಲ್ಲಾದರೂ ಇದ್ದಾರಾ? ಇಗೊಳ್ಳಿ ಚಾಲೆಂಜ್‌!


ಶ್ರೀಮತಿ ವೇದಾ ಕ್ಯಾರಟ್‌ ಅವರಿಗೆ

ಸಲಾಂ, ನಮಸ್ತೆ
ನಾನೊಬ್ಬ ಪರಮ ಸಸ್ಯಾಹಾರಿ. ನನ್ನ ದುಃಖಕ್ಕೆ ಪಾರವೇ ಇಲ್ಲ. ಕಳೆದವಾರ ಶ್ರೀಮತಿ ಬೃಂದಾ ಕಾರಟ್‌ ಅವರು ಸ್ವಾಮಿ ರಾಮದೇವ್‌ ಅವರ ನಾನ್‌ವೆಜ್‌ ಔಷಧಿ ಹಗರಣ ಬಯಲು ಮಾಡಿದ ಮೇಲಂತೂ ನನ್ನ ಬ್ಲಡ್‌ಪ್ರಶರ್‌ ಇನ್ನಷ್ಟು ಹೆಚ್ಚಾಗಿದೆ. ನಾನು ಸಸ್ಯಾಹಾರಿಯಾಗಿ ಘೋರ ದುರಂತವಾಯಿತು ಎಂದೆನ್ನಿಸಿದೆ. ಈ ದೇಶದ ಬಹುಜನರಂತೆ ನಾನೂ ಮಾಂಸಾಹಾರಿ ಆಗಬೇಕಿತ್ತು. ಆಗ ಆಹಾರದಲ್ಲಿ ಪ್ರಾಣಿಯಿದೆಯೋ, ಪಕ್ಷಿಯಿದೆಯೋ, ಗಿಡವಿದೆಯೋ, ಮರವಿದೆಯೋ, ತರಕಾರಿಯಿದೆಯೋ ಎಂದು ಚಿಂತಿಸುವ ಅಗತ್ಯವಿರಲಿಲ್ಲ. ರುಚಿಯಾಗಿರುಮದನ್ನೆಲ್ಲ ನಿಶ್ಚಿಂತೆಯಿಂದ ತಿಂದು ತೇಗಬಹುದಿತ್ತು!

ಈಗ ನಾನು ಪರಮ ಸಸ್ಯಾಹಾರಿ ಆಗಿರುಮದರಿಂದ ನನ್ನ ತಿನ್ನುವ ಆಯ್ಕೆಗಳೇ ಕಡಿಮೆಯಾಗಿವೆ. ಒಮ್ಮೊಮ್ಮೆಯಂತೂ, ಜಗತ್ತಿನಲ್ಲಿ ನನಗೆ ತಿನ್ನಲೇನೂ ಸಿಕ್ಕುಮದೇ ಇಲ್ಲವೇನೋ ಅನ್ನಿಸಿ ಬಿಡುತ್ತದೆ! ಏನನ್ನಾದರೂ ತಿನ್ನೋಣ ಅಂತ ಆಸೆಯಾದರೆ ಅದರಲ್ಲಿ ಮಾಂಸಾಹಾರ ಇದೆಯೇನೋ ಅನ್ನುವ ಸಂಶಯ. ಏನನ್ನಾದರೂ ತಿಂದಾದಮೇಲೆ, ಅದರಲ್ಲಿ ಏನಾದರೂ ಮಾಂಸಾಹಾರದ ಅಂಶ ಇತ್ತೇನೋ ಅನ್ನುವ ಚಿಂತೆ. ಛೆ... ಕಷ್ಟವಾಗಿಬಿಟ್ಟಿದೆ ಸಸ್ಯಾಹಾರಿಯ ಜೀವನ.

ಸ್ವಂತ ಮನೆಯ ಅನ್ನ-ಸಾಂಬಾರ್‌ ಬಿಟ್ಟರೆ ನನಗೆ ಇನ್ನಾಮದರಲ್ಲೂ ನಂಬಿಕೆಯಿಲ್ಲ. ಆದರೂ, ಊಟಕ್ಕೆ ಕುಳಿತಾಗ, ಅನ್ನದಲ್ಲಿ ಹುಳುವೇನಾದರೂ ಬಿದ್ದುಹೋಗಿದೆಯೇನೋ ಅಂತ ಅನುಮಾನ ಆಗುತ್ತದೆ. ಅನ್ನದಲ್ಲಿ ನೂರು ಕಲ್ಲು ಬಂದರೂ ಪರವಾಗಿಲ್ಲ ಶಿವನೇ... ಹುಳು ಇಲ್ಲದಿರಲಿ ಎಂದು ಪ್ರಾರ್ಥಿಸುತ್ತೇನೆ. ಅಕಸ್ಮಾತ್‌ ಅನ್ನದಲ್ಲಿ ಒಂದು ಹುಳು ಅಥವಾ ಇರುವೆ ಕಾಣಿಸಿದರಂತೂ ಮುಗಿದೇ ಹೋಯಿತು. ಊಟಮಾಡಿದ್ದೂ ವಾಪಸ್‌ ಬಂದುಬಿಡುತ್ತದೆ... ಏನು ಮಾಡಲಿ?ಸೊಪುý್ಪ, ತರಕಾರಿಯಲ್ಲೂ ಹುಳು ಹುಡುಕಿ ಹುಡುಕಿ ಸಾಕಾಗಿ ಹೋಗಿದೆ. ಬೀನ್ಸ್‌, ಬದನೆಕಾಯಿ, ಕೋಸುಗಡ್ಡೆ, ಕ್ಯಾಲಿಫ್ಲಾವರ್‌ನಲ್ಲಿ ಹುಳುಗಳು ಇರುಮದು ಹೆಚ್ಚು ಅಂತ ಯಾರೋ ಹೇಳಿದ ಮೇಲಂತೂ ಅಮಗಳ ಸಹವಾಸವನ್ನೇ ಬಿಟ್ಟುಬಿಟ್ಟಿದ್ದೇನೆ.

ಹಾಲು ಮೊಸರನ್ನು ಕೂಡ ನಾನು ಮುಟ್ಟುವ ಹಾಗಿಲ್ಲವಲ್ಲ. ಏಕೆಂದರೆ ಹಾಲು, ಮೊಸರು, ಮಜ್ಜಿಗೆ ಎಲ್ಲಾ ಮಾಂಸಾಹಾರ! ಹಾಗಂತ ನನಗೆ ಗೊತ್ತಿರಲಿಲ್ಲ. ಬಹಳ ವರ್ಷಗಳ ಕಾಲ ನಾನು ಅವನ್ನೆಲ್ಲ ಸಸ್ಯಾಹಾರ ಅಂತಲೇ ಪಟ್ಟಾಗಿ ಸವಿಯುತ್ತಿದ್ದೆ. ಆದರೆ, ಒಂದು ದಿನ ನನ್ನ ಸ್ನೇಹಿತನೊಬ್ಬನ ಪ್ರಶ್ನೆಯಿಂದ ನನಗೆ ಜ್ಞಾನೋದಯವಾಯಿತು. ಆಕಳು, ಎಮ್ಮೆಯ ಹೊಟ್ಟೆಯೊಳಗಿಂದ ಉತ್ಪತ್ತಿಯಾಗುವ ಹಾಲು ಪ್ರಾಣಿಜನ್ಯವಾಗುತ್ತದೆಯೇ ಹೊರತೂ ಅದು ಸಸ್ಯಜನ್ಯವಾಗಲಾರದು. ಅಂದರೆ, ಹಾಲು ಕೂಡ ಸಸ್ಯಾಹಾರವಲ್ಲ. ಪ್ರಾಣಿಯ ಹೊಟ್ಟೆಯೊಳಗೆ ಮಾಂಸದ ನಡುವೆ ಉತ್ಪತ್ತಿಯಾಗುವ ಹಾಲು ಮಾಂಸಾಹಾರವೇ ಅಂತ ನನಗೆ ಇಷ್ಟು ವರ್ಷ ಯಾಕೆ ಹೊಳೆಯಲಿಲ್ಲವೋ ಅಂತ ನನಗೆ ಬಹಳ ಪಾಪಪ್ರಜ್ಞೆ ಉಂಟಾಯಿತು. ಹಾಲು ಮಾಂಸಹಾರ ಅಂದರೆ ಮಜ್ಜಿಗೆ, ಮೊಸರು, ತುಪ್ಪ, ಬೆಣ್ಣೆ, ಗಿಣ್ಣು ಎಲ್ಲಾ ಹೇಗೆ ಸಸ್ಯಾಹಾರವಾದೀತು? ಹಾಗಾಗಿ... ಅಮಗಳ ಸೇವನೆಯನ್ನೆಲ್ಲ ನಾನು ಬಿಟ್ಟು ಬಿಡಬೇಕಾಯಿತು. ಅಷ್ಟು ವರ್ಷ ಸೇವಿಸಿದ ಪಾಪಪ್ರಜ್ಞೆಯಿಂದ ಹೊರಬರಲು ನನಗೆ ಹಲವಾರು ತಿಂಗಳುಗಳೇ ಬೇಕಾಯಿತು.
ನನಗೆ ಈಗ ಸಕ್ಕರೆ ಅಂದರೂ ಅಸಹ್ಯ. ಬಹಳ ವರ್ಷಗಳ ಕಾಲ ನಾನು ಕಬ್ಬಿನ ರಸದಿಂದ ತಯಾರಾಗುವ ಸಕ್ಕರೆಯನ್ನು ಸಸ್ಯಾಹಾರ ಅಂತಲೇ ಅಂದುಕೊಂಡಿದ್ದೆ. ಆದರೆ, ಸಕ್ಕರೆ ತಯಾರಾಗುವ ವಿಧಾನ ಕೇಳಿದ ನಂತರ ನನ್ನ ನಂಬಿಕೆಯೆಲ್ಲಾ ಸಿಡಿದು ಪುಡಿಪುಡಿಯಾಯಿತು. ಸಕ್ಕರೆ ಮೊದಲು ತಯಾರಾದಾಗ ಕಪುý್ಪ ಬಣ್ಣದಲ್ಲಿರುತ್ತದೆ. ಅದಕ್ಕೆ ಬ್ಲೀಚಿಂಗ್‌ ಮಾಡಲೋಸ್ಕರ ನಾಯಿ ಅಥವಾ ಪ್ರಾಣಿಯ ಮೂಳೆಗಳ ಇದ್ದಲನ್ನು ಬಳಸುತ್ತಾರಂತೆ. ಅದು ತಿಳಿದಾಗಿನಂದ ಇಲ್ಲಿಯ ವರೆಗೂ ನನಗೆ ಬೆಲ್ಲವೇ ಗತಿ. ಚಹಕ್ಕೂ ನಾನು ಬೆಲ್ಲ ಹಾಕಿ ಕುಡಿಯುವ ಪರಿಸ್ಥಿತಿ ಇತ್ತು.

ಎಷ್ಟೋ ಸಾರಿ ಹೊಟೆಲ್‌ಗೆ ಹೋಗಬೇಕೂಂತ ಆಸೆಯಾಗುತ್ತದೆ. ಆದರೆ, ಏನುಮಾಡುಮದು? ನಾನಲ್ಲಿಗೆ ಹೋಗುವಂತಿಲ್ಲ. ಬಹಳ ಹೊಟೆಲ್‌ಗಳಲ್ಲಿ ಪದಾರ್ಥಕ್ಕೆ ರುಚಿ ಬರಲೀ ಅಂತ ಮೀನಿನ ಪೌಡರ್‌ ಬಳಸುತ್ತಾರಂತೆ. ರೋಟಿ, ಕೇಕು, ಬ್ರೆಡ್ಡು, ಬಿಸ್ಕಿಟ್ಟು ಮಿದುವಾಗಲಿ ಅಂತ ತತ್ತಿಯನ್ನು ಹಾಕುತ್ತಾರಂತೆ. ವೆಜ್‌ ಸಲಾಡ್‌ನಲ್ಲಿ ಅಣಬೆ ಸೇರಿಸುತ್ತಾರಂತೆ ಅನ್ನುವ ವಿಷಯಗಳು ಗೊತ್ತಾದ ನಂತರವೂ ನಾನು ಹೇಗೆ ಹೊಟೆಲ್‌ ಪದಾರ್ಥ ತಿನ್ನಲಿ?

ಆವೊತ್ತೊಂದು ದಿನ, ಇಷ್ಟವಾಯಿತು ಅಂತ ರಸಗುಲ್ಲ ತಿನ್ನುತ್ತಿದ್ದೆ. ಇದು ಹಾಲಿನಿಂದ ಮಾಡುವ ಬೆಂಗಾಲಿ ಸ್ವೀಟು ಮಾರಾಯ... ಅಂತ ಮಿತ್ರ ಹೇಳಿದ್ದೇ ಹೇಳಿದ್ದು... ಬೆಂಗಾಲಿ ಸ್ವೀಟು ತಿನ್ನುಮದನ್ನು ನಿಲ್ಲಿಸಿಬಿಡಬೇಕಾಯಿತು. ಅಷ್ಟೇ ಅಲ್ಲ, ಸಕ್ಕರೆಯಂಥ ಮಾಂಸಾಹಾರವನ್ನು ಬಳಸುವ ಯಾಮದೇ ಸ್ವೀಟೂ ಮಾಂಸಾಹಾರವೇ ತಾನೆ?

ಐಸ್‌ಕ್ರೀಮಿನ ಕಥೆ ಇನ್ನೂ ಭಯಾನಕ. ಹೊಟೆಲ್‌, ಬೇಕರಿಯ ತಿನಿಸುಗಳಲ್ಲಿ ಜಿಲೆಟಿನ್‌ ಅನ್ನೋ ಪದಾರ್ಥವನ್ನು ವ್ಯಾಪಕವಾಗಿ ಬಳಸುತ್ತಾರಂತೆ. ಇದನ್ನು ಹಂದಿಯ ಅಸ್ತಿಮಜ್ಜೆಯಿಂದ ತಯಾರಿಸುತ್ತಾರಂತೆ. ಇದನ್ನು ಐಸ್‌ಕ್ರೀಮ್‌ಗೂ ಹಾಕುತ್ತಾರಂತೆ. ಹಾಗಾಗಿ ಐಸ್‌ಕ್ರೀಮು, ಜೆಲ್ಲಿ... ಎಲ್ಲಾ ನೋಡಿದರೆ ಮಾಂಸದ ಮುದ್ದೆಯನ್ನು ನೋಡಿದಂತೇ ಭಾಸವಾಗಿ ವಾಕರಿಕೆ ಬರುತ್ತದೆ.
ಕೋಕಿನಿಯಲ್‌ ಎಂದರೆ ಬಹುತೇಕ ಜನರಿಗೆ ಗೊತ್ತಿಲ್ಲ. ಆದರೆ, ನಾವೆಲ್ಲ ಒಂದಲ್ಲ ಒಂದು ರೀತಿಯಿಂದ ತಿಂದು ಬಿಟ್ಟಿದ್ದೇವೆ. ಇದು ಆಹಾರಕ್ಕೆ ಕೆಂಪು ಬಣ್ಣ ನೀಡುವ ಪದಾರ್ಥ. ಇದನ್ನು ಕೀಟವೊಂದನ್ನು ಹುಡಿಮಾಡಿ ತಯಾರಿಸಿರುತ್ತಾರೆ.

ಈ ನಡುವೆ ನನಗೆ ಡಯಾಬಿಟಿಸ್‌ ಆರಂಭವಾಗಿದ್ದು ಒಳ್ಳೆಯದಾಯಿತು ಅಂದುಕೊಂಡೆ. ಯಾಕೆಂದರೆ, ಈ ಕಾರಣಕ್ಕಾದರೂ ನಾನು ಈ ಸ್ವೀಟುಗಳೆಂಬೋ ಮಾಂಸಾಹಾರದಿಂದ ಕಡ್ಡಾಯವಾಗಿ ದೂರವಿರಬಹುದಲ್ಲ! ಆದರೆ, ವಿಧಿ ಅಲ್ಲೂ ನನಗೆ ಕೈಕೊಡಬೇಕೆ? ಮಧುಮೇಹ ನಿಯಂತ್ರಣಕ್ಕೆ ಬಳಸುವ ಇನ್‌ಸುಲಿನ್‌ ಔಷಧವನ್ನು ಪ್ರಾಣಿಗಳಿಂದಲೇ ಸಂಸ್ಕರಿಸುತ್ತಾರಂತೆ. ಹಾಗಾಗಿ ಇನ್‌ಸುಲಿನ್‌ ಮಾಂಸಾಹಾರ ಅಂತ ಗೊತ್ತಾಗಿ ಗೋಳೋ ಅಂತ ಅತ್ತುಬಿಟ್ಟೆ. ಸದ್ಯ... ವಿಜ್ಞಾನಿಗಳು ದೇವರಂತೆ ಬಂದು ನನ್ನನ್ನು ಕಾಪಾಡಿದರು. ಸಸ್ಯಾಹಾರಿ ಇನ್‌ಸುಲಿನ್‌ ಕಂಡುಹಿಡಿದಿದ್ದಾರೆ. ಇದು ಬಹಳ ದುಬಾರಿಯಾದರೂ ನನಗೆ ಬೇರೆ ಗತಿ ಇಲ್ಲ.

ಈ ನಡುವೆ, ನನಗೆ ಬಹಳ ಕೆಮ್ಮು. ಅದಕ್ಕಾಗಿ ಬೆನೆಡ್ರಿಲ್‌ ಎಂಬ ಔಷಧಿ ಕುಡಿಯುತ್ತಿದ್ದೆ. ಯಾರೋ ಹೇಳಿದರು... ಅದು ಕೋಣದ ರಕ್ತದಿಂದ ತಯಾರಾಗುತ್ತದೆ ಅಂತ. ಅದು ಹಾಗಿರಲಿಕ್ಕಿಲ್ಲ ಅಂತ ನನಗೆ ಗೊತ್ತಿದ್ದರೂ... ಆ ಔಷಧಿಯ ರೂಪ, ರುಚಿ ಎಲ್ಲ ಕೋಣದ ರಕ್ತದಂತೆ ಕಂಡು ಅದನ್ನೂ ಕುಡಿಯುಮದು ನಿಲ್ಲಿಸಿದ್ದೇನೆ.

ಅಷ್ಟೇ ಏನು... ಬಹುತೇಕ ಇಂಗ್ಲಿಷ್‌ ಔಷಧಿಗಳಲ್ಲಿ ಪ್ರಾಣಿಜನ್ಯ ಪದಾರ್ಥಗಳನ್ನೇ ಬಳಸುತ್ತಾರಂತೆ. ಮೀನೆಣ್ಣೆಯ ಟಾನಿಕ್‌ನಿಂದ ಹಿಡಿದು ಹಾವಿನ ವಿಷದ ವರೆಗೆ ಅನೇಕ ಪ್ರಾಣಿಜನ್ಯ ವಸ್ತುಗಳು ಇರುತ್ತವೆ. ಹಾಗಾಗಿ... ಬಹುತೇಕ ಇಂಗ್ಲಿಷ್‌ ಔಷಧಗಳು ಮಾಂಸಾಹಾರ ಎಂದು ತೀರ್ಮಾನಿಸಿ ನಾನು ಆಯುರ್ವೇದ ಔಷಧಿಗೆ ಒಗ್ಗಿಕೊಂಡೆ.

ಆದರೆ, ಆಯುರ್ವೇದವೂ ಸಂಪೂರ್ಣ ಸಸ್ಯಾಹಾರಿ ಎಂದು ಎಲ್ಲೂ ಹೇಳಿಕೊಂಡಿಲ್ಲ. ಗಿಡಮೂಲಿಕೆಗಳು ಹಾಗೂ ಅನೇಕ ಪ್ರಾಣಿ ಜನ್ಯ ವಸ್ತುಗಳನ್ನು ಆಯುರ್ವೇದ ಬಳಸಿಕೊಳ್ಳುತ್ತದೆ ಎಂದು ಎಲ್ಲೋ ಓದಿದ ಮೇಲೆ ನನ್ನನ್ನು ಕಾಪಾಡುವ ಸಸ್ಯಾಹಾರಿ ಔಷಧವೇ ಇಲ್ಲವೇನೋ ಅನ್ನಿಸಲು ಪ್ರಾರಂಭವಾಗಿದೆ. ಅದರಲ್ಲೂ ಸ್ವಾಮಿ ರಾಮ್‌ದೇವ್‌ ಅವರಂಥ ಮಹಾ ಸಾತ್ವಿಕ ಯೋಗಿಯೂ ತಮ್ಮ ಔಷಧದಲ್ಲಿ ಪ್ರಾಣಿಗಳು ಹಾಗೂ ಮನುಷ್ಯನ ಮೂಳೆಯನ್ನು ಬಳಸುತ್ತಾರೆ ಎಂಬ ವಿಷಯ ತಿಳಿದು ತೀರಾ ಕಂಗಾಲಾಗಿದ್ದೇನೆ.
ಇಡೀ ಜಗತ್ತೇ ಒಂದಲ್ಲಾ ಒಂದು ರೀತಿಯಲ್ಲಿ ಮಾಂಸಾಹಾರಿ ಎನ್ನಿಸಲು ಶುರುವಾಗಿದೆ. ಪಕ್ಕಾ ಸಸ್ಯಾಹಾರಿಗಳಿಗೆ ಜಗತ್ತಿನಲ್ಲಿ ತಿನ್ನಲು ಬಹಳ ಕಡಿಮೆ ಆಯ್ಕೆಗಳಿವೆ ಎಂಬುದು ಖಚಿತವಾಗಿದೆ. ಹಾಗಾಗಿ ಮುಂದಿನ ಜನ್ಮದಲ್ಲಾದರೂ ನಾನು ಮಾಂಸಾಹಾರಿಯಾಗಿ ಹುಟ್ಟುವ ಆಸೆಯಾಗಿದೆ.

ಇಷ್ಟೆಲ್ಲಾ ಹೇಳಿ ನಾನು ನಿಮ್ಮ ತಲೆ ತಿಂದೆನೇನೋ? ನನ್ನ ಈ ಅನುಮಾನಕ್ಕೆ ನೀವೇನಾದರೂ ಹೂಂ ಅಂದರೆ... ನಾನು ನಿಮ್ಮ ತಲೆತಿಂದ ಮಾಂಸಾಹಾರಿಯಾದೆನಲ್ಲಾ ಎಂಬ ಪಾಪಪ್ರಜ್ಞೆ ನನ್ನನ್ನು ಕಾಡುತ್ತದೆ! ದಯವಿಟ್ಟು ಕಾಪಾಡಿ.
ಇಂತಿ ಸಸ್ಯಾಹಾರಿ ಸತ್ಯಣ್ಣ



Kannada Prabha issue dated January 9, 2006

Are you a Pure Vegetarian?.. Life is Difficult for you!

Horrible Life Story of a Vegan

--

Tuesday, January 03, 2006

ಕರ್ನಾಟಕ ಸರ್ಕಾರ ಶೀಘ್ರ ಸ್ಫೋಟ: ‘ಉಗ್ರಕಾರಣಿಗಳ’ ಎಚ್ಚರಿಕೆ!

ಕರ್ನಾಟಕದ ಜನತೆಗೆ ರಾಜಕೀಯ ಭಯೋತ್ಪಾದಕರ ಹೊಸವರ್ಷದ ಬೆದರಿಕೆಗಳು!


ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನುಸ್ಫೋಟಗೊಳಿಸುವ ಬಾಂಬಿನ ರಿಮೋಟ್‌ ಕಂಟ್ರೋಲ್‌ ಇರುಮದು ಸೋನಿಯಾಜಿ ಬಳಿಯೇ ಹೊರತು ಎಸ್‌.ಎಂ.ಕೃಷ್ಣ ಅವರ ಬಳಿ ಅಲ್ಲ. ಆದ್ದರಿಂದ ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿಯವರು, ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡುತ್ತಿದ್ದಾರೆ.

ರಾಜ್ಯದ ಮಹಾಜನತೆಗೆ ಹೊಸವರ್ಷದ ಬೆದರಿಕೆಗಳು!

ನಾಮ ಉಗ್ರರು ಸಾರ್‌ ಉಗ್ರರು. ಅಸಲಿ ಉಗ್ರರು. ಕಳೆದ ಒಂದು ವರ್ಷದಿಂದ ಕರ್ನಾಟಕದ ಕೆಲಮ ಮಹತ್ವದ ಕಟ್ಟಡಗಳು, ದೇವಾಲಯಗಳು ಹಾಗೂ ಸಂಸ್ಥೆಗಳನ್ನು ಸ್ಫೋಟಿಸುತ್ತೇವೆ ಎಂದು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ, ನೀಮ ನಮ್ಮ ಎಚ್ಚರಿಕೆಯನ್ನು ಹುಸಿಬಾಂಬ್‌ ಬೆದರಿಕೆ ಎಂದು ಅಲಕ್ಷ್ಯ ಮಾಡಿದ್ದೀರಿ.

ಹೀಗೆ ಅಲಕ್ಷ್ಯ ಮಾಡಿದ್ದು ನಿಮ್ಮ ತಪ್ಪಲ್ಲ ಎಂದು ನಮಗೆ ಗೊತ್ತು. ಇದಕ್ಕೆಲ್ಲ ಕರ್ನಾಟಕದ ರಾಜಕೀಯ ಭಯೋತ್ಪಾದಕರೇ ಕಾರಣ! ಸರ್ಕಾರವನ್ನು ಇವತ್ತು ಸ್ಫೋಟಿಸುತ್ತೇವೆ. ನಾಳೆ ಕೆಡವಿಹಾಕುತ್ತೇವೆ ಎಂದು ಒಂದು ವರ್ಷದಿಂದ ಜೆಡಿಎಸ್‌ ಭಯೋತ್ಪಾದಕರು ಹಾಗೂ ಕಾಂಗ್ರೆಸ್ಸಿನ ಉಗ್ರಗಾಮಿಗಳು ಪ್ರತಿದಿನವೂ ಬೆದರಿಸುತ್ತಿದ್ದಾರೆ. ಆದರೆ, ಸರ್ಕಾರವನ್ನು ಮಾತ್ರ ಸ್ಫೋಟಿಸುತ್ತಿಲ್ಲ! ಅವರ ಇಂತಹ ಹುಸಿ ಬೆದರಿಕೆಗಳನ್ನು ಪ್ರತಿ ದಿನ ಕೇಳಿ ಕೇಳಿ ನೀಮ ಬೆದರಿಕೆಗಳಿಗೆ ಒಗ್ಗಿ ಹೋಗಿದ್ದೀರಿ. ಹಾಗಾಗಿ, ಅಸಲಿ ಉಗ್ರಗಾಮಿಗಳಾದ ನಾಮ ಒಡ್ಡುವ ಅಸಲಿ ಬೆದರಿಕೆಗಳಿಗೂ ನೀಮ ಜಗ್ಗುತ್ತಿಲ್ಲ. ನಮ್ಮ ಬೆದರಿಕೆಯನ್ನೂ ನೀಮ ರಾಜಕೀಯ ಭಯೋತ್ಪಾದಕರ ಮಾಮೂಲಿ ಭಾಷಣಾವೇಶ ಎಂದು ಅಂದುಕೊಂಡಿರುಮದು ನಿಜಕ್ಕೂ ಖೇದದ ಸಂಗತಿ.

ರಾಜಕಾರಣಿಗಳ ಭರವಸೆಗಳಂತೆ ಬೆದರಿಕೆಗಳಿಗೂ ವಿಶ್ವಾಸಾರ್ಹತೆ ಇಲ್ಲ ಎಂದು ಜನ ತೀರ್ಮಾನಕ್ಕೆ ಬಂದಿದ್ದಾರೆ. ಅವರ ಬೋಗಸ್‌ ಬೆದರಿಕೆಗಳಿಂದಾಗಿ ನಮ್ಮ ಅಸಲಿ ‘ಭಯೋತ್ಪಾದನೆ’ಯ ಮೌಲ್ಯವೇ ಕಡಿಮೆಯಾಗಿದೆ. ಸರ್ಕಾರ ಎಂದು ಸ್ಫೋಟಗೊಳ್ಳುಮದೋ ಎಂಬ ಭಯದ ನಡುವೆಯೇ ಜನರು ಆರಾಮವಾಗಿ ಬದುಕಲು ಕಲಿತಿದ್ದಾರೆ! ಇದು ಭಯೋತ್ಪಾದನೆ ಎಂಬ ಶಬ್ದಕ್ಕೇ ಆದ ಅವಮಾನ ಎಂದು ನಾಮ ಪರಿಗಣಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಭಯೋತ್ಪಾದನೆ ಎಂಬ ಶಬ್ದಕ್ಕೆ ಮರುಮೌಲ್ಯ ತಂದು ಕೊಡಲು ನಾಮ ಅನಿವಾರ್ಯವಾಗಿ ಮುಂದಾಗಬೇಕಾಯಿತು. ಅದಕ್ಕಾಗಿ ಕಳೆದವಾರ ಬೆಂಗಳೂರಿನ ಐಐಎಸ್‌ಸಿ ಸಭಾಂಗಣದ ಮೇಲೆ ದಾಳಿ ನಡೆಸಿ ಭಯೋತ್ಪಾದನೆಗೆ ಒಂದು ಮರ್ಯಾದಿ ತಂದುಕೊಡಬೇಕಾಯಿತು. ಇಲ್ಲವಾದರೆ, ರಾಜಕಾರಣಿಗಳ ಬೆದರಿಕೆಗೂ ನಮ್ಮ ಬೆದರಿಕೆಗೂ ಯಾಮದೇ ವ್ಯತ್ಯಾಸ ಇರುತ್ತಿರಲಿಲ್ಲ.

ಇತ್ತೀಚೆಗೆ ಹುಸಿಬಾಂಬ್‌ ಬೆದರಿಕೆಗಳು ಹೆಚ್ಚುತ್ತಿರುವ ಬಗ್ಗೆ ನಮಗೆ ನಿಜಕ್ಕೂ ಕಳವಳವಾಗಿದೆ. ಸಂಸತ್ತಿನಿಂದ ಹಿಡಿದು ಅಶೋಕಾ ಹೋಟೆಲ್‌ ತನಕ, ಚೆನ್ನಮ್ಮ ಎಕ್ಸ್‌ಪ್ರೆಸ್‌ ರೈಲಿನಿಂದ ಹಿಡಿದು ಐಬಿಎಂ ಸಾಫ್ಟ್‌ವೇರ್‌ ಕಂಪನಿಯ ತನಕ, ಮುಖ್ಯಮಂತ್ರಿ ಮನೆಯಿಂದ ಹಿಡಿದು, ಎಂ ಜಿ ರಸ್ತೆಯ ಅಂಗಡಿಯ ತನಕ ಎಲ್ಲವನ್ನೂ ಸ್ಫೋಟಿಸುವ ಬಾಂಬ್‌ ಬೆದರಿಕೆಗಳು ದಿನ ಬೆಳಗಾದರೆ, ಈ ಮೇಲ್‌ನಲ್ಲಿ, ಫೋನ್‌ನಲ್ಲಿ, ಫ್ಯಾಕ್ಸ್‌ನಲ್ಲಿ ಬರುತ್ತಿವೆ. ಆದರೆ, ಅವೆಲ್ಲ ಕೊನೆಗೆ ಠುಸ್‌ ಎನ್ನುವ ಹುಸಿ ಬಾಂಬ್‌ ಎಚ್ಚರಿಕೆಗಳಾಗುತ್ತಿವೆ. ಹಾಗಾಗಿ, ‘ಇದೇನು ಮಾಮೂಲಿ ಹುಸಿಬಾಂಬ್‌ ಬಿಡು’ ಎನ್ನುವಷ್ಟರ ಮಟ್ಟಿಗೆ ನೀಮ ನಿರಾತಂಕರಾಗಿದ್ದೀರಿ. ನಮ್ಮ ಭಯೋತ್ಪಾದನೆಯಿಂದ ನಿಮಗೆ ಭಯವಾಗುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ನಾಮ ಭಯೋತ್ಪಾದನೆಗೆ ಇನ್ಯಾವ ಮಾರ್ಗ ಹಿಡಿಯುಮದೋ ನಮಗೆ ಅರ್ಥವಾಗುತ್ತಿಲ್ಲ.

ಹಾಗಾಗಿ, ನಾಮ ಉಗ್ರಗಾಮಿಗಳಾದರೂ, ಹುಸಿ ಬಾಂಬ್‌ ಬೆದರಿಕೆ ಒಡ್ಡುವವರ ಬಳಿ ಬೇಷರತ್‌ ಮನವಿ ಮಾಡಿಕೊಳ್ಳುತ್ತೇವೆ... ‘ದಯವಿಟ್ಟು ಹುಸಿ ಬೆದರಿಕೆ ಒಡ್ಡುಮದನ್ನು ಬಿಡಿ. ಇದರಿಂದ ‘ಭಯೋತ್ಪಾದನೆ’ಯ ಗೌರವವೇ ಕುಂದುತ್ತಿದೆ.’

ರಾಜಕಾರಣಿಗಳು ಬೆದರಿಕೆ ಒಡ್ಡುವಾಗ ಸ್ವಲ್ಪ ಕೇರ್‌ಫುಲ್‌ ಆಗಬೇಕು ಎಂಬುದು ನಮ್ಮ ಸಲಹೆ. ಇಲ್ಲವಾದರೆ ಯಡಿಯೂರಪ್ಪನವರ ಕಥೆಯಾಗುತ್ತದೆ. ಅವರ ಎಲ್ಲ ಬೆದರಿಕೆಗಳೂ ಹುಸಿಬಾಂಬ್‌ ಎಂದು ಬಹುತೇಕ ಜನತೆ ತೀರ್ಮಾನ ಮಾಡಿರುಮದರಿಂದ ಯಡಿಯೂರಪ್ಪನವರ ಬೆದರಿಕೆಗೆ ಯಾರೂ ಮಣಿಯುತ್ತಿಲ್ಲ. ಅತ್ತ ಪೂಜಾರಿಯವರ ಬಾಂಬುಗಳೂ ಅಷ್ಟೇ... ಠುಸ್‌ ಅನ್ನುತ್ತಿವೆ. ಸಿ. ಎಂ. ಇಬ್ರಾಹಿಂ, ಎ.ಕೆ.ಸುಬ್ಬಯ್ಯನವರ ಬಾಂಬುಗಳು ನಗೆಬಾಂಬುಗಳೆಂದು ಜನ ಎಂಜಾಯ್‌ ಮಾಡುತ್ತಿದ್ದಾರೆ.

ಸದ್ಯ ಇದ್ದುದರಲ್ಲಿ ದೇವೇಗೌಡರ ಲೆಟರ್‌ ಬಾಂಬ್‌ಗಳಿಗೆ ಮಾತ್ರ ತುಸು ಭಯೋತ್ಪಾದನೆಯ ಮೌಲ್ಯವಿದೆ. ಆದರೆ, ಅವರ ಪತ್ರಬಾಂಬುಗಳನ್ನೆಲ್ಲ ಇತ್ತೀಚೆಗೆ ಕೋರ್ಟುಗಳಲ್ಲಿ ನ್ಯಾಯಾಧೀಶರು ನಿಷ್ಕ್ರಿಯಗೊಳಿಸುತ್ತಿರುಮದು ಶೋಚನೀಯ. ಹಾಗಾಗಿ, ಗೌಡರ ಲೆಟರ್‌ಬಾಂಬ್‌ಗಳ ಕುರಿತೂ ಜನರಿಗೆ ಹೆದರಿಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಇತ್ತೀಚಿನ ಜಿ.ಪಂ., ತಾ.ಪಂ ಚುನಾವಣೆಯಾದ ಮೇಲೆ ಗೌಡರ ಬಾಂಬುಗಳ ಶಕ್ತಿಯೇ ಕಡಿಮೆಯಾಗಿದೆ ಎಂದು ಗುಪ್ತದಳ ವರದಿ ಮಾಡಿದ್ದು ನಮಗೂ ತಿಳಿದುಬಂದಿದೆ.

ಈ ನಡುವೆ, ಸರ್ಕಾರ ಸ್ಫೋಟಿಸುವ ನಿಜವಾದ ಬಾಂಬ್‌ ಇರುಮದು ಡಿ.ಕೆ.ಶಿವಕುಮಾರ್‌ ಹಾಗೂ ಮಲ್ಲಿಕಾರ್ಜುನ ಖರ್ಗೆಯವರ ಕೈಲಿ ಹಾಗೂ ಆ ಬಾಂಬುಗಳ ರಿಮೋಟ್‌ ಕಂಟ್ರೋಲ್‌ ಇರುಮದು ಮಹಾರಾಷ್ಟ್ರ ರಾಜ್ಯಪಾಲ ಎಸ್‌.ಎಂ.ಕೃಷ್ಣ ಅವರ ಕೈಲಿ ಎಂದು ಸರ್ಕಾರದ ಅತ್ಯುನ್ನತ ಮೂಲಗಳು ನಂಬಿವೆ. ಆದ್ದರಿಂದ ಎಸ್‌.ಎಂ.ಕೃಷ್ಣ ಅವರು ಬೆಂಗಳೂರಿಗೆ ಬಂದಾಗಲೆಲ್ಲ ರಾಜಧಾನಿಯಲ್ಲಿ ಭದ್ರತಾ ವ್ಯವಸ್ಥೆ ಬಲಗೊಳ್ಳುತ್ತದೆ. ಕೃಷ್ಣ ಅವರ ಚಲನವಲನದ ಮೇಲೆ ಗುಪ್ತಚರ ದಳ ವಿಶೇಷ ಕಣ್ಣಿಟ್ಟಿರುತ್ತದೆ. ಅದರಲ್ಲೂ ಖರ್ಗೆ ಮತ್ತು ಕೃಷ್ಣ ಗುಪ್ತ ಸಮಾಲೋಜನೆ ನಡೆಸಿದರಂತೂ ಸರ್ಕಾರ ಸ್ಫೋಟವಾಗಲು ಕ್ಷಣಗಣನೆ ಆರಂಭವಾಯಿತು ಎಂಬಂತೆ ಭಯೋತ್ಪಾದನೆಯಾಗುತ್ತದೆ.

ಆದರೆ, ಇದು ಕೂಡ ಹುಸಿಬಾಂಬು ಬೆದರಿಕೆ ಎಂದು ಮುಖ್ಯಮಂತ್ರಿಗಳು ರಾಜ್ಯದ ಪ್ರಜೆಗಳಿಗೆ ಸ್ಪಷ್ಟಪಡಿಸಿದ್ದಾರೆ. ಮುಖ್ಯಮಂತ್ರಿಯವರ ಪ್ರಕಾರ, ರಿಮೋಟ್‌ ಕಂಟ್ರೋಲ್‌ ಕೃಷ್ಣ ಅವರ ಕೈಲಿಲ್ಲ. ಸೋನಿಯಾಜಿ ಅವರ ಕೈಲಿದೆ. ಆದ್ದರಿಂದ, ಈ ಸರ್ಕಾರ ಸ್ಫೋಟಗೊಳಿಸುವ ನಿಜವಾದ ಭಯೋತ್ಪಾದಕಿ ಸೋನಿಯಾಜಿಯೇ ಹೊರತು ಕೃಷ್ಣ ಅಲ್ಲ. ಎಸ್‌.ಎಂ. ಕೃಷ್ಣ ಅವರ ಭಯೋತ್ಪಾದನೆಗೆ ಯಾರೂ ಹೆದರಬೇಕಿಲ್ಲ ಎಂದು ಮುಖ್ಯಮಂತ್ರಿ ಧರಂಸಿಂಗ್‌ ರಾಜ್ಯದ ಜನತೆಗೆ ಪದೇ ಪದೇ ಅಭಯ ನೀಡಿದ್ದಾರೆ.

ಈ ನಡುವೆ, ಕುಮಾರ ಸ್ವಾಮಿಯವರು ಸ್ವಲ್ಪ ಉಗ್ರಗಾಮಿಯಂತೆ ಮಾತನಾಡಿದರೂ ಈ ಸರ್ಕಾರ ಸ್ಫೋಟಿಸುವ ಸಂಚು ನಮ್ಮದಲ್ಲ ಎಂದು ಜನತೆಗೆ ಸಾರಿ ಹೇಳಿದ್ದಾರೆ. ‘ಈ ಸರ್ಕಾರಕ್ಕೆ ನಾನು ಭಯೋತ್ಪಾದಕ ಅಲ್ಲ. ಒಂದು ವೇಳೆ ಸರ್ಕಾರ ಸ್ಫೋಟಗೊಂಡರೆ ನಾನು ಹೊಣೆ ಹೊರುಮದಿಲ್ಲ’ ಎಂದು ಗೌಡರೂ ವಿಷದಪಡಿಸಿದ್ದಾರೆ. ಇವರೆಲ್ಲರ ಬಳಿ ಇರುವ ಮಾಹಿತಿಯೂ ಒಂದೇ... ಈ ಸರ್ಕಾರ ಸ್ಫೋಟಿಸುವ ರಿಮೋಟ್‌ ಕಂಟ್ರೋಲ್‌ ಸೋನಿಯಾ ಅವರ ಬಳಿಯೇ ಇದೆ! ಈ ಲಾಜಿಕ್ಕನ್ನೆಲ್ಲ ನೋಡಿದರೆ, ಕರ್ನಾಟಕ ಸರ್ಕಾರಕ್ಕೆ ನಿಜವಾದ ಭಯೋತ್ಪಾದಕಿ ಸೋನಿಯಾಜಿ ಎಂದು ತೀರ್ಮಾನಕ್ಕೆ ಬರಲಡ್ಡಿಯಿಲ್ಲ.

ಈ ಎಲ್ಲ ಹುಸಿ ಬೆದರಿಕೆಗಳ ನಡುವೆಯೂ ಸಿದ್ದರಾಮಯ್ಯನವರಂಥ ನಿಜವಾದ ಭಯೋತ್ಪಾದಕರೂ ಇದ್ದಾರೆ ಎಂಬುದಷ್ಟೇ ನಮಗೆ ಹೆಮ್ಮೆಯ ವಿಷಯ. ಸಿದ್ದರಾಮಯ್ಯನವರನ್ನು ಮಾನವಬಾಂಬ್‌ ಅಂತಾದರೂ ಕರೆಯಿರಿ ಅಥವಾ ಆತ್ಮಹತ್ಯಾ ದಳದ ನೇತಾರ ಎಂದಾದರೂ ತಿಳಿಯಿರಿ... ಅವರು ಬೆದರಿಕೆ ಒಡ್ಡಿದ್ದಷ್ಟೇ ಅಲ್ಲ, ಮೊನ್ನೆ ಚುನಾವಣೆಯಲ್ಲಿ ಜೆಡಿಎಸ್ಸಿನ ಬಹುಭಾಗವನ್ನು ಸ್ಫೋಟಿಸಿ ಚಿಂದಿಮಾಡಿದರು ಎಂಬುದು ಗಮನಾರ್ಹ ವಿಷಯ. ಆದ್ದರಿಂದ, ಸಿದ್ದರಾಮಯ್ಯ ಜೆಡಿಎಸ್ಸಿಗೆ ನಿಜವಾದ ಭಯೋತ್ಪಾದಕರಾಗಿರುವಂತೆ ತೋರುತ್ತದೆ.

ಈ ಬೆಳವಣಿಗೆಯಿಂದ ಸ್ಫೂರ್ತಿ ಪಡೆದು ಜೆಡಿಎಸ್‌ ಹಾಗೂ ಕಾಂಗ್ರೆಸ್ಸಿನ ಉಗ್ರರೆಲ್ಲ ಸೇರಿ ಸರ್ಕಾರವನ್ನು ಈ ವರ್ಷವಾದರೂ ಖಂಡಿತ ಸ್ಫೋಟಿಸುತ್ತಾರೆ ಎಂಬ ನಂಬಿಕೆ ನಮಗಿದೆ.

ಇದು ಹುಸಿ ಬಾಂಬ್‌ ಆಗಲಾರದು ಎಂಬ ವಿಶ್ವಾಸದೊಂದಿಗೆ ಎಲ್ಲ ಭಯೋತ್ಪಾದಕ ಸಂಘಟನೆಗಳ ಪರವಾಗಿ ತಮಗೆಲ್ಲ ಮತ್ತೊಮ್ಮೆ ಹೊಸವರ್ಷದ ಬೆದರಿಕೆಗಳು


Kannada Prabha issue dated January 2, 2006
We'll Blast the Karnataka Government: Political Terrorists Warn!

-